Monday, July 28, 2025

ಸತ್ಯ | ನ್ಯಾಯ |ಧರ್ಮ

ಚಿತ್ರದುರ್ಗ: ಬಾಣಂತಿ ಮಹಿಳೆ ಸಾವು, ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದ ಸಂಬಂಧಿಕರು

ಚಿತ್ರದುರ್ಗ: ಬಾಣಂತಿ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಮಹಿಳೆ ರೋಜಮ್ಮ (25) ಚಳ್ಳಕೆರೆ ತಾಲೂಕಿನ ಜಾಗನೂರಹಟ್ಟಿ ಗ್ರಾಮದವರು. ಈ ಮಹಿಳೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ರೂಪಶ್ರೀ ಅವರು ಸಿಸೇರಿಯನ್ ಹೆರಿಗೆ ಮಾಡಿದ್ದರು.

ಹೆರಿಗೆಯ ನಂತರ, ರೋಜಮ್ಮ ಮನೆಗೆ ಮರಳಿದ್ದರು, ಆದರೆ ಸಿಸೇರಿಯನ್ ಹೊಲಿಗೆಯ ಸ್ಥಳದಲ್ಲಿ ನೋವು ಕಾಣಿಸಿಕೊಂಡಿತ್ತು. ಗಾಯದ ಸ್ಥಳದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆ ಸಮಯದಲ್ಲಿ ತೀವ್ರ ವಾಂತಿ ಮತ್ತು ಭೇದಿ ಸಮಸ್ಯೆಯಿಂದ ಬಳಲುತ್ತಿದ್ದರು.

ಹೊಟ್ಟೆ ನೋವು ಮತ್ತು ತೀವ್ರ ಯಾತನೆಯಿಂದ ಮಂಗಳವಾರ ಸಂಜೆ ಅವರು 40 ದಿನದ ಮಗುವನ್ನು ಅಗಲಿದ್ದಾರೆ.

ಜಿಲ್ಲಾಸ್ಪತ್ರೆ ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡದಿರುವುದು ರೋಜಮ್ಮ ಸಾವಿಗೆ ಕಾರಣ ಎಂದು ರೋಜಮ್ಮ ಅವರ ಪತಿ ವೆಂಕಟೇಶ್ ಮತ್ತು ಅವರ ಸಹೋದರಿ ಶಾರದಮ್ಮ ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page