Thursday, June 19, 2025

ಸತ್ಯ | ನ್ಯಾಯ |ಧರ್ಮ

ಅರ್ಧ ಹಾಕಿಟ್ಟ ಪಂಚಾಂಗದಲ್ಲೇ ಧ್ವಜ ನೆಟ್ಟು ಆಕ್ರೋಶ

ಚಿಕ್ಕಮಗಳೂರು: ಮನೆಪರಿಹಾರ ನೀಡದ ಸರಕಾರದ ನಡೆಯನ್ನು ವಿರೋಧಿಸಿ ಕಳಸ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಮನೆ ನಿರ್ಮಾಣದ ಪಂಚಾಂಗದಲ್ಲೇ ರಾಷ್ಟ್ರ ಧ್ವಜ ಹಾರಿಸಿದ ಘಟನೆ ಶನಿವಾರ ನಡೆದಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಸರಕಾರ ಹೇಳಿರುವ ಹಿನ್ನೆಲೆಯಲ್ಲಿ ಇಂದು ಹೆಚ್ಚಿನವರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ಆದರೆ ಸರಕಾರದಿಂದ ಮನೆಪರಿಹಾರ ಹಣ ಇನ್ನೂ ಬಂದಿಲ್ಲವಾದ್ದರಿಂದ ಇಲ್ಲಿ ಅರ್ಧದಷ್ಟು ಹಾಕಿದ್ದ  ಪಂಚಾಂಗದಲ್ಲೇ 16 ಸಂತ್ರಸ್ತ ಕುಟುಂಬಗಳು  ಧ್ವಜ ಹಾರಿಸಿದ್ದಾರೆ.  ಇವರು ೪ ವರ್ಷಗಳ ಹಿಂದೆ ಕಳಸ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದವರು.

ನಾಲ್ಕು ವರ್ಷ ಕಳೆದರೂ ಒಂದು ಲಕ್ಷ ಮಾತ್ರ ಹಣ ನೀಡಿ ಬಾಕಿ ಹಣ ನೀಡದೆ ಸರಕಾರ ಸತಾಯಿಸುತ್ತಿದೆ. ನಿವೇಶನಕ್ಕೆ ಸ್ಥಳ ನೀಡಿದ್ದರೂ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಿಲ್ಲ. ಮನೆ ನಿರ್ಮಾಣದ ಉಳಿದ ಅನುದಾನ ಬಿಡುಗಡೆಗೆ ಹಕ್ಕುಪತ್ರ ಬೇಕು ಎಂದು ಗ್ರಾಮ ಪಂಚಾಯತ್‌ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page