Thursday, July 17, 2025

ಸತ್ಯ | ನ್ಯಾಯ |ಧರ್ಮ

ಅಪರಾಧಿಯನ್ನು ಸಂತ್ರಸ್ತಳಂತೆ ಬಿಂಬಿಸಬೇಡಿ: ನಿಮಿಷಾ ಪ್ರಿಯಾಳನ್ನು ಕ್ಷಮಿಸಲು ಒಪ್ಪದ ಮೃತನ ಸಹೋದರ

ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ತೀವ್ರ ಸಸ್ಪೆನ್ಸ್ ಮುಂದುವರೆದಿದೆ. ಇಂದು ಜಾರಿಗೆ ಬರಬೇಕಿದ್ದ ಯೆಮೆನ್ ಸರ್ಕಾರ ಆಕೆಯ ಮರಣದಂಡನೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.

ಆದರೆ, ಮೃತ ತಲಾಲ್ ಆದಿಬ್ ಮೆಹದಿ ಅವರ ಕುಟುಂಬವು ಆಕೆಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದೆ.

ಮೃತನ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ ಅಪರಾಧಕ್ಕೆ ಕ್ಷಮೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಕೆಗೆ ಶಿಕ್ಷೆಯಾಗಬೇಕು ಮತ್ತು ತಾನು ಬ್ಲಡ್‌ ಮನಿ ಸ್ವೀಕರಿಸುವುದಿಲ್ಲ ಎಂದು ಅವರುಹೇಳಿದ್ದಾರೆ.

ಶಿಕ್ಷೆಯನ್ನು ಮುಂದೂಡಿದ ನಂತರ, ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಮಧ್ಯಸ್ಥಿಕೆ ಮತ್ತು ಸಮನ್ವಯಕ್ಕಾಗಿ ಪ್ರಸ್ತುತ ಪ್ರಯತ್ನಗಳು ಹೊಸದೇನಲ್ಲ. ಇದು ನಮಗೆ ಆಶ್ಚರ್ಯವನ್ನುಂಟು ಮಾಡುವುದಿಲ್ಲ. ನಾವು ಎದುರಿಸುತ್ತಿರುವ ಒತ್ತಡಗಳು ನಮ್ಮ ಅಭಿಪ್ರಾಯವನ್ನು ಬದಲಾಯಿಸುವುದಿಲ್ಲ. ಈ ಮುಂದೂಡಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಹಣದಿಂದ ಮಾನವ ಜೀವವನ್ನು ಖರೀದಿಸಲು ಸಾಧ್ಯವಿಲ್ಲ. ನಮಗೆ ನ್ಯಾಯ ಸಿಗಬೇಕು” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಪರಾಧಿಯನ್ನು ಬಲಿಪಶು ಎಂದು ಬಿಂಬಿಸುವ ಯಾವುದೇ ಪ್ರಯತ್ನ ಮಾಡಬಾರದು ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page