Friday, June 6, 2025

ಸತ್ಯ | ನ್ಯಾಯ |ಧರ್ಮ

ಮುಸುಕಿನ ಜೋಳ ಹಳದಿ ಬಣ್ಣಕ್ಕೆ, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ – ಶ್ರೀಕಾಂತ್ ಆಗ್ರಹ

ಹಾಸನ : ಮುಸುಕಿನ ಜೋಳಕ್ಕೆ ಹಳದಿ ರೋಗದಿಂದ ನಷ್ಟ. ಈ ಕೂಡಲೇ ಸರ್ಕಾರ ನಕಲಿ ಬೀಜಗಳನ್ನ ಪತ್ತೆ ಮಾಡಿ ವಿಜ್ಞಾನಿಗಳಿಂದ ಬೆಳೆಯನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿ ರೈತರಿಗೆ ವಿಶೇಷ ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡುವಂತೆ ವಕೀಲರು ಹಾಗೂ ಬಿಜೆಪಿ ಮುಖಂಡ ಶ್ರೀಕಾಂತ್ ಚನ್ನಂಗಿಹಳ್ಳಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮುಸುಕಿನ ಜೋಳಕ್ಕೆ ಬಿಳಿ ಸುಳಿರೋಗ, ಬೂಜು ರೋಗ ತಗುಲಿ ಅಪಾರ ಬೆಳೆ ನಷ್ಟವಾಗಿದೆ. ಈಗ ಎಲ್ಲಾ ರೈತರು ಮುಸುಕಿನ ಜೋಳವನ್ನು ಬೆಳೆಯುತ್ತಿರುತ್ತಾರೆ. ಮುಸುಕಿನ ಜೋಳವನ್ನು ಹಾಸನ ಜಿಲ್ಲೆಯಲ್ಲಿ ಆಲೂಗೆಡ್ಡೆಯನ್ನು ಬೆಳೆಯದೆ ಬಿತ್ತಿನೆ ಮಾಡಿದ 25 ದಿನಗಳ ನಂತರ ಜೋಳವು ಹಳದಿ ಬಣ್ಣಕ್ಕೆ ತಿರುಗಿ ಗಿಡವು ನೆಲಕ್ಕೆ ಬಾಗಿ ಬೆಳೆಯ ಬೆಳವಣಿಗೆ ಕುಂಠಿತಗೊಂಡು ನೆಲಕ್ಕೆ ಬಿದ್ದು ಅಪಾರ ನಷ್ಟವಾಗುತ್ತಿದೆ ಎಂದರು. ದಿನ ಕಳದಂತೆ ಹೊಲದಲ್ಲಿ ಮುಜುಕಿನ ಜೋಳವೇ ಇಲ್ಲದಂತಾಗಿ ಎಲ್ಲ ರೈತರು ಜೋಳವನ್ನು ಟ್ಯಾಕ್ಟರ್ ಮುಖಾಂತರ ಜೋಳ ಸಮೇತ ಉಳುಮೆ ಮಾಡಿ ನಾಶ ಮಾಡಿಕೊಂಡಿರುತ್ತಾರೆ. ಹಾಸನ ಜಿಲ್ಲೆಯಲ್ಲಿ 70 ರಿಂದ 75000 ಹೆಕ್ಟರ್ ಗಳಲ್ಲಿ ಜೋಳವನ್ನು ಬೆಳೆಯುತ್ತಿದ್ದು, ಹಾಸನ ತಾಲೂಕು ಒಂದರಲ್ಲಿ 20 ರಿಂದ 30.000 ಹೆಕ್ಟರ್ ಗಳಲ್ಲಿ ಜೋಳವನ್ನು ಬೆಳೆಯುತ್ತಿದ್ದಾರೆ. ಮುಸುಕಿನ ಜೋಳದ ಕಂಪನಿಗಳಾದ ಹೈಟೆಕ್ ಎನ್ನೆ ಗಂಗಾ ಕಾವೇರಿ ಡೆಕ್ಸೆಪ್ ಮತ್ತು ವಿಷ್ಣು ಕಂಪನಿಯ ಜೋಳಗಳು ಹಾಸನದಲ್ಲಿ ಬೀಜಗಳನ್ನು ವಿತರಿಸಿದ್ದು, ಈ ಕಂಪನಿಗಳಲ್ಲಿ ಯಾರು ಬಿಜೋಪಚಾರ ಮಾಡದೆ ರೈತರಿಗೆ ಬೀಜಗಳನ್ನ ವಿತರಣೆ ಮಾಡಿರುತ್ತಾರೋ! ಅವುಗಳಲ್ಲಿ ಹಳದಿ ರೋಗ ಅಥವಾ ಬಿಳಿ ಸುಳಿರೋಗ ಕಂಡುಬರುತ್ತದೆ ಎಂದು ಹೇಳಬಹುದು. ರೈತರು ಕೃಷಿ ಇಲಾಖೆ ಕೊಡುವ ಬೀಜಗಳನ್ನ ಮಾತ್ರ ತೆಗೆದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಬಿಲ್ಲುಗಳನ್ನು ತೆಗೆದುಕೊಂಡು ಬೀಜಗಳನ್ನ ಖರೀದಿಸಬೇಕು ಎಂದು ಸಲಹೆ ನೀಡಿದರು.


ಈ ಬೀಜೋಪಚಾರ ಮಾಡದೆ ನಕಲಿ ಬೀಜಗಳನ್ನ ಕೊಟ್ಟಿರುವ ಕಂಪನಿಗಳ ಮೇಲೆ ಗ್ರಾಹಕ ನ್ಯಾಯಾಲಯದಲ್ಲಿ ದಾವೆಗಳನ್ನು ಕೊಡುತ್ತೇನೆ ಎಂದು ಎಚ್ಚರಿಸಿದರು. ಹಾಸನ ಜಿಲ್ಲೆಯ ರೈತರು ಸುಮಾರು ಒಬ್ಬೊಬ್ಬ ರೈತರು 50 ಸಾವಿರದಿಂದ ಒಂದು ಲಕ್ಷದವರೆಗೆ ಸಾಲ ಮಾಡಿಕೊಂಡು ಮುಸ್ಕಿನ ಜೋಳವನ್ನು ಬೆಳೆಯಲು ಬಿತ್ತನೆ ಮಾಡಿರುತ್ತಾರೆ. ಆದರೆ ಮುಸುಕಿನ ಜೋಳದ ಈ ಹಳದಿ ರೋಗದಿಂದ ಪ್ರತಿಯೊಬ್ಬರ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಕೂಡಲೇ ಸರ್ಕಾರ ನಕಲಿ ಬೀಜಗಳನ್ನ ಪತ್ತೆ ಮಾಡಿ ವಿಜ್ಞಾನಿಗಳಿಂದ ಬೆಳೆಯನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿ ರೈತರಿಗೆ ವಿಶೇಷ ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ಹಾಸನ ಜಿಲ್ಲೆಗೆ ಆಗಮಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಿರಿಗೌಡ, ಆದೇಶ್, ಲಕ್ನಾಯಕನಹಳ್ಳಿ ಗಿರೀಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page