Home ಬ್ರೇಕಿಂಗ್ ಸುದ್ದಿ ಚೈತ್ರಾ ಕುಂದಾಪುರ ವಿರುದ್ಧ ಇನ್ನೊಂದು ವಂಚನೆ ಪ್ರಕರಣ ದಾಖಲು!

ಚೈತ್ರಾ ಕುಂದಾಪುರ ವಿರುದ್ಧ ಇನ್ನೊಂದು ವಂಚನೆ ಪ್ರಕರಣ ದಾಖಲು!

0

ಬಟ್ಟೆಯಂಗಡಿ ಹಾಕಿಸಿ ಕೊಡುವುದಾಗಿ ಹೇಳಿ 5 ಲಕ್ಷ ರೂ ವಂಚನೆ, ಕೊಲೆ ಬೆದರಿಕೆ ಆರೋಪ

ಬ್ರಹ್ಮಾವರ: ಇತ್ತ ಬೆಂಗಳೂರಿನಲ್ಲಿ CCB ಪೊಲೀಸರು ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದ ಕಗ್ಗಂಟನ್ನು ಬಿಡಿಸಲು ತಿಣುಕುತ್ತಿದ್ದರೆ ಅತ್ತ ಉಡುಪಿ ಜಿಲ್ಲೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ.

ಸುದಿನಾ ಎನ್ನುವ ಹೆಸರಿನ ಮೀನು ವ್ಯಾಪರಿಯೊಬ್ಬರಿಗೆ ಚೈತ್ರಾ ತನಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಸಂಪರ್ಕವಿದ್ದ, ನಿಮಗೆ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ ಹೇಳಿ ಅವರಿಂದ ಆಗಾಗ ಒಂದಷ್ಟು ಹಣ ಪಡೆದಿದ್ದಾಳೆ. ಈ ಮೊತ್ತವು ಒಟ್ಟು 5 ಲಕ್ಷ ತಲುಪಿದ್ದು, ಅಂಗಡಿ ಮಾಡಿಸಿಕೊಡದ ಕಾರಣ ಸುದಿನ ಚೈತ್ರಾ ಬಳಿ ಹಣ ವಾಪಸ್‌ ಕೇಳಿದ್ದಾರೆ.

ಸುದಿನಾ ಮೂರು ಲಕ್ಷ ರೂಪಾಯಿ ಹಣವನ್ನು ತನ್ನ ಎರಡು ಬ್ಯಾಂಕ್‌ ಖಾತೆಗಳಿಂದ ಚೈತ್ರಾ ಖಾತೆಗೆ ಕಳುಹಿಸಿದ್ದರೆ, ಮಿಕ್ಕ ಹಣವನ್ನು ಆಗಾಗ ಕೊಟ್ಟಿದ್ದಾಗಿ ಹೇಳಿದ್ದಾರೆ.

ಆದರೆ 2015ರಲ್ಲಿ ಪರಿಚಯವಾದ ಚೈತ್ರಾ ಹಣ ಹಲವು ವರ್ಷಗಳು ಕಳೆದರೂ ಅಂಗಡಿ ಹಾಕಿಕೊಡುವ ಕುರಿತು ಆಸಕ್ತಿ ತೋರದ ಕಾರಣ ಸುದಿನಾ ಅವರಿಗೆ ಅವಳ ಕುರಿತು ಅನುಮಾನಗಳು ಮೂಡತೊಡಗಿವೆ. ಆಗ ಆ ವ್ಯಕ್ತಿಯು ಚೈತ್ರಾ ಬಳಿ ಹಣ ಮರಳಿಸುವಂತೆ ಕೇಳಿದಾಗ ಅವಳು ತಿರುಗಿಬಿದ್ದಿದ್ದಾಳೆ.

ಸುದಿನಾ ವಿರುದ್ಧ ಅತ್ಯಾಚಾರದ ಕೇಸು ದಾಖಲಿಸುವುದಾಗಿಯೂ ಚೈತ್ರಾ ಬೆದರಿಸಿರುವುದಾಗಿ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ, ಜೊತೆಗೆ ಬಾಡಿಗೆ ಗೂಂಡಾಗಳನ್ನು ಬಿಟ್ಟು ಕೊಲೆ ಮಾಡುವುದಾಗಿಯೂ ಅವರನ್ನು ಬೆದರಿಸಿದ್ದಾಳೆಂದು ಕೋಟಾ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

You cannot copy content of this page

Exit mobile version