Friday, January 30, 2026

ಸತ್ಯ | ನ್ಯಾಯ |ಧರ್ಮ

ಅಜಿತ್ ಪವಾರ್ ಸಾವು ಕೇವಲ ಅಪಘಾತ, ಇದರಲ್ಲಿ ಯಾವುದೇ ಸಂಚು ಇಲ್ಲ: ಶರದ್ ಪವಾರ್ ಭಾವುಕ ಸ್ಪಷ್ಟನೆ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯಿಸಿದ್ದಾರೆ. ವಿಮಾನ ಅಪಘಾತದಲ್ಲಿ ಯಾವುದೇ ಸಂಚು (ಕುತಂತ್ರ) ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಜಿತ್ ಪವಾರ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಾ ಅವರು ಭಾವುಕರಾದರು. ಅವರ ನಿಧನದಿಂದ ಮಹಾರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶರದ್ ಪವಾರ್ ತಿಳಿಸಿದರು. ಒಬ್ಬ ಸಮರ್ಥ ನಾಯಕ ಇಂದು ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದರು. “ಮಹಾರಾಷ್ಟ್ರ ಇಂದು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.

ಅಲ್ಲದೆ, ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ಅಜಿತ್ ಪವಾರ್ ಅವರ ಚಿಕ್ಕಪ್ಪರಾದ 85 ವರ್ಷದ ಶರದ್ ಪವಾರ್ ತಿಳಿಸಿದರು. ತಾವು ಅಸಹಾಯಕರಾಗಿರುವುದಾಗಿ ಅವರು ಹೇಳಿದರು.

“ಅಳುವುದು ಮುಜುಗರವೆನಿಸಬಹುದು. ಕೆಲವು ಘಟನೆಗಳ ಹಿಂದೆ ರಾಜಕೀಯ ಇರುವುದಿಲ್ಲ. ಈ ವಿಷಯದಲ್ಲಿ ನನ್ನ ನಿಲುವನ್ನು ನಾನು ಸ್ಪಷ್ಟಪಡಿಸಿದ್ದೇನೆ. ಇದರಲ್ಲಿ ಯಾವುದೇ ಸಂಚು ಇಲ್ಲ. ಇದು ಕೇವಲ ಒಂದು ಅಪಘಾತವಷ್ಟೇ. ಮಹಾರಾಷ್ಟ್ರ ಹಾಗೂ ನಾವೆಲ್ಲರೂ ಈ ನೋವನ್ನು ಜೀವನಪೂರ್ತಿ ಭರಿಸಬೇಕಾಗುತ್ತದೆ. ದಯವಿಟ್ಟು ಇದರೊಳಗೆ ರಾಜಕೀಯವನ್ನು ತರಬೇಡಿ, ನಾನು ಹೇಳಬಯಸುವುದು ಇಷ್ಟೇ,” ಎಂದು ಅವರು ಮನವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page