Saturday, October 4, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳದ ವಿರುದ್ಧ ವೈಚಾರಿಕ ಷಡ್ಯಂತ್ರ – ಬಿ.ಎಲ್ ಸಂತೋಷ್

ಉಡುಪಿ : ಧರ್ಮಸ್ಥಳ (Dharmasthala case) ವಿರುದ್ಧದ ಆರೋಪಗಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ (BL Santosh) ಮಾತನಾಡಿದ್ದು, ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಇದು ಧರ್ಮಸ್ಥಳದ ಮೇಲೆ ನಡೆದಿರುವ ವೈಚಾರಿಕ ಆಕ್ರಮಣ ಎಂದಿದ್ದಾರೆ. ಹೌದು, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು
ಹೂತಿಟ್ಟ ಆರೋಪದ ಪ್ರಕರಣದ ಸಂಬಂಧ ಇದುವರೆಗಿನ ಒಟ್ಟಾರೆ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಬಿ.ಎಲ್.ಸಂತೋಷ್, ನಮ್ಮ ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣವಾಗಿದೆ.ಈ ಹಿಂದೆ ಉಡುಪಿ ಕೃಷ್ಣಮಠದ ಮೇಲೂ ಇದೇ ರೀತಿ ಆಕ್ರಮಣ ನಡೆದಿತ್ತು, ಇದೆಲ್ಲಾ ವ್ಯವಸ್ಥಿತ ಪಿತೂರಿ ಎಂದಿದ್ದಾರೆ.

ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ವೈಚಾರಿಕ ಆಕ್ರಮಣ ನಡೆಯುತ್ತಿದ್ದು,ಹುಲಿಗೆ ರಕ್ತದ ರುಚಿ ಸಿಕ್ಕಿದೆ. ಶಬರಿಮಲೆಯಲ್ಲಿ ರಕ್ತದ ರುಚಿ ನೋಡಿದ್ದರು, ಆ ಬಳಿಕ ಈಶ ಆಶ್ರಮ, ಈಗ ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಿದ್ದಾರೆ. ಈ ಕೃತ್ಯಗಳಿಗೆ , ಷಡ್ಯಂತ್ರಕ್ಕೆ, ಇದರ ಹಿಂದೆ ಇರುವವರಿಗೆ ಶಿಕ್ಷೆ ಆಗಬೇಕು.ಇದಕ್ಕಾಗಿ ಹಿಂದೂ ಸಮಾಜ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page