ರಾಜ್ ಕೋಟ್: ದಿನದಿಂದ ದಿನಕ್ಕೆ ಗುಜರಾತ್ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಹೆಚ್ಚಾಗುತ್ತಿದ್ದು ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ಅವರು ಇಂದು ರಾಜ್ ಕೋಟ್ ಗೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಅರವಿಂದ ಕೇಜ್ರಿವಾಲ್ ರ ಮೇಲೆ ಬಾಟಲ್ ಎಸೆದು ದುಂಡಾವರ್ತನೆ ತೋರಿದ್ದಾರೆ.
ಕೇಜ್ರಿವಾಲ್ ಅವರು ಆಗಮಿಸಿದ ತಕ್ಷದ ಹೆಚ್ಚಿನ ಜನಸಂದಣಿಯಾಗಿತ್ತು ಈ ಸಂದರ್ಭದಲ್ಲಿ ಜನರೊಳಗಿಂದ ನೀರಿನ ಬಾಟಲ್ ಎಸೆಯಲಾಗಿದೆ.
ಬಿಜೆಪಿಯ ವೈಫಲ್ಯಗಳನ್ನ ಮುಚ್ಚಿಡುವ ಸಲುವಾಗಿ ಇಂತಹ ಕೃತ್ಯಗಳು ಮಾಡುತ್ತಿದ್ದಾರೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.