Thursday, June 19, 2025

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: ಹಣಕಾಸು ಸಚಿವ ಸ್ಥಾನ ಪಡೆದ ಅಜಿತ್ ಪವಾರ್

ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಂಪುಟ ಪುನಾರ್‌ ರಚನೆ ಕಸರತ್ತು ಒಂದು ಹಂತಕ್ಕೆ ತಲುಪಿದ್ದು. ಇದರಲ್ಲಿ ಅಜಿತ್‌ ಪವಾರ್‌ ಹಣಕಾಸು ಖಾತೆಯನ್ನು ಪಡೆಯುವ ಮೂಲಕ ತನ್ನ ಬಲವನ್ನು ಸಾಬೀತುಪಡಿಸಿದ್ದಾರೆ.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗೃಹ ಖಾತೆಯಲ್ಲಿ ಮುಂದುವರೆದರೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನಗರಾಭಿವೃದ್ಧಿ ಖಾತೆಯನ್ನು ಹೊಂದಿದ್ದಾರೆ.

ಎನ್‌ಸಿಪಿಯ ಛಗನ್ ಭುಜಬಲ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವನ್ನು ಪಡೆದಿದ್ದು, ಅವರು ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿಯೂ ಈ ಹುದ್ದೆಯನ್ನು ಹೊಂದಿದ್ದರು. ಧನಂಜಯ್ ಮುಂಡೆ
ಕೃಷಿ ಸಚಿವರಾಗಿ ಕಚೇರಿ ಪಡೆಯಲಿದ್ದಾರೆ.

ಜುಲೈ 2 ರಂದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್‌ ಪವಾರ್ ಮತ್ತು ಅವರ ಪಕ್ಷದ ಇತರ ಎಂಟು ಶಾಸಕರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಅಂದಿನಿಂದ ಕಗ್ಗಂಟಾಗಿದ್ದ ಸಚಿವ ಸ್ಥಾನದ ಹಂಚಿಕೆ ಇಂದು ತಿಳಿಗೊಂಡಿದೆ.

ಈ ಕುರಿತು ಹಿಡಿದ ಹಠ ಸಾಧಿಸುವ ಸಲುವಾಗಿ ನಿನ್ನೆಯೂ ಶರದ್‌ ಪವಾರ್‌ ಮತ್ತು ಛಗನ್ ಭುಜಬಲ್ ಅಮಿತ್‌ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ದೌಡಾಯಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page