Wednesday, April 2, 2025

ಸತ್ಯ | ನ್ಯಾಯ |ಧರ್ಮ

ಮಹಿಳಾ ವೈದ್ಯಾಧಿಕಾರಿಗಳ ವಿರುದ್ಧ ಆರ್.ಟಿ.ಐ. ಕಾರ್ಯಕರ್ತರ ದುರ್ನಡತೆ ಡಿಸಿ ಸತ್ಯಭಾಮಗೆ ಮನವಿ

ಹಾಸನ: ಆರ್.ಟಿ.ಐ. ಕಾರ್ಯಕರ್ತರು ನನಗೆ ತುಂಬ ಬೆದರಿಕೆ ಹಾಕಿದ್ದು, ವೈದ್ಯರಾಗಿ ಒಳ್ಳೆ ಕೆಲಸ ಮಾಡುವ ನಮಗೆ ದೈರ್ಯ ಕುಗ್ಗಿಸುವ ಕೆಲಸವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದಿAದ ಬುಧವಾರ ಸಂಜೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ಆರ್.ಟಿ.ಐ. ಕಾರ್ಯಕರ್ತರ ದುರ್ನಡತೆಗೆ ಒಳಗಾದ ಡಾ| ನಿಸಾರ್ ಫಾತಿಮಾ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ತಿಂಗಳು ೨೯ ರಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಬಿ.ವಿ. ಭಾನುಪ್ರಕಾಶ್ ಆರ್.ಟಿ.ಐ. ಕಾರ್ಯಕರ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ಯರ್ಥಗೊಳಿಸಲು ಆಡಳಿತ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಾಳ್ಯ ಆಲೂರು ತಾಲ್ಲೂಕು ನಾನು ಹಾಜರಾಗಿದ್ದಾಗ ಆರ್.ಟಿ.ಐ. ಕಾರ್ಯಕರ್ತರು ಮಹಿಳಾ ವೈದ್ಯಾಧಿಕಾರಿಯಾದ ನನ್ನ ಮೇಲೆ ಏರು ಧ್ವನಿಯಲ್ಲಿ ಕೈ ಬೆರಳು ಸನ್ನೆಮಾಡುತ್ತಾ ಮಹಿಳಾ ವೈದ್ಯಾಧಿಕಾರಿಗಳ ಘನತೆಗೆ ದಕ್ಕೆ ತರುವಂತಹ ರೀತಿಯಲ್ಲಿ ಮಾತನಾಡಿರುತ್ತಾರೆ ಎಂದು ದೂರಿದರು. ಇದು ನಮ್ಮ ಮಹಿಳಾ ವೈದ್ಯಾಧಿಕಾರಿಗಳ ಮತ್ತು ಇಡೀ ವೈದ್ಯ ಸಮೂಹದ ಆತ್ಮಸ್ಥೆರ್ಯ ಕುಗ್ಗಿಸುವಂತಹ ವರ್ತನೆಯಾಗಿದ್ದು, ಹಗಲಿರುಳು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ವೈದ್ಯಾಧಿಕಾರಿಗಳ ಘನತೆಗೆ ಕುತ್ತು ತರುವಂತಹ ಘಟನೆಯಾಗಿರುತ್ತದೆ. ಇಂತಹ ಘಟನೆಗಳು ಆರ್.ಟಿ.ಐ. ಕಾರ್ಯಕರ್ತರು ಅಥವಾ ಇನ್ನಿತರಿಂದ ವೈದ್ಯರ ಘನತೆಗೆ ಕುತ್ತು ತರದಂತೆ ತಾವು ಕ್ರಮವಹಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಇದೆ ವೇಳೆ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಡಾ. ಎಂ.ವಿ. ಸಂತೋಷ್, ಖಜಾಂಚಿಡಾ. ಹೆಚ್.ಜೆ. ತೇಜಸ್ವಿ, ನಮೃತ, ಮಹೇಶ್, ಡಾ. ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page