Friday, June 14, 2024

ಸತ್ಯ | ನ್ಯಾಯ |ಧರ್ಮ

ಪರ್ಯಾಯ ರಾಜಕೀಯ ಮೈತ್ರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ ಕರೆ

ಬೆಂಗಳೂರು: ಇತ್ತೀಚೆಗೆ ಹಾಸನ ನಗರದಲ್ಲಿ ಜರುಗಿದ ಭಾರತ ಕಮ್ಯೂನಿಸ್ಟ್ ಪಕ್ಷದ 24ನೇ ರಾಜ್ಯ ಸಮ್ಮೇಳನವು ಬಿಜೆಪಿಯ ದುರಾಡಳಿದ ವಿರುದ್ಧ ಜಾತ್ಯಾತೀತ ಪ್ರಜಾಸತ್ತಾತ್ಮಕ ಎಡಪಕ್ಷಗಳ ಚುನಾವಣಾಪೂರ್ವ ಮೈತ್ರಿಗೆ ಕರೆ ನೀಡಿದೆ.
ಈ ಕುರಿತು ಸಿಪಿಐ ಪಕ್ಷವು ಪತ್ರಿಕಾ ಹೇಳಿಕೆ ನೀಡಿದೆ. ಸಮ್ಮೇಳನದ ಅಂಗವಾಗಿ ಸೆಪ್ಟೆಂಬರ್ 27ರಂದು ಹಾಸನ ನಗರದ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ಆಯೋಜನೆಗೊಂಡಿದ್ದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಪ್ರಧಾನ ಹಾಗೂ ಪ್ರತಿನಿಧಿ ಸಮಾವೇಶದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು ಎಂದು ತಿಳಿಸಲಾಗಿದೆ. ಟ್ರಾನ್ಸ್ಜೆಂಡರ್ ಸಮುದಾಯದ ಪ್ರತಿನಿಧಿಗಳು ಸಹ ಭಾಗವಹಿಸಿದ್ದ ಈ ಸಮಾವೇಶದಲ್ಲಿ ಕೆಲ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

  • ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾಸನಗಳನ್ನು ಹಿಂಪಡೆಬೇಕು.
  • ಕಾರ್ಮಿಕರ ಕನಿಷ್ಟ ಕೂಲಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ಕನಿಷ್ಟ 31 ಸಾವಿರದ ಐನೂರು ರೂಪಾಯಿಗಳಿಗೆ ನಿಗದಿಪಡಿಸಬೇಕು.
  • ಗುಜರಾತ್‌ನಲ್ಲಿ ಬಿಲ್ಕಿಸ್‌ಬಾನು ಮೇಲಿನ ಸಾಮೂಹಿಕ ಅತ್ಯಾಚಾರಿಗಳಿಗೆ ಕಾನೂನುಬಾಹಿರವಾಗಿ ಕ್ಷಮಾದಾನ ನೀಡಿ ಅವಧಿಪೂರ್ವ ಜೈಲಿನಿಂದ ಬಿಡುಗಡೆಗೊಳಿಸಿರುವ ಅಲ್ಲಿನ ಸರ್ಕಾರದ ಕ್ರಮವನ್ನು ಸಮ್ಮೇಳನ ಖಂಡಿಸುತ್ತಲೇ ಕ್ಷಮಾದಾನವನ್ನು ಹಿಂಪಡೆದು ಆ 11 ಪಾತಕಿಗಳನ್ನು ಪುನಃ ಜೈಲಿಗೆ ಕಳುಹಿಸಬೇಕು.
  • ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಗಣಿ ನಿಕ್ಷೇಪಗಳನ್ನು ಪತ್ತೆಮಾಡಿ ಅಲ್ಲಿ ಗಣಿಗಾರಿಕೆ ಆರಂಭಿಸಿ ಹಾಗೂ ಈಗಾಗಲೇ ಸ್ಥಗಿತಗೊಂಡಿರುವ ಗಣಿಗಾರಿಕೆ ಮತ್ತು ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಿ ಸ್ಥಳೀಯ ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು.
  • ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಯನ್ನು ಪುನರಾರಂಭಿಸಬೇಕು, ನಿವೃತ್ತ ಬಿಜಿಎಂಎಲ್ ಕಾರ್ಮಿಕರಿಗೆ ಬಾಕಿ ಇರುವ 52 ಕೋಟಿ ರೂ.ಗಳು ಮತ್ತು 20 ವರ್ಷಗಳ ಸರಳ ಬಡ್ಡಿಯನ್ನು ಸೇರಿಸಿ ಪರಿಹಾರ ನೀಡಬೇಕು. ಬಿಜಿಎಂಎಲ್ ಕಾರ್ಮಿಕರು ಮತ್ತವರ ಕುಟುಂಬದವರು 120 ವರ್ಷಗಳಿಂದ ವಾಸವಾಗಿರುವ ಮನೆಗಳಿಗೆ ಅವರ ಹೆಸರಿಗೇ ಹಕ್ಕುಪತ್ರಗಳನ್ನು ನೀಡಬೇಕು.
  1. ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರ ವಿರುದ್ಧ ಅಪ್ರಾಪ್ತ ಬಾಲಕಿಯರು ನೀಡಿರುವ ಲೈಂಗಿಕ ದೌರ್ಜನ್ಯದ ಆರೋಪಗಳ ನಿಷ್ಪಕ್ಷಪಾತವಾದ ಮತ್ತು ನ್ಯಾಯಯುತವಾದ ಸಮಗ್ರ ತನಿಖೆಗಾಗಿ ಸರ್ಕಾರ ತನಿಖಾಧಿಕಾರಿಗಳನ್ನು ಬದಲಿಸಬೇಕು. ಸಂತ್ರಸ್ತ ಬಾಲಕಿಯರ ರಕ್ಷಣೆ ಮತ್ತು ಪೋಷಣೆಗೆ ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕ ಶಿಕ್ಷಣ, ಆರೋಗ್ಯ, ಭೂಮಿ, ವಸತಿ, ಉದ್ಯೋಗ, ಆಹಾರ ಭದ್ರತೆ – ಈ ಆರು ಅಂಶಗಳ ಮೇಲೆ ರಾಜ್ಯಾದ್ಯಂತ ಚಳುವಳಿ ರೂಪಿಸುವ ಹಾಗೂ ಸಮಾಜದ ಅತ್ಯಂತ ದಮನಿತ ಸಮುದಾಯಗಳಾದ ಬುಡಕಟ್ಟು, ಅಲೆಮಾರಿ, ದೇವದಾಸಿ, ಟ್ರಾನ್ಸ್ಜೆಂಡರ್ ಮತ್ತು ದಲಿತರ ಏಳಿಗೆಗೆ ಅಗತ್ಯ ಕಾರ್ಯಕ್ರಮಗಳ ಜಾರಿಗೆ ಸರ್ಕಾರಗಳನ್ನು ಒತ್ತಾಯಿಸಲು ಸಮ್ಮೇಳನ ತೀರ್ಮಾನ ಕೈಗೊಂಡಿದ ಎಂದು ಪ್ರಕಟಣೆ ತಿಳಿಸಿದೆ.

ಕಮ್ಯುನಿಷ್ಟ್‌ ಪಕ್ಷದ ನೂತನ ಕಾರ್ಯದರ್ಶಿಯಾಗಿ ಕಾ|| ಸಾತಿ ಸುಂದರೇಶ್, ಸಹ-ಕಾರ್ಯದರ್ಶಿಗಲಾಗಿ ಕಾ|| ವಿಜಯಭಾಸ್ಕರ್ ಡಿ.ಎ. ಮತ್ತು ಕಾ|| ಬಿ.ಅಮ್ಜದ್, ಖಜಾಂಚಿಯಾಗಿ ಕಾ|| ಶಿವರಾಜ ರಾ ಬಿರಾದಾರ್ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಸಾತಿ ಸುಂದರೇಶ್‌ ಪ್ರಟಣೆಯಲ್ಲಿ ತಿಳಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಪ್ರೇಮದ ಹೆಜ್ಜೆಗಳ ಘಲ್‌ ಘಲ್‌ ಸದ್ದು!

ಪೀಪಲ್ ಮೀಡಿಯಾ ವಿಶೇಷ
ದಿನೇಶ್ ಕುಮಾರ್ ಎಸ್ ಸಿ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

Related Articles

ಇತ್ತೀಚಿನ ಸುದ್ದಿಗಳು