Thursday, June 19, 2025

ಸತ್ಯ | ನ್ಯಾಯ |ಧರ್ಮ

ಚಿತ್ರನಟ ಸಿದ್ಧಾರ್ಥ್‌ ಸುದ್ದಿ ಗೋಷ್ಟಿಗೆ ನುಗ್ಗಿ ಅಡ್ಡಿಪಡಿಸಿದ ಕನ್ನಡ ಕಾರ್ಯಕರ್ತರು

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಬೆಂಗಳೂರಿನಲ್ಲಿ ಹೋಟೆಲ್‌ ಒಂದಕ್ಕೆ ನುಗ್ಗಿ ದಕ್ಷಿಣ ಭಾರತದ ನಟ ಸಿದ್ಧಾರ್ಥ್ ಅವರು ತಮ್ಮ ಮುಂಬರುವ ತಮಿಳು ಚಲನಚಿತ್ರ “ಚಿತ್ತ” ಪ್ರಚಾರಕ್ಕಾಗಿ ಮಾತನಾಡುತ್ತಿದ್ದ ಪತ್ರಿಕಾಗೋಷ್ಠಿಯನ್ನು ಕೊನೆಗೊಳಿಸುವಂತೆ ಒತ್ತಾಯಿಸಿದರು.

ಬೆಂಗಳೂರಿನ ಮಲ್ಲೇಶ್ವರದ ಹೋಟೆಲ್‌ ಒಂದರಲ್ಲಿ ಈ ಘಟನೆ ನಡೆದಿದೆ.

ಸಿದ್ಧಾರ್ಥ್ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿರುವಾಗ ಸಭಾಂಗಣಕ್ಕೆ ಪ್ರವೇಶಿಸಿದ ಕಾರ್ಯಕರ್ತರು, ರಾಜ್ಯದಲ್ಲಿ ಕಾವೇರಿ ಬಿಕ್ಕಟ್ಟು ಉತ್ತುಂಗದಲ್ಲಿರುವಾಗ ಬೆಂಗಳೂರಿನಲ್ಲಿ ತಮಿಳು ಚಿತ್ರದ ಪ್ರಚಾರ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಚಾರ ಕಾರ್ಯಕ್ರಮವನ್ನು ಮುಗಿಸುವಂತೆ ಅವರು ಸಿದ್ಧಾರ್ಥ್ ಅವರನ್ನು ಆಗ್ರಹಿಸಿದರು.

ಸಿದ್ಧಾರ್ಥ್ ಕಾರ್ಯಕರ್ತರೊಂದಿಗೆ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸಿದರು, ಆದರೆ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಕಾರ್ಯಕರ್ತರು ಇರಲಿಲ್ಲ. ಪತ್ರಿಕಾಗೋಷ್ಟಿಯನ್ನು ಮುಗಿಸುವಂತೆ ಸಿದ್ಧಾರ್ಥ್‌ ಅವರಿಗೆ ಸೂಚಿಸಿದ ಅವರು, ತಮಿಳು ಚಿತ್ರದ ಪ್ರಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ವಲ್ಪ ದಿನಗಳ ನಂತರ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸುವಂತೆ ಕಾರ್ಯಕರ್ತರು ನಟ ಸಿದ್ಧಾರ್ಥ್ ಅವರನ್ನು ವಿನಂತಿಸಿದರು.

ಈ ವೇಳೆ ನಟ ಎದ್ದು ನಿಂತು ಎಲ್ಲರೂ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿ ಪತ್ರಿಕಾಗೋಷ್ಟಿಯನ್ನು ಮುಗಿಸಿದರು.

“ಚಿತ್ತ” ಚಿತ್ರವು ಸೆಪ್ಟೆಂಬರ್ 28ರಂದು ಬಿಡುಗಡೆಯಾಯಿತು. ಅವರೇ ಸಿನೆಮಾದ ಕನ್ನಡ ಆವೃತ್ತಿಯಾದ “ಚಿಕ್ಕು” ಗೆ ಡಬ್ಬಿಂಗ್ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page