Saturday, June 21, 2025

ಸತ್ಯ | ನ್ಯಾಯ |ಧರ್ಮ

ಆಟಿಡೊಂಜಿ ದಿನ ( ಶ್ರಾವಣದಲ್ಲೊಂದು ದಿನ) ಮತ್ತು RSS ಆಳ ಮತ್ತು ಅಗಲ

ಮಂಗಳೂರು: ಮಂಗಳೂರಿನ ಸ್ವ ಸಹಾಯ ಸಂಘದ ಮಹಿಳೆಯರು, ದಕ್ಷಿಣ ಕನ್ನಡ ಸಂಚಲನದ ತರಬೇತುದಾರರು ಮತ್ತು ಗೃಹಿಣಿಯರು ನಗರದ ಆನಂದ ಅಪಾರ್ಟ್‌ಮೆಂಟ್ಸ್‌ನಲ್ಲಿ ಆಟಿಡೊಂಜಿ ದಿನ ( ಶ್ರಾವಣದಲ್ಲೊಂದು ದಿನ) ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.

ಆಟಿಡೊಂಜಿ ದಿನ ( ಶ್ರಾವಣದಲ್ಲೊಂದು ದಿನ), ತುಳುನಾಡಿನ ಸಂಪ್ರದಾಯಗಳು ಮತ್ತು ಆಟಿ ಮಾಸದ ಮಹತ್ವವನ್ನು ತಿಳಿಸುವ  ಕಾರ್ಯಕ್ರಮ. ಇದನ್ನು ಮುಖ್ಯವಾಗಿ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ  ನಡೆಸುವುದು ಈಚೆಗಿನ ವಿದ್ಯಮಾನವಾಗಿದೆ. ಆಟಿ ತಿಂಗಳ ವೈಶಿಷ್ಟ್ಯವನ್ನು ಪ್ರಾದೇಶಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈ ಪರಿಕಲ್ಪನೆ  ಮೂಡಿ ಬಂದಿರುವುದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿಯಲ್ಲಿ. ಅದರ ಮೊದಲ ಅಧ್ಯಕ್ಷರಾಗಿದ್ದ ಡಾ. ವಿವೇಕ ರೈಗಳವರ ಅವಧಿಯಲ್ಲಿ. ಈ ನೆಪದಲ್ಲಿ ಆಟಿ ತಿಂಗಳಲ್ಲಿ ದೊರೆಯುವ ನಿಸರ್ಗದ  ಸಸ್ಯ, ಚಿಗುರು, ಎಲೆ, ನಾರು, ಹೂ, ಕಾಯಿ, ಹಣ್ಣು ಕಾಳು, ಪತ್ರೊಡೆ ಮೊದಲಾದ ಸಸ್ಯಜನ್ಯ ತಿನಿಸುಗಳನ್ನು ತಯಾರಿಸುವ, ಪರಿಚಯಿಸುವ ಕಾರ್ಯಕ್ರಮಗಳು ಇಂದು ತುಂಬ ಜನಪ್ರಿಯತೆಯನ್ನು ಪಡೆದಿವೆ.

   ಸಾಮಾನ್ಯಾತಿ ಮಹಿಳೆಯರು ತರಹೇವಾರಿ ತಿಂಡಿ ತಿನಿಸುಗಳನ್ನು ಹೊಟ್ಟೆಗೆ ಆಹಾರವಾಗಿ ಜತೆಗೆ ತಂದಿದ್ದರೆ ಮೆದುಳಿಗೆ ಆಹಾರವಾಗಿ ತುಂಬಿಸಿಕೊಂಡದ್ದು ಆರ್‌ ಎಸ್‌ ಎಸ್ ಆಳ ಮತ್ತು ಆಗಲ ಪುಸ್ತದ ಹೂರಣವನ್ನು. ಹರಿಣಿ ಮತ್ತು ಸುರೇಖಾ  ಪುಸ್ತಕವನ್ನು ಕ್ರಮವಾಗಿ ಓದಿದ ಬಳಿಕ ಚರ್ಚೆ ನಡೆಸಲಾಯಿತು. ಪುಸ್ತಕದಲ್ಲಿ ಬರೆದ ಕೆಲ ಅಂಶಗಳನ್ನು ದಕ್ಷಿಣ ಕನ್ನಡದ ಕೋಮು ಗಲಭೆಯ ಉದಾಹರಣೆಗಳೊಂದಿಗೆ  ಮತ್ತಷ್ಟೂ ಸ್ಪಷ್ಟಪಡಿಸಿಕೊಳ್ಳಲಾಯಿತು.

ನಾನಾ ಆಸಕ್ತಿಯ ಸುಮಾರು 30 ಮಂದಿ ಮಹಿಳೆಯರು ಭಾಗವಹಿಸಿದ್ದರು. ಇಪ್ಪತ್ತಕ್ಕೂ ಹೆಚ್ಚು ಸ್ಥಳೀಯ ಖಾದ್ಯಗಳಿದ್ದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page