Sunday, June 22, 2025

ಸತ್ಯ | ನ್ಯಾಯ |ಧರ್ಮ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಶಾಸಕ ಅಜಯ್‌ ಸಿಂಗ್‌ ಆಯ್ಕೆ

ಕರ್ನಾಟಕ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಜಯ್‌ ಸಿಂಗ್‌ ಆಯ್ಕೆ ಅವರನ್ನು ಸರ್ಕಾರ ಆಯ್ಕೆ ಮಾಡಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಇತರ ಸದಸ್ಯರಾಗಿ ಸೈಯದ್‌ ನಾಜೀರ್‌ ಹುಸೇನ್‌ ರಾಜ್ಯಸಭಾ ಸದಸ್ಯರು, ಅರವಿಂದ ಅರಳಿ ಯಲಕನೂರು ಎಂಎಲ್‌ಸಿ ಬೀದರ್‌, ತಿಪ್ಪಣ್ಣಪ್ಪ ಕಮಕನೂರು ಎಂಎಲ್‌ಸಿ ಕಲಬುರ್ಗಿ, ಅಜಯ್‌ ಸಿಂಗ್‌ ಎಂಎಲ್‌ಎ ಜೇವರ್ಗಿ ವಿಧಾನಸಭಾ ಕ್ಷೇತ್ರ, ಬಿಆರ್‌ ಪಾಟೀಲ್‌ ಶಾಸಕ ಅಳಂದ ವಿಧಾನಸಭಾ ಕ್ಷೇತ್ರ, ರಾಜಾ ವೆಂಕಟಪ್ಪ ನಾಯ್ಕ್‌ ಶಾಸಕ ಯಾದಗಿರಿ ವಿಧಾನಸಭಾ ಕ್ಷೇತ್ರ, ಹಂಪನಗೌಡ ಬಾದರ್ಲಿ ಶಾಸಕ ಸಿಂಧನೂರು ವಿಧಾನಸಭಾ ಕ್ಷೇತ್ರ, ಬಸವರಾಯ ರಾಯರೆಡ್ಡಿ ಶಾಸಕ ಯಲಬುರ್ಗಾ ವಿಧಾನಸಭಾ ಕ್ಷೇತ್ರ, ರಾಘವೇಂದ್ರ ಇಟ್ನಾಳ್‌ ಶಾಸಕ ಕೊಪ್ಪಳ ವಿಧಾನಸಭಾ ಕ್ಷೇತ್ರ, ತುಕಾರಾಮ್‌ ಶಾಸಕ ಸಂಡೂರು ವಿಧಾನಸಭಾ ಕ್ಷೇತ್ರ, ಎಚ್‌ಆರ್‌ ಗವಿಯಪ್ಪ ಶಾಸಕ ವಿಜಯನಗರ ವಿಧಾನಸಭಾ ಕ್ಷೇತ್ರ ಇವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಅಂದಿನ ಕೇಂದ್ರ ರೈಲ್ವೆ ಮಂತ್ರಿಗಳಾದ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನದಿಂದ 2013ರಲ್ಲಿ ಅಂದಿನ ಯು.ಪಿ.ಎ ಸರ್ಕಾರವು ಭಾರತ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಕಲಂ ಅಡಿಯಲ್ಲಿ ರಚಿಸಿತು. ಅದೇ ವರ್ಷ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪತ್ರ ಅಧಿಸೂಚನೆಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು (ಕ. ಕ. ಪ್ರ.ಅ.ಮಂಡಳಿ) ಕಲಬುರಗಿಯಲ್ಲಿ ಸ್ಥಾಪಿಸಲು ಆದೇಶ ನೀಡಿದ್ದರು. ಮಂಡಳಿವ್ಯಾಪ್ತಿಗೆ 42 ವಿಧಾನಸಭಾಕ್ಷೇತ್ರಗಳು (ಇತ್ತೀಚಿನ ವಿಧಾನ ಸಭಾ ಕ್ಷೇತ್ರಗಳ ಪುನರ್‍ರಚನೆ ಪ್ರಕಾರ) ಒಳಗೊಂಡಿದ್ದು, ಸದರಿ ಮಂಡಳಿ ವ್ಯಾಪ್ತಿಯಲ್ಲಿ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತುಯಾದಿಗಿರಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page