Thursday, June 20, 2024

ಸತ್ಯ | ನ್ಯಾಯ |ಧರ್ಮ

ಅಸ್ಸಾಂ ಸರ್ಕಾರದಿಂದ “ಯಾತ್ರೆ” ತಡೆಯಲು ಇನ್ನಿಲ್ಲದ ಪ್ರಯತ್ನ : ಕೆಸಿ ವೇಣುಗೋಪಾಲ್ ಆರೋಪ

ಭಾರತ್ ಜೋಡೋ ಯಾತ್ರೆ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿದ ದಿನದಿಂದ ಒಂದು ದಿನವೂ ಬಿಡದೇ ನಮಗೆ ಸರ್ಕಾರದಿಂದ ತೊಂದರೆಯಾಗುತ್ತಿದೆ. ಇದು ಭಾರತ್ ಜೋಡೋ ನ್ಯಾಯ ಯಾತ್ರೆ ಬಗ್ಗೆ ಅಸ್ಸಾಂ ಸರ್ಕಾರಕ್ಕೆ ಇರುವ ಭಯವನ್ನು ಸೂಚಿಸುತ್ತಿದೆ ಎಂದು ಕೆ.ಸಿ.ವೇಣುಗೋಪಾಲ್ ಅವರು ಅಸ್ಸಾಂ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಅಸ್ಸಾಂ ಪ್ರವೇಶಿಸಿದ ದಿನದಿಂದ (#BharaJodoNyayYatra) ಯಾತ್ರೆಯ ಮೇಲೆ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕಡೆಯಿಂದಲೇ ಅತ್ಯಂತ ಕೆಟ್ಟ ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಪೊಲೀಸರು ಎಲ್ಲೆಡೆ ನಮ್ಮ ಯಾತ್ರೆಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಡೆಯಿಂದ ಗಂಭೀರ ಆರೋಪ ಕೇಳಿ ಬಂದಿದೆ.

ಅಸ್ಸಾಂನಲ್ಲಿ ಇಂದು ಭಾರತ್ ಜೋಡೋ ನ್ಯಾಯ ಯಾತ್ರೆಯ ವಾಹನಗಳ ಮೇಲೆ ಅಂಟಿಸಲಾಗಿದ್ದ ಫ್ಲೆಕ್ಸ್ ಮತ್ತು ಸ್ಟಿಕ್ಕರ್ ಗಳನ್ನು ತೆಗೆಯುವಂತೆ ಸ್ಥಳೀಯ ಪೊಲೀಸರು ತಾಕೀತು ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಪೊಲೀಸರೂ ಪಟ್ಟು ಬಿಡದಿದ್ದಾಗ, ನೇರವಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಪೊಲೀಸರ ವರ್ತನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, “ಇಂದು ಅವರು ನಮ್ಮ ವಾಹನಗಳು ಮತ್ತು ಫ್ಲೆಕ್ಸ್‌ಬೋರ್ಡ್‌ಗಳ ಮೇಲೆ ದಾಳಿ ಮಾಡಿದ್ದಾರೆ, ಅಸ್ಸಾಂನಲ್ಲಿ ಅವರು ಮಾಡುತ್ತಿರುವ ರೀತಿ ಖಂಡನೀಯ, ನಾವು ಅವರಿಗೆ ಒಂದೇ ಒಂದು ವಿಷಯವನ್ನು ನೆನಪಿಸುತ್ತೇವೆ – ನಾವು ಇದಕ್ಕೆಲ್ಲ ಶರಣಾಗಲು ಹೋಗುವುದಿಲ್ಲ, ನಾವು ನಮ್ಮ ಯಾತ್ರೆಯನ್ನು ಮುಂದುವರಿಸುತ್ತೇವೆ. ಬಹಳ ಹುರುಪಿನಿಂದ ಅಸ್ಸಾಂನ ಜನರು ನಮ್ಮೊಂದಿಗಿದ್ದಾರೆ.” ಎಂದು ಹೇಳಿದ್ದಾರೆ.

ಅಷ್ಟೆ ಅಲ್ಲದೆ “ಅಸ್ಸಾಂನಾದ್ಯಂತ ಭಾರತ್ ಜೋಡೋ ಯಾತ್ರೆಯು ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ನಮ್ಮ ಯಾತ್ರೆಯನ್ನು ಮುಂದುವರೆಸುತ್ತೇವೆ. ನಮ್ಮ ಯಾತ್ರೆಗೆ ಹೆದರಿದ ಸರ್ಕಾರ ಇಂತಹ ಕೃತ್ಯಕ್ಕೆ ಇಳಿದಿವೆ. ನಾವು ಯಾರಿಗೂ ಜಗ್ಗುವುದಿಲ್ಲ” ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ‌.

Related Articles

ಇತ್ತೀಚಿನ ಸುದ್ದಿಗಳು