Wednesday, June 18, 2025

ಸತ್ಯ | ನ್ಯಾಯ |ಧರ್ಮ

ವಿಮಾನಯಾನ ಪ್ರಯಾಣ : ಭರವಸೆ ಕಳೆದುಕೊಳ್ಳುತ್ತಿರುವ ‘ಏರ್ ಇಂಡಿಯಾ’!

ಅಹಮದಾಬಾದ್ ನಲ್ಲಾದ ಭೀಕರ ವಿಮಾನ ದುರಂತ ಪರಿಣಾಮ ಈಗ ಏರ್ ಇಂಡಿಯಾ ವಿಮಾನಗಳು ಹಾರಾಟದ ದೊಡ್ಡ ಹೊಡೆತ ಎದುರಿಸಲಿವೆ. ವಿಶೇಷವಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ನೇರವಾಗಿ ಮುಂದೆ ತಾವು ಮತ್ತು ತಮ್ಮ ಕುಟುಂಬದವರು ಮುಂದಿನ ದಿನಗಳಲ್ಲಿ ‘ಏರ್ ಇಂಡಿಯಾ’ ವಿಮಾನದಲ್ಲಿ ಪ್ರಯಾಣ ಮಾಡುವುದಿಲ್ಲ ಎಂಬ ಹೇಳಿಕೆ ಈಗ ಹೆಚ್ಚು ಹರಿದಾಡುತ್ತಿದೆ.

ವಿಮಾನ ದುರಂತದ ಬಗ್ಗೆ ಸಂತಾಪ ಸೂಚಿಸಿರುವ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ‘ನಾನು ನನ್ನ ಇಡೀ ಕುಟುಂಬದೊಂದಿಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಲು ಉದ್ದೇಶಿಸಿದ್ದೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ನಾನು ಮತ್ತೆ ಎಂದಿಗೂ ಏರ್ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ ಅವರ ಈ ಹೇಳಿಕೆ ಮುಂದಿನ ದಿನಗಳಲ್ಲಿ ವಿಮಾನ ಯಾನಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಎದುರಿಸಬಹುದಾದ ದೊಡ್ಡ ಸವಾಲನ್ನು ಹೊರ ಹಾಕಿದೆ. 2024 ರಲ್ಲಿ ಬೋಯಿಂಗ್ 787 ಡ್ರೀಮ್‌ಲೈನರ್‌ನ ರಚನಾತ್ಮಕ ಸಮಗ್ರತೆಯ ಬಗ್ಗೆ ಬೋಯಿಂಗ್ ಎಂಜಿನಿಯರ್ ಒಬ್ಬರು ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ಆದರೂ ಸಹ ಭಾರತದ ವಿಮಾನಯಾನ ಅಧಿಕಾರಿಗಳಾಗಲಿ, ಸರ್ಕಾರದ ಪ್ರತಿನಿಧಿಗಳಾಗಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಿಲ್ಲ.

ಇದರ ಪರಿಣಾಮವೇ ಈಗ ಅಹಮದಾಬಾದ್ ವಿಮಾನ ದುರಂತ ಎಂಬ ಮಾತುಗಳು ಕೇಳಿ ಬರುತ್ತಿವೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನವು ಅಹಮದಾಬಾದ್‌ನ ನಿವಾಸಿ ವೈದ್ಯರ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 265 ಜನರು ಸಾವನ್ನಪ್ಪಿದ್ದರು. ನಿರ್ದಿಷ್ಟವಾಗಿ ಅಪಘಾತಕ್ಕೀಡಾದ ಈ ವಿಮಾನವು 2011 ರಲ್ಲಿ ವಾಣಿಜ್ಯಿಕವಾಗಿ ಹಾರಾಟಕ್ಕೆ ಶುರು ಮಾಡಿದ ನಂತರ 787 ಒಳಗೊಂಡ ಮೊದಲ ಮಾರಕ ಅಪಘಾತ ಇದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page