<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Shrinivas Karkala &#8211; Peepal Media</title>
	<atom:link href="https://peepalmedia.com/author/shrinivas-karkala/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 28 Nov 2023 16:42:22 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Shrinivas Karkala &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಾಧ‍್ಯಮ, ಪರ್ಯಾಯ ಮಾಧ್ಯಮ, ಹಿಡಿಯಬೇಕಾದ ಹಾದಿ, ಕೊನೆಯ ಮಾತು…</title>
		<link>https://peepalmedia.com/media-alternative-media-the-path-to-be-taken/</link>
		
		<dc:creator><![CDATA[Shrinivas Karkala]]></dc:creator>
		<pubDate>Mon, 27 Nov 2023 12:14:24 +0000</pubDate>
				<category><![CDATA[ಅಂಕಣ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=33161</guid>

					<description><![CDATA[ಪರ್ಯಾಯ ಮಾಧ್ಯಮಗಳ ದೊಡ್ಡ ಸವಾಲು ಎಂದರೆ ಆರ್ಥಿಕ ಸಂಪನ್ಮೂಲದ್ದು. ಆರಂಭ ಶೂರತ್ವದೊಂದಿಗೆ ಮತ್ತು ದೊಡ್ಡ ಅದರ್ಶಗಳೊಂದಿಗೆ ಅನೇಕ ಮಾಧ್ಯಮಗಳು ಹುಟ್ಟಿಕೊಂಡು ಆರ್ಥಿಕ ಸಮಸ್ಯೆಯ ಕಾರಣಕ್ಕೇ ಬಲು ಬೇಗ ಕಣ್ಣುಮುಚ್ಚಿದ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ದೊಡ್ಡ ಗುರಿಯೊಂದನ್ನು ತಲಪುವ ಹಾದಿಯಲ್ಲಿ ಸಣ್ಣ ಸಣ್ಣ ವೈಯಕ್ತಿಕ ವಿಚಾರಗಳು, ಈಗೋಗಳು ಅಡ್ಡಬರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನಮ್ಮನ್ನು ಸೋಲಿಸಲು ಹೊರಗಿನ ಶತ್ರುವಿನ ಅಗತ್ಯ ಬರುವುದಿಲ್ಲ – ಶ್ರೀನಿವಾಸ ಕಾರ್ಕಳ. ಪತ್ರಕರ್ತೆ ಗೌರಿ ಲಂಕೇಶ್ ಹಿಂದುತ್ವವಾದಿ ಹಂತಕರ ಗುಂಡಿಗೆ ಬಲಿಯಾಗಿ ಆರು ವರ್ಷಗಳು [&#8230;]]]></description>
										<content:encoded><![CDATA[
<p class="has-background" style="background-color:#4d42571c"><strong>ಪರ್ಯಾಯ ಮಾಧ್ಯಮಗಳ ದೊಡ್ಡ ಸವಾಲು ಎಂದರೆ ಆರ್ಥಿಕ ಸಂಪನ್ಮೂಲದ್ದು. ಆರಂಭ ಶೂರತ್ವದೊಂದಿಗೆ ಮತ್ತು ದೊಡ್ಡ ಅದರ್ಶಗಳೊಂದಿಗೆ ಅನೇಕ ಮಾಧ್ಯಮಗಳು ಹುಟ್ಟಿಕೊಂಡು ಆರ್ಥಿಕ ಸಮಸ್ಯೆಯ ಕಾರಣಕ್ಕೇ ಬಲು ಬೇಗ ಕಣ್ಣುಮುಚ್ಚಿದ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ದೊಡ್ಡ ಗುರಿಯೊಂದನ್ನು ತಲಪುವ ಹಾದಿಯಲ್ಲಿ ಸಣ್ಣ ಸಣ್ಣ ವೈಯಕ್ತಿಕ ವಿಚಾರಗಳು, ಈಗೋಗಳು ಅಡ್ಡಬರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನಮ್ಮನ್ನು ಸೋಲಿಸಲು ಹೊರಗಿನ ಶತ್ರುವಿನ ಅಗತ್ಯ ಬರುವುದಿಲ್ಲ – <mark style="background-color:rgba(0, 0, 0, 0)" class="has-inline-color has-vivid-red-color">ಶ್ರೀನಿವಾಸ ಕಾರ್ಕಳ.</mark></strong></p>



<p>ಪತ್ರಕರ್ತೆ ಗೌರಿ ಲಂಕೇಶ್ ಹಿಂದುತ್ವವಾದಿ ಹಂತಕರ ಗುಂಡಿಗೆ ಬಲಿಯಾಗಿ ಆರು ವರ್ಷಗಳು ಸಂದವು. ಆಕೆ ಮಾಡಿದ ತಪ್ಪು ಏನು? ಸತ್ಯ ಹೇಳಿದ್ದು. ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ ಮತೀಯ ಶಕ್ತಿಗಳನ್ನು ಎದುರಿಸಿದ್ದು.</p>



<p>ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ 28 ತಿಂಗಳ ಕಾಲ ಜೈಲಿನಲ್ಲಿದ್ದ. ಕಾರಣ? ಮೊದಲನೆಯದಾಗಿ ಆತನ ಮತಧರ್ಮ. ಎರಡನೆಯದಾಗಿ, ಹಾಥರಸ್ ದಲಿತ ಹುಡುಗಿಯ ಅತ್ಯಾಚಾರ, ಹತ್ಯೆ ಹಾಗೂ ಇದನ್ನು ಪ್ರಭುತ್ವ ನಿಭಾಯಿಸಿದ ಅಮಾನವೀಯ ರೀತಿಯನ್ನು ವರದಿ ಮಾಡಲು ಹೋದುದು.</p>



<p>ಕಾಶ್ಮೀರದ ಪತ್ರಿಕಾ ಸಂಪಾದಕ&nbsp; ಫಹಾದ್ ಶಾ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಮೊನ್ನೆ ಹೊರಬಂದ. ಇನ್ನೂ ಅನೇಕ ಕಾಶ್ಮೀರಿ ಪತ್ರಕರ್ತರು ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಕಾರಣ ಏನು? ಪತ್ರಿಕಾ ಧರ್ಮ ಪಾಲಿಸಿದ್ದು, ಪ್ರಭುತ್ವದ ದೌರ್ಜನ್ಯದ ಬಗ್ಗೆ ಸತ್ಯ ಹೇಳಿದ್ದು.</p>


<div class="wp-block-image">
<figure class="aligncenter size-full"><img fetchpriority="high" decoding="async" width="1280" height="720" src="https://peepalmedia.com/wp-content/uploads/2023/11/667998-kappangl1d.webp" alt="" class="wp-image-33166" srcset="https://peepalmedia.com/wp-content/uploads/2023/11/667998-kappangl1d.webp 1280w, https://peepalmedia.com/wp-content/uploads/2023/11/667998-kappangl1d-300x169.webp 300w, https://peepalmedia.com/wp-content/uploads/2023/11/667998-kappangl1d-1024x576.webp 1024w, https://peepalmedia.com/wp-content/uploads/2023/11/667998-kappangl1d-768x432.webp 768w, https://peepalmedia.com/wp-content/uploads/2023/11/667998-kappangl1d-150x84.webp 150w, https://peepalmedia.com/wp-content/uploads/2023/11/667998-kappangl1d-696x392.webp 696w, https://peepalmedia.com/wp-content/uploads/2023/11/667998-kappangl1d-1068x601.webp 1068w" sizes="(max-width: 1280px) 100vw, 1280px" /><figcaption class="wp-element-caption">ಸಿದ್ದಿಖಿ ಕಪ್ಪನ್ </figcaption></figure>
</div>


<p><strong>ಅಲ್ ಜಜೀರಾದ ದಿಟ್ಟ ಪತ್ರಕರ್ತರು</strong></p>



<p>ಗಾಜಾ ಪಟ್ಟಿಯಲ್ಲಿ ಪತ್ರಕರ್ತರ ಪಾಡಂತೂ ಭಯಾನಕ. ವಿಶ್ವಸಂಸ್ಥೆಯ ನಿಯಮಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಪತ್ರಕರ್ತರಿಗೆ ವಿಶೇಷ ರಕ್ಷಣೆ ಇದೆ. ಆದರೆ ಗಾಜಾಪಟ್ಟಿಯಲ್ಲಿ ಆ ಯಾವುದೇ ನಿಯಮ ಅಥವಾ ಕಾನೂನುಗಳು ಲೆಕ್ಕಕ್ಕಿಲ್ಲದಂತಾಗಿದೆ.</p>



<p>ವರ್ಷದ ಹಿಂದೆ ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನಿಯನ್ ಪಶ್ಚಿಮ ದಂಡೆಯಲ್ಲಿ ಅಲ್ ಜಜೀರಾದ ಟಿವಿ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಳನ್ನು ಇಸ್ರೇಲ್ ಸೈನಿಕರು ಹತ್ತಿರದಿಂದ ಗುಂಡು ಹಾರಿಸಿ ಕೊಂದಿದ್ದರು. ಇಂದಿಗೂ ಆ ಸೈನಿಕರ ಮೇಲೆ ಇಸ್ರೇಲ್ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ.</p>



<p>ಇದೀಗ ಗಾಜಾ ಪಟ್ಟಿಯಲ್ಲಿ ಅದು ವಿಶೇಷವಾಗಿ ಅಲ್ ಜಜೀರಾ ಪತ್ರಕರ್ತರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿದೆ. ಕೇವಲ ನಾಲ್ಕು ವಾರಗಳ ಬಾಂಬ್ ದಾಳಿಯಲ್ಲಿ ಅಲ್ಲಿನ 43 ಪತ್ರಕರ್ತರೂ ಸೇರಿದಂತೆ 65 ಮಾಧ್ಯಮ ಸಿಬ್ಬಂದಿಗಳು ಜೀವ ಕಳೆದು ಕೊಂಡಿದ್ದಾರೆ. ಇದಕ್ಕೆ ಉತ್ತರದಾಯಿಗಳೇ ಇಲ್ಲವಾಗಿದೆ. ಆದರೂ ಪತ್ರಕರ್ತರು ಎದೆಗುಂದಿಲ್ಲ. ಸುರಿವ ಬಾಂಬುಗಳ ನಡುವೆ ನಿಂತು ಅವರು ಅಲ್ಲಿ ಇಸ್ರೇಲ್ ನ ಅತಿರೇಕಗಳನ್ನು ಮತ್ತು ಪ್ಯಾಲೆಸ್ಟೀನಿಯನ್ನರ ನರಕ ಯಾತನೆಯನ್ನು ವರದಿ ಮಾಡುತ್ತಿದ್ದಾರೆ.</p>



<figure class="wp-block-image size-full is-resized"><img decoding="async" width="600" height="338" src="https://peepalmedia.com/wp-content/uploads/2023/11/journalist-1652262329.jpg" alt="" class="wp-image-33165" style="width:698px;height:auto" srcset="https://peepalmedia.com/wp-content/uploads/2023/11/journalist-1652262329.jpg 600w, https://peepalmedia.com/wp-content/uploads/2023/11/journalist-1652262329-300x169.jpg 300w, https://peepalmedia.com/wp-content/uploads/2023/11/journalist-1652262329-150x85.jpg 150w" sizes="(max-width: 600px) 100vw, 600px" /><figcaption class="wp-element-caption"><strong>ಅಲ್ ಜಜಿರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್</strong></figcaption></figure>



<p><strong>ಪಕ್ಷಪಾತಿ ಮಾಧ್ಯಮಗಳು</strong></p>



<p>ಜಾಗತೀಕರಣದ ಕಾಲಘಟ್ಟದ ಬಳಿಕ ಜಗತ್ತಿನ ಬಹುತೇಕ ಮಾಧ್ಯಮಗಳು ತಮ್ಮ ಮಾಧ್ಯಮ ಧರ್ಮವನ್ನು ಗಾಳಿಗೆ ತೂರಿ ಪ್ರಭುತ್ವಪರ ದುಷ್ಪ್ರಚಾರದ ಮಾಧ್ಯಮಗಳಾಗಿವೆ. ಪರಿಣಾಮವಾಗಿ, ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಇಸ್ರೇಲ್ ಗಾಜಾದಲ್ಲಿ ಮಾಡುತ್ತಿರುವ ಧಾಳಿಯನ್ನು ಅವು ವರದಿ ಮಾಡುತ್ತಿರುವ ರೀತಿ.</p>



<p>ನಾವು ಅತ್ಯಂತ ವಿಶ್ವಾಸಾರ್ಹ ಅಂದುಕೊಂಡಿದ್ದ ಬಿಬಿಸಿ ಯೂ ಸೇರಿದಂತೆ ಪಶ್ಚಿಮ ಮಾಧ್ಯಮಗಳು ಇಸ್ರೇಲ್ ಮಾತ್ರ ಬಲಿಪಶು ಎಂಬಂತೆ ನಿರಂತರ ವರದಿ ಮಾಡುತ್ತಿವೆ. ಅಕ್ಟೋಬರ್ 7 ರ ಘಟನೆ ಮುಖ್ಯವಾಗುವ ಅವಕ್ಕೆ 75 ವರ್ಷಗಳಿಂದ ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯ ಮುಖ್ಯ ಅನಿಸಿಯೇ ಇಲ್ಲ. ಹಮಾಸ್ ಬಂಡುಕೋರರು 1200 ಇಸ್ರೇಲಿಗಳನ್ನು ಕೊಂದರೆ, ಇಸ್ರೇಲ್ 20,000 ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ; ಕೇವಲ ನಾಲ್ಕು ವಾರಗಳಲ್ಲಿ.</p>



<p>ಗಾಜಾ ಪಟ್ಟಿಯನ್ನು ಭೂಮಿಯ ಮೇಲಣ ತೆರೆದ ಬಂದೀಖಾನೆ ಮಾಡಿರುವ ಇಸ್ರೇಲ್, ಪಶ್ಚಿಮ ದಂಡೆಯನ್ನು ಈಗಲೂ ತನ್ನ ವಶದಲ್ಲಿರಿಸಿಕೊಂಡಿದೆ. ಸೈನಿಕರ ಬೆಂಬಲದೊಂದಿಗೆ ಇಸ್ರೇಲ್ ಸೆಟ್ಲರ್ ಗಳು ಅಲ್ಲಿ ಪ್ಯಾಲೆಸ್ತೀನಿಯನ್ನರ ಮೇಲೆ ಧಾಳಿ ಮಾಡುತ್ತಲೇ ಇದ್ದಾರೆ, ಅವರ ಆಸ್ತಿಪಾಸ್ತಿ ವಶಪಡಿಸಿಕೊಳ್ಳುತ್ತಿದ್ದಾರೆ. ಅಸಂಖ್ಯ ಪ್ಯಾಲೆಸ್ಟೀನಿಯನ್ ನಾಗರಿಕರು ಇಸ್ರೇಲ್ ನ ಜೈಲಿನಲ್ಲಿದ್ದಾರೆ. ಇಸ್ರೇಲ್ ಸರಕಾರ ಇಷ್ಟಬಂದಂತೆ ಅವರೊಂದಿಗೆ ನಡೆದುಕೊಳ್ಳುತ್ತಿದೆ. ಪಶ್ಚಿಮ ದಂಡೆಯಲ್ಲಿ ಹಮಾಸ್ ಇಲ್ಲವಾದರೂ ಕಳೆದ ಅಕ್ಟೋಬರ್ 7 ರಿಂದ ಅಲ್ಲಿ 200 ಕ್ಕೂ ಅಧಿಕ ಮಂದಿಯನ್ನು ಕೊಲ್ಲಲಾಗಿದೆ. ಗಾಜಾದಲ್ಲಿ ಕದನ ವಿರಾಮ ಇದ್ದರೂ ಪಶ್ಚಿಮ ದಂಡೆಯಲ್ಲಿ ಅದು ದೌರ್ಜನ್ಯ ನಡೆಸುತ್ತಲೇ ಇದೆ.</p>



<p>ಇವನ್ನೆಲ್ಲ ವಸ್ತುನಿಷ್ಠವಾಗಿ ವರದಿ ಮಾಡಬೇಕಾದ ಪಶ್ಚಿಮದ ಮಾಧ್ಯಮಗಳು ಇಸ್ರೇಲ್ ಅನ್ನು ಬೆಂಬಲಿಸುವ ಅಮೆರಿಕಾ, ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳಿಗೆ ಅನುಕೂಲವಾಗುವ ಹಾಗೆ ಪಕ್ಷಪಾತಿ ವರದಿಯನ್ನು ಪ್ರಸಾರ ಮಾಡುತ್ತಿವೆ. ಇಂಥಲ್ಲಿ ಅಲ್ ಜಜೀರಾದಂತಹ ಮಾ‍ಧ್ಯಮಗಳು ಅಪಾರ ರಿಸ್ಕ್ ತೆಗೆದುಕೊಂಡು ಸತ್ಯವನ್ನು ಹೇಳುತ್ತಿವೆ. ಜಗತ್ತಿನ ಮೂಲೆ ಮೂಲೆಗೆ ಸುದ್ದಿ ತಲಪಿಸುತ್ತಿವೆ. ಪರಿಣಾಮವಾಗಿ, ಪಶ್ಚಿಮದ ಸರಕಾರಗಳು ಇಸ್ರೇಲ್ ಪರ ಇದ್ದರೂ ಜನರು ಪ್ಯಾಲೆಸ್ಟೈನ್ ಸಂತ್ರಸ್ತರ ಪರ ಇದ್ದಾರೆ. ಇದೇ ಕಾರಣಕ್ಕೆ ಅಲ್ ಜಜೀರಾದ ಪತ್ರಕರ್ತರು ಮತ್ತು ಅವರ ಮನೆಯವರು ಇಸ್ರೇಲ್ ಮತ್ತು ಇಸ್ರೇಲ್ ಪರ ಸರಕಾರಗಳ ಧಾಳಿಯ ಗುರಿಯಾಗುತ್ತಿದ್ದಾರೆ.</p>



<figure class="wp-block-image size-large"><img decoding="async" width="1024" height="576" src="https://peepalmedia.com/wp-content/uploads/2023/11/05_11_2023-israel_latest_news_23573346-1-1024x576.webp" alt="" class="wp-image-33172" srcset="https://peepalmedia.com/wp-content/uploads/2023/11/05_11_2023-israel_latest_news_23573346-1-1024x576.webp 1024w, https://peepalmedia.com/wp-content/uploads/2023/11/05_11_2023-israel_latest_news_23573346-1-300x169.webp 300w, https://peepalmedia.com/wp-content/uploads/2023/11/05_11_2023-israel_latest_news_23573346-1-768x432.webp 768w, https://peepalmedia.com/wp-content/uploads/2023/11/05_11_2023-israel_latest_news_23573346-1-150x84.webp 150w, https://peepalmedia.com/wp-content/uploads/2023/11/05_11_2023-israel_latest_news_23573346-1-696x392.webp 696w, https://peepalmedia.com/wp-content/uploads/2023/11/05_11_2023-israel_latest_news_23573346-1-1068x601.webp 1068w, https://peepalmedia.com/wp-content/uploads/2023/11/05_11_2023-israel_latest_news_23573346-1.webp 1200w" sizes="(max-width: 1024px) 100vw, 1024px" /><figcaption class="wp-element-caption"><strong>ಇಸ್ರೇಲ್ ಗಾಜಾದಲ್ಲಿ ಮಾಡುತ್ತಿರುವ ಧಾಳಿ</strong></figcaption></figure>



<p>ಜಗತ್ತಿನ ಯಾವುದೇ ಪ್ರಭುತ್ವಗಳು ಸತ್ಯ ಹೇಳುವ ಸ್ವತಂತ್ರ ಮಾಧ್ಯಮಗಳನ್ನು ಸಹಿಸಿಕೊಂಡದ್ದು ಕಡಿಮೆ. ಜಗತ್ತು ಬಲಪಂಥೀಯ ರಾಜಕಾರಣದ ಕಪಿ ಮುಷ್ಟಿಗೆ ಸಿಲುಕಿದ ಮೇಲಂತೂ ಅವು ಪ್ರಭುತ್ವಗಳ ಕೆಂಗಣ್ಣಿಗೆ ಗುರಿಯಾಗಿವೆ. ಜಾಗತೀಕರಣದ ಬಳಿಕ ಮಾ‍ಧ್ಯಮಗಳು ಉದ್ಯಮವಾಗಿ ಬದಲಾಗಿವೆ. ಭಾರತದಲ್ಲಿಯೇ ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಪ್ರಭುತ್ವದ ಆಪ್ತರಾದ ಅಂಬಾನಿ, ಅದಾನಿ ಮೊದಲಾದ ಉದ್ಯಮಿಗಳ ತೆಕ್ಕೆಯನ್ನು ಸೇರಿದ ಬಳಿಕ ಯಾವ ನಿಷ್ಪಕ್ಷಪಾತಿ ಪತ್ರಕಾರಿಕೆಯನ್ನು ತಾನೇ ನಿರೀಕ್ಷಿಸಬಹುದು?! ಇದೇ ಪರಿಸ್ಥಿತಿ ಜಾಗತಿಕವಾಗಿಯೂ ಇದೆ. ಹಾಗಾಗಿ ಜನರು ಮಾಧ್ಯಮಗಳಿಂದ ಬಹಳ ಏನನ್ನೂ ನಿರೀಕ್ಷಿಸದಂತಾಗಿದೆ.</p>



<p><strong>ಪರ್ಯಾಯ ಮಾಧ್ಯಮಗಳ ಅನಿವಾರ್ಯತೆ ಮತ್ತು ಸವಾಲುಗಳು</strong></p>



<p>ಇಂತಹ ಹೊತ್ತಿನಲ್ಲಿ ಮುಖ್ಯವೆನಿಸುವುದು ಪರ್ಯಾಯ ಮಾಧ್ಯಮಗಳು. ಭಾರತದಲ್ಲಿ ರೈತ ಹೋರಾಟ ನಡೆದಾಗ, ಸಿಎಎ ವಿರೋಧಿ ಹೋರಾಟ ನಡೆದಾಗ, ನೋಟು ನಿಷೇಧದ ಘೋರ ಅನ್ಯಾಯ ನಡೆದಾಗ, ಅಮಾನವೀಯ ಲಾಕ್ ಡೌನ್ ಹೇರಿದಾಗ, ಪ್ರಧಾನ ಧಾರೆಯ ಮಾಧ್ಯಮಗಳು ಪ್ರಭುತ್ವದ ಚಿಯರ್ ಲೀಡರ್ ಗಳಾಗಿ ಕೆಲಸ ಮಾಡಿದರೆ, ವಸ್ತುನಿಷ್ಠ ವರದಿಗಳ ಮೂಲಕ ಜನರಿಗೆ ನಿಜ ಸುದ್ದಿಯನ್ನು ತಲಪಿಸಿದ್ದು ಪರ್ಯಾಯ ಮಾಧ್ಯಮಗಳು. ಈಗಂತೂ ದೇಶದಲ್ಲಿ ಇವೇ ಮುಖ್ಯವಾಹಿನಿ ಮಾಧ್ಯಮಗಳಂತಾಗಿವೆ. ಇದೇ ಕಾರಣದಿಂದ ಅವನ್ನು ಅಂಕೆಯಲ್ಲಿಡಲು ಪ್ರಭುತ್ವವು ದಿನಕ್ಕೊಂದು ನಿಯಮ ತರುತ್ತಿದೆ. ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್ ಗಳಿಗೆ ಆದೇಶ ನೀಡಿ ಪ್ರಭುತ್ವದ ಟೀಕಾಕಾರರ ಖಾತೆ ಸ್ತಂಭನಗೊಳಿಸುತ್ತಿದೆ. ಜಾಗತಿಕವಾಗಿಯೂ ಈ ಪರ್ಯಾಯ ಮಾ‍ಧ್ಯಮಗಳು ಅನೇಕ ಸರಕಾರವನ್ನೇ ಉರುಳಿಸಿದ್ದು ಅಲ್ಲೂ ಅವು ಪ್ರಭುತ್ವದ ಧಾಳಿಗೆ ಈಡಾಗುತ್ತಿವೆ.</p>



<p>ಆದರೆ ಪರ್ಯಾಯ ಮಾಧ್ಯಮಗಳ ದೊಡ್ಡ ಸವಾಲು ಎಂದರೆ ಆರ್ಥಿಕ ಸಂಪನ್ಮೂಲದ್ದು. ಆರಂಭ ಶೂರತ್ವದೊಂದಿಗೆ ಮತ್ತು ದೊಡ್ಡ ಅದರ್ಶಗಳೊಂದಿಗೆ ಅನೇಕ ಮಾಧ್ಯಮಗಳು ಹುಟ್ಟಿಕೊಂಡು ಆರ್ಥಿಕ ಸಮಸ್ಯೆಯ ಕಾರಣಕ್ಕೇ ಬಲು ಬೇಗ ಕಣ್ಣುಮುಚ್ಚಿದ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ಹಾಗಾಗಿಯೇ ಕೋಡಿಹಳ್ಳಿ ಸಂತೋಷ್ ಅವರು ಫೇಸ್ ಬುಕ್ ನಲ್ಲಿ ಬರೆದ, “ವಸ್ತುನಿಷ್ಠ ಪತ್ರಿಕೋದ್ಯಮ- ವೃತ್ತಿಪರತೆ- ಪ್ರಾಮಾಣಿಕತೆ- ಆತ್ಮಸಾಕ್ಷಿಯ ಬದುಕು ಇಂಥದೆಲ್ಲದನ್ನ ಸಲೀಸಾದ ಡಿವೈಸ್ ಗಳ ಮೂಲಕ ಅಳೆದು-ತೂಗಿಬಿಡುವ ಕಾಲ ಇದಲ್ಲವೆನ್ನುವುದು ಎಲ್ಲರಿಗೂ ಗೊತ್ತಿದೆ&#8230;..</p>



<p>ನಮ್ಮ ದೇಶ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಜನಪರ ಮಾಧ್ಯಮವು ಉತ್ತರದಾಯಿಯಾಗಿದ್ದುಕೊಂಡೇ ಉದ್ಯಮ ಸ್ವರೂಪದ ತಾಂತ್ರಿಕತೆ- ಲೆಕ್ಕಾಚಾರ- ವ್ಯವಹಾರಿಕತೆಯನ್ನ ಮೈಗೂಡಿಸಿಕೊಳ್ಳದೇ ಹೋದಾಗ, ಅವು ಎಷ್ಟೇ ಸಶಕ್ತ ಆಶಯಗಳ ಗರ್ಭಗಳಿಂದ ಉದಯಿಸಿದರೂ ಕೊನೆಗೆ ಅಲ್ಲಿಯೇ ಅಸ್ತಂಗತವಾಗಿಬಿಡುತ್ತವೆ ಎಂಬ ಸತ್ಯ ನಮಗೆ ಇನ್ನೂ ಅರಿವಾದಂತಿಲ್ಲ.……</p>



<p>ನಮ್ಮ ನಾಡಿನ ಕಮ್ಯುನಿಷ್ಟರನ್ನೂ ಒಳಗೊಂಡಂತೆ ಯಾವುದೇ ಜನಪರ ಚಳುವಳಿಗೆ ತೆತ್ತುಕೊಂಡವರ ಪೈಕಿ ಶೇ.95 ರಷ್ಟು ಜನರು ಮಿನಿಮಮ್ ಲಕ್ಷುರಿ ಇಲ್ಲದ ಬಾಳನ್ನ ಬಾಳುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ತಾವು ನೋಡಿದ ವ್ಯಕ್ತಿ, ನಂಬಿದ ಸಿದ್ಧಾಂತ, ಯಾರೋ ಯಾವ ಕಾಲದಲ್ಲೋ ಬದುಕಿದ ಕ್ರಮಕ್ಕೆ ಟ್ಯೂನ್ ಆಗಿಬಿಟ್ಟು, ಅತ್ಯಂತ ಆಧುನಿಕ ಕಾಲಘಟ್ಟದಲ್ಲೂ ಅಬ್ಬೇಪಾರಿ ಲೆಕ್ಕಾಚಾರಗಳಲ್ಲಿ ಮುಳುಗಿ ಆರಕ್ಕೇರದೆ, ಮೂರಕ್ಕಿಳಿಯದೆ ನವೆಯುತ್ತಲೇ ಬದುಕು ಸವೆಸಿ ಮಣ್ಣಾಗುತ್ತಾರೆ.……</p>



<p>ಸದ್ಯದ ಪರಿಸ್ಥಿತಿಯಲ್ಲಿ ದಿ ಫೈಲ್, ಈ ದಿನ, ನಾನೂ ಗೌರಿ, ಪೀಪಲ್ ನಂತಹ&nbsp; ಪರ್ಯಾಯ &nbsp;ಮಾಧ್ಯಮಗಳು ಅದರ ಪೋಷಕ ಸಂಸ್ಥೆಗಳು ಹಾಗೂ ಹೋರಾಟಗಾರರು, ಪತ್ರಕರ್ತರು ಮತ್ತಷ್ಟು ಗಟ್ಟಿಯಾಗಿ ಈ ಕಾಲಘಟ್ಟದಲ್ಲಿ ಬೇರೂರಬೇಕು, ಸೈದ್ಧಾಂತಿಕ ರಾಜಿಗೆ ಮುಂದಾಗದೆ, ವ್ಯವಹಾರಿಕ ಚೌಕಾಶಿಗಳನ್ನ ಕಡ್ಡಾಯವಾಗಿ ಮಾಡುತ್ತಲೇ ಮುಂದುವರೆಯಬೇಕು ಇದು ಅನಿವಾರ್ಯ &nbsp;ಕೂಡ” ಎಂಬ&nbsp; ಮಾತುಗಳು ಬಹಳ ಮುಖ್ಯವೆನಿಸುತ್ತವೆ.</p>



<figure class="wp-block-image size-full is-resized"><img loading="lazy" decoding="async" width="600" height="450" src="https://peepalmedia.com/wp-content/uploads/2023/11/26-1445863991-14.jpg" alt="" class="wp-image-33173" style="width:696px;height:auto" srcset="https://peepalmedia.com/wp-content/uploads/2023/11/26-1445863991-14.jpg 600w, https://peepalmedia.com/wp-content/uploads/2023/11/26-1445863991-14-300x225.jpg 300w, https://peepalmedia.com/wp-content/uploads/2023/11/26-1445863991-14-150x113.jpg 150w" sizes="auto, (max-width: 600px) 100vw, 600px" /></figure>



<p>ಇಂತಹ ಹೊತ್ತಿನಲ್ಲಿ, ನಮ್ಮ ಗುರಿಯ ಬಗ್ಗೆ ನಮಗೆ ಸದಾ ಎಚ್ಚರ ಇರಬೇಕು. ಶತ್ರು ನಮ್ಮ ಮುಂದೆಯೇ ಕತ್ತಿ ಹಿರಿದು ನಿಂತಿರುವಾಗ ನಮ್ಮ ಶತ್ರು ಯಾರು ಎಂಬ ಸ್ಪಷ್ಟತೆಯಿರಬೇಕು. ಶೀತ ನೆಗಡಿ ಮತ್ತು ಕ್ಯಾನ್ಸರ್ ನಡುವೆ ನಾವು ಮೊದಲು ಎದುರಿಸ ಬೇಕಾದುದು ಯಾರನ್ನು ಎಂಬ ಖಚಿತತೆ ಇರಬೇಕು. ದೊಡ್ಡ ಗುರಿಯೊಂದನ್ನು ತಲಪುವ ಹಾದಿಯಲ್ಲಿ ಸಣ್ಣ ಸಣ್ಣ ವೈಯಕ್ತಿಕ ವಿಚಾರಗಳು, ಈಗೋಗಳು ಅಡ್ಡಬರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನಮ್ಮನ್ನು ಸೋಲಿಸಲು ಹೊರಗಿನ ಶತ್ರುವಿನ ಅಗತ್ಯ ಬರುವುದಿಲ್ಲ.</p>



<p>ಈ ಎಚ್ಚರ ಇರಿಸಿಕೊಂಡೇ ನಮ್ಮ ಕೈ ಎಟುಕಿನ ಅಂತರ್ಜಾಲ, ಸೋಶಿಯಲ್ ಮೀಡಿಯಾದಂತ ಸಣ್ಣ ಸಾಧನಗಳನ್ನು ಬಳಸಿಕೊಂಡು ಸಮ ಸಮಾಜದ ನಿರ್ಮಾಣದತ್ತ, ಮತೀಯ ರಾಜಕಾರಣಕ್ಕೆ ಅವಕಾಶ ಇಲ್ಲದೆ, ದೇಶವನ್ನು ‘ಸರ್ವಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವತ್ತ ನಾವೆಲ್ಲರೂ ನಮ್ಮ ನಮ್ಮದೇ ಮಿತಿಯಲ್ಲಿ, ನಮ್ಮದೇ ಆದ ರೀತಿಯಲ್ಲಿ ತುಡಿಯೋಣ, ದುಡಿಯೋಣ.</p>



<p><strong>ಕೊನೆಯ ಮಾತು</strong></p>



<p>ವರ್ಷದ ಹಿಂದೆ ಪೀಪಲ್ ಮೀಡಿಯಾದವರು ‘ನಮಗಾಗಿ ನೀವು ಅಂಕಣ ಲೇಖನ ಬರೆಯುತ್ತೀರಾ?’ ಎಂದು ನನ್ನಲ್ಲಿ ಕೇಳಿದಾಗ ನಾನು, ‘ಆದೀತು’ ಎಂದು ಸ್ಪಷ್ಟವಾಗಿ ಹೇಳಿರಲಿಲ್ಲ. ಆದರೆ, ಅಷ್ಟರಲ್ಲಾಗಲೇ ಪೀಪಲ್ ಮೀಡಿಯಾದ ಗೆಳೆಯರು ನಾನು ಸಮಕಾಲೀನ ವಿದ್ಯಮಾನಗಳ ಕುರಿತು ಅಂಕಣ ಬರೆಯುತ್ತೇನೆಂದು ಫೇಸ್ ಬುಕ್ ನಲ್ಲಿ ಘೋಷಿಸಿಬಿಟ್ಟಾಗ ಒಮ್ಮೆ ಮುಜುಗರವಾಯಿತು, ಜತೆಗೆ ಭಯವೂ ಆಯಿತು.</p>



<p>ಅಂತೂ ಇಂತೂ ಅನಿವಾರ್ಯವಾಗಿ ಕಳೆದ ವರ್ಷ ಇದೇ ಸಮಯ ಬರೆಯಲು ಶುರು ಮಾಡಿದೆ. ಬರೆಯಲು ಶುರುಮಾಡಿದಾಗ ಅಂಕಣ ಲೇಖನಕಾರರ ನಿಜ ಸಮಸ್ಯೆಯ ಅರಿವಾಯಿತು. ನಾನು 1980 ರಿಂದ ಬರೆವಣಿಗೆಯ ಕೆಲಸ ಶುರು ಮಾಡಿ ಕವಿತೆ, ವೈಚಾರಿಕ ಲೇಖನಗಳನ್ನು, ಚಾರಣ ವರದಿಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರೂ ಎಂದೂ ಅಂಕಣ ಬರೆಯುವ ಸಾಹಸಕ್ಕೆ ಕೈಹಾಕಿರಲಿಲ್ಲ. ತೀರಾ ಅಶಿಸ್ತಿನ ದಿನಚರಿಯ ಮನುಷ್ಯನಾದ ನಾನು ವಾರಕ್ಕೊಮ್ಮೆ ಬರೆಯುವ ಒತ್ತಡವನ್ನಂತೂ, ವಿಶೇಷವಾಗಿ ನನ್ನ ಅನಾರೋಗ್ಯದ ಕಾರಣ ಎದುರಿಸುವ ಸ್ಥಿತಿಯಲ್ಲಿಯೂ ಇರಲಿಲ್ಲ.</p>



<p>ಈಗ ತಿರುಗಿ ನೋಡಿದಾಗ ವರ್ಷದ 52 ವಾರವೂ ‘ಶ್ರೀನಿ ಕಾಲಂ’ ಗಾಗಿ ತಪ್ಪದೆ ಅಂಕಣ ಲೇಖನ ರಚಿಸಿದೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ಸಮಕಾಲೀನವಾಗಿ ಪ್ರಸ್ತುತ ಅನಿಸಿದ ವಿಷಯಗಳ ಮೇಲೆ ಬರೆಯುತ್ತಲೇ ಹೋದೆ. ಏನು ಬರೆದಿದ್ದೇನೆ, ಅದರ ಗುಣಮಟ್ಟ ಹೇಗಿತ್ತು ಎನ್ನುವುದನ್ನು ಓದಿದ ನೀವು ಹೇಳಬೇಕು ಅಷ್ಟೇ.</p>



<p>‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ’ ಎಂಬ ಜಿಎಸ್ ಎಸ್ ಕವಿವಾಣಿಯಂತೆ ನನಗೆ ಬರೆಯಬೇಕು ಅನಿಸಿದ್ದನ್ನು, ನನ್ನ ಆತ್ಮತೃಪ್ತಿಗಾಗಿ, ನನ್ನ ಇತಿಮಿತಿಯಲ್ಲಿ ಬರೆಯುತ್ತ ಹೋದೆ. ನಿಮ್ಮಲ್ಲಿ ಅನೇಕರು ಅದರಲ್ಲಿ ಕೆಲವನ್ನು ಇಷ್ಟಪಟ್ಟು ಹಂಚಿಕೊಂಡಿರಿ.</p>



<p>ಬೇರೆಡೆಯಲ್ಲಿ ನಾವು ಬರೆದುದನ್ನೆಲ್ಲ ಪ್ರಕಟಿಸುವುದಿಲ್ಲ. ಆದರೆ, ಹೀಗೆ ಅಂಕಣ ಬರೆಯುವಲ್ಲಿ ನಿರ್ಭಿಢೆಯಿಂದ ನಮ್ಮ ಮನದ ಮಾತು ಆಡುವ ವಿಶೇಷ ಅವಕಾಶವೊಂದಿರುತ್ತದೆ. ಆ ಅವಕಾಶವನ್ನು ಪೀಪಲ್ ಮಿಡಿಯಾದವರು ಒದಗಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈಗ ವಿರಾಮದ ಸಮಯ. ಇದೊಂದು ಅಲ್ಪವಿರಾಮವೂ ಆಗಿರಬಹುದು. ಸಾಧ್ಯವಾದರೆ ಮತ್ತೆ ಭೇಟಿಯಾಗೋಣ. ವಂದನೆಗಳು.</p>



<p class="has-background" style="background-color:#abb7c259"><strong>ಒಂದು ವರ್ಷಗಳ ಕಾಲ ನಿಯತವಾಗಿ ಪೀಪಲ್‌ ಮೀಡಿಯಾಕ್ಕೆ ಅಂಕಣ ಲೇಖನಗಳನ್ನು ಬರೆದು</strong><strong> </strong><strong>ಸಮಾಜಕ್ಕೆ ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಟ್ಟು &nbsp;ಈ ಕಾಲದ ಅಗತ್ಯವನ್ನು ತುಂಬುವಲ್ಲಿ ಸಹಕಾರ ನೀಡಿದ ಶ್ರೀನಿವಾಸ ಕಾರ್ಕಳ ಅವರಿಗೆ ಪೀಪಲ್‌ ಮೀಡಿಯಾ ತಂಡವು ಆಭಾರಿಯಾಗಿದೆ. </strong></p>



<p><strong>ಶ್ರೀನಿವಾಸ ಕಾರ್ಕಳ</strong></p>



<p><a href="https://peepalmedia.com/wp-content/uploads/2022/10/WhatsApp-Image-2022-10-17-at-5.20.35-PM.jpeg"><strong><mark style="background-color:rgba(0, 0, 0, 0)" class="has-inline-color has-black-color"><sub>ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</sub></mark></strong></a></p>



<p><strong><a href="https://peepalmedia.com/fake-news/" data-type="post" data-id="29920">ಇದನ್ನೂ ಓದಿ-</a></strong><a href="https://peepalmedia.com/fake-news/" data-type="post" data-id="29920"><strong>ಸುಳ್ಳು ಸುದ್ದಿಗಳ ಮಹಾಸಾಗರ</strong></a></p>
]]></content:encoded>
					
		
		
			</item>
		<item>
		<title>ಕ್ರಿಕೆಟ್ ಫೈನಲ್: ʼನಾನೇಕೆ ನಡುವಿನಲ್ಲೇ ಎದ್ದು ಬಂದೆ?ʼ</title>
		<link>https://peepalmedia.com/cricket-final-why-did-i-get-up-in-the-middle/</link>
		
		<dc:creator><![CDATA[Shrinivas Karkala]]></dc:creator>
		<pubDate>Fri, 24 Nov 2023 11:32:56 +0000</pubDate>
				<category><![CDATA[ಆಟೋಟ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=33066</guid>

					<description><![CDATA[ಮೀಡಿಯಾ ಅಕಾಡೆಮಿಕ್, ಲೇಖಕಿ ಮತ್ತು ಪಾಡ್ ಕಾಸ್ಟರ್ ಗಾಯತ್ರಿ ಶ್ರೀವಾಸ್ತವ ಅವರು ಅಹಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕ್ರಿಕೆಟ್‌ ವಿಶ್ವಕಪ್‌ ನ ಅಂತಿಮ ಸುತ್ತಿನ ಅಟ ವೀಕ್ಷಿಸಲು ಹೋಗಿದ್ದರು. ಅಲ್ಲಿ ತಾನು ಕಂಡದ್ದನ್ನು, ಅನುಭವಿಸಿದ್ದನ್ನು ಲೇಖನವಾಗಿಸಿ ಆವಾಜ್ ಸೌತ್ ಏಶಿಯಾ ಡಾಟ್ ಕಾಮ್ ನಲ್ಲಿ ಪ್ರಕಟಿಸಿದ್ದಾರೆ. ಆ ಲೇಖನವನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ ಶ್ರೀನಿವಾಸ ಕಾರ್ಕಳ ‘ದೊಡ್ಡದೆಲ್ಲವೂ ಸುಂದರವಾಗಿರಬೇಕಾಗಿಲ್ಲ’. ಇದು ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನೋಡಿದ ಬಳಿಕ ನಾನು ಕಲಿತ ಪಾಠ. [&#8230;]]]></description>
										<content:encoded><![CDATA[
<p class="has-black-color has-text-color has-background has-link-color wp-elements-1249f4ffb373ed0f449e884db4b67257" style="background-color:#0e83541c"><strong>ಮೀಡಿಯಾ ಅಕಾಡೆಮಿಕ್, ಲೇಖಕಿ ಮತ್ತು ಪಾಡ್ ಕಾಸ್ಟರ್ ಗಾಯತ್ರಿ ಶ್ರೀವಾಸ್ತವ ಅವರು ಅಹಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕ್ರಿಕೆಟ್‌ ವಿಶ್ವಕಪ್‌ ನ ಅಂತಿಮ ಸುತ್ತಿನ ಅಟ ವೀಕ್ಷಿಸಲು ಹೋಗಿದ್ದರು. ಅಲ್ಲಿ ತಾನು ಕಂಡದ್ದನ್ನು, ಅನುಭವಿಸಿದ್ದನ್ನು</strong><strong> </strong><strong>ಲೇಖನವಾಗಿಸಿ ಆವಾಜ್ ಸೌತ್ ಏಶಿಯಾ ಡಾಟ್ ಕಾಮ್ ನಲ್ಲಿ ಪ್ರಕಟಿಸಿದ್ದಾರೆ. ಆ ಲೇಖನವನ್ನು ಕನ್ನಡಕ್ಕೆ ಭಾವಾನುವಾದ</strong><strong> </strong><strong>ಮಾಡಿದ್ದಾರೆ ಶ್ರೀನಿವಾಸ ಕಾರ್ಕಳ</strong><strong></strong></p>



<p>‘ದೊಡ್ಡದೆಲ್ಲವೂ ಸುಂದರವಾಗಿರಬೇಕಾಗಿಲ್ಲ’. ಇದು ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನೋಡಿದ ಬಳಿಕ ನಾನು ಕಲಿತ ಪಾಠ.</p>



<p>ನಾನು ನನ್ನ ಒಂಬತ್ತನೆಯ ಹರೆಯದಿಂದಲೂ ಕ್ರಿಕೆಟ್ ಅಭಿಮಾನಿಯಾಗಿದ್ದವಳು. ಇದಕ್ಕೆ ಕಾರಣ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ 1983 ರಲ್ಲಿ ವಿಶ್ವಕಪ್ ಗೆದ್ದುದು.</p>



<p>ಈ ಬಾರಿ ಮೊಹಾಲಿಯಲ್ಲಿ ಕ್ರಿಕೆಟ್ ವಿಶ‍್ವಕಪ್ ನ ಒಂದೇ ಒಂದು ಪಂದ್ಯ ಆಡದೇ ಇದ್ದುದು, ದೂರದ ಧರ್ಮಶಾಲಾದಲ್ಲಿ ಅನೇಕ ಪಂದ್ಯ ಆಡಿದ್ದು, ಮುಂಬಯಿ ಮತ್ತು ಕೊಲ್ಕತ್ತಾದಲ್ಲಿ ಸೆಮಿ ಫೈನಲ್ ಮಾತ್ರ ಆಡಿದ್ದು, ದಿಲ್ಲಿಯಲ್ಲಿ ಒಂದೇ ಒಂದು ಪಂದ್ಯ ಆಡಿದ್ದು, ಅಹಮದಾಬಾದ್ ನಲ್ಲಿ ಫೈನಲ್ ಆಡುತ್ತಿರುವುದು ಈ ಬಗ್ಗೆ ನನಗೆ ಸಮಾಧಾನವಿರಲಿಲ್ಲ. ಇದನ್ನು ನಾನು ನನ್ನ ಆಪ್ತರಲ್ಲಿ ಹೇಳಿಕೊಂಡಿದ್ದೆ ಕೂಡಾ.</p>



<p>ಕ್ರಿಕೆಟ್ ಪ್ರೇಮಿಯಾಗಿ ಇತ್ತೀಚೆಗೆ ನಾನು ಹೈದರಾಬಾದ್ ನಲ್ಲಿ ಪಾಕಿಸ್ತಾನ ಶ್ರೀಲಂಕಾ ನಡುವೆ ನಡೆದ ಪಂದ್ಯ ನೋಡಲು ನನ್ನ ಗಂಡನ ಜತೆಯಲ್ಲಿ ಹೋಗಿದ್ದೆ. ಅದೊಂದು ಅದ್ಭುತ ಪಂದ್ಯವಾಗಿತ್ತು. ಪ್ರತೀ ತಂಡದಿಂದ ಎರಡರಂತೆ ನಾಲ್ಕು ಸೆಂಚುರಿ ಬಾರಿಸಲ್ಪಟ್ಟಿದ್ದವು. ಅಲ್ಲಿ ಕ್ರಿಕೆಟನ್ನು ಸಂಭ್ರಮಿಸುವ ಒಳ್ಳೆಯ ಪ್ರೇಕ್ಷಕರಿದ್ದರು ಕೂಡಾ. ಗಲಾಟೆ ಇರಲಿಲ್ಲ. ಭಾರತ ಒಳಗೊಂಡ ಇತರ ಪಂದ್ಯಗಳಿಗೆ ಹೋಲಿಸಿದರೆ ಅಲ್ಲಿ ಸುಲಭದಲ್ಲಿ ಟಿಕೆಟ್ ದೊರೆಯುವಂತಿತ್ತು.</p>



<p>ಆದರೆ ರಾಜೀವ ಗಾಂಧಿ ಸ್ಟೇಡಿಯಂ ಅಷ್ಟೊಂದು ಸ್ವಚ್ಛವಾಗಿರಲಿಲ್ಲ. ಆಸನಗಳೂ ಆರಾಮದಾಯಕ ವಾಗಿರಲಿಲ್ಲ. ಇದು ಹೈದರಾಬಾದ್ ನ ಇಮೇಜ್ ಗೆ ಧಕ್ಕೆ ತರುವಂತಿತ್ತು. ಆದರೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಚೆನ್ನಾಗಿ ನಿರ್ವಹಣೆ ಮಾಡಲ್ಪಟ್ಟಿದ್ದವು.</p>



<p><strong>ಅಹಮದಾಬಾದ್ ನ ಅನುಭವ</strong></p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2023/11/svpiair-1024x576.jpg" alt="" class="wp-image-33077" srcset="https://peepalmedia.com/wp-content/uploads/2023/11/svpiair-1024x576.jpg 1024w, https://peepalmedia.com/wp-content/uploads/2023/11/svpiair-300x169.jpg 300w, https://peepalmedia.com/wp-content/uploads/2023/11/svpiair-768x432.jpg 768w, https://peepalmedia.com/wp-content/uploads/2023/11/svpiair-150x84.jpg 150w, https://peepalmedia.com/wp-content/uploads/2023/11/svpiair-696x392.jpg 696w, https://peepalmedia.com/wp-content/uploads/2023/11/svpiair-1068x601.jpg 1068w, https://peepalmedia.com/wp-content/uploads/2023/11/svpiair.jpg 1200w" sizes="auto, (max-width: 1024px) 100vw, 1024px" /><figcaption class="wp-element-caption"><sub><strong>  ಸರ್ದಾರ್ ವಲ್ಲಭಬಾಯಿ ಪಟೇಲ್ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ  4೦,೦೦೦ ಪ್ರಯಾಣಿಕರು  ಹಾಗೂ 359 ವಿಮಾನಗಳು  ಹಾರಾಡಿ ದಾಖಲೆ ಬರೆದಿವೆ</strong></sub></figcaption></figure>



<p>ಅಹಮದಾಬಾದ್ ನ ಅನುಭವವಾದರೋ ತೀರಾ ಭಿನ್ನವಾಗಿತ್ತು. ಹರಸಾಹಸ ಪಟ್ಟು, ಮುಂಬಯಿಯ ಗೆಳೆಯರೊಬ್ಬರ ಸಹಾಯ ಪಡೆದು, ದುಬಾರಿ ಟಿಕೆಟ್ ಖರೀದಿಸ ಬೇಕಾಯಿತು. ದಿಲ್ಲಿ ಅಹಮದಾಬಾದ್ ವಿಮಾನಯಾನ ದರವೂ ದುಬಾರಿಯಾಗಿತ್ತು. ಅಂತೂ ಕ್ರಿಕೆಟ್ ಫೈನಲ್ ವೀಕ್ಷಿಸುವ ಆಸೆಯಿಂದ ಶನಿವಾರ ರಾತ್ರಿ ಒಬ್ಬಳೇ ಅಹಮದಾಬಾದ್ ಗೆ ಪಯಣಿಸಿದೆ.</p>



<p>ವಿಮಾನ ತೀರಾ ತಡವಾಗಿ ತಲಪಿತು. ನೋಡಿದರೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣ ತುಂಬಾ ಖಾಸಗಿ ಜೆಟ್ ಗಳು ಮತ್ತು ಬಾಡಿಗೆ ವಿಮಾನಗಳು ನಿಂತಿದ್ದವು. ಉತ್ಸಾಹ ಎಲ್ಲೆಲ್ಲೂ ಎದ್ದು ಕಾಣುವಂತಿತ್ತು. ಎಲ್ಲೆಲ್ಲಿಂದಲೋ ಎಲ್ಲ ಕ್ರಿಕೆಟ್ ಪ್ರೇಮಿಗಳು ಧಾವಿಸಿದ್ದರು. ಧೋನಿ, ರೋಹಿತ್, ವಿರಾಟ್, ಶಮಿ ಹೀಗೆ ಕ್ರಿಕೆಟ್ ನದೇ ಮಾತು.</p>



<p>ಮಾರನೇ ದಿನ 29 ನೇ ಓವರ್ ನಲ್ಲಿ ಪ್ಯಾಟ್ ಕಮಿನ್ಸ್ ಬಾಲಿಗೆ ವಿರಾಟ್ ಔಟಾಗುವ ವರೆಗೂ ಈ ಮೂಡ್ ಹೀಗೆಯೇ ಇತ್ತು. ಆತ ಔಟಾಗುತ್ತಲೇ ಮೂಡ್ ನಿರಾಸಕ್ತಿಯಿಂದ ಅವಿಶ್ವಾಸದತ್ತ ಬದಲಾಯಿತು. ಏನಾಗುತ್ತಿದೆ ಎಂಬುದನ್ನು ಜನ ನಂಬಲೇ ಸಿದ್ಧರಿರಲಿಲ್ಲ. ಆಮೇಲೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತು.</p>



<p><strong>ಅವ್ಯವಸ್ಥೆ</strong><strong></strong></p>



<p>ನಿಜ, ಅಹಮದಾಬಾದ್ ನ ಪ್ರೇಕ್ಷಕರು ಸಭ್ಯರಾಗಿರಲಿಲ್ಲ, ಪಕ್ಷಪಾತಿಯಾಗಿದ್ದರು, ಜಿಂಗೋಯಿಸಂ (ರಾಷ್ಟ್ರ ದುರಭಿಮಾನ) ಅತಿಯಾಗಿತ್ತು, ತುಂಬಾ ಗದ್ದಲವಿತ್ತು. ಅದಕ್ಕಿಂತಲೂ ಮುಖ್ಯವಾಗಿ, ಜಗತ್ತಿನ ಅತಿದೊಡ್ಡ ಸ್ಟೇಡಿಯಂನಲ್ಲಿ ಸದ್ದಿನ ಪ್ರತಿಧ್ವನಿ ಅಸಹನೀಯವಾಗಿತ್ತು. ಕುಳಿತವರಿಗೆ ಕಾರ್ಯಕ್ರಮ ನಿರ್ವಾಹಕರು ಏನು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಆ ರೀತಿಯಲ್ಲಿ ಸದ್ದು, ಪ್ರತಿಧ್ವನಿ, ಬರೇ ಗದ್ದಲ, ಗದ್ದಲ.</p>



<p>ಸ್ಟೇಡಿಯಂ ನ ಪ್ರವೇಶ ದ್ವಾರ ತೀರಾ ಅವ್ಯವಸ್ಥೆಯಿಂದ ಕೂಡಿತ್ತು. ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಯಾರಿಗೂ ಏನೂ ಆಗದಿದ್ದುದು ಪುಣ್ಯ. ನೂಕಾಟ ತಳ್ಳಾಟ ವಿಪರೀತವಿತ್ತು. ಅಧಿಕೃತ ಟಿಕೆಟ್ ಹೊಂದಿದ್ದಾಗಲೂ ಇಂತಹ ಅನುಭವವಾಯಿತು. ವಿದೇಶೀಯರಿಗಂತೂ ಇದು ಸಹಜವಾಗಿಯೇ ತೀರಾ ಆಘಾತದ ಅನುಭವ.</p>



<p>ಜಗತ್ತಿನ ಅತಿದೊಡ್ಡ ಸ್ಟೇಡಿಯಂನ ಸೀಟುಗಳು ತೀರಾ ಇಕ್ಕಟ್ಟಿನಿಂದ ಕೂಡಿದ್ದವು. ಪ್ರತೀ ಸ್ಟಾಂಡ್ ನಲ್ಲಿ 50 ಅಡ್ಡ ಸಾಲುಗಳು. ಆದ್ದರಿಂದ ತೀರಾ ಕೆಳಗಿನ ಸ್ಟಾಂಡ್ ನವರಿಗೂ ಆಟದ ಒಳ್ಳೆಯ ನೋಟ ಸಿಗುವುದು ಸಾಧ್ಯವಿರಲಿಲ್ಲ. ನೋಡುವ ಖುಷಿ ಅನುಭವಿಸುವುದನ್ನು ಗಮನದಲ್ಲಿರಿಸಿಕೊಳ್ಳದೆಯೇ ಸ್ಟೇಡಿಯಂ ನಿರ್ಮಿಸಲಾಗಿದೆಯೇನೋ ಅನಿಸಿತು. ಸೀಟುಗಳ ಸಂ‍ಖ್ಯೆಯೂ ವಿಪರೀತ, ಆದರೆ ವೀಕ್ಷಣೆಯ ಸುಖ ಸೀಮಿತ.</p>



<p>ಇಂತಹ ಪಂದ್ಯ ನಡೆಯುವಾಗ ಒಂದು ಲಕ್ಷ ಜನರಿಗೆ ಆಹಾರ ಒದಗಿಸುವುದು ದೊಡ್ಡ ಸವಾಲು. ಆ ವಿಚಾರದಲ್ಲಿಯೂ ವೀಕ್ಷಕರಿಗೆ ಆದುದು ಬೇಸರವೇ. ಭಾರತ ಗೆಲ್ಲುವ ಪಂದ್ಯವಲ್ಲವೇ? ಆದ್ದರಿಂದ ದುಬಾರಿ ಆಹಾರಕ್ಕೆ ಜನ ಸಿದ್ಧರಾಗಿದ್ದರು. ನೀರು ಉಚಿತವಾಗಿತ್ತು. ಆದರೆ ಕೇವಲ ಒಂದು ಬಾಟಲಿ! ನಾನು ಕುಳಿತ ಜಾಗದಲ್ಲಿ ಒಂದೇ ಒಂದು ಕಾಫಿ ಚಹಾ ಸ್ಟಾಲ್ ಇತ್ತು. ಇದು ಸಾವಿರಾರು ಮಂದಿಗೆ ಸಾಕೇ? ಜನ ತಂಪು ಪಾನೀಯ ಖರೀದಿಸುವಂತೆ ಬಲವಂತಪಡಿಸುವುದು ಇದರ ಉದ್ದೇಶವಾಗಿರಬಹುದೇ?</p>



<p>ಸ್ಟೇಡಿಯಂ ನಲ್ಲಿ ಪ್ಯೂರ್ ವೆಜ್ ಆಹಾರ ಮಾರುತ್ತಿದ್ದರು. ಬರ್ಗರ್, ಪಿಜ್ಜಾ, ಭೇಲ್, ಸಮೋಸಾ, ಮಸಾಲಾ ಕಾರ್ನ್, ಪಾಪ್ ಕಾರ್ನ್, ಐಸ್ ಕ್ರೀಮ್ ಇತ್ಯಾದಿ. ರಾತ್ರಿ ಎಂಟು ಗಂಟೆಗಾಗುವಾಗ ಎಲ್ಲವೂ ಖಾಲಿ. ನೆನಪಿಡಿ- ಕ್ರಿಕೆಟ್ ಅಭಿಮಾನಿಗಳು ಸುಮಾರು ಪೂರ್ವಾಹ್ನ 11.30 ಕ್ಕೇ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು (ಸ್ವತಃ ನಾನೇ ನನ್ನ ಸಂಬಂಧಿಯ ಮನೆಯಿಂದ ಬೆಳಗ್ಗೆ 10 ಕ್ಕೆ ಹೊರಟು, 12.15 ಕ್ಕೆ ಕ್ರೀಡಾಂಗಣದ ಒಳಗಿದ್ದೆ). ಅವರ ಹಸಿವು ನೀಗಿಸುವ ವ್ಯವಸ್ಥೆಯ ಕತೆ ಏನು? ಆರಂಭದಲ್ಲೇನೋ ಶೌಚಾಲಯಗಳು ಸ್ವಚ್ಛವಿದ್ದವು. ಮ್ಯಾಚ್ ಮುಂದುವರಿಯುತ್ತಿದ್ದಂತೆ ಎಲ್ಲವೂ ಗಲೀಜಾದವು.</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2023/11/hphdid6o_india-vs-australia_120x90_19_November_23-1024x576.jpg" alt="" class="wp-image-33075" srcset="https://peepalmedia.com/wp-content/uploads/2023/11/hphdid6o_india-vs-australia_120x90_19_November_23-1024x576.jpg 1024w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-300x169.jpg 300w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-768x432.jpg 768w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-1536x864.jpg 1536w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-2048x1152.jpg 2048w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-150x84.jpg 150w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-696x392.jpg 696w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-1068x601.jpg 1068w, https://peepalmedia.com/wp-content/uploads/2023/11/hphdid6o_india-vs-australia_120x90_19_November_23-1920x1080.jpg 1920w" sizes="auto, (max-width: 1024px) 100vw, 1024px" /><figcaption class="wp-element-caption"> <strong>Ahmadabad Stadium (ANI Photo)</strong></figcaption></figure>



<p><strong>ನಿರ್ಗಮಿಸಲು ಸಿದ್ಧಳಾದೆ</strong></p>



<p>ಪಂದ್ಯದ ಏಕೈಕ ಶತಕ ಬಾರಿಸಿದ್ದು ಟ್ರಾವಿಸ್ ಹೆಡ್. ಆಸ್ಟ್ರೇಲಿಯಾದ ಗೆಲುವಿನ ಶತಕವದು. ಆತ ಸೆಂಚುರಿ ಹೊಡೆಯುತ್ತಲೇ ಪಂದ್ಯದ ಫಲಿತಾಂಶ ಗೋಡೆಯ ಮೇಲಿನ ಬರಹದಷ್ಟು ಸ್ಪಷ್ಟವಾಯಿತು. ಆದ್ದರಿಂದ, ಅನೇಕರಂತೆ ನಾನೂ ಕ್ರೀಡಾಂಗಣದಿಂದ ನಿರ್ಗಮಿಸಲು ಸಿದ್ಧಳಾದೆ.</p>



<p>ಭಾರತ ಸೋತ ಬಳಿಕ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು? ಲಕ್ಷ ಜನ ಒಮ್ಮೆಲೇ ಕ್ರೀಡಾಂಗಣದಿಂದ ಹೊರಬರುವಾಗ ಪರಿಸ್ಥಿತಿ ಹೇಗಿರಬಹುದು ಎಂಬ ಬಗ್ಗೆ ನನಗೆ ಅರಿವಿತ್ತು. ಆಗಲೇ ನನಗೆ ಜ್ಞಾನೋದಯವಾದುದು – ‘ದೊಡ್ಡದು ಯಾವತ್ತೂ ಸುಂದರವಾಗಿರಬೇಕಾಗಿಲ್ಲ’ ಎನ್ನುವುದು. ಜನ ಆಗಲೇ ತಾಳ್ಮೆ ಕಳೆದುಕೊಂಡಿದ್ದರು, ನಿರಾಶರಾಗಿದ್ದರು. ನನ್ನನ್ನೂ ಸೇರಿದಂತೆ, ಜನ ಬಂದುದು ಭಾರತದ ವಿಜಯವನ್ನು ನೋಡಲಲ್ಲವೇ?!</p>



<p>ನನ್ನ ಪರಿಸ್ಥಿತಿ ಹೇಗಿತ್ತೆಂದರೆ, ನಾನು ಒಬ್ಬಳೇ ಗಾಂಧಿನಗರಕ್ಕೆ ವಾಪಸ್ ಹೋಗಬೇಕಾಗಿತ್ತು. ಕ್ಯಾಬ್ ಸಿಗುವುದೇ ದೊಡ್ಡ ಸಂಗತಿ. ಹೀಗೆ ಸುಮಾರು ಒಂಬತ್ತು ಗಂಟೆಗೆ ಪಂದ್ಯದ ಏಕೈಕ ಶತಕಕ್ಕೆ ಚಪ್ಪಾಳೆ ಹೊಡೆದು, ಬ್ಯಾಟರಿ ಮುಗಿಯುತ್ತ ಬಂದಿದ್ದ (ಪವರ್ ಬ್ಯಾಂಕ್ ಒಯ್ಯಲು ಅವಕಾಶ ಇರಲಿಲ್ಲ) ಮೊಬೈಲ್ ನೊಂದಿಗೆ ಕ್ರೀಡಾಂಗಣದಿಂದ ಹೊರಬಿದ್ದೆ. 9.45 ಕ್ಕೆ ಕ್ಯಾಬ್ ನಲ್ಲಿ ಕುಳಿತೆ. ನನ್ನ ಸ್ನೇಹಿತೆ ಮೆಟ್ರೋದಲ್ಲಿ ತನ್ನ ಹೊಟೇಲ್ ಗೆ ಹೋದಳು. ಅಲ್ಲೂ ಮೈಲುಗಟ್ಟಲೆ ಕ್ಯೂ ಇತ್ತು ಎಂದು ತಿಳಿಯಿತು. ಯಾಕೆಂದರೆ, ದೇಶ ವಿದೇಶದಿಂದ ಮ್ಯಾಚ್ ನೋಡಲು ಜನ ಬಂದಿದ್ದರು. ಹೊಟೇಲ್ ತುಂಬಾ ದುಬಾರಿ ಇದ್ದುದರಿಂದ ಕೆಲವರಂತೂ ಹಿಂದಿನ ರಾತ್ರಿಯೇ ಕ್ರೀಡಾಂಗಣದಲ್ಲಿ ಉಳಿದಿದ್ದರು. ಹೀಗೆ, ಏರಿದ್ದ ಉನ್ಮಾದವೆಲ್ಲ ಭಾನುವಾರ ರಾತ್ರಿ ಇಳಿದಿತ್ತು. ಪ್ರೇಕ್ಷಕರಿಗೆ ಮನೆ ತಲಪುವುದೇ ದೊಡ್ಡ ಚಿಂತೆಯ ವಿಷಯವಾಗಿತ್ತು. ಹಾಗಾಗಿ, ಕ್ರಿಕೆಟ್ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ಸಮಯ ಇರಲಿಲ್ಲ.</p>



<p>ನಿಜ. ಪ್ರೇಕ್ಷಕರು ಕೆಟ್ಟದಾಗಿ ವರ್ತಿಸಿದರು. ಆದರೆ ಇದಕ್ಕೆ ಪಂದ್ಯವನ್ನು ಆಯೋಜಿಸಿದ ರೀತಿಯೂ ಕಾರಣವಾಗಿತ್ತು. ಎಲ್ಲವೂ ಅವ್ಯವಸ್ಥಿತವಾಗಿತ್ತು, ದುಬಾರಿಯಾಗಿತ್ತು. ಆದರೆ ಭಾರತ ಕಪ್ ಗೆಲ್ಲುವ ಐತಿಹಾಸಿಕ ಕ್ಷಣ ಕಣ್ಣು ತುಂಬಿಕೊಳ್ಳುವುದಕ್ಕಾಗಿ ಜನ ಎಲ್ಲವನ್ನೂ ಸಹಿಸಿಕೊಂಡಿದ್ದರು.</p>



<p>ದಿಲ್ಲಿಯಿಂದ ಅಹಮದಾಬಾದ್ ಗೆ ಪಯಣಿಸುವಾಗ ನಾನು ಭೇಟಿಯಾದ ಕ್ಯೂಟೆಸ್ಟ್ ಫ್ಯಾನ್ ಗಳೆಂದರೆ ಒಂದು ತಂದೆ ಮಗ ಜೋಡಿ. ತಂದೆಯ ವಯಸ್ಸು ನಲವತ್ತು ನಲವತ್ತೈದರ ನಡುವಿರಬಹುದು. ಆತನ ತಂದೆ ಆತನನ್ನು 1996 ರ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದ ಭಾರತ, ಶ್ರೀಲಂಕಾ ಪಂದ್ಯ ನೋಡಲು ಕರೆದೊಯ್ದಿದ್ದರಂತೆ (ಆಗ ದಿಲ್ಲಿಯ ಲೇಡಿ ಶ್ರೀರಾಮ್ ಕಾಲೇಜ್ ನಲ್ಲಿ ಓದುತ್ತಿದ್ದ ನಾನೂ ಪಂದ್ಯ ನೋಡಲು ಗೆಳತಿಯರೊಂದಿಗೆ ಹೋಗಿದ್ದೆ. ಪಂದ್ಯದ ತುಂಬಾ ನಾವು ಕಿರುಚಿದ್ದೆವು. ಸಚಿನ್ ಸೆಂಚುರಿ ಹೊಡೆದಿದ್ದ. ಆದರೂ ಭಾರತ ಪಂದ್ಯ ಸೋತಿತ್ತು).</p>



<p>ಈಗ ನಾನು ಹೇಳಿದ ಬಿಸಿನೆಸ್ ಮನ್ ನ ಪಾಲಿಗೂ ಇತಿಹಾಸ ಮರುಕಳಿಸಿತ್ತು. ಈಗ ಆತ ತನ್ನ 12 ರ ಹರೆಯದ ಮಗನನ್ನು ಕರೆದುಕೊಂಡ ಕೊಹ್ಲಿ ಸೆಂಚುರಿ ನೋಡಲು ಹೊರಟಿದ್ದ. ಆದರೆ ದುರದೃಷ್ಟವಶಾತ್ ಅದು ಸಂಭವಿಸಲಿಲ್ಲ. ಆದರೆ ಖಂಡಿತವಾಗಿಯೂ ಆ ತಂದೆ ಮಗನ ನಡುವಿನ ಸ್ನೇಹಪೂರ್ಣ ಸಂಬಂಧ, ಅಮೂಲ್ಯ ಬಂಧ, ಈ ವಿಶ್ವಕಪ್ ಗೆ ಸಂಬಂಧಿಸಿದಂತೆ ನನ್ನ ಮನದಲ್ಲಿ ದೀರ್ಘ ಉಳಿಯಲಿರುವ ಸಂಗತಿ.</p>



<p><strong>ಗಾಯತ್ರಿ ಶ್ರೀವಾಸ್ತವ, ಮೀಡಿಯಾ ಅಕಾಡೆಮಿಕ್, ಲೇಖಕಿ ಮತ್ತು ಪಾಡ್ ಕಾಸ್ಟರ್</strong></p>



<p><strong>ಕೃಪೆ: ಆವಾಜ್ ಸೌತ್ ಏಶಿಯಾ ಡಾಟ್ ಕಾಮ್</strong></p>



<p><strong>ಕನ್ನಡಕ್ಕೆ ಭಾವಾನುವಾದ: ಶ್ರೀನಿವಾಸ ಕಾರ್ಕಳ</strong>‌</p>



<p><strong>ಇದನ್ನೂ ಓದಿ-</strong><a href="https://peepalmedia.com/world-cup-if-you-lose/" data-type="post" data-id="32627">ವರ್ಲ್ಡ್‌ ಕಪ್ | ಗೆದ್ದರೆ ಮೋದಿ ಪ್ರಭಾವ; ಸೋತರೆ..?</a></p>
]]></content:encoded>
					
		
		
			</item>
		<item>
		<title>ಕಾಂಗ್ರೆಸ್ಸಿಗರು ಹೀಗೇಕೆ?</title>
		<link>https://peepalmedia.com/why-are-congressmen-like-this/</link>
		
		<dc:creator><![CDATA[Shrinivas Karkala]]></dc:creator>
		<pubDate>Wed, 22 Nov 2023 14:16:11 +0000</pubDate>
				<category><![CDATA[ರಾಜಕೀಯ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=32976</guid>

					<description><![CDATA[ಕಾಂಗ್ರೆಸ್ ಭಾರತದಲ್ಲಿ ಮತ್ತೆ ಬಲಗೊಳ್ಳಬೇಕಾದರೆ ಬಹಳ ಮುಖ್ಯವಾಗಿ ಅದರ ಎಲ್ಲ ಕಾರ್ಯಕರ್ತರು ಮತ್ತು ನಾಯಕರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಜಾತ್ಯತೀತತೆಯ ಬಗ್ಗೆ, ಕೋಮುವಾದದ ವಿರೋಧಿ ನಿಲುವುಗಳ ಬಗ್ಗೆ ನಿಲುವು ಸ್ಪಷ್ಟವಿರಬೇಕು. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ – ಶ್ರೀನಿವಾಸ ಕಾರ್ಕಳ ಕಾಂಗ್ರೆಸ್ ಶತಮಾನದ ಇತಿಹಾಸ ಇರುವ ಒಂದು ಅತ್ಯಂತ ಹಳೆಯ ರಾಜಕೀಯ ಪಕ್ಷ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿರುವ ಪಕ್ಷ. ಈಗಲೂ ಭಾರತದಲ್ಲಿ ಬಿಜೆಪಿಗೆ ಪ್ರಬಲ [&#8230;]]]></description>
										<content:encoded><![CDATA[
<p class="has-background" style="background-color:#51e0be0f"><strong><mark style="background-color:rgba(0, 0, 0, 0)" class="has-inline-color has-vivid-red-color">ಕಾಂಗ್ರೆಸ್ ಭಾರತದಲ್ಲಿ ಮತ್ತೆ ಬಲಗೊಳ್ಳಬೇಕಾದರೆ ಬಹಳ ಮುಖ್ಯವಾಗಿ ಅದರ ಎಲ್ಲ ಕಾರ್ಯಕರ್ತರು ಮತ್ತು ನಾಯಕರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಜಾತ್ಯತೀತತೆಯ ಬಗ್ಗೆ, ಕೋಮುವಾದದ ವಿರೋಧಿ ನಿಲುವುಗಳ ಬಗ್ಗೆ ನಿಲುವು ಸ್ಪಷ್ಟವಿರಬೇಕು. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ –</mark> ಶ್ರೀನಿವಾಸ ಕಾರ್ಕಳ</strong></p>



<p>ಕಾಂಗ್ರೆಸ್ ಶತಮಾನದ ಇತಿಹಾಸ ಇರುವ ಒಂದು ಅತ್ಯಂತ ಹಳೆಯ ರಾಜಕೀಯ ಪಕ್ಷ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿರುವ ಪಕ್ಷ. ಈಗಲೂ ಭಾರತದಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಆಗಿರುವ ಮತ್ತು ಕೋಟ್ಯಂತರ ಮತದಾರರ ವಿಶ್ವಾಸ ಗಳಿಸಿರುವ ಪಕ್ಷ. 2019 ರ ಚುನಾವಣೆ ಸೋತಾಗಲೂ ಅದು ಚಲಾವಣೆಗೊಂಡ ಮತಗಳಲ್ಲಿ ಸುಮಾರು 12 ಕೋಟಿ ಮತ ಗಳಿಸಿತ್ತು.</p>



<p>ಇಂತಹ ಒಂದು ಪಕ್ಷ ಮತ್ತೆ ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಮರಳಲು ಒದ್ದಾಡುತ್ತಿದೆ. ಅದು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆಯ ಸಮಸ್ಯೆಯೂ ಒಂದು. &#8220;ನಿಮ್ಮ ಸಿದ್ಧಾಂತ ಏನು?&#8221; ಎಂದು ಪ್ರಶ್ನಿಸಿದರೆ ಕೆಲ ನಾಯಕರು ಭಾರತ ಸಂವಿಧಾನವೇ ನಮ್ಮ ಸಿದ್ಧಾಂತ ಎನ್ನುತ್ತಾರೆ. ಆದರೆ ಭಾರತ ಸಂವಿಧಾನದ ತತ್ತ್ವಗಳು ಈಗಿನ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಮೈಗೂಡಿವೆಯೇ? ತೀರಾ ಎಡವೂ ಅಲ್ಲದ, ತೀರಾ ಬಲವೂ ಅಲ್ಲದ ಸಿದ್ದಾಂತ ಹೊಂದಿರಬೇಕಾದ ಅದು ಯಾಕೆ ಎಡಬಿಡಂಗಿಯಾಗುತ್ತಾ ಬಲದತ್ತಲೇ ಸಾಗಿದಂತೆ ಭಾಸವಾಗುತ್ತಿದೆ? ಈಗಿನ ಕಾಂಗ್ರೆಸಿಗರ ನಡೆವಳಿಕೆಗಳಲ್ಲಿ ಯಾವ ಆಕ್ಷೇಪಾರ್ಹ ಅಂಶಗಳಿವೆ? ತಕ್ಷಣಕ್ಕೆ ನನ್ನ ಗಮನಕ್ಕೆ ಬಂದ ಕೆಲ ಸಂಗತಿಗಳು ಇಂತಿವೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="760" height="443" src="https://peepalmedia.com/wp-content/uploads/2023/11/congress-flag-worker-shut.jpg" alt="" class="wp-image-32980" style="width:465px;height:auto" srcset="https://peepalmedia.com/wp-content/uploads/2023/11/congress-flag-worker-shut.jpg 760w, https://peepalmedia.com/wp-content/uploads/2023/11/congress-flag-worker-shut-300x175.jpg 300w, https://peepalmedia.com/wp-content/uploads/2023/11/congress-flag-worker-shut-150x87.jpg 150w, https://peepalmedia.com/wp-content/uploads/2023/11/congress-flag-worker-shut-696x406.jpg 696w" sizes="auto, (max-width: 760px) 100vw, 760px" /></figure>
</div>


<p>ಕಾಂಗ್ರೆಸ್ ನ ಬಹುತೇಕ ಮಂದಿಯ, ವಿಶೇಷವಾಗಿ ನಾಯಕರ ಸಮಸ್ಯೆ ಏನೆಂದರೆ &#8211;</p>



<p><strong>1.</strong> ಅವರಲ್ಲಿ ಹೆಚ್ಚಿನವರಿಗೆ ಸುತ್ತಲ ಜಗತ್ತಿನಲ್ಲಿ ಏನಾಗುತ್ತಿದೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕೀಯವಾಗಿ ಏನೇನು ಬೆಳವಣಿಗೆಗಳು ಸಂಭವಿಸುತ್ತಿವೆ ಎಂಬ ಕನಿಷ್ಠ ಅರಿವೂ ಇಲ್ಲ (ಇದರ ಪರಿಣಾಮವೇ ಕುಖ್ಯಾತ ಸ್ತ್ರೀಪೀಡಕನಿಗೆ ಆಹ್ವಾನ ಹೋದುದು).</p>



<p><strong>2.</strong> ಬಿಜೆಪಿಯವರು ಚುನಾವಣಾ ಟಿಕೆಟ್ ಕೊಡುವಾಗ ವ್ಯಕ್ತಿಯ ಹಿನ್ನೆಲೆಯನ್ನು ಕೂಲಂಕಷ ತಪಾಸಣೆ&nbsp; ಮಾಡುತ್ತಾರೆ. ಸಂಘ ಸಿದ್ಧಾಂತ ವಿರೋಧಿಗಳಿಗೆ ಅಲ್ಲಿ ಅವಕಾಶ ಇಲ್ಲವೇ ಇಲ್ಲ. ಆದರೆ ಕಾಂಗ್ರೆಸ್ ನಲ್ಲಿ ಹಣ ಮತ್ತು ಗೆಲ್ಲುವ ಸಾಮರ್ಥ್ಯವೇ ಪ್ರಧಾನ ಅರ್ಹತೆ. ಆತ ನೇರ ಆರ್ ಎಸ್ ಎಸ್ ನವನೇ ಆದರೂ ಪರವಾಗಿಲ್ಲ. ಸಿದ್ಧಾಂತಕ್ಕೆ ಒಂದು ಹಿಡಿ ಮಣ್ಣು.</p>



<p><strong>3.</strong> ಇವರಲ್ಲಿ ಹೆಚ್ಚಿನವರು X ( ಹಿಂದಿನ ಟ್ವಿಟರ್), ಫೇಸ್‌ಬುಕ್‌ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲಿ ರಾಜಕೀಯ ಪೋಸ್ಟ್ ಗಳು ಇರುವುದು ಕಡಿಮೆ. ಹೆಚ್ಚಾಗಿ ಇರುವುದು &#8220;ನಾನು ಈವತ್ತು ಇಂಥವರ ಮದುವೆಗೆ ಹೋಗಿದ್ದೆ, ಬೊಜ್ಜಕ್ಕೆ ಹೋಗಿದ್ದೆ&#8221; ಎಂಬ ಸುದ್ದಿಗಳು. ಮೋದಿಯವರ ಪ್ರತಿಯೊಂದು ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ರಾಷ್ಟ್ರ ಮಟ್ಟದಿಂದ ಹೋಬಳಿ ಮಟ್ಟದವರೆಗೆ ಬಿಜೆಪಿಗರು ಹಂಚಿಕೊಳ್ಳುತ್ತಾರೆ. ಆದರೆ ರಾಹುಲ್ ಗಾಂಧಿಯವರ ಅತ್ಯಂತ ಮೌಲಿಕ ಮತ್ತು ದಿಟ್ಟ ಪೋಸ್ಟ್ ಗಳನ್ನು ಹಂಚಿಕೊಳ್ಳಲೂ ಈ ಮಂದಿಗೆ ಸೋಮಾರಿತನ.</p>



<p><strong>4.</strong> ಬಿಜೆಪಿಯ ಮುಖ್ಯಮಂತ್ರಿ, ಪ್ರಧಾನಿ ತಪ್ಪು ಮಾಡಿದರೂ ಅವರ ಮಂತ್ರಿಗಳು, ಶಾಸಕರು ಸಮರ್ಥಿಸುತ್ತಾರೆ, ಅವರ ಹಿಂದೆ ಬಂಡೆಗಲ್ಲಿನಂತೆ ನಿಲ್ಲುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಸರಿ ಕೆಲಸ ಮಾಡಿ ವಿರೋಧಿಗಳು ಮತ್ತು ಚಡ್ಡಿ ಮಾಧ್ಯಮಗಳಿಂದ ಧಾಳಿಗೊಳಗಾದಾಗಲೂ ಅವರ ಮಂತ್ರಿಗಳು, ಶಾಸಕರು, ಪಕ್ಷ ಕಾರ್ಯಕರ್ತರು ತಟಸ್ಥರಾಗುತ್ತಾರೆ. ನಾಯಕನನ್ನು ಏಕಾಂಗಿಯಾಗಿಸುತ್ತಾರೆ. ಅತ್ಯುತ್ತಮ ಉದಾಹರಣೆ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರ ಸ್ಥಿತಿ.</p>



<p><strong>5.</strong> ಕಾಂಗ್ರೆಸ್ ನ ಬಹುತೇಕ ಮಂದಿಗೆ ಆರ್ ಎಸ್ ಎಸ್ ಎಂದರೆ ಏನು, ಅದರ ಹುಟ್ಟಿನ ಹಿನ್ನೆಲೆ, ಅದರ ಅಜೆಂಡಾ, ಅದರ ಮೇಲಿರುವ ಬ್ರಾಹ್ಮಣ್ಯ ಹಿಡಿತ ಇತ್ಯಾದಿ ಯಾವುದರ ಅರಿವೂ ಇಲ್ಲ. ಆರ್ ಎಸ್ ಎಸ್ ಅನ್ನು ಯಾಕೆ ವಿರೋಧಿಸಬೇಕು ಎಂಬುದಂತೂ ಗೊತ್ತೇ ಇಲ್ಲ. ಖಾಸಗಿಯಾಗಿ ಕೇಳಿ, &#8216;ಆರ್ ಎಸ್ ಎಸ್ ಭಾರೀ ಶಿಸ್ತಿನ ಸಂಘಟನೆ&#8217; ಎಂದು ನಾಲ್ಕು ಹೊಗಳಿಕೆಯ ಮಾತನ್ನೇ ಆಡಿಯಾರು.</p>



<p><strong>6.</strong> ಸಂಘ ಮತ್ತು ಬಿಜೆಪಿಯವರು ಮುಂದಿನ ದಶಕಗಳ, ಶತಕಗಳ ರಾಜಕೀಯ ಅಧಿಕಾರದ ಬಗ್ಗೆ ಯೋಚಿಸಿ ನೆಲ ಹದಗೊಳಿಸುತ್ತಾರೆ. ಬೇರುಗಳನ್ನು ಆಳಕ್ಕೆ ಇಳಿಸುತ್ತಾರೆ. ಕಾಂಗ್ರೆಸ್ ನ ಬಹುತೇಕ ಮಂದಿಯ ಗುರಿ ಕೇವಲ ಮುಂದಿನ ಚುನಾವಣೆ ಗೆಲ್ಲುವುದು‌ ಮತ್ತು ಹೇಗಾದರೂ ಗೆಲ್ಲುವುದು. ಅದರಾಚೆಯ ಬಗ್ಗೆ ಅವರಿಗೆ ಚಿಂತೆ ಇಲ್ಲ. ಕೇವಲ ಚುನಾವಣೆ ಗೆಲ್ಲುವುದನ್ನು ಗುರಿಯಾಗಿಸಿಕೊಂಡ ಯಾವ ರಾಜಕೀಯ ಪಕ್ಷಕ್ಕೂ ಭವಿಷ್ಯವಿಲ್ಲ. ಅಂತಹ ಪಕ್ಷಗಳಿರುವ ದೇಶಕ್ಕೂ ಭವಿಷ್ಯವಿಲ್ಲ.</p>



<p>ಪಟ್ಟಿ ಇನ್ನೂ ದೀರ್ಘ ಇದೆ..</p>



<p>ಕಾಂಗ್ರೆಸ್ ಭಾರತದಲ್ಲಿ ಮತ್ತೆ ಬಲಗೊಳ್ಳಬೇಕಾದರೆ ಬಹಳ ಮುಖ್ಯವಾಗಿ ಅದರ ಎಲ್ಲ ಕಾರ್ಯಕರ್ತರು ಮತ್ತು ನಾಯಕರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಜಾತ್ಯತೀತತೆಯ ಬಗ್ಗೆ, ಕೋಮುವಾದದ ವಿರೋಧಿ ನಿಲುವುಗಳ ಬಗ್ಗೆ ನಿಲುವು ಸ್ಪಷ್ಟವಿರಬೇಕು. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ. ಬದ್ಧತೆ ಎನ್ನುವುದು ಯಾವತ್ತೂ ಅರೆಬರೆಯಾಗಿರಬಾರದು. ಅದು ನೂರಕ್ಕೆ ನೂರು ಇರಬೇಕು. ಇಲ್ಲವಾದರೆ ಕಾಂಗ್ರೆಸ್ ಹತ್ತರಲ್ಲಿ ಹನ್ನೊಂದನೆಯ ಪಕ್ಷವಾಗಿ ತನ್ನ ಭವಿಷ್ಯಕ್ಕೆ ತಾನೇ ಕಲ್ಲುಹಾಕಿಕೊಳ್ಳುತ್ತದೆ.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p>ಚಿಂತಕರು‌</p>



<p><strong>ಇದನ್ನೂ ಓದಿ-</strong> <a href="https://peepalmedia.com/kambala-in-bangalore/" data-type="post" data-id="32924">ಬೆಂಗಳೂರಲ್ಲಿ ತುಳು ನಾಡಿನ ಕಂಬಳ; ಫ್ಯೂಡಲ್‌ ಕ್ರೀಡೆಗೆ ಪ್ರಭುತ್ವದ ಪ್ರೋತ್ಸಾಹ</a>  </p>



<p></p>
]]></content:encoded>
					
		
		
			</item>
		<item>
		<title>ಪ್ಯಾಲೆಸ್ಟೈನ್: ವಿಶ್ವಸಂಸ್ಥೆಯಲ್ಲಿ ಭಾರತದ ಎಡಬಿಡಂಗಿ ನೀತಿ</title>
		<link>https://peepalmedia.com/palestine/</link>
		
		<dc:creator><![CDATA[Shrinivas Karkala]]></dc:creator>
		<pubDate>Mon, 20 Nov 2023 14:02:38 +0000</pubDate>
				<category><![CDATA[ಅಂಕಣ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=32716</guid>

					<description><![CDATA[ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯದಲ್ಲಿ ಎಡಬಿಡಂಗಿ ನಿಲುವು, ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಮಾಡುತ್ತಿರುವ ನರಮೇಧವನ್ನು ಸ್ಪಷ್ಟ ಪದಗಳಲ್ಲಿ ಖಂಡಿಸದಿರುವುದು, ಪ್ಯಾಲೆಸ್ಟೈನ್ ನಲ್ಲಿ ತೊಂದರೆಗೊಳಗಾದವರಿಗೆ ನೆರವು ಒದಗಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿರುವುದು ಇವೆಲ್ಲ ಭಾರತದ ಜಾಗತಿಕ ನಾಯಕತ್ವ ಇಮೇಜಿಗೆ ಧಕ್ಕೆ ತಂದಿರುವುದು ಖಂಡಿತಾ – ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ) ಪ್ಯಾಲೆಸ್ಟೈನ್ ಸಮಸ್ಯೆಗೆ ಸರಿ ಸುಮಾರು ಒಂದು ಶತಮಾನದ ಇತಿಹಾಸವಿದೆ. ನೆಲೆಯೇ ಇಲ್ಲದ ಯಹೂದಿಗಳಿಗೆ ನೆಲೆ ಒದಗಿಸಿದ ಕಾರಣ, ತಮ್ಮದೇ ನೆಲದಲ್ಲಿ ಪ್ಯಾಲೆಸ್ತೀನಿಯರು ನೆಲೆ ಕಳೆದುಕೊಂಡ ವಿಚಿತ್ರ ಮತ್ತು ದಾರುಣ [&#8230;]]]></description>
										<content:encoded><![CDATA[
<p class="has-background" style="background-color:#b6984426"><strong>ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯದಲ್ಲಿ ಎಡಬಿಡಂಗಿ ನಿಲುವು, ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಮಾಡುತ್ತಿರುವ ನರಮೇಧವನ್ನು ಸ್ಪಷ್ಟ ಪದಗಳಲ್ಲಿ ಖಂಡಿಸದಿರುವುದು, ಪ್ಯಾಲೆಸ್ಟೈನ್ ನಲ್ಲಿ ತೊಂದರೆಗೊಳಗಾದವರಿಗೆ ನೆರವು ಒದಗಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿರುವುದು ಇವೆಲ್ಲ ಭಾರತದ ಜಾಗತಿಕ ನಾಯಕತ್ವ ಇಮೇಜಿಗೆ ಧಕ್ಕೆ ತಂದಿರುವುದು ಖಂಡಿತಾ – <mark style="background-color:rgba(0, 0, 0, 0)" class="has-inline-color has-luminous-vivid-orange-color">ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ)</mark></strong></p>



<p>ಪ್ಯಾಲೆಸ್ಟೈನ್ ಸಮಸ್ಯೆಗೆ ಸರಿ ಸುಮಾರು ಒಂದು ಶತಮಾನದ ಇತಿಹಾಸವಿದೆ. ನೆಲೆಯೇ ಇಲ್ಲದ ಯಹೂದಿಗಳಿಗೆ ನೆಲೆ ಒದಗಿಸಿದ ಕಾರಣ, ತಮ್ಮದೇ ನೆಲದಲ್ಲಿ ಪ್ಯಾಲೆಸ್ತೀನಿಯರು ನೆಲೆ ಕಳೆದುಕೊಂಡ ವಿಚಿತ್ರ ಮತ್ತು ದಾರುಣ ಕತೆಯದು.</p>



<p>ಅಧಿಕೃತವಾಗಿ ಪ್ಯಾಲೆಸ್ಟೈನ್ ಸಮಸ್ಯೆಗೆ ಸರಿಸುಮಾರು 75 ವರ್ಷಗಳ ಇತಿಹಾಸವಿದೆ. ಇಸ್ರೇಲಿನ ಯಹೂದಿಗಳ ಮೂಲಕ ಪ್ಯಾಲೆಸ್ಟೈನ್ ನಲ್ಲಿ ನರಮೇಧ ಸಂಭವಿಸಿ ಲೆಕ್ಕವಿಲ್ಲದಷ್ಟು ಸಾವುಗಳು ಮತ್ತು ಲಕ್ಷಾಂತರ ಮಂದಿ ನಿರ್ವಸಿತರಾದ ಇತಿಹಾಸವದು.&nbsp; ಪ್ಯಾಲೆಸ್ತೀನಿಯರ ಸಮಾಜ, ಸಂಸ್ಕೃತಿ, ಐಡೆಂಟಿಟಿ, ರಾಜಕೀಯ ಹಕ್ಕುಗಳು ಮತ್ತು ರಾಷ್ಟ್ರೀಯ ಆಶೋತ್ತರಗಳನ್ನು ನಾಶ ಮಾಡಿದ ಅದು ನಕಬಾ (Nakba) ಎಂದೇ ಪ್ರಸಿದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ ನಕಬಾ ಅವಧಿಯಲ್ಲಿ ಇಸ್ರೇಲಿಗಳು ಪ್ಯಾಲೆಸ್ಟೈನ್ ನ 774 ಪಟ್ಟಣಗಳು ಮತ್ತು ಗ್ರಾಮಗಳನ್ನು ವಶಪಡಿಸಿಕೊಂಡರು, 70 ನರಮೇಧ ಪ್ರಕರಣಗಳು ಸಂಭವಿಸಿ 15 ಸಾವಿರಕ್ಕೂ ಅಧಿಕ ಮಂದಿ ಹತರಾದರು.</p>



<p>ಇದೇ ಕಾರಣದಿಂದ ಮಹಾತ್ಮಾಗಾಂಧಿಯವರು ಪ್ಯಾಲೆಸ್ಟೈನ್ ಬಗ್ಗೆ, “ಇಂಗ್ಲೆಂಡ್ ಹೇಗೆ ಇಂಗ್ಲಿಷರಿಗೆ ಸೇರುತ್ತದೋ, ಫ್ರಾನ್ಸ್ ಹೇಗೆ ಫ್ರೆಂಚರಿಗೆ ಸೇರುತ್ತದೋ, ಹಾಗೆಯೇ ಪ್ಯಾಲೆಸ್ಟೈನ್ ಪ್ಯಾಲೆಸ್ತೀನಿಯರಿಗೆ ಸೇರುತ್ತದೆ. ಯಹೂದಿಗಳನ್ನು ಅರಬರ ಮೇಲೆ ಹೇರುವುದು ತಪ್ಪು ಮಾತ್ರವಲ್ಲ, ಅಮಾನವೀಯ ಕೂಡಾ. ಯಹೂದಿಗಳ ರಾಷ್ಟ್ರೀಯ ಮನೆ ಎಂಬಂತೆ ಪ್ಯಾಲೆಸ್ಟೈನ್ ಅನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಯಹೂದಿಗಳಿಗೆ ನೀಡುವುದು ಸ್ವಾಭಿಮಾನಿ ಅರಬರನ್ನು ಕುಗ್ಗಿಸುವ, ಮಾನವತೆಯ ವಿರುದ್ಧದ ಘೋರ ಅಪರಾಧ” ಎಂದಿದ್ದರು.</p>



<figure class="wp-block-image size-full is-resized"><img loading="lazy" decoding="async" width="640" height="480" src="https://peepalmedia.com/wp-content/uploads/2023/11/arfat.jpg" alt="" class="wp-image-32724" style="width:689px;height:auto" srcset="https://peepalmedia.com/wp-content/uploads/2023/11/arfat.jpg 640w, https://peepalmedia.com/wp-content/uploads/2023/11/arfat-300x225.jpg 300w, https://peepalmedia.com/wp-content/uploads/2023/11/arfat-150x113.jpg 150w" sizes="auto, (max-width: 640px) 100vw, 640px" /><figcaption class="wp-element-caption"><strong>ಯಾಸರ್ ಅರಾಫತ್</strong></figcaption></figure>



<p>ಹೀಗೆ, ಮಹಾತ್ಮಾ ಗಾಂಧಿಯವರಿಂದ ಹಿಡಿದು ಭಾರತದ ಬಹುತೇಕ ಎಲ್ಲ ನಾಯಕರು ಸದಾ ಕಾಲವೂ ಪ್ಯಾಲೆಸ್ತೀನಿಯನ್ನರ ಪರವಾಗಿಯೇ ವಾದಿಸುತ್ತಾ ಬಂದಿದ್ದಾರೆ. &nbsp;ವಿಶ‍್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯ ಬಂದಾಗಲೆಲ್ಲ ಭಾರತದ ಹಿಂದಿನ ಸರಕಾರಗಳು ಪ್ಯಾಲೆಸ್ಟೈನ್ ಪರ ಮತ ಚಲಾಯಿಸುತ್ತಲೇ ಬಂದಿವೆ. ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಮುಖ್ಯಸ್ಥ ಯಾಸರ್ ಅರಾಫತ್ ಸದಾ ಕಾಲವೂ ಭಾರತದ ಆತಿಥ್ಯ ಮತ್ತು ಗೆಳೆತನ ಅನುಭವಿಸುತ್ತಾ ಬಂದವರು. ಪ್ಯಾಲೆಸ್ತೀನಿಯನ್ನರಿಗೆ ಎಲ್ಲ ಕಾಲದಲ್ಲೂ ಭಾರತವು ಪರಿಹಾರ ಸಾಮಗ್ರಿ ಸಹಿತ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಲೇ ಬಂದಿದೆ.</p>



<p><strong>ಬದಲಾದ ಪ್ಯಾಲೆಸ್ಟೈನ್ ನೀತಿ</strong></p>



<p>ಬಿಜೆಪಿಯ ವಾಜಪೇಯಿ ಸರಕಾರದ ಕಾಲದಲ್ಲಿಯೂ ಬದಲಾಗಿರದಿದ್ದ ಈ ಪ್ಯಾಲೆಸ್ಟೈನ್ ನೀತಿ ಬದಲಾದುದು 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ. ಇಸ್ರೇಲ್ ಪ್ಯಾಲೆಸ್ಟೈನ್ ನಲ್ಲಿ ಮಾಡುತ್ತಿರುವ ಘೋರ ಅನ್ಯಾಯವನ್ನು ಗಣನೆಗೆ ತೆಗೆದುಕೊಳ್ಳದೆ, ಮೋದಿಯವರು ಇಸ್ರೇಲ್ ಜತೆಗೆ ಹಿಂದೆಂದೂ ಇದ್ದಿರದಂತಹ ಮಧುರ ಸಂಬಂಧ ಸ್ಥಾಪಿಸಿಕೊಂಡರು. ಅಲ್ಲಿನ ಪ್ರಧಾನಿ ನೆತನ್ಯಾಹುವನ್ನು ತನ್ನ ಫ್ರೆಂಡ್ ಎಂದೇ ಸಂಬೋಧಿಸುತ್ತಿದ್ದರು. ಯುದ್ಧೋಪಕರಣಗಳ ಆಮದು ಎಗ್ಗಿಲ್ಲದೆ ನಡೆಯಿತು. ಸಹಕಾರದ ಸ್ವರೂಪ ಯಾವ ಮಟ್ಟವನ್ನು ತಲಪಿತು ಎಂದರೆ, ಇಸ್ರೇಲ್ ನ ಕುಖ್ಯಾತ ಪೆಗಸಸ್ ತಂತ್ರಾಂಶವನ್ನು ಬಳಸಿದ್ದ ದೇಶಗಳಲ್ಲಿ ಭಾರತ ಅತ್ಯಂತ ಪ್ರಮುಖ ದೇಶ.</p>



<p>ಇಸ್ರೇಲ್ ನೊಂದಿಗೆ ಸ್ನೇಹ ವೃದ್ಧಿಯಾದ ಮೇಲೆ ಅದರ ಪರಿಣಾಮ ಪ್ಯಾಲೆಸ್ಟೈನ್ ಸಂಬಂಧದ ಮೇಲೆ ಬೀರಲೇ ಬೇಕಲ್ಲ. ಭಾರತೀಯ ಬಲಪಂಥ ರಾಜಕಾರಣದ ನೆಲೆಯೇ ಮುಸ್ಲಿಂ ದ್ವೇಷವಾದುದುರಿಂದ ಪ್ಯಾಲೆಸ್ಟೈನ್ ವಿಷಯದಲ್ಲಿ ಭಾರತದ ತಾತ್ಸಾರ ನಿಲುವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಇದು ಹೆಚ್ಚು ಸ್ಪಷ್ಟವಾದುದು ಇತ್ತೀಚಿನ ಹಮಾಸ್- ಇಸ್ರೇಲ್ ಸಂಘರ್ಷದ ಸಮಯದಲ್ಲಿ.</p>



<figure class="wp-block-image size-large is-resized"><img loading="lazy" decoding="async" width="1024" height="576" src="https://peepalmedia.com/wp-content/uploads/2023/11/israel-vs-hamas-war-1698516866-1024x576.jpg" alt="" class="wp-image-32725" style="width:696px;height:auto" srcset="https://peepalmedia.com/wp-content/uploads/2023/11/israel-vs-hamas-war-1698516866-1024x576.jpg 1024w, https://peepalmedia.com/wp-content/uploads/2023/11/israel-vs-hamas-war-1698516866-300x169.jpg 300w, https://peepalmedia.com/wp-content/uploads/2023/11/israel-vs-hamas-war-1698516866-768x432.jpg 768w, https://peepalmedia.com/wp-content/uploads/2023/11/israel-vs-hamas-war-1698516866-150x84.jpg 150w, https://peepalmedia.com/wp-content/uploads/2023/11/israel-vs-hamas-war-1698516866-696x392.jpg 696w, https://peepalmedia.com/wp-content/uploads/2023/11/israel-vs-hamas-war-1698516866-1068x601.jpg 1068w, https://peepalmedia.com/wp-content/uploads/2023/11/israel-vs-hamas-war-1698516866.jpg 1200w" sizes="auto, (max-width: 1024px) 100vw, 1024px" /></figure>



<p>ಕಳೆದ ಅಕ್ಟೋಬರ್ 07, 2023 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಗೆ ನುಗ್ಗಿ ಹಿಂಸಾಚಾರ ನಡೆಸಿ ಸಾವಿರಾರು ಮಂದಿಯನ್ನು ಕೊಂದ ಬೆನ್ನಿಗೇ, ಇಸ್ರೇಲ್ ತನ್ನ ಅಸಾಧಾರಣ ಸೇನಾ ಬಲ ಬಳಸಿಕೊಂಡು ಗಾಜಾಪಟ್ಟಿಯ ಮೇಲೆ ಸಮರ ಸಾರಿತು. ಉತ್ತರ ಗಾಜಾದ 13 ಲಕ್ಷ ಮಂದಿಗೆ ತಕ್ಷಣ ಮನೆ ತೊರೆದು ದಕ್ಷಿಣ ಗಾಜಾಕ್ಕೆ ತೆರಳುವಂತೆ ಆದೇಶಿಸಿತು. ಆನಂತರ ಅಲ್ಲಿನ ಮನೆಗಳು, ಶಾಲೆಗಳು, ಆಸ್ಪತ್ರೆಗಳು, ನಿರಾಶ್ರಿತ ಶಿಬಿರಗಳು ಎಲ್ಲದರ ಮೇಲೂ ಬಾಂಬಿನ ಮಳೆಗರೆಯಲಾರಂಭಿಸಿತು. ಅಂತಾರಾಷ್ಟ್ರೀಯ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ವಿಶ್ವಸಂಸ್ಥೆಯ ಸಲಹೆ, ಆದೇಶಗಳನ್ನು ಧಿಕ್ಕರಿಸಿ ಅದು ನರಮೇಧದಲ್ಲಿ ತೊಡಗಿಕೊಂಡಿತು.</p>



<p>ಈ ನರಮೇಧ ಅಭಿಯಾನಕ್ಕೆ ಈಗ 43 ದಿನಗಳು ಸಂದಿದ್ದು, ಇದುವರೆಗೆ ಗಾಜಾದಲ್ಲಿ ಸತ್ತವರ ಸಂಖ್ಯೆ ಸುಮಾರು 13,000 ಇದರಲ್ಲಿ ಮಕ್ಕಳ ಸಂಖ್ಯೆಯೇ ಸುಮಾರು 5,500, ಮಹಿಳೆಯರು ಸುಮಾರು 3,500, ನಾಪತ್ತೆಯಾದವರು 6,000. ನಾಪತ್ತೆಯಾದವರು ಎಂದರೆ ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿ ಕೊಂಡಿರುವವರು; ಬಹುತೇಕ ಸತ್ತವರು. ಅಂದರೆ ಸತ್ತವರು ಒಟ್ಟು ಸುಮಾರು 19000. ಗಾಜಾಕ್ಕೆ ನೀರು, ವಿದ್ಯುತ್, ಆಹಾರ ಸರಬರಾಜು ಎಲ್ಲವನ್ನೂ ಕತ್ತರಿಸಿ ಹಾಕಲಾಗಿದೆ. ಇರುವ ಕೆಲವೇ ಕೆಲವು ಆಸ್ಪತ್ರೆಗಳನ್ನೂ ಖಾಲಿ ಮಾಡಿಸಲಾಗಿದೆ. ಇನ್ ಕ್ಯುಬೇಟರ್ ಗಳಲ್ಲಿರುವ ಶಿಶುಗಳಿಗೂ ವಿನಾಯಿತಿ ನೀಡಿಲ್ಲ.</p>



<p><strong>ವಿಶ್ವಸಂಸ್ಥೆಯಲ್ಲಿ ಮತ ಚಲಾವಣೆ, ಇಸ್ರೇಲ್ ಪರ&nbsp; ಮತ</strong></p>



<p>ಗಾಜಾದಲ್ಲಿ ನರಮೇಧ ಆರಂಭವಾಗುತ್ತಲೇ ವಿಶ್ವಸಂಸ್ಥೆಯ ಮಧ‍್ಯಪ್ರವೇಶಕ್ಕೆ ವಿಶ್ವದಾದ್ಯಂತ ಆಗ್ರಹ ಕೇಳಿಬಂತು. ವೀಟೋ ಅಧಿಕಾರ ಇರುವ ಚೀನಾ, ಫ್ರಾನ್ಸ್, ರಶ್ಯಾ, ಯುಕೆ, ಯುಎಸ್ ದೇಶಗಳಲ್ಲಿ ಸಮ್ಮತ ಇಲ್ಲದ ಕಾರಣ ಮೊದಲ ಹಂತದಲ್ಲಿ ಯಾವ ಪ್ರಯೋಜನವೂ ಆಗಲಿಲ್ಲ. ಹೇಳಿ ಕೇಳಿ ಇಸ್ರೇಲ್ ನ ಅತಿರೇಕಗಳಿಗೆ ಬೆಂಬಲವಾಗಿ ನಿಂತಿರುವುದೇ ಅಮೆರಿಕಾ ಆಗಿರುವಾಗ, ಬಾಂಬುಗಳನ್ನು ಸರಬರಾಜು ಮಾಡುತ್ತಿರುವುದೇ ಅಮೇರಿಕಾ ಆಗಿರುವಾಗ ಇಲ್ಲಿ ಪ್ಯಾಲೆಸ್ಟೈನ್ ಗೆ ಯಾವ ನ್ಯಾಯ ಸಿಗಲು ಸಾಧ್ಯ?!</p>



<p>ಹಮಾಸ್ ಕೃತ್ಯಗಳೊಂದಿಗೆ ಯಾವ ಸಂಬಂಧವೂ ಇಲ್ಲದ ಅಮಾಯಕರ ಹತ್ಯೆಯನ್ನು ತಡೆಯುವ ಯುದ್ಧ ವಿರಾಮಕ್ಕೆ ಮಾನವೀಯತೆಯಲ್ಲಿ ನಂಬಿಕೆ ಇರುವ ಯಾವುದೇ ದೇಶ ಬೆಂಬಲ ನೀಡಲೇಬೇಕು ಎಂಬುದು ಒಂದು ಉದಾತ್ತ ಆಶಯ. ಈ ನಿರ್ಣಯಕ್ಕೆ ಜಗತ್ತಿನ 120 ರಾಷ್ಟ್ರಗಳು ಬೆಂಬಲ ಸೂಚಿಸಿದವು. ನಿರೀಕ್ಷೆಯಂತೆಯೇ ಅಮೆರಿಕಾ ಮತ್ತು ಇಸ್ರೇಲ್ ನ ಪರಮಾಪ್ತ ದೇಶಗಳು ಸೇರಿ 14 ರಾಷ್ಟ್ರಗಳು ವಿರೋಧ ವ್ಯಕ್ತ ಪಡಿಸಿದವು. 45 ರಾಷ್ಟ್ರಗಳು ಗೈರು ಹಾಜರಾದವು.</p>



<figure class="wp-block-image size-large"><img loading="lazy" decoding="async" width="1024" height="700" src="https://peepalmedia.com/wp-content/uploads/2023/11/GazaUNVote-1-1024x700.jpg" alt="" class="wp-image-32730" srcset="https://peepalmedia.com/wp-content/uploads/2023/11/GazaUNVote-1-1024x700.jpg 1024w, https://peepalmedia.com/wp-content/uploads/2023/11/GazaUNVote-1-300x205.jpg 300w, https://peepalmedia.com/wp-content/uploads/2023/11/GazaUNVote-1-768x525.jpg 768w, https://peepalmedia.com/wp-content/uploads/2023/11/GazaUNVote-1-150x103.jpg 150w, https://peepalmedia.com/wp-content/uploads/2023/11/GazaUNVote-1-218x150.jpg 218w, https://peepalmedia.com/wp-content/uploads/2023/11/GazaUNVote-1-696x476.jpg 696w, https://peepalmedia.com/wp-content/uploads/2023/11/GazaUNVote-1-1068x730.jpg 1068w, https://peepalmedia.com/wp-content/uploads/2023/11/GazaUNVote-1.jpg 1080w" sizes="auto, (max-width: 1024px) 100vw, 1024px" /><figcaption class="wp-element-caption"><strong>ವಿಶ್ವಸಂಸ್ಥೆಯಲ್ಲಿ ಮತ ಚಲಾವಣೆ</strong></figcaption></figure>



<p>ಹೀಗೆ ಗೈರು ಹಾಜರಾದ ದೇಶಗಳಲ್ಲಿ ಭಾರತವೂ ಸೇರಿತ್ತು ಎಂಬುದು ಜಗತ್ತಿನ ಅನೇಕರು ಹುಬ್ಬೇರಿಸಲು ಕಾರಣವಾಯಿತು. ಈ ಬಗ್ಗೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಅಸಮಾಧಾನ ವ್ಯಕ್ತವಾದರೆ, ದೇಶದೊಳಗೂ ಭಾರತ ಸರಕಾರ ತೀವ್ರ ಟೀಕೆಗೆ ಗುರಿಯಾಯಿತು. ಬುದ್ಧ, ಮಹಾವೀರ, ಗಾಂಧಿಯ ಶಾಂತಿ, ಅಹಿಂಸೆಯ ನಾಡು ಹೀಗೆ ಹಿಂಸೆಯ ಪರ ನಿಲ್ಲಬಹುದೇ? ತನ್ನ ವಿದೇಶಾಂಗ ನೀತಿಯನ್ನು ಭಾರತವು ಆಂತರಿಕ ರಾಜಕಾರಣದ ನೆಲೆಯಲ್ಲಿ ಬದಲಾಯಿಸಿಕೊಳ್ಳುವುದು ಸರಿಯೇ? ಎಂದು ವ್ಯಾಪಕ ಖಂಡನೆ ವ್ಯಕ್ತವಾಯಿತು.</p>



<p>ನಮ್ಮ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾ, ಶ್ರೀಲಂಕಾ, ಮಾಲ್ದೀವ್ಸ್ ಎಲ್ಲವೂ ಶಾಂತಿಯ ಪರ ಮತ ಚಲಾಯಿಸಿದ್ದವು. ದಿ ವೈರ್ ನ ಸಿದ್ಧಾರ್ಥ ವರದರಾಜನ್ ಬೆಟ್ಟು ಮಾಡಿದಂತೆ ಜಗತ್ತಿನ ನಕಾಶೆಯ ಎಡ ತುದಿಯ ಇಸ್ರೇಲ್ ಮತ್ತು ಬಲ ತುತ್ತತುದಿಯ ಕೊರಿಯಾ ಮತ್ತು ಫಿಲಿಪ್ಪೈನ್ಸ್ ಹೊರತು ಪಡಿಸಿ, ಎಲ್ಲ ದೇಶಗಳೂ ಶಾಂತಿಯ ಪರ ಮತ ಚಲಾಯಿಸಿದವು. ಆದರೆ, ಭಾರತ ಪ್ರತ್ಯೇಕವಾಗಿ ನಿಂತುಕೊಂಡಿತು. ಒಂದು ರೀತಿಯಲ್ಲಿ ಇಡೀ ಪ್ರದೇಶದಲ್ಲಿ ಐಸೋಲೇಟ್ ಆಯಿತು. ಜಾಗತಿಕ ದಕ್ಷಿಣದ ನಾಯಕ ಎಂದು ಬಿಂಬಿಸಿಕೊಂಡಿದ್ದ ಭಾರತ ಇಂತಹ ಒಂದೇ ಒಂದು ನಿಲುವಿನಿಂದ ತನ್ನ ಇಮೇಜಿಗೆ ಅಪಾರ ಹಾನಿ ಮಾಡಿಕೊಂಡಿತು. ವಿಪರ್ಯಾಸವೆಂದರೆ, ಇಸ್ರೇಲ್ ನ ಪರಮಾಪ್ತ ರಾಷ್ಟ್ರ ಫ್ರಾನ್ಸ್ ಕೂಡ ಇಸ್ರೇಲ್ ವಿರುದ್ಧ ಅಂದರೆ ಶಾಂತಿಯ ಪರ ಮತ ಚಲಾಯಿಸಿತ್ತು!</p>



<p>ವಿಶ‍್ವಸಂಸ್ಥೆಯ ಯಾವುದೇ ನಿರ್ಣಯವನ್ನು ಇಸ್ರೇಲ್ ಪಾಲಿಸುವುದು ಅಷ್ಟರಲ್ಲೇ ಇತ್ತು. ಈ ಹಿಂದಿನ ಅಂತಹ ಅನೇಕ ನಿರ್ಣಯಗಳನ್ನು ಧಿಕ್ಕರಿಸಿಕೊಂಡು ಬಂದಿದೆ. ಅದು ಬೇರೆ ವಿಚಾರ.</p>



<p><strong>ಮತ್ತೊಂದು ನಿರ್ಣಯ, ಇಸ್ರೇಲ್ ವಿರುದ್ಧ ಮತ</strong></p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2023/11/download-1-1024x576.jpeg" alt="" class="wp-image-32742" srcset="https://peepalmedia.com/wp-content/uploads/2023/11/download-1-1024x576.jpeg 1024w, https://peepalmedia.com/wp-content/uploads/2023/11/download-1-300x169.jpeg 300w, https://peepalmedia.com/wp-content/uploads/2023/11/download-1-768x432.jpeg 768w, https://peepalmedia.com/wp-content/uploads/2023/11/download-1-150x84.jpeg 150w, https://peepalmedia.com/wp-content/uploads/2023/11/download-1-696x392.jpeg 696w, https://peepalmedia.com/wp-content/uploads/2023/11/download-1-1068x601.jpeg 1068w, https://peepalmedia.com/wp-content/uploads/2023/11/download-1.jpeg 1200w" sizes="auto, (max-width: 1024px) 100vw, 1024px" /><figcaption class="wp-element-caption"><strong>ವಿಶ್ವಸಂಸ್ಥೆ</strong></figcaption></figure>



<p>ಆನಂತರ ವಿಶ್ವಸಂಸ್ಥೆಯಲ್ಲಿ ಇದೇ ನವೆಂಬರ್ 9 ರಂದು ಇಸ್ರೇಲ್ ಕುರಿತು ಇನ್ನೊಂದು ನಿರ್ಣಯ ಚರ್ಚೆಗೆ ಬಂತು. ಅದುವೇ ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡು ಇಸ್ರೇಲ್ ಅಲ್ಲಿ ನಡೆಸುತ್ತಿರುವ ಅತಿಕ್ರಮ ಮತ್ತು ಅತ್ಯಾಚಾರವನ್ನು ಕುರಿತ ನಿರ್ಣಯ.</p>



<p>ಗಾಜಾವನ್ನು ನೆಲ, ನೀರು, ವಾಯ ಎಲ್ಲ ಗಡಿಗಳಲ್ಲೂ ನಿರ್ಬಂಧಿಸಿಟ್ಟಿರುವ ಇಸ್ರೇಲ್ ಅದನ್ನು ಭೂಮಿಯ ಮೇಲಣ ಅತಿ ದೊಡ್ಡ ಜೈಲನ್ನಾಗಿಸಿದೆಯಾದರೂ, ಅದರೊಳಗಿನಿಂದ ತನ್ನ ಸೇನೆಯನ್ನು ಅದು ಹಿಂದೆಗೆದುಕೊಂಡು ಸರಿಸುಮಾರು ಒಂದೂವರೆ ದಶಕವಾಯಿತು. ಆದರೆ ವೆಸ್ಟ್ ಬ್ಯಾಂಕ್ ಅಥವಾ ಪಶ್ಚಿಮ ದಂಡೆಯದ್ದು ಇನ್ನೂ ಶೋಚನೀಯ ಕತೆ. ಅದನ್ನು ಆಕ್ರಮಿಸಿಕೊಂಡು ಕೂತಿರುವ ಇಸ್ರೇಲ್ ಅಲ್ಲಿ ಮನ ಬಂದಂತೆ ಮನೆಗಳಿಗೆ ಧಾಳಿ ಮಾಡುತ್ತದೆ, ಜನರನ್ನು ಬಂಧಿಸಿ ಸೆರೆಮನೆಗೆ ಒಯ್ಯುತ್ತದೆ, ಇಸ್ರೇಲ್ ಸೆಟ್ಲರ್ ಗಳು ಪ್ಯಾಲೆಸ್ತೀನಿಯನ್ನರ ಮೇಲೆ ಮನ ಬಂದಂತೆ ಧಾಳಿ ಮಾಡುತ್ತಾರೆ, ಅವರ ಆಸ್ತಿ ಪಾಸ್ತಿ ವಶಪಡಿಸಿಕೊಳ್ಳುತ್ತಾರೆ. ಪಶ್ಚಿಮ ದಂಡೆಗೂ ಹಮಾಸ್ ಗೂ ಸಂಬಂಧವೇ ಇಲ್ಲದಿದ್ದರೂ ಅಕ್ಟೋಬರ್ ಧಾಳಿಯ ಬಳಿಕ ಪಶ್ಚಿಮ ದಂಡೆಯಲ್ಲಿ ಅವ್ಯಾಹತವಾಗಿ ಇಸ್ರೇ‍ಲ್ ಧಾಳಿ ನಡೆದಿದೆ. 200 ಕ್ಕೂ ಅಧಿಕ ಮಂದಿ ಸತ್ತಿದ್ದಾರೆ. ಸಾವಿರಾರು ಮಂದಿಯನ್ನು ಬಂಧಿಸಿದೆ. ಹಿಂಸೆ ಈಗಲೂ ಅಲ್ಲಿ ಮುಂದುವರಿದಿದೆ.</p>



<p>ಇಸ್ರೇಲ್ ನ ಈ ಕೃತ್ಯವನ್ನು ಅದರ ಗೆಳೆಯ ಅಮೆರಿಕಾ ಕೂಡಾ ಖಂಡಿಸಿದೆ. ಇದೇ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದು ಮಂಡನೆಯಾಯಿತು. ಆ ನಿರ್ಣಯ ಆಕ್ರಮಿತ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ವಸತಿಗಳ ವಿರುದ್ಧವಾಗಿತ್ತು. ಅಲ್ಲಿ ಇಸ್ರೇಲ್ ನ ಕಾನೂನು ಬಾಹಿರ ಚಟುವಟಿಕೆಗಳನ್ನು ಖಂಡಿಸಲಾಗಿತ್ತು. ಈ ನಿರ್ಣಯದ ಪರ 145 ಮತ ಚಲಾವಣೆಯಾದರೆ ವಿರುದ್ಧವಾಗಿ 7 ಮತ ಚಲಾವಣೆಗೊಂಡವು (ಯುಎಸ್, ಕೆನಡಾ, ಹಂಗರಿ, ಇಸ್ರೇಲ್, ಮಾರ್ಶಲ್ ಐಲೆಂಡ್ಸ್, ಮೈಕ್ರೋನೇಸಿಯಾ ಮತ್ತು ನೌರು), 18 ದೇಶಗಳು ಗೈರು ಹಾಜರಾದವು.&nbsp; ನಿರ್ಣಯದ ಪರ, ಅಂದರೆ ಇಸ್ರೇಲ್ ವಿರುದ್ಧ ಮತ ಚಲಾಯಿಸಿದ 145 ದೇಶಗಳಲ್ಲಿ ಭಾರತ ಕೂಡಾ ಸೇರಿತ್ತು.</p>



<p><strong>ಸ್ಥಿರತೆ ಇಲ್ಲದ ವಿದೇಶಾಂಗ ನೀತಿ</strong></p>



<p>ಹೀಗೆ, ಇತ್ತೀಚಿನ ದಿನಗಳಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಒಂದು ಸ್ಥಿರತೆ ಇಲ್ಲದಂತಾಗಿದೆ, ಅನೇಕ ಬಾರಿ ಅದು ಹಾಸ್ಯಾಸ್ಪದವೂ ಆಗಿದೆ (ಈಗಾಗಲೇ ನೆರೆಯ ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾ, ಶ್ರೀಲಂಕಾ, ಮಾಲ್ದೀವ್ಸ್ ಭಾರತದ ಸ್ನೇಹದಿಂದ ದೂರ ಸರಿದಿವೆ).</p>



<figure class="wp-block-image size-large is-resized"><img loading="lazy" decoding="async" width="1024" height="576" src="https://peepalmedia.com/wp-content/uploads/2023/11/benjaminnetanyahumodi-1696932586-1696935039-1024x576.jpg" alt="" class="wp-image-32735" style="width:696px;height:auto" srcset="https://peepalmedia.com/wp-content/uploads/2023/11/benjaminnetanyahumodi-1696932586-1696935039-1024x576.jpg 1024w, https://peepalmedia.com/wp-content/uploads/2023/11/benjaminnetanyahumodi-1696932586-1696935039-300x169.jpg 300w, https://peepalmedia.com/wp-content/uploads/2023/11/benjaminnetanyahumodi-1696932586-1696935039-768x432.jpg 768w, https://peepalmedia.com/wp-content/uploads/2023/11/benjaminnetanyahumodi-1696932586-1696935039-150x84.jpg 150w, https://peepalmedia.com/wp-content/uploads/2023/11/benjaminnetanyahumodi-1696932586-1696935039-696x392.jpg 696w, https://peepalmedia.com/wp-content/uploads/2023/11/benjaminnetanyahumodi-1696932586-1696935039-1068x601.jpg 1068w, https://peepalmedia.com/wp-content/uploads/2023/11/benjaminnetanyahumodi-1696932586-1696935039.jpg 1200w" sizes="auto, (max-width: 1024px) 100vw, 1024px" /><figcaption class="wp-element-caption">ಭಾರತ ಮತ್ತು ಇಸ್ರೆಲ್‌  ಪ್ರಧಾನಿ</figcaption></figure>



<p>ಇಸ್ರೇಲನ್ನು ಅತಿಯಾಗಿ ಓಲೈಸ ಹೊರಡುವುದರಿಂದ ಅರಬ್ ಮತ್ತು ಮುಸ್ಲಿಂ ಜಗತ್ತಿನಲ್ಲಿ ಭಾರತಕ್ಕಾಗುವ ನಷ್ಟದ ಬಗ್ಗೆ ಮೋದಿ ಸರಕಾರ ಯೋಚಿಸಿದಂತೆ ಕಾಣುತ್ತಿಲ್ಲ. ದೇಶದೊಳಗಿನ ವಿಚಾರಗಳು ಏನೇ ಇರಲಿ, ಜಾಗತಿಕ ವಿಷಯ ಬಂದಾಗ ಅಲ್ಲಿ ಒಂದು ಸ್ಥಿರತೆ ಇರಬೇಕು. ಇಲ್ಲವಾದರೆ ದೇಶ ಅನುಭವಿಸುವ ದೂರಗಾಮಿ ಪರಿಣಾಮ&nbsp; ಭೀಕರವಾದುದು.</p>



<p>ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯದಲ್ಲಿ ಎಡಬಿಡಂಗಿ ನಿಲುವು, ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಮಾಡುತ್ತಿರುವ ನರಮೇಧವನ್ನು ಸ್ಪಷ್ಟ ಪದಗಳಲ್ಲಿ ಖಂಡಿಸದಿರುವುದು, ಪ್ಯಾಲೆಸ್ಟೈನ್ ನಲ್ಲಿ ತೊಂದರೆಗೊಳಗಾದವರಿಗೆ ನೆರವು ಒದಗಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿರುವುದು ಇವೆಲ್ಲ ಭಾರತದ ಜಾಗತಿಕ ನಾಯಕತ್ವ ಇಮೇಜಿಗೆ ಧಕ್ಕೆ ತಂದಿರುವುದು ಖಂಡಿತಾ. ಭಾರತದಲ್ಲಿರುವ ಪ್ಯಾಲೆಸ್ಟೈನ್ ರಾಯಭಾರಿ ಕೂಡಾ ‘ಭಾರತದಿಂದ ನಮಗೆ ಯಾವ ವಿಶೇಷ ನಿರೀಕ್ಷೆಯೂ ಇಲ್ಲವಾಗಿದೆ. ನಾನು ಅನೇಕ ಬಾರಿ ಭಾರತ ಸರಕಾರಕ್ಕೆ ಕರೆ ಮಾಡಿ ನೆರವಿಗೆ ಆಗ್ರಹಿಸಿದೆ, ಆದರೆ ಅಲ್ಲಿಂದ ಯಾವ ಉತ್ತರವೂ ಬಂದಿಲ್ಲ’ ಎಂದು ನಿರಾಶೆಯ ಮಾತುಗಳನ್ನು ಆಡಿದ್ದಾರೆ.</p>



<p>ಜಾಗತಿಕ ನಾಯಕನಾಗುವುದು ಬಿಡಿ, ತನ್ನ ‘ದೊಡ್ಡಣ್ಣ ನಿಲುವು’ಗಳಿಂದಾಗಿ ಈಗ ಭಾರತವು ತನ್ನ ನೆರೆಹೊರೆಯಲ್ಲಿಯೂ ನಾಯಕನಾಗಿ ಉಳಿದಿಲ್ಲ.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p><mark style="background-color:rgba(0, 0, 0, 0)" class="has-inline-color has-black-color"><sub><strong>ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</strong></sub></mark></p>



<p><strong><sub><a href="https://peepalmedia.com/ukraine-palestine-the-wests-double-policy/" data-type="post" data-id="30756">ಇದನ್ನೂ ಓದಿ-</a></sub></strong><a href="https://peepalmedia.com/ukraine-palestine-the-wests-double-policy/" data-type="post" data-id="30756"><sub>ಉಕ್ರೇನ್, ಪ್ಯಾಲೆಸ್ಟೈನ್: ಪಶ್ಚಿಮದ ಇಬ್ಬಗೆಯ ನೀತಿ</sub></a></p>
]]></content:encoded>
					
		
		
			</item>
		<item>
		<title>ನೆಹರೂ ಎಂಬ ಎತ್ತರದ ಮನುಷ್ಯ</title>
		<link>https://peepalmedia.com/nehru/</link>
		
		<dc:creator><![CDATA[Shrinivas Karkala]]></dc:creator>
		<pubDate>Tue, 14 Nov 2023 15:58:44 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=32102</guid>

					<description><![CDATA[ಇಂದು ಭಾರತವು ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 134 ನೇ ಜನ್ಮದಿನವನ್ನು ಆಚರಿಸುತ್ತಿದೆ. ನೆಹರೂ ಆಧುನಿಕ ಭಾರತಕ್ಕೆ ಮತ್ತು ಚೈತನ್ಯ ಶೀಲ ಪ್ರಜಾತಂತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ಅದನ್ನು ಕಳಚಿ ಹಾಕುವ ಯಾವ ಯತ್ನವೂ, ಎಂದಿಗೂ ಯಶಸ್ವಿಯಾಗದು. ಇಂತಹ ಮಹೋನ್ನತ ನಾಯಕನನ್ನು ನೆನಪಿಸಿ ಕೊಳ್ಳುವುದರಿಂದ ಮತ್ತು ಆತನ ಕೆಲಸಗಳನ್ನು ಮೆಲುಕು ಹಾಕುವುದರಿಂದ ನಮ್ಮ ತಿಳಿವಳಿಕೆ ಹೆಚ್ಚೀತು, ಮಾತ್ರವಲ್ಲ ಆಶಾವಾದದ ಒಂದು ಬೆಳಕಿನ ಕಿರಣವೂ ದಕ್ಕೀತು- ಶ್ರೀನಿವಾಸ ಕಾರ್ಕಳ 2004 ರಿಂದ 2014 ರ ವರೆಗೆ ಪ್ರಧಾನಿಯಾಗಿ [&#8230;]]]></description>
										<content:encoded><![CDATA[
<p class="has-background" style="background-color:#abb7c224"><strong>ಇಂದು ಭಾರತವು ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 134 ನೇ ಜನ್ಮದಿನವನ್ನು ಆಚರಿಸುತ್ತಿದೆ. ನೆಹರೂ ಆಧುನಿಕ ಭಾರತಕ್ಕೆ ಮತ್ತು ಚೈತನ್ಯ ಶೀಲ ಪ್ರಜಾತಂತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ಅದನ್ನು ಕಳಚಿ ಹಾಕುವ ಯಾವ ಯತ್ನವೂ, ಎಂದಿಗೂ ಯಶಸ್ವಿಯಾಗದು. ಇಂತಹ ಮಹೋನ್ನತ ನಾಯಕನನ್ನು ನೆನಪಿಸಿ ಕೊಳ್ಳುವುದರಿಂದ ಮತ್ತು ಆತನ ಕೆಲಸಗಳನ್ನು ಮೆಲುಕು ಹಾಕುವುದರಿಂದ ನಮ್ಮ ತಿಳಿವಳಿಕೆ ಹೆಚ್ಚೀತು, ಮಾತ್ರವಲ್ಲ ಆಶಾವಾದದ ಒಂದು ಬೆಳಕಿನ ಕಿರಣವೂ ದಕ್ಕೀತು-<mark style="background-color:rgba(0, 0, 0, 0)" class="has-inline-color has-vivid-red-color"> ಶ್ರೀನಿವಾಸ ಕಾರ್ಕಳ </mark></strong></p>



<p>2004 ರಿಂದ 2014 ರ ವರೆಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಡಾ. ಮನಮೋಹನ್ ಸಿಂಗ್ ಮೃದುಭಾಷಿ ಮತ್ತು ಮಿತಭಾಷಿ. ಅಹಂಕಾರ, ಸ್ವಮೋಹ, ಸರ್ವಾಧಿಕಾರ, ಆಡಂಬರದ ನಡೆವಳಿಕೆ ಮೊದಲಾದ ದುರ್ಗುಣಗಳನ್ನು ಎಂದೂ ಬಳಿ ಸುಳಿಯಲು ಬಿಡದ ಅವರು, ‘ದೇಶದ ಚುಕ್ಕಾಣಿಯನ್ನು ಹಿಡಿದ ನಾಯಕನೊಬ್ಬ ಹೇಗಿರಬೇಕು’ ಎಂಬುದಕ್ಕೆ ಮಾದರಿಯಂತೆ ಕೆಲಸ ಮಾಡಿದರು.</p>



<p>ಡಾ. ಸಿಂಗ್ ಮಾತನಾಡುತ್ತಿದ್ದುದು ಕಡಿಮೆ. ಆದರೆ ಆಡಿದ ಮಾತುಗಳೆಲ್ಲವೂ ಮುತ್ತಿನಂತಿರುತ್ತಿದ್ದವು. ಅಪಾರ ಅನುಭವ ಮತ್ತು ಆಳ ಜ್ಞಾನದಿಂದ ಬಂದ ಅವರ ಮಾತುಗಳು ಸದಾ ತೂಕದಿಂದ ಕೂಡಿರುತ್ತಿದ್ದವು.</p>



<figure class="wp-block-image size-large"><img loading="lazy" decoding="async" width="1024" height="650" src="https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-1024x650.jpeg" alt="" class="wp-image-32143" srcset="https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-1024x650.jpeg 1024w, https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-300x190.jpeg 300w, https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-768x488.jpeg 768w, https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-150x95.jpeg 150w, https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-696x442.jpeg 696w, https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM-1068x678.jpeg 1068w, https://peepalmedia.com/wp-content/uploads/2023/11/WhatsApp-Image-2023-11-14-at-2.15.15-PM.jpeg 1098w" sizes="auto, (max-width: 1024px) 100vw, 1024px" /></figure>



<p>ದೇಶದ ಆರ್ಥಿಕ ಸ್ಥಿತಿಯನ್ನು ಅಲ್ಲೋಲಕಲ್ಲೋಲಗೊಳಿಸಿದ ನೋಟು ನಿಷೇಧ ಸಂದರ್ಭದಲ್ಲಿ, ಲೋಕಸಭೆಯಲ್ಲಿ ಮಾತನಾಡಲು ಅವರು ಎದ್ದುನಿಂತಾಗ, ಅವರು ಏನು ಹೇಳುತ್ತಾರೆ ಎಂದು ಕೇಳಲು ಇಡೀ ಸದನ ಕಾತರದಿಂದ ಕಾಯುತ್ತಿತ್ತು. ‘ನೋಟು ನಿಷೇಧ ದೇಶದ ಆರ್ಥಿಕತೆಗೆ ಮಾರಕ ಹೊಡೆತ ನೀಡಲಿದೆ, ಎರಡು ಪ್ರತಿಶತದಷ್ಟು ಜಿಡಿಪಿ ಬೆಳವಣಿಗೆ ದರ ಕುಸಿಯಲಿದೆ, ನೋಟು ನಿಷೇಧ ಎನ್ನುವುದು organized loot and legalized plunder’ ಎಂದು ಹೇಳಿದ್ದು ಮಾತ್ರವಲ್ಲ, ‘ಮಾತು ಮಾತಿಗೆ in the long run ನಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಹೇಳಲಾಗುತ್ತದೆ, ಆದರೆ in the long run all are dead (ದೀರ್ಘಾವಧಿಯಲ್ಲಿ ಎಲ್ಲರೂ ಸತ್ತಿರುತ್ತಾರೆ)’ ಎಂದಿದ್ದರು ಕೂಡಾ.</p>



<p>ಮೋದಿ ಪ್ರಧಾನಿಯಾಗುವುದಾದರೆ ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ, It will be a disaster, if Modi becomes Prime Minister (ಮೋದಿ ಪ್ರಧಾನಿಯಾದರೆ ಅದೊಂದು ವಿಪತ್ತು ಎನಿಸಿಕೊಳ್ಳಲಿದೆ) ಎಂದು ಡಾ. ಸಿಂಗ್ ಹೇಳಿದ್ದರು. ಅವರು ಆಡಿದ ಭವಿಷ್ಯ ನುಡಿಯ ಒಂದೊಂದು ಪದವೂ ನಿಜವೆಂದು ರುಜುವಾತಾಯಿತು.</p>



<p>ತನ್ನ ಅಧಿಕಾರಾವಧಿಯ ಕೊನೆಗಾಲದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸ ಬೇಕಾಯಿತು. ಮಾಧ‍್ಯಮಗಳು, ವಿರೋಧಿಗಳು, ಸಿಎಜಿಯಂತಹ ಸರಕಾರಿ ಸಂಸ್ಥೆಗಳು ಎಲ್ಲರೂ ಅವರ ಮೇಲೆ ಮುಗಿಬಿದ್ದವು. ಅವರನ್ನು ಗೇಲಿ ಮಾಡಲಾಯಿತು, ಆಧಾರವೇ ಇಲ್ಲದೆ ಅವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಕಟಕಟೆಯಲ್ಲಿ ನಿಲ್ಲಿಸಲಾಯಿತು. ಇಂತಹ ಸಂದರ್ಭದಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನೋವಿನಿಂದ ಉತ್ತರಿಸಿದ ಅವರು, ತನ್ನ ನಡೆಗಳನ್ನು ಸಮರ್ಥಿಸಿಕೊಳ್ಳುತ್ತಾ, History will be kinder to me than the contemporary media or the opposition parties in parliament (ಸಮಕಾಲೀನ ಮೀಡಿಯಾ ಮತ್ತು ಸಂಸತ್ತಿನ ವಿಪಕ್ಷಗಳಿಗಿಂತಲೂ ಇತಿಹಾಸವು ನನ್ನ ಬಗ್ಗೆ ದಯೆಯಿಂದ ವರ್ತಿಸುತ್ತದೆ; ಅರ್ಥಾತ್ ಇತಿಹಾಸ ನನ್ನ ಕೊಡುಗೆ ಸ್ಮರಿಸುತ್ತದೆ) ಅಂದಿದ್ದರು.</p>



<p>ಈಗ ಅನೇಕರಿಗೆ ಮೋದಿಯವರಿಗಿಂತ ಮನಮೋಹನ್ ಸಿಂಗ್ ಸಾವಿರ ಪಾಲು ಉತ್ತಮ ಅನಿಸುತ್ತಿದ್ದು, ಡಾ ಸಿಂಗ್ ಅವರ ಭವಿಷ್ಯವಾಣಿ ಕೇವಲ ಹತ್ತು ವರ್ಷಗಳಲ್ಲಿ ನಿಜವಾಯಿತು.</p>



<p><strong>ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎದುರಿಸಿದ ಸವಾಲುಗಳು</strong></p>



<figure class="wp-block-image size-full"><img loading="lazy" decoding="async" width="611" height="502" src="https://peepalmedia.com/wp-content/uploads/2023/11/WhatsApp-Image-2023-11-14-at-2.20.23-PM.jpeg" alt="" class="wp-image-32144" srcset="https://peepalmedia.com/wp-content/uploads/2023/11/WhatsApp-Image-2023-11-14-at-2.20.23-PM.jpeg 611w, https://peepalmedia.com/wp-content/uploads/2023/11/WhatsApp-Image-2023-11-14-at-2.20.23-PM-300x246.jpeg 300w, https://peepalmedia.com/wp-content/uploads/2023/11/WhatsApp-Image-2023-11-14-at-2.20.23-PM-150x123.jpeg 150w" sizes="auto, (max-width: 611px) 100vw, 611px" /></figure>



<p>History will be kinder to me ಎಂದು ಡಾ ಸಿಂಗ್ ಹೇಳಿದರಲ್ಲ, ಅದು ಜಗತ್ತಿನ ಅನೇಕ ರಾಜಕೀಯ ನಾಯಕರಿಗೆ ಅನ್ವಯಿಸುತ್ತದೆ. ಬದುಕಿದ್ದಾಗ ಅವರ ಬೆಲೆ ತಿಳಿಯುವುದಿಲ್ಲ. ಆದರೆ ಅವರ ಕೆಲಸವನ್ನು ಮುಂದೆ ಇತಿಹಾಸ ಸ್ಮರಿಸುತ್ತದೆ. ಈ ಮಾತು ಅತ್ಯಂತ ಹೆಚ್ಚು ಅನ್ವಯವಾಗುವುದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ.</p>



<p>ಜನವರಿ 30, 1948 ರಂದು ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಗುಂಡು ಹೊಡೆದು ಸಾಯಿಸಿದಾಗ ನೆಹರೂ ಅವರು ತನ್ನ ಬಹುದೊಡ್ಡ ಗುರು ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡರು. ಆಗಿನ ಅತ್ಯುನ್ನತ ಮತ್ತು ಮಹಾನ್ ನಾಯಕ ಎಂಬ ನೆಲೆಯಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡ ಪಂಡಿತ್ ನೆಹರೂ ಅವರು, ತಮ್ಮ ವರ್ಚಸ್ಸಿನ ಕಾರಣ ಜನರ ಮೇಲೆ ಒಂದು ಮಾಂತ್ರಿಕ ಹಿಡಿತ ಹೊಂದಿದ್ದರು. ಅವರು ದೇಶದಲ್ಲಿ ಮಾತ್ರವಲ್ಲ ದೇಶದಾಚೆಗೂ ಪ್ರಭಾವಿಯಾಗಿದ್ದರು.</p>



<p>ಮಹಾತ್ಮಾ ಗಾಂಧಿಯ ಆನಂತರ ದೇಶದ ಸರಿಸಾಟಿಯಿಲ್ಲದ ನಾಯಕನಾಗಿ ನೆಹರೂ ಹೊರಹೊಮ್ಮಿದಾಗ ದೇಶದ ಸಂವಿಧಾನ ಇನ್ನೂ ರಚನೆಯಾಗಿರಲಿಲ್ಲ. ದೇಶದ ಖಜಾನೆ ಖಾಲಿಯಿತ್ತು. ಒಂದು ಕಾಲದ ಬಹು ಶ್ರೀಮಂತ ಪರಂಪರೆಯನ್ನು ಹೊಂದಿದ್ದ ದೇಶವನ್ನು ಕ್ಷಾಮದಿಂದ ಬಳಲುತ್ತಿರುವ ಕಡು ಬಡ ರಾಷ್ಟ್ರವನ್ನಾಗಿ ಮಾಡಿಹೋಗಿದ್ದರು ಬ್ರಿಟಿಷರು. ದೇಶ ಬಡತನ, ಅನಕ್ಷರತೆ, ಆರೋಗ್ಯ ಪಾಲನಾ ವ್ಯವಸ್ಥೆಗಳ ಕೊರತೆ, ನಿರುದ್ಯೋಗ ಹೀಗೆ ನಾನಾ ರೀತಿಯ ಸಮಸ್ಯೆಗಳಿಂದ ದೇಶ ಬಳಲುತ್ತಿತ್ತು.</p>



<p>ಅನೇಕ ತುಂಡರಸರು ಮತ್ತು ದೊಡ್ಡ ಭೂಮಾಲೀಕರಿಂದ ದೇಶವು ಛಿದ್ರವಾಗಿ ಹೋಗಿತ್ತು. ತಮ್ಮ ಒಡೆದು ಆಳುವ ನೀತಿಯ ಭಾಗವಾಗಿ ಬ್ರಿಟಿಷರು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷದ ಕಿಚ್ಚು ಹಚ್ಚಿಹೋಗಿದ್ದರು. ಆ ಕಿಚ್ಚು ಧಗಧಗಿಸುತ್ತಿತ್ತು. ಇಂತಹ ದೇಶವನ್ನು ಬಲಿಷ್ಠವಾಗಿ ಕಟ್ಟಿ ನಿಲ್ಲಿಸುವುದು ಬಹುದೊಡ್ಡ ಸವಾಲಾಗಿತ್ತು.</p>



<p>ಗಾಂಧಿ ಇಲ್ಲದ ಕಾರಣ ಈ ಕಳವಳಗಳಿಗೆ ನಿರ್ಣಾಯಕ ಉತ್ತರ ಕೊಡುವವರಿರಲಿಲ್ಲ. ನೆಹರೂ ಅವರ ಸಂಗಡಿಗರು ಬುದ್ಧಿವಂತರಾಗಿದ್ದರೂ, ಅವರು ನೆಹರೂ ಅವರಷ್ಟು ಪ್ರಭಾವ ಹೊಂದಿರಲಿಲ್ಲ. ಹಾಗಾಗಿ ನೆಹರೂ ಅವರು ದೇಶದ ನೇತೃತ್ವ ವಹಿಸುವುದು ಅನಿವಾರ್ಯವಾಯಿತು.</p>



<p><strong>ಪ್ರಜಾತಂತ್ರದಲ್ಲಿ ಅಚಲ ನಂಬಿಕೆ</strong></p>



<p>ನೆಹರೂ ಅವರು ಆಗ ಹೊಸದಾಗಿ ಸ್ವತಂತ್ರಗೊಂಡ ಆಫ್ರಿಕನ್ ದೇಶಗಳಂತೆ, ಹುಸಿ ರಾಷ್ಟ್ರವಾದದ ಆಶಾವಾದ ಮತ್ತು ಅಸೀಮ ಅಧಿಕಾರ ಕೈವಶ ಮಾಡಿಕೊಂಡು ಸರ್ವಾಧಿಕಾರದ ಹಾದಿಯಲ್ಲಿ ಸಾಗಬಹುದಿತ್ತು. ಆದರೆ ಅವರು ಆ ಹಾದಿ ಹಿಡಿಯಲಿಲ್ಲ. ಪ್ರಜಾತಂತ್ರದ ಹಾದಿ ಹಿಡಿದರು. ಪ್ರಬಲ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಕಟ್ಟಿ ನಿಲ್ಲಿಸಿದರು.</p>



<p>1952 ರಲ್ಲಿಯಂತೂ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ನೆಹರೂ ಕೈ ಇನ್ನೂ ಗಟ್ಟಿಯಾಯಿತು. ಅವರು ಇಲ್ಲಿ ಬಹುಪಕ್ಷೀಯ ಪ್ರಜಾತಂತ್ರ ಇರದಂತೆ ಮಾಡಬಹುದಿತ್ತು. ಸದಾಕಾಲವೂ ಒಂದೇ ಪಕ್ಷವು ಅಧಿಕಾರದಲ್ಲಿರಬಹುದಾಗಿತ್ತು.</p>



<p>ಆದರೆ, ಅವರು ಹಾಗೆ ಮಾಡಲಿಲ್ಲ. ಅವರಿಗೆ ಪ್ರಜಾತಂತ್ರದ ಬಗ್ಗೆ ಅಪಾರ ಒಲವು ಇತ್ತು. ಸರ್ವರಿಗೂ ಮೂಲಭೂತ ಹಕ್ಕು ನೀಡುವುದು, ಸೆಕ್ಯುಲರಿಸಂ, ಸಾಮಾಜಿಕ ಅಸಮಾನತೆ ಮತ್ತು ವಿಭಜನೆ ನಿವಾರಿಸುವ ಒಂದು ಪ್ರಭುತ್ವ ಕಾರ್ಯ ನೀತಿ, ಸಾರ್ವತ್ರಿಕ ವಯಸ್ಕ ಮತದಾನ ಅಧಿಕಾರ, ಮತ್ತು ಹಿಂದೂ ಕೋಡ್ ಬಿಲ್ ಈ ಎಲ್ಲವುಗಳೆಡೆಗೆ ಜವಾಹರಲಾಲ್ ನೆಹರೂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ನಿಷ್ಠೆಯಿಂದ ದುಡಿದರು.</p>



<p>ನೆಹರೂ ಅವರ ಆರ್ಥಿಕ ಆಲೋಚನೆಗಳ ಮೇಲೆ ಮಾರ್ಕ್ಸ್ ವಾದದ ಪ್ರಭಾವ ಇದ್ದರೂ, ಅವರು ಮಾರ್ಕ್ಸ್&nbsp; ವಾದವನ್ನು ಸಂಪೂರ್ಣ ಆವಾಹಿಸಿಕೊಳ್ಳಲಿಲ್ಲ. ಅವರ ಮೇಲೆ ಗಾಂಧೀಜಿಯ ವ್ಯಕ್ತಿತ್ವದ ಪ್ರಭಾವ ಹೆಚ್ಚೇ ಇತ್ತು.</p>



<p>ಗಾಂಧಿಯದ್ದು ಒಂದು ಸಂಕೀರ್ಣ ವ್ಯಕ್ತಿತ್ವ. ಸಾಮಾಜಿಕ ಸಂಪ್ರದಾಯಬದ್ಧರಾಗಿದ್ದುಕೊಂಡೇ ಅವರು ಹಿಂದೂಧರ್ಮವನ್ನು ಸೆಕ್ಯುಲರ್ ಮಾಡಲು ಯತ್ನಿಸಿದರು. ಆಧುನಿಕರಾಗಿದ್ದೂ ಬದ್ಧ ವೈಷ್ಣವ ಹಿಂದೂ ಆಗಿದ್ದರು. ಅವರ ಧಾರ್ಮಿಕ ಮತ್ತು ಸಾಂಪ್ರದಾಯಿಕ ಮನೋಭಾವ ನೆಹರೂ, ಬೋಸ್ ರಂತಹ ತರುಣ ಮನಸುಗಳಿಗೆ ಹಿನ್ನಡೆಯಾಗಲಿಲ್ಲ. ಗಾಂಧಿಯ ಜೀವನದ ಬಗೆಗಿನ ಪರಿಪೂರ್ಣ ವಿಧಾನವು ಸತ್ಯ, ಪ್ರಾಮಾಣಿತೆ ಮತ್ತು ನೈತಿಕ ಧೈರ್ಯದ ತತ್ತ್ವಗಳನ್ನು ಆಧರಿಸಿತ್ತು. ಅವರ ಸರಳ ಬದುಕು ಮತ್ತು ಆಲೋಚನೆಗಳು ನೆಹರೂ ಮೇಲೆ ಪ್ರಭಾವ ಬೀರಿತ್ತು.</p>



<p>ಶ್ರೀಮಂತ ಹಿನ್ನೆಲೆಯಿಂದ ಬಂದ ನೆಹರೂ ಅವರು ಮಹಾತ್ಮರ ಆದರ್ಶ ನಡೆನುಡಿಯ ಸಮ್ಮೋಹಕ್ಕೆ ಒಳಗಾಗಿದ್ದರು. ಹಾಗಾಗಿಯೇ ಅವರಿಗೆ ಗಾಂಧಿಯ ಸಮರ್ಥ ಶಿಷ್ಯನಾಗಿ ಸಮರ್ಪಣಾ ಭಾವದಿಂದ ದುಡಿಯುವುದು ಸಾಧ್ಯವಾಯಿತು.</p>



<figure class="wp-block-image size-large"><img loading="lazy" decoding="async" width="1024" height="640" src="https://peepalmedia.com/wp-content/uploads/2023/11/1_LELQZa98mW7lUushBRUNfQ-1024x640.jpg" alt="" class="wp-image-32145" srcset="https://peepalmedia.com/wp-content/uploads/2023/11/1_LELQZa98mW7lUushBRUNfQ-1024x640.jpg 1024w, https://peepalmedia.com/wp-content/uploads/2023/11/1_LELQZa98mW7lUushBRUNfQ-300x188.jpg 300w, https://peepalmedia.com/wp-content/uploads/2023/11/1_LELQZa98mW7lUushBRUNfQ-768x480.jpg 768w, https://peepalmedia.com/wp-content/uploads/2023/11/1_LELQZa98mW7lUushBRUNfQ-150x94.jpg 150w, https://peepalmedia.com/wp-content/uploads/2023/11/1_LELQZa98mW7lUushBRUNfQ-696x435.jpg 696w, https://peepalmedia.com/wp-content/uploads/2023/11/1_LELQZa98mW7lUushBRUNfQ-1068x668.jpg 1068w, https://peepalmedia.com/wp-content/uploads/2023/11/1_LELQZa98mW7lUushBRUNfQ.jpg 1400w" sizes="auto, (max-width: 1024px) 100vw, 1024px" /></figure>



<p><strong>ಆಧುನಿಕ ಭಾರತಕ್ಕೆ ಅಡಿಪಾಯ</strong></p>



<p>ಅವರಿಗೆ ವಿಜ್ಞಾನದಲ್ಲಿ ಅಪಾರ ನಂಬಿಕೆ ಇತ್ತು. ವೈಜ್ಞಾನಿಕ ಮತ್ತು ತಂತ್ರಜ್ಞಾನೀಯ ಮನೋಭಾವ ಅವರಲ್ಲಿ ಮೈಗೂಡಿತ್ತು. ವಿಜ್ಞಾನದ ವಿದ್ಯಾರ್ಥಿಯಾಗಿ ನೆಹರೂ ಅವರು ಕೇಂಬ್ರಿಜ್ ವಿವಿಯಲ್ಲಿ ಭೌತಶಾಸ್ತ್ರ, ಕೆಮಿಸ್ಟ್ರಿ ಓದಿದ್ದವರು ಕೂಡಾ.</p>



<p>1927 ರಲ್ಲಿ ಮಾಡಿದ ರಶ‍್ಯಾ ಪ್ರವಾಸ ನೆಹರೂ ಅವರ ವಿಶ‍್ವದೃಷ್ಟಿಯ ಮೇಲೆ ಅಳಿಸಲಾಗದ ಗುರುತು ಮೂಡಿಸಿತು. ಆದರೆ ರಶ್ಯಾದ ಕ್ರಾಂತಿಯ ಲಾಭಗಳ ಜತೆಯಲ್ಲಿಯೇ ಅದರ ಲೋಪಗಳ ಬಗ್ಗೆಯೂ ನೆಹರೂಗೆ ಅರಿವಿತ್ತು.</p>



<p>ನೆಹರೂಗೆ ಭಾರತದ ಪ್ರಾಚೀನ ವೈವಿಧ‍್ಯಮಯ ಮೌಲ್ಯಗಳ ಬಗ್ಗೆ ಸಾಂಸ್ಕೃತಿಕ ಅಂಶಗಳ ಬಗ್ಗೆ ಅಭಿಮಾನ &nbsp;ಇತ್ತು. ಗಾಂಧಿಯ ಆದರ್ಶಗಳನ್ನು ವಾಸ್ತವಕ್ಕೆ ಇಳಿಸುವ ತುಡಿತವಿತ್ತು. ಹಾಗಾಗಿ ನೆಹರೂ ಅವರು ವೈಜ್ಞಾನಿಕ ಮನೋಭಾವ ಅಪ್ಪಿಕೊಳ್ಳುತ್ತಲೇ ಭಾರತವನ್ನು ಜನಾಂಗೀಯ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಒಳಗೊಂಡ ಸ್ವತಂತ್ರ ಸೆಕ್ಯುಲರ್ ದೇಶವಾಗಿ ರೂಪಿಸುವ ಕನಸು ಕಂಡರು. ಭಾರೀ ಕೈಗಾರಿಕೆಯಿಂದ ಹಿಡಿದು, ಅಣೆಕಟ್ಟುಗಳು, ಅಣುವಿದ್ಯುತ್ ನಿಂದ ಹಿಡಿದು ರಾಕೆಟ್ ವರೆಗೆ ಎಂಜೀನಿಯರಿಂಗ್ ಮಹಾಸಾಧನೆಗೆ ಬಲಿಷ್ಠ ಅಡಿಪಾಯ ಹಾಕುವ ದೂರದೃಷ್ಟಿಯ ದೃಷ್ಟಾರ ಆಗಿದ್ದರು ನೆಹರೂ.</p>



<p>ಒಂದೆಡೆಯಲ್ಲಿ ಭಾರತವು ಸಾಂವಿಧಾನಿಕ ಪ್ರಜಾತಂತ್ರವಾಗಿ ಹೊರಹೊಮ್ಮುವಾಗ ಭಾರತವನ್ನು ವೈಜ್ಞಾನಿಕ ಅವಿಷ್ಕಾರ ಮತ್ತು ತಂತ್ರಜ್ಞಾನೀಯ ಅಭಿವೃದ್ಧಿಯ ಆಧುನಿಕ ಯುಗಕ್ಕೆ ಒಯ್ಯುವ ಬಗ್ಗೆ ನೆಹರೂ ಹೆಚ್ಚು ಆಸಕ್ತಿ ಹೊಂದಿದ್ದರು. ಐಐಟಿಗಳು, ಏಮ್ಸ್ ಗಳು ಮತ್ತು ಇತರ ಪ್ರೀಮಿಯರ್ ಅಧ್ಯಯನ ಸಂಸ್ಥೆಗಳು ಮತ್ತು ಸಂಶೋಧನೆ ಗೆ ಬಲವಾದ ಅಡಿಪಾಯ, ನ್ಯೂಕ್ಲಿಯರ್ ಕಾರ್ಯಕ್ರಮ, ಬಾಕ್ರಾ ನಂಗಲ್ ಅಣೆಕಟ್ಟೆಯ ಯೋಜನೆ ಮತ್ತು ಅದೇ ತೆರನ ನದಿ ಕಣಿವೆ ಅಭಿವೃದ್ಧಿ ಯೋಜನೆಗೆ ನಾಂದಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬ್ಯಾಂಕಿಂಗ್ ವಲಯ, ಭಾರೀ ಕೈಗಾರಿಕೆಗಳಲ್ಲಿ ಹಣಕಾಸು ಹೂಡಿಕೆಯ ನಾನಾ ಆರ್ಥಿಕ ಪಾಲಿಸಿಗಳು … ಇವೆಲ್ಲ ಮಹಾನ್ ರಾಷ್ಟ್ರವೊಂದನ್ನು ಕಟ್ಟುವೆಡೆಗಿನ ನೆಹರೂ ಅವರ ಮುಂಗಾಣ್ಕೆಗಳಾಗಿದ್ದವು.</p>



<p>ಸೋವಿಯತ್ ನ ಕೈಗಾರಿಕೀಕರಣದಿಂದ ಪ್ರಭಾವಿತರಾದ ನೆಹರೂ ಅವರು ಭಾರತದಲ್ಲಿ ಕೈಗಾರಿಕಾ ನೆಲೆ ನಿರ್ಮಿಸುವಲ್ಲಿ ರಶ್ಯನ್ ನೆರವು ಮತ್ತು ತಾಂತ್ರಿಕ ನೆರವು ಪಡೆದುಕೊಂಡರು. ಭಾರತದ ವಿಜ್ಞಾನಿಗಳನ್ನು ಹುರಿದುಂಬಿಸಿದರು ಮತ್ತು ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಮುಕ್ತ ಅವಕಾಶ ನೀಡಿದರು. ಸಾಹಿತ್ಯ, ಕಲೆ ಮತ್ತು ಸಿನಿಮಾ ಕ್ಷೇತ್ರಗಳಲ್ಲಿಯೂ ಇದೇ ಮನೋಭಾವ ತೋರಿದರು.</p>



<figure class="wp-block-image size-full"><img loading="lazy" decoding="async" width="1228" height="909" src="https://peepalmedia.com/wp-content/uploads/2023/11/Kamala_and_Jawaharlal_Nehru.jpg" alt="" class="wp-image-32147" srcset="https://peepalmedia.com/wp-content/uploads/2023/11/Kamala_and_Jawaharlal_Nehru.jpg 1228w, https://peepalmedia.com/wp-content/uploads/2023/11/Kamala_and_Jawaharlal_Nehru-300x222.jpg 300w, https://peepalmedia.com/wp-content/uploads/2023/11/Kamala_and_Jawaharlal_Nehru-1024x758.jpg 1024w, https://peepalmedia.com/wp-content/uploads/2023/11/Kamala_and_Jawaharlal_Nehru-768x568.jpg 768w, https://peepalmedia.com/wp-content/uploads/2023/11/Kamala_and_Jawaharlal_Nehru-150x111.jpg 150w, https://peepalmedia.com/wp-content/uploads/2023/11/Kamala_and_Jawaharlal_Nehru-485x360.jpg 485w, https://peepalmedia.com/wp-content/uploads/2023/11/Kamala_and_Jawaharlal_Nehru-696x515.jpg 696w, https://peepalmedia.com/wp-content/uploads/2023/11/Kamala_and_Jawaharlal_Nehru-1068x791.jpg 1068w" sizes="auto, (max-width: 1228px) 100vw, 1228px" /><figcaption class="wp-element-caption">Indian statesman Jawaharlal Nehru (1869 &#8211; 1964), known as Pandit Nehru, and his wife Kamala on their wedding day, 8th February 1916. (Photo by Keystone/Getty Images)</figcaption></figure>



<p><strong>ಇತಿಹಾಸದಿಂದ ನೆಹರೂವನ್ನು ಅಳಿಸಿಹಾಕುವುದು ಅಸಾಧ್ಯ</strong></p>



<p>ನೆಹರೂ ಅವರ ಹೆಸರಿಗೆ ಮಸಿ ಬಳಿಯುವುದು, ಅವರನ್ನು ಕೆಟ್ಟವರನ್ನಾಗಿ ಬಿಂಬಿಸುವುದು ಇವೆಲ್ಲ ಹಿಂದುತ್ವವಾದಿಗಳ ಅತ್ಯಂತ ಪ್ರಿಯವಾದ ಕೆಲಸವಾಗಿದೆ. ಇದಕ್ಕಾಗಿ ಪಠ್ಯಪುಸ್ತಕಗಳ ಸಹಿತ ಎಲ್ಲೆಡೆಯಿಂದಲೂ ನೆಹರೂ ನೆನಪನ್ನು ಅಳಿಸಿಹಾಕುವುದು, &nbsp;ನೆಹರೂ ಪ್ರತಿಮೆಯನ್ನು ಆನಂದಭವನದಿಂದ ತೆಗೆಯುವುದು, ಫೇಕ್ ಫೋಟೋ ಶಾಪ್ ಇಮೇಜುಗಳನ್ನು ಹರಡುವುದು, ಅವಮಾನಕಾರಿ ಕಮೆಂಟ್ ಗಳನ್ನು ಹಾಕುವುದು ಇತ್ಯಾದಿ ಚಿಲ್ಲರೆ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಸ್ವಾತಂತ್ರ್ಯದ ಏಳು ದಶಕಗಳ ಬಳಿಕವೂ ನೆಹರೂ ಅವರ ಶ್ರೇಷ್ಠತೆ ಮುಕ್ಕಾಗದೆ ಉಳಿದುಕೊಂಡಿದೆ. ಭಾರತದ ರಾಜಕಾರಣಿಗಳನ್ನು ಉಲ್ಲೇಖಿಸುವಾಗಲೆಲ್ಲ ಜಗತ್ತು ನೆಹರೂ ಅವರನ್ನು ತಪ್ಪದೆ ನೆನಪಿಸಿ ಕೊಳ್ಳುತ್ತದೆ. ನೆಹರೂ ಅವರನ್ನು ಪಠ್ಯದಿಂದ, ಬೀದಿಯಿಂದ, ಮ್ಯೂಸಿಯಂ ಗಳಿಂದ ತೆಗೆಯಬಹುದು, ಆದರೆ ಇತಿಹಾಸದಿಂದ ತೆಗೆಯುವುದು ಅಸಾಧ್ಯ.</p>



<p><strong>ನೆಹರೂ ಕಟ್ಟಿದ್ದನ್ನು ಮೋದಿ ಮಾರುತ್ತಿದ್ದಾರೆ</strong><strong></strong></p>



<p>ಕಡುಕಷ್ಟದ ಆರಂಭದ ವರ್ಷಗಳಲ್ಲಿ ನೆಹರೂ ಅವರ ಮಾರ್ಗದರ್ಶನ ಪಡೆದ ಭಾರತ ನಿಜಕ್ಕೂ ಭಾಗ್ಯಶಾಲಿಯಾಗಿದೆ. ಟೊಳ್ಳು ಮಾತುಗಳ ಮೂಲಕವಲ್ಲ, ಏನೂ ಇಲ್ಲದ ಸ್ಥಿತಿಯಿಂದ ಎಲ್ಲವೂ ಇರುವ ಬಲಿಷ್ಠ ಸ್ಥಿತಿಗೆ ದೇಶವನ್ನು ಅವರು ಮುನ್ನಡೆಸಿದರು.</p>



<p>70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿಯವರು, ನೆಹರೂ ಅಂದು ಕಟ್ಟಿದ ಸಾರ್ವಜನಿಕ ರಂಗದ ಸಂಸ್ಥೆಗಳು ಮತ್ತು ಬ್ಯಾಂಕ್ ಗಳನ್ನೇ&nbsp; ಮಾರುತ್ತಾ, ಖಾಲಿ ಬಿದ್ದ ಖಜಾನೆಯನ್ನು ತುಂಬಿಸುತ್ತಿದ್ದಾರೆ. ರಾಷ್ಟ್ರೀಯ ಸಂಪತ್ತು ಸೃಷ್ಟಿಸುವ ಸಾಮರ್ಥ್ಯ ಕ್ಷಮತೆಯನ್ನಾಗಲೀ, ತಿಳಿವಳಿಕೆಯನ್ನಾಗಲೀ ಹೊಂದಿರದ ಮೋದಿ ಸಾಹೇಬರಿಗೆ ನೆಹರೂ ಅವರನ್ನಾಗಲೀ, ನೆಹರೂ ಅವರ ದೂರದೃಷ್ಟಿಯನ್ನಾಗಲೀ ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ.</p>



<p>ಸತ್ಯ ಏನೆಂದರೆ, ಸಾವಿರ ಸುಳ್ಳುಗಳು ಕೂಡಾ ಪಂಡಿತ್ ನೆಹರೂ ಅವರ ಎತ್ತರದ ವ್ಯಕ್ತಿತ್ವವನ್ನು ಸಣ್ಣದಾಗಿಸದು. ಅವರು ಆಧುನಿಕ ಭಾರತಕ್ಕೆ ಮತ್ತು &nbsp;ಚೈತನ್ಯಶೀಲ ಪ್ರಜಾತಂತ್ರಕ್ಕೆ&nbsp; ಬಲವಾದ ಅಡಿಪಾಯ ಹಾಕಿದರು. ಅದನ್ನು ಕಳಚಿಹಾಕುವ ಯಾವ ಯತ್ನವೂ, ಎಂದಿಗೂ ಯಶಸ್ವಿಯಾಗದು. ಇಂತಹ ಮಹೋನ್ನತ ನಾಯಕನನ್ನು ನೆನಪಿಸಿಕೊಳ್ಳುವುದರಿಂದ ಮತ್ತು ಆತನ ಕೆಲಸಗಳನ್ನು ಮೆಲುಕು ಹಾಕುವುದರಿಂದ ನಮ್ಮ ತಿಳಿವಳಿಕೆ ಹೆಚ್ಚೀತು, ಮಾತ್ರವಲ್ಲ ಆಶಾವಾದದ ಒಂದು ಬೆಳಕಿನ ಕಿರಣವೂ ದಕ್ಕೀತು.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p>ಚಿಂತಕರು</p>



<p><strong><sub><a href="https://peepalmedia.com/?page_id=32141" data-type="page" data-id="32141">ಇದನ್ನೂ ಓದಿ- </a></sub></strong><a href="https://peepalmedia.com/?page_id=32142" data-type="page" data-id="32142"><sub>ಮನೆಯೇ ಮೊದಲ ಪಾಠಶಾಲೆ – ಕಲಿಕೆಯಾದ್ರೂ ಎಂಥದ್ದು?!</sub></a><a href="https://peepalmedia.com/home-is-the-first-school-what-is-learning/" data-type="link" data-id="https://peepalmedia.com/home-is-the-first-school-what-is-learning/"><sub>https://peepalmedia.com/home-is-the-first-school-what-is-learning/</sub></a></p>
]]></content:encoded>
					
		
		
			</item>
		<item>
		<title>ಉಕ್ರೇನ್, ಪ್ಯಾಲೆಸ್ಟೈನ್: ಪಶ್ಚಿಮದ ಇಬ್ಬಗೆಯ ನೀತಿ</title>
		<link>https://peepalmedia.com/ukraine-palestine-the-wests-double-policy/</link>
		
		<dc:creator><![CDATA[Shrinivas Karkala]]></dc:creator>
		<pubDate>Mon, 30 Oct 2023 11:55:40 +0000</pubDate>
				<category><![CDATA[ಅಂಕಣ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=30756</guid>

					<description><![CDATA[ಭಾರತವು ತನ್ನ ಸ್ವಾತಂತ್ರ್ಯದ ದಿನಗಳಿಂದಲೂ ತನ್ನದೇ ಆದ ವಿದೇಶ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ನೊಂದವರ ಸಹಾಯಕ್ಕೆ ನಿಲ್ಲುವ ತನ್ನ ನೀತಿಯ ಭಾಗವಾಗಿ ಪ್ಯಾಲೆಸ್ಟೈನ್ ಪರವಾಗಿ ಸದಾ ಕಾಲ ಬೆಂಬಲ ನೀಡುತ್ತ ಬಂದಿತ್ತು. ಬುದ್ಧ, ಮಹಾವೀರ, ಗಾಂಧಿಯಂತಹ ಅಹಿಂಸಾಪರ, ಶಾಂತಿಪ್ರಿಯ ಮತ್ತು ಶಾಂತಿಪರ ದೇಶ ಮೊನ್ನೆ ಶಾಂತಿ ಪ್ರಸ್ತಾವವನ್ನು ಬೆಂಬಲಿಸದೆ ಅಪಾಯಕಾರಿ ಹೆಜ್ಜೆ ಇರಿಸಿತು. ಅಮೆರಿಕದ ಅಡಿಯಾಳಿನಂತೆ ವರ್ತಿಸುವುದರಿಂದ&#160; ಮುಂದಿನ ದಿನಗಳಲ್ಲಿ ಭಾರತ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸರಕಾರಗಳು ಬದಲಾಗಬಹುದು. ಆದರೆ ತಾತ್ಕಾಲಿಕ ಲಾಭಕ್ಕಾಗಿ ದೇಶದ ದೀರ್ಘಕಾಲೀನ ವಿದೇಶಾಂಗ [&#8230;]]]></description>
										<content:encoded><![CDATA[
<p class="has-vivid-red-color has-text-color has-background" style="background-color:#abb7c238"><strong><sub>ಭಾರತವು ತನ್ನ ಸ್ವಾತಂತ್ರ್ಯದ ದಿನಗಳಿಂದಲೂ ತನ್ನದೇ ಆದ ವಿದೇಶ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ನೊಂದವರ ಸಹಾಯಕ್ಕೆ ನಿಲ್ಲುವ ತನ್ನ ನೀತಿಯ ಭಾಗವಾಗಿ ಪ್ಯಾಲೆಸ್ಟೈನ್ ಪರವಾಗಿ ಸದಾ ಕಾಲ ಬೆಂಬಲ ನೀಡುತ್ತ ಬಂದಿತ್ತು. ಬುದ್ಧ, ಮಹಾವೀರ, ಗಾಂಧಿಯಂತಹ ಅಹಿಂಸಾಪರ, ಶಾಂತಿಪ್ರಿಯ ಮತ್ತು ಶಾಂತಿಪರ ದೇಶ ಮೊನ್ನೆ ಶಾಂತಿ ಪ್ರಸ್ತಾವವನ್ನು ಬೆಂಬಲಿಸದೆ ಅಪಾಯಕಾರಿ ಹೆಜ್ಜೆ ಇರಿಸಿತು. ಅಮೆರಿಕದ ಅಡಿಯಾಳಿನಂತೆ ವರ್ತಿಸುವುದರಿಂದ&nbsp; ಮುಂದಿನ ದಿನಗಳಲ್ಲಿ ಭಾರತ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸರಕಾರಗಳು ಬದಲಾಗಬಹುದು. ಆದರೆ ತಾತ್ಕಾಲಿಕ ಲಾಭಕ್ಕಾಗಿ ದೇಶದ ದೀರ್ಘಕಾಲೀನ ವಿದೇಶಾಂಗ ನೀತಿ ಬದಲಾಗಬಾರದು. ಇದನ್ನು ಮೋದಿ ಸರಕಾರ ಅರ್ಥಮಾಡಿಕೊಳ್ಳದಿರುವುದು ವಿಷಾದದ ಸಂಗತಿ- <mark style="background-color:rgba(0, 0, 0, 0)" class="has-inline-color has-black-color">ಶ್ರೀನಿವಾಸ ಕಾರ್ಕಳ </mark></sub></strong></p>



<p>ಉಕ್ರೇನ್ ಮೇಲೆ ರಶ್ಯಾ ಧಾಳಿ ನಡೆಸಿ, ಆ ಎರಡು ದೇಶಗಳ ನಡುವೆ ಯುದ್ಧ ಆರಂಭವಾಗಿ, ಸುಮಾರು ಒಂದೂವರೆ ವರ್ಷದ ಮೇಲಾಯಿತು. ಅಪಾರ ಸಾವು ನೋವು, ಆಸ್ತಿಪಾಸ್ತಿ ನಷ್ಟ ಸಂಭವಿಸಿದವು. ಈಗಲೂ ಯುದ್ಧ ಮುಂದುವರಿದೇ ಇದೆ.</p>



<p>ಉಕ್ರೇನ್ ಮೇಲೆ ರಶ್ಯಾ ಧಾಳಿ ಆರಂಭಿಸುತ್ತಲೇ ವಿಶ್ವದ ಬಲಾಢ್ಯ ರಾಷ್ಟ್ರಗಳು, ವಿಶೇಷವಾಗಿ ನ್ಯಾಟೋ ದೇಶಗಳು ಒಂದಾಗಿ ರಶ್ಯಾದ ಕ್ರಮವನ್ನು ಉಗ್ರವಾಗಿ ಖಂಡಿಸಿದವು. ವಿಶ್ವಸಂಸ್ಥೆಯಲ್ಲಿ ರಶ್ಯಾ ವಿರುದ್ಧ ನಿರ್ಣಯ ಅಂಗೀಕಾರಗೊಳ್ಳುವಂತೆ ಮಾಡಿದವು. ರಶ್ಯಾದ ಮೇಲೆ ವ್ಯಾಪಾರ ದಿಗ್ಬಂಧನಗಳನ್ನು ವಿಧಿಸಿದವು. ಉಕ್ರೇನ್ ಗೆ ಮಿಲಿಟರಿ ಸಹಿತ ಎಲ್ಲ ನೆರವನ್ನೂ ಘೋಷಿಸಿದವು. ಉಕ್ರೇನ್ ನಲ್ಲಿ ನಾಗರಿಕರಿಗೆ ಮೂಲಭೂತ ಸವಲತ್ತುಗಳು ಸಿಗದಂತೆ ಮಾಡಿದ್ದನ್ನು ಯುದ್ಧಾಪರಾಧ ಎಂದು ಹೇಳಿದವು. ನಾಗರಿಕರ ಸಾವು ನೋವಿಗೆ ನಿರಂತರ ಕಣ್ಣೀರು ಸುರಿಸಿದವು.</p>



<p>ಈ ಎಲ್ಲ ಕ್ರಮಗಳು ಸರಿಯಾಗಿಯೇ ಇವೆ. ದುರ್ಬಲರು, ಶೋಷಿತರು, ತುಳಿತಕ್ಕೀಡಾದವರ ವಿರುದ್ಧ ಜಗತ್ತು ನಿಲ್ಲಬೇಕು. ಅದು ಮಾನವರಾಗಿ, ನಾಗರಿಕರಾಗಿ ಎಲ್ಲರೂ ಮಾಡಲೇಬೇಕಾದ ಕೆಲಸ.</p>



<figure class="wp-block-image size-full is-resized"><img loading="lazy" decoding="async" width="600" height="450" src="https://peepalmedia.com/wp-content/uploads/2023/10/1-stry.jpg" alt="" class="wp-image-30773" style="aspect-ratio:1.3333333333333333;width:693px;height:auto" srcset="https://peepalmedia.com/wp-content/uploads/2023/10/1-stry.jpg 600w, https://peepalmedia.com/wp-content/uploads/2023/10/1-stry-300x225.jpg 300w, https://peepalmedia.com/wp-content/uploads/2023/10/1-stry-150x113.jpg 150w" sizes="auto, (max-width: 600px) 100vw, 600px" /></figure>



<p><strong>ಪ್ಯಾಲೆಸ್ಟೈನ್ ಸಮಸ್ಯೆ</strong></p>



<p>ಪ್ಯಾಲೆಸ್ಟೈನ್ ಜನರು ತಮ್ಮ ಸ್ವಾತಂತ್ರ್ಯ ಕಳೆದುಕೊಂಡು, ತಮಗೊಂದು ಸಾರ್ವಭೌಮ ದೇಶವೇ ಇಲ್ಲದೆ, ಇಸ್ರೇಲ್ ನಿಂದ ನಿರಂತರ ಶೋಷಣೆಗೆ, ಧಾಳಿಗೆ ಈಡಾಗಿ ಸರಿ ಸುಮಾರು ಎಪ್ಪತ್ತೈದು ವರ್ಷಗಳಾದವು. ಪ್ಯಾಲೆಸ್ತೀನ್ ನಾಯಕರು ವಿಶ್ವದ ಪ್ರತಿಯೊಂದು ದೇಶದ ಬಾಗಿಲನ್ನು ತಟ್ಟಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸುತ್ತಲೇ ಇದ್ದಾರೆ. ವಿಶ‍್ವಸಂಸ್ಥೆಯೂ ಈ ನಿಟ್ಟಿನಲ್ಲಿ ನಿರ್ಣಯ ಅಂಗೀಕರಿಸಿದೆ. ಆದರೆ ಪ್ಯಾಲೆಸ್ತೀನಿಯನ್ನರಿಗೆ ನ್ಯಾಯ ಇಂದಿಗೂ ದೊರಕಿಲ್ಲ. ಇದು ಅಲ್ಲಿನ ಜನರಲ್ಲಿ ಅಪಾರ ಅಸಹನೆಗೆ ಕಾರಣವಾಗಿದ್ದು, ಉಗ್ರಗಾಮಿ ಚಟುವಟಿಕೆಗಳು ಆರಂಭಗೊಳ್ಳಲೂ ಕಾರಣವಾಗಿವೆ. ಶೋಷಕನನ್ನು ನೇರ ಎದುರಿಸಲು ಅಗತ್ಯ ಸಾಮರ್ಥ್ಯ ಇಲ್ಲದೆ ಹೋದಾಗ, ಪರೋಕ್ಷ ದಾರಿಗಳನ್ನು ಕಂಡುಕೊಳ್ಳುವುದು ಮಾನವ ಸಹಜ ಗುಣ.</p>



<p>ಇದರ ಮುಂದುವರಿದ ಭಾಗವೇ ಎಂಬಂತೆ ಕಳೆದ ಅಕ್ಟೋಬರ್ 7 ರಂದು ಗಾಜಾದ ಹಮಾಸ್ ಸಂಘಟನೆ ಇಸ್ರೇಲ್ ಮೇಲೆ ಹಠಾತ್ ಎರಗಿತು. ಇಸ್ರೇಲ್ ನಂತಹ ಇಸ್ರೇಲ್ ದೇಶವೇ ಬೆಚ್ಚಿಬೀಳುವ ರೀತಿಯಲ್ಲಿ ಪ್ರಹಾರಗೈದು ಅನೇಕರನ್ನು ಕೊಂದು ಹಾಕಿತು. ಕೆಲವರನ್ನು ಸೆರೆಹಿಡಿಯಿತು. ಇಸ್ರೇಲ್ ಹೇಳುವ ಪ್ರಕಾರ ಅಂದಾಜು 1400 ಮಂದಿಯ ಸಾವು ಸಂಭವಿಸಿದೆ ಮತ್ತು 200 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ.</p>



<p>ಇಸ್ರೇಲ್ ಮೇಲೆ ಧಾಳಿ ನಡೆಸಿದ್ದು ಹಮಾಸ್ ಸಂಘಟನೆ. ಆದರೆ ಆಮೇಲೆ ಇಸ್ರೇಲ್ ನೀಡತೊಡಗಿದ್ದು ಗಾಜಾದ 23 ಲಕ್ಷ ನಾಗರಿಕರಿಗೆ ಸಾಮೂಹಿಕ ಶಿಕ್ಷೆ. ಭಯಂಕರ ಮಿಲಿಟರಿ ಶಕ್ತಿಯಾದ ಇಸ್ರೇಲ್ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳ ಬೆಂಬಲದೊಂದಿಗೆ ಗಾಜಾದಲ್ಲಿ ನಡೆಸಿದ್ದು ಅಕ್ಷರಶಃ ಮಾರಣ ಹೋಮ. ಉತ್ತರ ಗಾಜಾದಿಂದ ಸುಮಾರು 13 ಲಕ್ಷ ಮಂದಿಗೆ ದಕ್ಷಿಣ ಗಾಜಾಕ್ಕೆ ಕೆಲವೇ ಗಂಟೆಗಳಲ್ಲಿ ತೆರಳಲು ಆದೇಶಿಸಿದ ಅದು ಆನಂತರ ಆರಂಭಿಸಿದ್ದು ಕಂಡು ಕೇಳರಿಯದ ನರಮೇಧ!</p>



<figure class="wp-block-image size-full is-resized"><img loading="lazy" decoding="async" width="638" height="360" src="https://peepalmedia.com/wp-content/uploads/2023/10/gettyimages-1719494043-e1697222107254.jpg" alt="" class="wp-image-30774" style="aspect-ratio:1.7722222222222221;width:686px;height:auto" srcset="https://peepalmedia.com/wp-content/uploads/2023/10/gettyimages-1719494043-e1697222107254.jpg 638w, https://peepalmedia.com/wp-content/uploads/2023/10/gettyimages-1719494043-e1697222107254-300x169.jpg 300w, https://peepalmedia.com/wp-content/uploads/2023/10/gettyimages-1719494043-e1697222107254-150x85.jpg 150w" sizes="auto, (max-width: 638px) 100vw, 638px" /><figcaption class="wp-element-caption">Photo- Getty</figcaption></figure>



<p>ಒಂದನ್ನೂ ಬಿಡದಂತೆ ವಸತಿ ಕಟ್ಟಡಗಳನ್ನೂ ನೆಲಸಮ ಗೊಳಿಸಲಾಯಿತು. ಶಾಲೆಗಳು, ಪ್ರಾರ್ಥನಾ ಮಂದಿರಗಳು, ನಿರಾಶ್ರಿತ ಶಿಬಿರಗಳು, ಕೊನೆಗೆ ಆಸ್ಪತ್ರೆಯನ್ನೂ ಬಿಡಲಿಲ್ಲ. ಇಂದಿನ ತನಕ ಇಸ್ರೇಲ್ ಬಾಂಬು ದಾಳಿಗೆ ಗಾಜಾದಲ್ಲಿ ಸತ್ತವರು 8000 ಕ್ಕೂ ಅಧಿಕ ಮಂದಿ. ಇವರಲ್ಲಿ 3000 ಕ್ಕೂ ಅಧಿಕ ಮಂದಿ ಹಸುಳೆಗಳು ಮತ್ತು ಮಕ್ಕಳು. 100 ಕ್ಕೂ ಅಧಿಕ ಮಂದಿ ವೈದ್ಯಕೀಯ ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ. 35 ಮಂದಿ ಪತ್ರಕರ್ತರನ್ನೂ ಕೊಲ್ಲಲಾಗಿದೆ.</p>



<p><strong>ಕದನ ವಿರಾಮಕ್ಕೆ ವಿರೋಧ!</strong></p>



<p>ಗಾಜಾದ ಮಂದಿಗೆ ಆಹಾರ, ನೀರು, ವಿದ್ಯುತ್, ಇಂಧನ ಎಲ್ಲವನ್ನೂ ನಿರಾಕರಿಸಲಾಗಿದೆ. ಈಗ ಇಂಟರ್ ನೆಟ್, ಮೊಬೈಲ್ ಸಂಪರ್ಕವೂ ಇಲ್ಲದಂತೆ ಮಾಡಲಾಗಿದೆ. ಹಮಾಸ್ ಮೇಲಣ ಸಿಟ್ಟನ್ನು ಅಮಾಯಕ ನಾಗರಿಕರ ಮೇಲೆ ತೀರಿಸಬಾರದು, ಯುದ್ಧಾಪರಾಧ ನಡೆಸಕೂಡದು ಎಂಬ ಆಗ್ರಹ ಕಿವುಡು ಕಿವಿಯ ಮೇಲೆ ಬಿದ್ದಂತಾಗಿದೆ. ವಿಶ್ವಸಂಸ್ಥೆಯಲ್ಲಿ ಯುದ್ಧವಿರಾಮದ ನಿರ್ಣಯಗಳನ್ನು ಅಮೆರಿಕಾ ದೇಶವೇ ತಿರಸ್ಕರಿಸುತ್ತದೆ.</p>



<p>ಮೊನ್ನೆಯಷ್ಟೇ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಯುದ್ಧವಿರಾಮದ ನಿರ್ಣಯಕ್ಕೆ 120 ದೇಶಗಳು ಬೆಂಬಲ ಸೂಚಿಸಿದರೆ, ಅಮೆರಿಕ ಸಹಿತ 14 ರಾಷ್ಟ್ರಗಳು ವಿರೋಧ ಸೂಚಿಸಿವೆ! ಭಾರತ ಸಹಿತ 45 ರಾಷ್ಟ್ರಗಳು ಗೈರು ಹಾಜರಾಗಿವೆ. ಜಗತ್ತು ಬೇರೇನನ್ನೂ ಆಗ್ರಹಿಸುತ್ತಿಲ್ಲ; ನಾಗರಿಕರನ್ನು ಕೊಲ್ಲಬೇಡಿ, ಜನರಿಗೆ ಆಹಾರ ಮತ್ತಿತರ ಅಗತ್ಯ ಸಾಮಗ್ರಿ ತಲಪಿಸಲು ಅವಕಾಶ ಕೊಡಿ ಎಂದಷ್ಟೇ. ಆದರೆ ಇಸ್ರೇಲ್ ಯಾವ ಆಗ್ರಹಕ್ಕೂ ಮಣೆ ಹಾಕುತ್ತಿಲ್ಲ.</p>



<p>ಮಿಲಿಟರಿ ದೃಷ್ಟಿಯಿಂದ ಉಕ್ರೇನ್ ಬಲಾಢ್ಯ ರಾಷ್ಟ್ರವೇ. ಹಾಗಾಗಿ ರಶ್ಯಾಕ್ಕೆ ಅದು ತಕ್ಕ ಉತ್ತರವನ್ನು ನೀಡುತ್ತಿದೆ. ಉಕ್ರೇನ್ ಮತ್ತು ರಶ್ಯಾ ನಡುವೆ ನಡೆಯುತ್ತಿರುವುದು ಯುದ್ಧ. ಯುದ್ಧ ಎಂದರೆ ಎರಡು ದೇಶಗಳ, ತರಬೇತುಗೊಂಡ ಮಿಲಿಟರಿಗಳ ನಡುವೆ ನಡೆಯುವ ಕದನ. ರಶ್ಯಾ ಬಳಿ ಸೈನಿಕರು, ಬಾಂಬು, ಟ್ಯಾಂಕ್, ಯುದ್ಧ ವಿಮಾನಗಳಿದ್ದರೆ ಉಕ್ರೇನ್ ಬಳಿಯಲ್ಲೂ ಅವೆಲ್ಲ ಇವೆ. ಉಕ್ರೇನ್ ನ ಸೈನಿಕರು ಸತ್ತಿದ್ದರೆ ರಶ್ಯಾದ ಸೈನಿಕರೂ ಸತ್ತಿದ್ದಾರೆ. ಎರಡೂ ಕಡೆಯಿಂದ ಸಮಬಲದ ಹೋರಾಟ ನಡೆಯುತ್ತಿರುವುದರಿಂದ ಯುದ್ಧ ನಿಲ್ಲುತ್ತಿಲ್ಲ. ಉಕ್ರೇನ್ ನಲ್ಲಿ ರಶ್ಯಾವು ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತರ ಶಿಬಿರಗಳ ಮೇಲೆ ಬಾಂಬು ಹಾಕಿದ ಉದಾಹರಣೆ ಇಲ್ಲ.</p>



<p>ಆದರೆ, ಪ್ಯಾಲೆಸ್ತೀನಿಯನ್ನರ ಗಾಜಾ ಮತ್ತು ಪಶ್ಚಿಮ ದಂಡೆಯದ್ದು ಹಾಗಲ್ಲ. ಇದು ಸ್ವತಂತ್ರ ರಾಷ್ಟ್ರವೂ ಅಲ್ಲ. ಅದಕ್ಕೆ ಅದರದ್ದೇ ಆದ ಸರಕಾರವೂ ಇಲ್ಲ. ಮಿಲಿಟರಿಯೂ ಇಲ್ಲ. ಗಾಜಾವನ್ನಂತೂ ಭೂಮಿಯ ಮೇಲಣ ಅತಿದೊಡ್ಡ ಸೆರೆಮನೆ ಎನ್ನಲಾಗಿದೆ. ಆ ರೀತಿಯಲ್ಲಿ ಇಸ್ರೇಲ್ ಅದನ್ನು ದಿಗ್ಬಂಧನದಲ್ಲಿರಿಸಿದೆ. 10 ಚದರ ಕಿಲೋಮೀಟರ್ ಭೂಭಾಗದಲ್ಲಿ 23 ಲಕ್ಷ ಮಂದಿ ಬದುಕುತ್ತಿದ್ದಾರೆ. ಅವರು ಬಹುತೇಕ ಬದುಕುವುದು ಹೊರಗಿನ ದೇಶಗಳ ನೆರವಿನ ಮೂಲಕ.</p>



<p>ಇಸ್ರೇಲ್ ಮಿಲಿಟರಿ ದೃಷ್ಟಿಯಿಂದ ಅತ್ಯಂತ ಬಲಾಢ್ಯ ದೇಶ. ಅತ್ಯಾಧುನಿಕ ಭೂಸೇನೆ, ವಾಯುಸೇನೆ ಅದರ ಬಳಿ ಇದೆ. ಜಗತ್ತನ್ನು ನಾಶಪಡಿಸಲು ಸಾಲುವಷ್ಟು ಬಾಂಬುಗಳು, ಕ್ಷಿಪಣಿಗಳೂ ಅದರ ಬಳಿ ಇವೆ. ಬಾಂಬುಗಳು ಕಡಿಮೆ ಬಿದ್ದರೆ ಅಮೆರಿಕಾ ಸರಬರಾಜು ಮಾಡುತ್ತದೆ. ಹಾಗಾಗಿ ಅನೇಕ ಪಟ್ಟಭದ್ರ ಹಿತಾಸಕ್ತಿಯ ಮಾಧ್ಯಮಗಳು ಮತ್ತು ರಾಷ್ಟ್ರಗಳು ಹೇಳುವಂತೆ ಅಲ್ಲಿ ನಡೆಯುತ್ತಿರುವುದು ಯುದ್ಧ ಅಲ್ಲ. ಏಕಮುಖ ಧಾಳಿ. ಇಸ್ರೇಲ್ ನ ವಾಯುಪಡೆ ಮನಬಂದಂತೆ ಹಾರಿಬಂದು ಪ್ರತಿರೋಧವೇ ಇಲ್ಲದೆ ಬಾಂಬಿನ ಮಳೆಗರೆದು ಹೋಗುತ್ತವೆ. ಗಾಜಾದ ಜನರಿಗೆ ಅನ್ನಾಹಾರ ಸಿಗದಂತೆ ನೋಡಿಕೊಳ್ಳುತ್ತದೆ. ಗಾಜಾದಿಂದ ಹೊರಹೋಗಲು ಅವಕಾಶ ಇಲ್ಲ. ಗಾಜಾದೊಳಗೆ ಇರುವಂತೆಯೂ ಇಲ್ಲ!</p>



<p><strong>ಜಗತ್ತು ಯಾರ ಪರ ನಿಲ್ಲಬೇಕು?</strong></p>



<p>ಇಂತಹ ಹೊತ್ತಿನಲ್ಲಿ ನಾಗರಿಕ ಎನಿಸಿಕೊಳ್ಳುವ ಜಗತ್ತು ಯಾರ ಪರ ನಿಲ್ಲಬೇಕು? ದುರ್ಬಲರು ಮತ್ತು ತೊಂದರೆಯಲ್ಲಿರುವವರ ಜತೆಯಲ್ಲವೇ? ರಶ್ಯಾದ ದಬ್ಬಾಳಿಕೆಗೆ ಗುರಿಯಾದ ಉಕ್ರೇನ್ ಜತೆ ನಿಲ್ಲುವ ರೀತಿಯಲ್ಲಿಯೇ, ಇಸ್ರೇಲ್ ನಿಂದ ಮುಕ್ಕಾಲು ಶತಮಾನದಿಂದ ಮತ್ತು ಮೊನ್ನೆ ಅಕ್ಟೋಬರ್ 7 ರಿಂದ ಭಯಾನಕ ರೀತಿಯಲ್ಲಿ ದೌರ್ಜನ್ಯಕ್ಕೆ ಈಡಾಗಿರುವ ಪ್ಯಾಲೆಸ್ಟೈನ್ ಜತೆಗೆ ನಿಲ್ಲಬೇಕಲ್ಲವೇ? ಗಾಜಾದಲ್ಲಿ ಬಾಂಬು ಮಳೆಗೆ ಧ್ವಂಸಗೊಂಡ ಕಟ್ಟಡಗಳು, ಆಸ್ಪತ್ರೆಗಳು, ಕ್ಷಣ ಕ್ಷಣವೂ ಸಾಯುತ್ತಿರುವ ಹಸುಳೆಗಳು ಇವನ್ನೆಲ್ಲ ನೋಡಿ ಈ ಶಕ್ತಿಗಳ&nbsp; ಮನ ಕರಗಬೇಕಿತ್ತಲ್ಲವೇ?</p>



<p>ಇಲ್ಲ, ಗಾಜಾದ ಸಂಪೂರ್ಣ ಜನತೆಯನ್ನು ನಾಶಪಡಿಸುವ ರೀತಿಯಲ್ಲಿ ಇಸ್ರೇಲ್ ಮಾತನಾಡುತ್ತಿದೆ. ಎರಡನೆ ಹಂತದ ಕಾರ್ಯಾಚರಣೆಯಾಗಿ ಭೂಕಾರ್ಯಾಚರಣೆ ನಡೆಸುವುದಾಗಿ ಅದು ಹೇಳುತ್ತಿದೆ. ಇಸ್ರೇಲ್ ಪರ ಇರುವ ಅಮೆರಿಕಾ ಮತ್ತಿತರ ದೇಶಗಳು ಕೂಡಾ ಇಸ್ರೇಲ್ ಭಾಷೆಯಲ್ಲಿಯೇ ಮಾತನಾಡುತ್ತಿವೆ. ನಾಗರಿಕರ ರಕ್ಷಣೆಗೆ, ನಾಗರಿಕರಿಗೆ ಅಗತ್ಯ ನೆರವನ್ನು ಪೂರೈಸುವ ಉದ್ದೇಶಕ್ಕೆ ‘ಮಾನವೀಯ ನೆಲೆಯ ಯುದ್ಧವಿರಾಮ’ ಘೋಷಣೆಯನ್ನೂ 14 ರಾಷ್ಟ್ರಗಳು ವಿರೋಧಿಸುತ್ತವೆ, 45 ರಾಷ್ಟ್ರಗಳು ಅದರ ಪರ ಮತ ಚಲಾಯಿಸುವುದಿಲ್ಲ ಎಂದರೆ ಏನರ್ಥ?</p>



<p>ಇದು ನೋಡಿ ಪಶ್ಚಿಮದ ದೇಶಗಳ ಇಬ್ಬಗೆಯ ನೀತಿ! ಅವರಿಗೆ ತಮ್ಮ ಹಿತಾಸಕ್ತಿ ರಕ್ಷಣೆ ಮಾತ್ರ ಮುಖ್ಯ. ಆ ಹಿತಾಸಕ್ತಿ ರಕ್ಷಣೆಗಾಗಿ ಅವರು ಯಾರನ್ನು ಬಲಿಗೊಡಲೂ ಸಿದ್ಧ. ಅಮೆರಿಕಾ ಮತ್ತದರ ಮಿತ್ರ ರಾಷ್ಟ್ರಗಳ ಇಂತಹ ಅಪಾಯಕಾರಿ ನೀತಿಯಿಂದಾಗಿ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸದಂತಾಗಿದೆ. ತಮ್ಮ ಸರಹದ್ದಿನೊಳಗೆ ಇರಬೇಕಾದ ಈ ದೇಶಗಳು ಜಗತ್ತಿನ ಪ್ರತಿಯೊಂದು ಭೂಭಾಗದ ರಾಜಕೀಯದಲ್ಲೂ ಕೈ ಹಾಕುತ್ತವೆ. ಇದೇ ಅಮೆರಿಕಾ ವಿಯೆಟ್ನಾಂ, ಇರಾಕ್, ಅಫ್ಘಾನಿಸ್ತಾನ, ಲಿಬಿಯ ಮೊದಲಾದ ದೇಶಗಳಲ್ಲಿ ಕೊಂದುದಾದರೂ ಎಷ್ಟು ಲಕ್ಷ ಮಂದಿಯನ್ನು? ಉಕ್ರೇನ್ ನ ಜನರ ಜೀವನ ಅಮೂಲ್ಯವಾದುದಾದರೆ ಪ್ಯಾಲೆಸ್ತೀನಿಯನ್ನರ ಜೀವವೂ ಅಮೂಲ್ಯ ಅಲ್ಲವೇ? ಅವರೂ ಮನುಷ್ಯರೇ ಅಲ್ಲವೇ? ಅವರ ವಿಷಯದಲ್ಲಿ ಇಬ್ಬಗೆಯ ನೀತಿ ಯಾಕೆ?</p>



<p><strong>ಭಾರತ ಹಿಡಿಯುತ್ತಿರುವ ಅಪಾಯಕಾರಿ ಹಾದಿ</strong></p>



<figure class="wp-block-image size-full is-resized"><img loading="lazy" decoding="async" width="670" height="447" src="https://peepalmedia.com/wp-content/uploads/2023/10/3910301-1972420108.jpg" alt="" class="wp-image-30775" style="aspect-ratio:1.4988814317673378;width:683px;height:auto" srcset="https://peepalmedia.com/wp-content/uploads/2023/10/3910301-1972420108.jpg 670w, https://peepalmedia.com/wp-content/uploads/2023/10/3910301-1972420108-300x200.jpg 300w, https://peepalmedia.com/wp-content/uploads/2023/10/3910301-1972420108-150x100.jpg 150w" sizes="auto, (max-width: 670px) 100vw, 670px" /><figcaption class="wp-element-caption">UAE</figcaption></figure>



<p>ಅಮೆರಿಕಾ ಒಂದು ಮಿಲಿಟರಿ ಮಹಾಶಕ್ತಿ. ಅದು ಬೇರೆ ದೇಶಗಳನ್ನು ಅವಲಂಬಿಸಿಕೊಂಡಿರಬೇಕಾಗಿಲ್ಲ. ಆದರೆ, ಭಾರತ ಹಾಗಲ್ಲ. ಲಕ್ಷಾಂತರ ಭಾರತೀಯರು ಹೊಟ್ಟೆಪಾಡಿಗಾಗಿ ಜಗತ್ತಿನ ಪ್ರತಿಯೊಂದು ದೇಶಗಳಲ್ಲಿ ಹರಡಿಕೊಂಡಿದ್ದಾರೆ. ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಅಸಂಖ್ಯ ಮಂದಿ ದುಡಿಯುತ್ತಿದ್ದಾರೆ. ಕೋಟ್ಯಂತರ ಡಾಲರ್ ಹಣ ಭಾರತಕ್ಕೆ ಕಳುಹಿಸುತ್ತಿದ್ದಾರೆ. ಈ ಎಲ್ಲ ದೇಶಗಳು ಇಸ್ರೇಲ್ ನ ದೌರ್ಜನ್ಯದ ವಿರುದ್ಧ ನಿಂತಿವೆ. ಇಂತಹ ಹೊತ್ತಿನಲ್ಲಿ ಇಸ್ರೇಲ್ ಪರ ನಿಲ್ಲುವುದು ಎಂದರೆ ಈ ಎಲ್ಲ ಕೊಲ್ಲಿ ದೇಶಗಳ ವಿರುದ್ಧ ನಿಂತಂತೆ. ನೆರೆಹೊರೆಯವರನ್ನೆಲ್ಲ ಎದುರುಹಾಕಿಕೊಂಡಂತೆ. ಇದರ ಪರಿಣಾಮ?! ಈಗ ಭಾರತದ ಜತೆ ಯಾರಿದ್ದಾರೆ? ನೆರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಭೂತಾನ್, ಲಂಕಾ, ಮಾಲ್ದೀವ್ಸ್ ಎಲ್ಲವೂ ಭಾರತದ ಸ್ನೇಹದಿಂದ ದೂರ ಸರಿದಿವೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತಕ್ಕಾಗಲಿರುವ ನಷ್ಟ ಎಣಿಕೆಗೆ ಸಿಗದ್ದು.</p>



<p>ಈ ವಾಸ್ತವವನ್ನು ಭಾರತದಂತಹ ದೇಶಗಳು ಅರ್ಥಮಾಡಿಕೊಂಡು, ಯುದ್ಧಕೋರ ಅಮೆರಿಕಾದಂತಹ ದೇಶಗಳ ನಿಲುವುಗಳಿಂದ ದೂರ ಇರಬೇಕು. ಭಾರತವು ತನ್ನ ಸ್ವಾತಂತ್ರ್ಯದ ದಿನಗಳಿಂದಲೂ ತನ್ನದೇ ಆದ ವಿದೇಶ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಬಣಗಳಾಗಿ ಒಡೆದು ಹೋದ ಜಗತ್ತಿನಲ್ಲಿ ಅದು ಎರಡೂ ಬಣಕ್ಕೆ ಸೇರದೆ ಅಲಿಪ್ತ ಚಳುವಳಿಯ ಹರಿಕಾರನಾಗಿ ಹೆಸರು ಪಡೆದಿತ್ತು. ನೊಂದವರ ಸಹಾಯಕ್ಕೆ ನಿಲ್ಲುವ ತನ್ನ ನೀತಿಯ ಭಾಗವಾಗಿ ಪ್ಯಾಲೆಸ್ಟೈನ್ ಪರವಾಗಿ ಸದಾ ಕಾಲ ಬೆಂಬಲ ನೀಡುತ್ತ ಬಂದಿತ್ತು. ಬುದ್ಧ, ಮಹಾವೀರ, ಗಾಂಧಿಯಂತಹ ಅಹಿಂಸಾಪರ, ಶಾಂತಿಪ್ರಿಯ ಮತ್ತು ಶಾಂತಿಪರ ದೇಶ ಮೊನ್ನೆ ಶಾಂತಿ ಪ್ರಸ್ತಾವವನ್ನು ಬೆಂಬಲಿಸದೆ ಅಪಾಯಕಾರಿ ಹೆಜ್ಜೆ ಇರಿಸಿತು. ಜಾಗತಿಕ ದಕ್ಷಿಣದ ನಾಯಕ ಅನಿಸಿಕೊಂಡಿದ್ದ ಭಾರತ ಮೊನ್ನೆ ಏಕಾಂಗಿಯಾಗಿ ಹೋಯಿತು.</p>



<p>ಸ್ವತಂತ್ರ ವಿದೇಶ ನೀತಿಗೆ ವಿದಾಯ ಹೇಳಿ, ಅಮೆರಿಕದ ಅಡಿಯಾಳಿನಂತೆ ವರ್ತಿಸುವುದರಿಂದ&nbsp; ಮುಂದಿನ ದಿನಗಳಲ್ಲಿ ಭಾರತ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸರಕಾರಗಳು ಬದಲಾಗಬಹುದು. ಆದರೆ ತಾತ್ಕಾಲಿಕ ಲಾಭಕ್ಕಾಗಿ ದೇಶದ ದೀರ್ಘಕಾಲೀನ ವಿದೇಶಾಂಗ ನೀತಿ ಬದಲಾಗಬಾರದು. ಇದನ್ನು ಮೋದಿ ಸರಕಾರ ಅರ್ಥಮಾಡಿಕೊಳ್ಳದಿರುವುದು ವಿಷಾದದ ಸಂಗತಿ.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p><a href="https://peepalmedia.com/wp-content/uploads/2022/10/WhatsApp-Image-2022-10-17-at-5.20.35-PM.jpeg">ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ  ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</a></p>



<p><strong>ಇದನ್ನೂ ಓದಿ-</strong><a href="https://peepalmedia.com/fake-news/" data-type="post" data-id="29920">ಸುಳ್ಳು ಸುದ್ದಿಗಳ ಮಹಾಸಾಗರ</a></p>
]]></content:encoded>
					
		
		
			</item>
		<item>
		<title>ಮಂಗಳಾದೇವಿಯಿಂದ ಮತಾಂಧರಿಗೊಂದು ಸಂದೇಶ</title>
		<link>https://peepalmedia.com/a-lesson-for-fanatics-from-mangaladevi/</link>
		
		<dc:creator><![CDATA[Shrinivas Karkala]]></dc:creator>
		<pubDate>Tue, 24 Oct 2023 08:36:01 +0000</pubDate>
				<category><![CDATA[ಅಂಕಣ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=30445</guid>

					<description><![CDATA[ಯಾವ ಧರ್ಮದ ರಕ್ಷಣೆಗೆ ಹೊರಟಿದ್ದೇವೆ ಎಂದು ಇವರು ಹೇಳಿಕೊಳ್ಳುತ್ತಾರೋ, ಅಂದುಕೊಂಡಿದ್ದಾರೋ, ತಮ್ಮ ಗೂಂಡಾ ನಡೆವಳಿಕೆಗಳಿಂದ ಧರ್ಮಕ್ಕೆ ಗರಿಷ್ಠ ಹಾನಿ ಮಾಡುತ್ತಿರುವುದು ಇದೇ ಮಂದಿ. ಧರ್ಮವನ್ನು ಮತ್ತು ದೇವರನ್ನು ಕಾಪಾಡಬೇಕಾಗಿರುವುದೂ ಇದೇ ಮಂದಿಯಿಂದ. ಯಾಕೆಂದರೆ, ಇವರ ದ್ವೇಷ ಮತ್ತು ಹಿಂಸಾತ್ಮಕ ನಡೆವಳಿಕೆಗಳಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ?- ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ) “ಮಂಗಳಾದೇವಿಯ ಜಾತ್ರೆ ಹೇಗಿತ್ತು?” ದಶಕಗಳಿಂದ ಮಂಗಳೂರಿನ ಈ ಪ್ರಸಿದ್ಧ ದೇವಸ್ಥಾನದ ಜಾತ್ರೆಗೆ ಹೋಗಿರದಿದ್ದ ಮಹಿಳೆಯೊಬ್ಬರು ನಿನ್ನೆ ಸಂಜೆ ಅಲ್ಲಿಗೆ ಹೋಗಿ ಬಂದಾಗ, ಕುತೂಹಲದಿಂದ ಇಂಥದೊಂದು [&#8230;]]]></description>
										<content:encoded><![CDATA[
<p class="has-background" style="background-color:#07000d26"><strong>ಯಾವ ಧರ್ಮದ ರಕ್ಷಣೆಗೆ ಹೊರಟಿದ್ದೇವೆ ಎಂದು ಇವರು ಹೇಳಿಕೊಳ್ಳುತ್ತಾರೋ, ಅಂದುಕೊಂಡಿದ್ದಾರೋ, ತಮ್ಮ ಗೂಂಡಾ ನಡೆವಳಿಕೆಗಳಿಂದ ಧರ್ಮಕ್ಕೆ ಗರಿಷ್ಠ ಹಾನಿ ಮಾಡುತ್ತಿರುವುದು ಇದೇ ಮಂದಿ. ಧರ್ಮವನ್ನು ಮತ್ತು ದೇವರನ್ನು ಕಾಪಾಡಬೇಕಾಗಿರುವುದೂ ಇದೇ ಮಂದಿಯಿಂದ. ಯಾಕೆಂದರೆ, ಇವರ ದ್ವೇಷ ಮತ್ತು ಹಿಂಸಾತ್ಮಕ ನಡೆವಳಿಕೆಗಳಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ?- <mark style="background-color:rgba(0, 0, 0, 0)" class="has-inline-color has-vivid-red-color">ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ)</mark></strong></p>



<p>“ಮಂಗಳಾದೇವಿಯ ಜಾತ್ರೆ ಹೇಗಿತ್ತು?”</p>



<p>ದಶಕಗಳಿಂದ ಮಂಗಳೂರಿನ ಈ ಪ್ರಸಿದ್ಧ ದೇವಸ್ಥಾನದ ಜಾತ್ರೆಗೆ ಹೋಗಿರದಿದ್ದ ಮಹಿಳೆಯೊಬ್ಬರು ನಿನ್ನೆ ಸಂಜೆ ಅಲ್ಲಿಗೆ ಹೋಗಿ ಬಂದಾಗ, ಕುತೂಹಲದಿಂದ ಇಂಥದೊಂದು ಪ್ರಶ್ನೆ ಹಾಕಿದೆ.</p>



<p>“ಅಂಗಡಿಗಳೇನೋ ಇದ್ದವು. ಆದರೆ ಜಾತ್ರೆಯ ಹಿಂದಿನ ಸಂಭ್ರಮ, ಸಡಗರ ಕಾಣಲಿಲ್ಲ, ಬರೇ ಸಪ್ಪೆ ಅನಿಸಿತು…” ಎಂದರು.</p>



<p>ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರನ್ನು ಆರ್ಥಿಕವಾಗಿ ನಿತ್ರಾಣಗೊಳಿಸಬೇಕು ಎನ್ನುವ ಉದ್ದೇಶದಿಂದ, ಹಿಂದುತ್ವ ಸಂಘಟನೆಗಳು ‘ಹಿಂದೂ ದೇಗುಲಗಳ ಜಾತ್ರೆಯಲ್ಲಿ ಬೇರೆ ಮತೀಯರಿಗೆ ಅವಕಾಶ ಕೊಡಕೂಡದು’ ಎಂಬ ಒಂದು ಅಭಿಯಾನವನ್ನು ಆರಂಭಿಸಿವೆ. ಈ ಅಭಿಯಾನ ಪರಾಕಾಷ್ಠೆಗೆ ತಲಪಿದ್ದು ಬಿಜೆಪಿ ಸರಕಾರ ಇದ್ದ, ಅದರಲ್ಲೂ ಕಳೆದ ಒಂದೆರಡು ವರ್ಷಗಳಲ್ಲಿ. ಅದಕ್ಕೆ ಮುಖ್ಯ ಕಾರಣ- ಈ ಜನಾಂಗದ್ವೇಷಿ ಸಂಘಟನೆಗಳಿಗೆ ಪ್ರಭುತ್ವದಿಂದಲೇ ಸಿಗುತ್ತಿದ್ದ ರಕ್ಷಣೆ ಮತ್ತು ಪ್ರೋತ್ಸಾಹ.</p>



<p><strong>ಜಾತ್ರೆ ಎಂದರೇ</strong><strong>…</strong><strong></strong></p>



<p>ಹಿಂದಿನಿಂದಲೂ ದೇವಸ್ಥಾನದ ರಥೋತ್ಸವ ಇರಲೀ, ದರ್ಗಾದ ಉರೂಸ್ ಇರಲೀ, ಚರ್ಚ್ ನ ಸಾಂತ್ ಮಾರಿ ಇರಲೀ, ಜಾತ್ರೆ ಎಂದರೆ ಅದು ಮತಾತೀತವಾಗಿ ಎಲ್ಲರ ಮತ್ತು ವಿಶೇಷವಾಗಿ ಊರ ಹಬ್ಬ. ಸಂತೆ ಅಂಗಡಿಗಳೇ ಅಲ್ಲಿನ ವಿಶೇಷ ಆಕರ್ಷಣೆ. ಹಿಂದಿನಂತೆ ದೊಡ್ಡ ಸಂಖ್ಯೆಯ ಅಂಗಡಿಗಳು ಇರದಿದ್ದ ಕಾಲದಲ್ಲಿ ಹಳ್ಳಿಯ ಮಂದಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಇದೊಂದು ಸುವರ್ಣಾವಕಾಶ. ವ್ಯಾಪಾರಿಗಳಿಗೂ ತಮ್ಮ ಸರಕುಗಳನ್ನು ಮಾರಲು, ಆ ಮೂಲಕ ಹೊಟ್ಟೆ ಹೊರೆದುಕೊಳ್ಳಲು ಒಂದು ಒಳ್ಳೆಯ ಅವಕಾಶ. ಅಲ್ಲಿನ ವ್ಯಾಪಾರಿಗಳಲ್ಲಿ ಹಿಂದೂಗಳು, ಮುಸ್ಲಿಮರು ಎಂದಿರಲಿಲ್ಲ. ಎಲ್ಲ ವ್ಯಾಪಾರಿಗಳದೂ ಒಂದೇ ಧರ್ಮ; ಅದುವೇ ವ್ಯಾಪಾರ ಧರ್ಮ. ಮತೀಯ ದ್ವೇಷವೇ ಇರದ ಆ ಕಾಲದಲ್ಲಿ ಹೀಗೆ ಎಲ್ಲ ಮತಧರ್ಮೀಯರ ಅಂಗಡಿಗಳ ಕಾರಣಕ್ಕೇ ಜಾತ್ರೆಗಳಿಗೆ ಒಂದು ವಿಶೇಷ ಆಕರ್ಷಣೆ ಇತ್ತು.</p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2023/10/20231022_180339-1-1-1024x768.jpg" alt="" class="wp-image-30446" srcset="https://peepalmedia.com/wp-content/uploads/2023/10/20231022_180339-1-1-1024x768.jpg 1024w, https://peepalmedia.com/wp-content/uploads/2023/10/20231022_180339-1-1-300x225.jpg 300w, https://peepalmedia.com/wp-content/uploads/2023/10/20231022_180339-1-1-768x576.jpg 768w, https://peepalmedia.com/wp-content/uploads/2023/10/20231022_180339-1-1-1536x1152.jpg 1536w, https://peepalmedia.com/wp-content/uploads/2023/10/20231022_180339-1-1-2048x1536.jpg 2048w, https://peepalmedia.com/wp-content/uploads/2023/10/20231022_180339-1-1-150x113.jpg 150w, https://peepalmedia.com/wp-content/uploads/2023/10/20231022_180339-1-1-696x522.jpg 696w, https://peepalmedia.com/wp-content/uploads/2023/10/20231022_180339-1-1-1068x801.jpg 1068w, https://peepalmedia.com/wp-content/uploads/2023/10/20231022_180339-1-1-1920x1440.jpg 1920w" sizes="auto, (max-width: 1024px) 100vw, 1024px" /></figure>



<p><strong>ವ್ಯಾಪಾರ ಧರ್ಮ</strong></p>



<p>ನಾವು ಒಂದು ವಸ್ತುವನ್ನು ಖರೀದಿಸುವಾಗ ಏನನ್ನು ನೋಡುತ್ತೇವೆ? ನಮ್ಮದು ಕಷ್ಟಪಟ್ಟು ಗಳಿಸಿದ ಹಣ. ಹಾಗಾಗಿ ವಸ್ತುವನ್ನು ಖರೀದಿಸುವಾಗ ಹತ್ತಿರದಲ್ಲಿ, ಅಗ್ಗದ ದರದಲ್ಲಿ ದೊರೆಯುವುದು ಮತ್ತು ಉತ್ತಮ ಗುಣಮಟ್ಟದ ವಸ್ತುವಾಗಿರುವುದನ್ನು ಮಾತ್ರ ನೋಡುತ್ತೇವೆಯೇ ಹೊರತು, ಇದು ಪಾಕಿಸ್ತಾನದ್ದೋ, ಚೀನಾದ್ದೋ, ಮುಸ್ಲಿಮರದ್ದೋ, ಹಿಂದೂಗಳದ್ದೋ ಎಂದು ನೋಡುವುದಿಲ್ಲ. ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆಕೊಟ್ಟರೂ ಚೀನಾ ಸರಕುಗಳ ವ್ಯಾಪಾರ ಭಾರತದಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ. ಊರಿನಲ್ಲಿ ಜನರೂ ಹಾಗೆಯೇ. ಅವರು ದರ ಮತ್ತು ಗುಣಮಟ್ಟದ ಅಂಶಗಳನ್ನು ನೋಡುತ್ತಾರೆಯೇ ಹೊರತು, ಮಾರುವವರ ಧರ್ಮ, ದೇಶ ಇತ್ಯಾದಿಗಳನ್ನಲ್ಲ. ಬಡತನದ ಕಾರಣ ಮಾನವ ಮತಿಯಲ್ಲಿ ಉಂಟಾದ ಈ ಸ್ಥಿತಿಯನ್ನು ಬದಲಾಯಿಸುವುದು ಮತೀಯ ಸಂಘಟನೆಗಳಿಗೆ ಸಾಧ್ಯವೇ? ಬದಲಾಯಿಸಿದರೂ ಎಷ್ಟು ಕಾಲ ಬದಲಾಯಿಸಬಹುದು? ಆದರೂ &#8216;ಕೆಲಸವಿಲ್ಲದ&#8217; ಸಂಘಟನೆಗಳ ಯತ್ನ ಸಾಗಿಯೇ ಇದೆ.</p>



<p><strong>ಹೊಟ್ಟೆಗೆ ಹೊಡೆಯುವುದು ಯಾವ ಧರ್ಮ?</strong></p>



<p>ಜಾತ್ರೆಗಳಲ್ಲಿ ವ್ಯಾಪಾರ ನಡೆಸುವ ಸಂತೆ ವ್ಯಾಪಾರಿಗಳದ್ದು ವಿಚಿತ್ರ ಬದುಕು. ಒಂದು ರೀತಿಯಲ್ಲಿ ಅಲೆಮಾರಿಗಳಂತೆ ವ್ಯಾಪಾರ ಹೊರಡುವ ಅವರದ್ದು ಅನಿಶ್ಚಿತ ಬದುಕು ಕೂಡಾ. ಹೀಗೆ ಊರಿಂದೂರಿಗೆ ಹೋಗಿ ವ್ಯಾಪಾರ ನಡೆಸುತ್ತಿದ್ದ ಅಶ್ರಫ್ ಎಂಬ ವ್ಯಾಪಾರಿ ತಮ್ಮ ಅನುಭವವನ್ನು ಹೇಳುತ್ತಾ, ‘ಈ ವ್ಯಾಪಾರಿಗಳಿಗೆ ವ್ಯಾಪಾರ ಎನ್ನುವುದು ಒಂದು ಚಟ ಇದ್ದಂತೆ. ಅನೇಕ ಬಾರಿ ಅದರಲ್ಲಿ ಲಾಭಕ್ಕಿಂತ ನಷ್ಟವಾಗುವ ಸಂಭವವೇ ಹೆಚ್ಚು. ಜಾತ್ರೆಗಳಲ್ಲಿ ಅಂಗಡಿ ಹಾಕಲು ಏಲಂ ನಲ್ಲಿ ಭಾಗವಹಿಸಬೇಕು, ದುಬಾರಿ ನೆಲಬಾಡಿಗೆ ತೆರಬೇಕು, ಕೆಲವೊಮ್ಮೆ ಮಳೆ ಇತ್ಯಾದಿಗಳಿಂದ ವ್ಯಾಪಾರ ಕೊಚ್ಚಿ ಹೋದರೆ ನೆಲ ಬಾಡಿಗೆ ಸಹಿತ ಎಲ್ಲವೂ ನಷ್ಟ, ಕೆಲವು ವ್ಯಾಪಾರಿಗಳು ರಾಜ್ಯದೊಳಗೆ ಮಾತ್ರವಲ್ಲ, ಪರ ರಾಜ್ಯಗಳಿಗೂ ಹೋಗುವುದು ಇದೆ, ಅದಕ್ಕೆ ತಗಲುವ ಪ್ರಯಾಣ ವೆಚ್ಚ ನೀವೇ ಲೆಕ್ಕ ಹಾಕಿ. ಆದರೆ ಈ ಎಲ್ಲ ಕಷ್ಟಗಳನ್ನು ಅನುಭವಿಸಿಯೂ ಅವರು ವ್ಯಾಪಾರ ನಿಲ್ಲಿಸುವುದಿಲ್ಲ. ನಾಳೆ ಏನೋ ಒಳ್ಳೆಯ ದಿನಗಳು ಬರಬಹುದು ಎಂಬ ಒಂದು ಆಸೆ, ಭರವಸೆ. ಯಾಕೆಂದರೆ ಬಡತನ, ಮನೆಯಲ್ಲಿ ಹೆಂಡತಿ ಮಕ್ಕಳ ಹೊಟ್ಟೆಗೆ ಬಟ್ಟೆಗೆ, ಆಸ್ಪತ್ರೆ ವೆಚ್ಚಗಳಿಗೆ, ಮಕ್ಕಳ ಓದಿಗೆ ಏನಾದರೂ ಆಗಬೇಕಲ್ಲ…’ ಎನ್ನುತ್ತಾರೆ.</p>



<figure class="wp-block-image size-large"><img loading="lazy" decoding="async" width="768" height="1024" src="https://peepalmedia.com/wp-content/uploads/2023/10/20231022_171509-768x1024.jpg" alt="" class="wp-image-30448" srcset="https://peepalmedia.com/wp-content/uploads/2023/10/20231022_171509-768x1024.jpg 768w, https://peepalmedia.com/wp-content/uploads/2023/10/20231022_171509-225x300.jpg 225w, https://peepalmedia.com/wp-content/uploads/2023/10/20231022_171509-1152x1536.jpg 1152w, https://peepalmedia.com/wp-content/uploads/2023/10/20231022_171509-1536x2048.jpg 1536w, https://peepalmedia.com/wp-content/uploads/2023/10/20231022_171509-150x200.jpg 150w, https://peepalmedia.com/wp-content/uploads/2023/10/20231022_171509-300x400.jpg 300w, https://peepalmedia.com/wp-content/uploads/2023/10/20231022_171509-696x928.jpg 696w, https://peepalmedia.com/wp-content/uploads/2023/10/20231022_171509-1068x1424.jpg 1068w, https://peepalmedia.com/wp-content/uploads/2023/10/20231022_171509-scaled.jpg 1920w" sizes="auto, (max-width: 768px) 100vw, 768px" /></figure>



<p>ಮತಧರ್ಮದ&nbsp; ಹೆಸರಿನಲ್ಲಿ, ಇಂಥ ಬಡವರ ಹೊಟ್ಟೆಗೆ ಹೊಡೆಯುವುದು ಯಾವ ಧರ್ಮ? ಅದನ್ನು ಯಾವ ದೇವರು ಮೆಚ್ಚುತ್ತಾನೆ? ಮಂಗಳಾದೇವಿಯ ಬಳಿ ಹೋಗಿ, ಹಿಂದುತ್ವ ಸಂಘಟನೆಯವರು ಕರೆ ಕೊಟ್ಟದ್ದು ಸರಿಯೇ ಎಂದರೆ, ಆಕೆ ಅದು ಸರಿ ಎಂದಾಳೆ? ಆಕೆ ಎಲ್ಲರನ್ನೂ ಸಮಾನವಾಗಿ ನೋಡುವ ಕಾರಣಕ್ಕೇ ದೇವರಲ್ಲವೇ?</p>



<p><strong>ಬಪ್ಪನಾಡು</strong></p>



<p>ಕಳೆದ ವರ್ಷ ಇತಿಹಾಸ ಪ್ರಸಿದ್ಧ ಬಪ್ಪನಾಡು ದೇವಸ್ಥಾನದಲ್ಲಿ ಮನಕಲಕುವ ಒಂದು ಘಟನೆ ನಡೆಯಿತು. ಎಲ್ಲರಿಗೂ ಗೊತ್ತಿರುವಂತೆ, ಐತಿಹ್ಯಗಳ ಪ್ರಕಾರ, ಬಪ್ಪನಾಡು ದೇವಸ್ಥಾನದ ನಿರ್ಮಾಣಕ್ಕೆ ಕಾರಣವಾದುದೇ ಬಪ್ಪ ಬ್ಯಾರಿ ಎಂಬ ಮುಸಲ್ಮಾನ. ದೇಗುಲದ ಜಾತ್ರಾ ಮಹೋತ್ಸವಗಳಲ್ಲಿ ಅಲ್ಲಿನ ಕೆಲ ಮುಸ್ಲಿಮರಿಗೆ ವಿಶೇಷ ಗೌರವ, ಆದ್ಯತೆ ಇದೆ. ಇಂತಹ ದೇಗುಲದ ಜಾತ್ರೆಯಲ್ಲಿ ನೂರಾರು ವರ್ಷಗಳಿಂದ ಮುಸ್ಲಿಮರೂ ವ್ಯಾಪಾರ ಮಾಡುತ್ತಾರೆ. ಅದು ಸ್ಥಳೀಯ ವ್ಯಾಪಾರಿಗಳಿಗೆ ನಾಲ್ಕು ಕಾಸು ಸಂಪಾದಿಸಲು ಒಂದು ಸುಸಂದರ್ಭ. ಅದೂ ವರ್ಷದಲ್ಲಿ ಒಂದು ಬಾರಿ.</p>



<p>ಇಂತಹ ದೇಗುಲದಲ್ಲಿ ‘ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ಕೊಡಕೂಡದು’ ಎಂದು ಹಿಂದುತ್ವ ಸಂಘಟನೆಗಳು ಆಗ್ರಹಿಸಿದವು. ಆಡಳಿತ ಮಂಡಳಿಗೆ ಇದು ಒಪ್ಪಿತವಿರಲಿಲ್ಲ. ಅದಕ್ಕೆ ಮುಖ್ಯ ಕಾರಣ- ಬಪ್ಪನಾಡು ದೇಗುಲದ ಹಿನ್ನೆಲೆ. ಆದರೂ ಈ ಸಂಘಟನೆಗಳು ಗಲಾಟೆ ಮಾಡಬಹುದು ಎಂಬ ಭಯ ಇದ್ದೇ ಇತ್ತು. ಅಲ್ಲದೆ, ಸರಕಾರವೂ ಹಿಂದುತ್ವ ಸಂಘಟನೆಗಳಿಗೆ ರಕ್ಷಣೆ ನೀಡುವಂಥದ್ದೇ. ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಹಾಕುವ ಹೋರ್ಡಿಂಗ್ ಅನ್ನು ಹಿಂದುತ್ವ ಸಂಘಟನೆಗಳನ್ನು ಹಾಕಿದ್ದೇ ತಡ, ಅನೇಕ ಮುಸ್ಲಿಮರು ಭಯ ಪಟ್ಟುಕೊಂಡರು. ದೇಗುಲದ ಆಡಳಿತ ಮಂಡಳಿಯೂ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿಯಿತು. ಹಾಗಾಗಿ ಏಲಂನಲ್ಲಿ ಸ್ಥಳ ಪಡೆದಿದ್ದ ವ್ಯಾಪಾರಿಗಳಿಗೆ ಅವರ ಠೇವಣಿ ಹಣವನ್ನು ಮರಳಿಸಲಾಯಿತು.</p>



<figure class="wp-block-image size-full"><img loading="lazy" decoding="async" width="791" height="912" src="https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1.webp" alt="" class="wp-image-30450" srcset="https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1.webp 791w, https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1-260x300.webp 260w, https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1-768x885.webp 768w, https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1-150x173.webp 150w, https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1-300x346.webp 300w, https://peepalmedia.com/wp-content/uploads/2023/10/MNG-TEMPLE-BANNER-ISSUE-AVB-2-1-696x802.webp 696w" sizes="auto, (max-width: 791px) 100vw, 791px" /></figure>



<p>ಪತ್ರಿಕಾ ವರದಿಗಳ ಪ್ರಕಾರ, ಸುಮಾರು ನೂರರಷ್ಟು ವ್ಯಾಪಾರಿಗಳು ಏಲಂನಲ್ಲಿ ಸ್ಥಳ ಪಡೆದಿದ್ದರೆ, ಎಪ್ಪತ್ತೈದರಷ್ಟು ವ್ಯಾಪಾರಿಗಳು ತಮ್ಮ ಹಣ ಹಿಂದೆ ಪಡೆದರು. ಅದರಲ್ಲೂ ಒಬ್ಬರು ಆ ಹಣವನ್ನು ಗುಡಿಯ ಹುಂಡಿಗೆ ಹಾಕಿ ಕಣ್ಣಿರು ಒರೆಸಿಕೊಂಡು ಮನೆಗೆ ತೆರಳಿದರು. ಹೀಗೆ ಹಣವನ್ನು ಹುಂಡಿಗೆ ಹಾಕಿ ಹೊರನಡೆದ ವ್ಯಕ್ತಿಯು ದುಃಖದಿಂದ ಕಣ್ಣಿರು ಹಾಕುತ್ತಾ ದೇವಿಯಲ್ಲಿ ಏನು ಹೇಳಿರಬಹುದು? ನನ್ನ ಹೊಟ್ಟೆಗೆ ಹೊಡೆದವರನ್ನುನೀನೇ ನೋಡಿಕೋ ಎಂದಿರಬಹುದೇ? ಹಾಗೆ ಶಾಪ ಕೊಟ್ಟಿದ್ದರೆ ಬಡವನ ಶಾಪ ತಟ್ಟದಿದ್ದೀತೇ?</p>



<p><strong>ದೇವರು ಮತ್ತು ಧರ್ಮದ ವಿರೋಧಿಗಳು</strong></p>



<p>ವಾಸ್ತವದಲ್ಲಿ ಈ ಮತೀಯ ಸಂಘಟನೆಗಳಿಗೆ ಧರ್ಮ ಅಂದರೆ ಏನು ಎಂದು ಗೊತ್ತಿಲ್ಲ, ದೇವರು ಎಂದರೆ ಏನು ಗೊತ್ತಿಲ್ಲ. ಧರ್ಮ, ದೇವರ ಬಗ್ಗೆ ಗೌರವವೂ ಇಲ್ಲ. ಇವರು ಯಾವ ಧರ್ಮದ ರಕ್ಷಣೆಗೆ ಹೊರಟಿದ್ದೇವೆ ಎಂದು ಹೇಳಿಕೊಳ್ಳುತ್ತಾರೋ, ಅಂದುಕೊಂಡಿದ್ದಾರೋ, ತಮ್ಮ ಗೂಂಡಾ ನಡೆವಳಿಕೆಗಳಿಂದ ಧರ್ಮಕ್ಕೆ ಗರಿಷ್ಠ ಹಾನಿ ಮಾಡುತ್ತಿರುವುದು ಇದೇ ಮಂದಿ. ಧರ್ಮವನ್ನು ಮತ್ತು ದೇವರನ್ನು ಕಾಪಾಡಬೇಕಾಗಿರುವುದೂ ಇದೇ ಮಂದಿಯಿಂದ. ಯಾಕೆಂದರೆ, ಇವರ ದ್ವೇಷ ಮತ್ತು ಹಿಂಸಾತ್ಮಕ ನಡೆವಳಿಕೆಗಳಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ. ಹಿಂದೂ ಧರ್ಮದ ಬಗ್ಗೆ ಏನೂ ಗೊತ್ತಿರದ ವಿದೇಶೀಯರು ಇವರ ವರ್ತನೆ ನೋಡಿದರೆ, ಹಿಂದೂ ಧರ್ಮವು ಸದಾ ದ್ವೇಷ ಮತ್ತು ಹಿಂಸೆ ಪ್ರತಿಪಾದಿಸುವ ಅತ್ಯಂತ ಕೆಟ್ಟ ಧರ್ಮ ಎಂದು ಅವರು ಹೇಳಲಾರರೇ?</p>



<p><strong>ಮಂಗಳಾದೇವಿ ಕಲಿಸಿದ ಪಾಠ</strong></p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2023/10/20231022_170543-1024x768.jpg" alt="" class="wp-image-30454" srcset="https://peepalmedia.com/wp-content/uploads/2023/10/20231022_170543-1024x768.jpg 1024w, https://peepalmedia.com/wp-content/uploads/2023/10/20231022_170543-300x225.jpg 300w, https://peepalmedia.com/wp-content/uploads/2023/10/20231022_170543-768x576.jpg 768w, https://peepalmedia.com/wp-content/uploads/2023/10/20231022_170543-1536x1152.jpg 1536w, https://peepalmedia.com/wp-content/uploads/2023/10/20231022_170543-2048x1536.jpg 2048w, https://peepalmedia.com/wp-content/uploads/2023/10/20231022_170543-150x113.jpg 150w, https://peepalmedia.com/wp-content/uploads/2023/10/20231022_170543-696x522.jpg 696w, https://peepalmedia.com/wp-content/uploads/2023/10/20231022_170543-1068x801.jpg 1068w, https://peepalmedia.com/wp-content/uploads/2023/10/20231022_170543-1920x1440.jpg 1920w" sizes="auto, (max-width: 1024px) 100vw, 1024px" /></figure>



<p>ಈಗ ಮತ್ತೆ ವಿಷಯಕ್ಕೆ ಬರೋಣ. ಕರಾವಳಿಯ ಜನ ಶ್ರಮಜೀವಿಗಳು. ಅನೇಕ ಶತಮಾನಗಳಿಂದ ಒಟ್ಟಾಗಿ ಬಾಳುವೆ ನಡೆಸುತ್ತಾ ಬಂದಿರುವ ಈ ಭಾಗದ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು ಮತಾಂಧರಲ್ಲ. ಮತಾಂಧರಾಗಿ ಬದುಕುವುದು ಅವರಿಗೆ ಸಾಧ್ಯವೂ ಇಲ್ಲ. ಅವರು ಹಿಂದಿನಿಂದಲೂ ಪರಸ್ಪರರನ್ನು ಗೌರವಿಸುತ್ತಾ, ಕೂಡು ಬಾಳುವೆಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದವರು.</p>



<p>ಅನೇಕ ಹಳ್ಳಿಗಳಲ್ಲಿ, ವ್ಯಾಪಾರ ಕೆಲಸದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ತೊಡಗಿಕೊಂಡವರು ಮುಸ್ಲಿಮರು. ‘ಬ್ಯಾರಿ’ ಎಂಬ ಪದ ಬಂದುದೇ ‘ಬೇರ’, ‘ಬ್ಯಾರ’, ಅಂದರೆ ‘ವ್ಯಾಪಾರ’ ಎಂಬುದರಿಂದ. ಈ ಬ್ಯಾರಿಗಳೊಂದಿಗೆ ಹಿಂದೂಗಳ ಸಹಿತ ಎಲ್ಲ ಮತೀಯರಿಗೆ ಒಳ್ಳೆಯ ಸಂಬಂಧವಿದೆ. &#8216;ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬೇಡಿ&#8217; ಎಂದು ಹಿಂದುತ್ವ ಸಂಘಟನೆಗಳು ಎಷ್ಟೇ ಕರೆಕೊಟ್ಟರೂ, ಅದು ಜನಸಾಮಾನ್ಯರ ಮನಸ್ಥಿತಿಯನ್ನು ಬದಲಾಯಿಸಲು ಶಕ್ತವಾಗಿಲ್ಲ. ಯಾಕೆಂದರೆ, ಅವರೆಲ್ಲರೂ ಮೂಲತಃ ಒಳ್ಳೆಯವರು, ಸೆಕ್ಯುಲರ್ ಗಳು. ಕೂಡು ಬಾಳುವೆ ಅವರ ಅನಿವಾರ್ಯತೆ.</p>



<p>ಬಿಜೆಪಿ ಸರಕಾರ ಇದ್ದ ಕಾಲಕ್ಕೆ ತಮ್ಮ ಜನಾಂಗ ದ್ವೇಷದ ಅಜೆಂಡಾ ಮುಂದುವರಿಸಲು ಕೆಲ ಹಿಂದುತ್ವ ಸಂಘಟನೆಗಳು ಶಕ್ತವಾಗಿದ್ದವು. ಕರಾವಳಿಯ ಬಹುತೇಕ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಕಾಣಿಸಿಕೊಳ್ಳದಂತೆ ಮಾಡುವಲ್ಲಿ, ಕಾಣಿಸಿಕೊಂಡರೂ ವಿರಳವಾಗಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವಲ್ಲಿ ಅವರು ಶಕ್ತರಾಗಿದ್ದರು. ಆದರೆ ಈಗ ಸರಕಾರ ಬದಲಾಗಿದೆ. ಮಂಗಳೂರಿನ ಮಂಗಳಾದೇವಿ ದೇಗುಲದ ನವರಾತ್ರಿ ಜಾತ್ರೆಯ ಸಂದರ್ಭದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ಕೊಡಕೂಡದು ಎಂದು ಅವರು ಆಗ್ರಹಿಸಿದರು. ಆರಂಭದಲ್ಲಿ ದೇಗುಲವೂ ಈ ಆಗ್ರಹಕ್ಕೆ ಮಣಿಯಿತು. ಆದರೆ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅವರು ಮಧ‍್ಯ ಪ್ರವೇಶಿಸಿದರು. ಏಲಂನಲ್ಲಿ ಮುಸ್ಲಿಮರೂ ಅಂಗಡಿ ಪಡೆಯುವಂತಾಯಿತು. ಇಷ್ಟಾದ ಮೇಲೂ ಜಾತ್ರೆಯಲ್ಲಿ ಏನಾಗುತ್ತದೋ, ಮುಸ್ಲಿಮರ ಬಹಿಷ್ಕಾರ ಮುಂದುವರಿಯುವುದೋ ಏನೋ ಎಂಬ ಭಯ ಇದ್ದೇ ಇತ್ತು. ಇದೇ ಕಾರಣದಿಂದ, ಜಾತ್ರೆ ಶುರುವಾಗುತ್ತಿದ್ದಂತೆ ಕೆಲವು ಮಾಧ್ಯಮಗಳ ಮಂದಿ ಅಲ್ಲಿಗೆ ಓಡಿಯೇ ಓಡಿದರು. ನೋಡುವುದೇನು? ಅಂಗಡಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಬುರ್ಕಾಧಾರಿ ಮಹಿಳೆಯರು ವ್ಯಾಪಾರಕ್ಕೆ ಬಂದಿದ್ದರು. ಅವರು ಆ ಅಂಗಡಿ, ಈ ಅಂಗಡಿ, ಎನ್ನದೆ ಹಿಂದೂಗಳ ಸಹಿತ ಎಲ್ಲರ ಅಂಗಡಿಗಳಲ್ಲೂ ವ್ಯಾಪಾರ ಮಾಡುತ್ತಿದ್ದರು. ಮುಸ್ಲಿಮರ ಅಂಗಡಿಗಳಲ್ಲೂ ಹಿಂದೂ ಗ್ರಾಹಕರು ಮುಗಿಬಿದ್ದಿದ್ದರು!</p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2023/10/20231022_182054-1024x768.jpg" alt="" class="wp-image-30451" srcset="https://peepalmedia.com/wp-content/uploads/2023/10/20231022_182054-1024x768.jpg 1024w, https://peepalmedia.com/wp-content/uploads/2023/10/20231022_182054-300x225.jpg 300w, https://peepalmedia.com/wp-content/uploads/2023/10/20231022_182054-768x576.jpg 768w, https://peepalmedia.com/wp-content/uploads/2023/10/20231022_182054-1536x1152.jpg 1536w, https://peepalmedia.com/wp-content/uploads/2023/10/20231022_182054-2048x1536.jpg 2048w, https://peepalmedia.com/wp-content/uploads/2023/10/20231022_182054-150x113.jpg 150w, https://peepalmedia.com/wp-content/uploads/2023/10/20231022_182054-696x522.jpg 696w, https://peepalmedia.com/wp-content/uploads/2023/10/20231022_182054-1068x801.jpg 1068w, https://peepalmedia.com/wp-content/uploads/2023/10/20231022_182054-1920x1440.jpg 1920w" sizes="auto, (max-width: 1024px) 100vw, 1024px" /></figure>



<p><strong>ಜನರು ಒಳ್ಳೆಯವರು</strong></p>



<p>ಇದು ಅನೇಕ ವಿಷಯಗಳನ್ನು ಹೇಳುತ್ತಿದೆ. ಮೂಲತಃ ಜನರು ಒಳ್ಳೆಯವರು. ಅವರಿಗೆ ತಮ್ಮ ಹೊಟ್ಟೆಪಾಡಿನ ಚಿಂತೆಗಳ ನಡುವೆ ಮತೀಯ ಆಲೋಚನೆಗಳಿಗೆ ಸಮಯವೂ ಇಲ್ಲ. ಧರ್ಮ, ಸಂಸ್ಕೃತಿ, ಕೋಮುವಾದ ಎಲ್ಲವೂ ಹೊಟ್ಟೆ ತುಂಬಿದ ಜನರ ಟೈಂ ಪಾಸ್ ಕೆಲಸಗಳು.</p>



<p>ಪ್ರಭುತ್ವವು ಕೋಮುವಾದಕ್ಕೆ ಮಣೆ ಹಾಕದಿದ್ದರೆ, ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ಯಶಸ್ವಿಯಾಗಿ ರಕ್ಷಿಸುವುದು ಸಾಧ್ಯವಿದೆ. ಸದರಿ ಘಟನೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿದ್ದರಿಂದ ಕೋಮುವಾದಿಗಳು ಬಾಲ ಮಡಚಿ ಕೊಳ್ಳುವಂತಾಯಿತು. ಅಂಗಡಿಗಳಲ್ಲಿ ಭಗವಾಧ‍್ವಜ ಹಾಕಿ ಮತ್ತೆ ತಮ್ಮ ಅಜೆಂಡಾ ಮುಂದುವರಿಸಲು ಕೋಮುವಾದಿಗಳು ಯತ್ನಿಸಿದರೇನೋ ನಿಜ. ಆದರೆ ಅವರ ಉದ್ದೇಶ ಮಾತ್ರ ಪೂರ್ಣವಾಗಿ ಈಡೇರಲಿಲ್ಲ.</p>



<p>ಮತಧರ್ಮದಂತಹ ಭಾವನಾತ್ಮಕ ವಿಷಯಗಳಲ್ಲಿ ಸರಕಾರಗಳು ನಿಷ್ಠುರವಾಗಿ ನಡೆದುಕೊಳ್ಳಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಚುನಾವಣೆಯಲ್ಲಿ ಸೋಲುವ ಭಯ. ಆದರೆ ಇಂತಹ ಮತಾಂಧ ಸಂಘಟನೆಗಳ ಕರೆಯನ್ನು ಸಾರಾಸಗಟಾಗಿ ಧಿಕ್ಕರಿಸುವ ಮೂಲಕ ಅವುಗಳಿಗೆ ಮರೆಯಲಾಗದ ಪಾಠ ಕಲಿಸಲು ಜನಸಾಮಾನ್ಯರಿಗೆ ಸಾಧ್ಯವಿದೆ.</p>



<p>ಜನಾಂಗದ್ವೇಷಿ ಗೂಂಡಾ ಸಂಘಟನೆಗಳಿಗೆ ಮಂಗಳಾದೇವಿಯಲ್ಲಿ ಒಳ್ಳೆಯ ಮಂಗಳಾರತಿಯಾಗಿದೆ. ಮಂಗಳಾದೇವಿ ಶಕ್ತಿಶಾಲಿ ದೇವರು. ಲಿಂಗ, ಜಾತಿ, ಮತಧರ್ಮ ನೆಲೆಯಲ್ಲಿ ಭೇದ ಭಾವ ತೋರದ ದೇವರು. ಆಕೆಯ ಅಂಗಳದಿಂದಲೇ ಮತಾಂಧ ಸಂಘಟನೆಗಳಿಗೆ ಕೋಮುವಾದದ ವಿರುದ್ಧದ ಒಂದು ಸಂದೇಶ ಹೋಗಿರುವುದು ಈ ಸಂದರ್ಭದಲ್ಲಿ ಅರ್ಥಪೂರ್ಣ. ಇನ್ನಾದರೂ ಜನಾಂಗ ದ್ವೇಷವನ್ನೇ ಉಸಿರಾಡುತ್ತಾ ಸಮಾಜವನ್ನು ಒಡೆದು ತಮ್ಮ ರಾಜಕೀಯ ಅಜೆಂಡಾ ಮುಂದುವರಿಸುವ ಸಂಘಟನೆಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸುವಂತಾಗಲಿ. ಕೂಡಿ ಬಾಳಿದರೇ ಸ್ವರ್ಗ ಸುಖ. ದ್ವೇಷದಿಂದ ಯಾರಿಗೂ ಪ್ರಯೋಜನವಿಲ್ಲ.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p><strong><a href="https://peepalmedia.com/wp-content/uploads/2022/10/WhatsApp-Image-2022-10-17-at-5.20.35-PM.jpeg"><strong><sub>ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</sub></strong></a></strong></p>



<p><sub><strong>ಇದನ್ನೂ ಓದಿ-</strong><a href="https://peepalmedia.com/?page_id=30452" data-type="page" data-id="30452">ಮಂಗಳಾದೇವಿ ಜಾತ್ರೆ | ಸಂಘಪರಿವಾರದ  ಬಹಿಷ್ಕಾರಕ್ಕೆ ಕವಡೆ ಕಿಮ್ಮತ್ತು ನೀಡದ ಮಂಗಳೂರಿನ ಗ್ರಾಹಕರು</a>  <a href="https://peepalmedia.com/mangaladevi-jatre-mangalore/" data-type="link" data-id="https://peepalmedia.com/mangaladevi-jatre-mangalore/">https://peepalmedia.com/mangaladevi-jatre-mangalore/</a></sub></p>
]]></content:encoded>
					
		
		
			</item>
		<item>
		<title>ಸುಳ್ಳು ಸುದ್ದಿಗಳ ಮಹಾಸಾಗರ</title>
		<link>https://peepalmedia.com/fake-news/</link>
		
		<dc:creator><![CDATA[Shrinivas Karkala]]></dc:creator>
		<pubDate>Mon, 16 Oct 2023 11:48:11 +0000</pubDate>
				<category><![CDATA[ಅಂಕಣ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=29920</guid>

					<description><![CDATA[ಹಮಾಸ್ ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೊರಬರುತ್ತಿರುವ ಮುಕ್ಕಾಲು ಪಾಲು ಸುದ್ದಿಗಳು ಫೇಕ್ ನ್ಯೂಸ್ ಗಳೇ. ಇದರಲ್ಲಿ ಭಾರತದ ದ್ವೇಷ ಭಕ್ತ ಬಲಪಂಥೀಯರ ಕೊಡುಗೆಯೇ ಅತ್ಯಧಿಕ. ಯಾವುದೋ ದೇಶದ ಯಾವುದೋ ಕಾಲದಲ್ಲಿ ನಡೆದ ನರಮೇಧ, ವಿಧ‍್ವಂಸಕ ಕೃತ್ಯಗಳನ್ನೆಲ್ಲ ತಂದು ಹಮಾಸ್ ಗೆ ಜೋಡಿಸಲಾಗುತ್ತಿದೆ. ಹಿಂಸೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಡುವಿಲ್ಲದೆ ಮಾಡಲಾಗುತ್ತಿದೆ – ಶ್ರೀನಿವಾಸ ಕಾರ್ಕಳ ಎರಡು ದಿನಗಳ ಹಿಂದೆಯಷ್ಟೇ ನಾಡಿನ ಜನ ಒಂದು ಸುದ್ದಿ ಓದಿ ಬೆಚ್ಚಿಬಿದ್ದರು. ಖ್ಯಾತ ಸಂಗೀತ ಕಲಾವಿದ ಮತ್ತು ವಿದ್ವಾಂಸ ಪಂಡಿತ್ [&#8230;]]]></description>
										<content:encoded><![CDATA[
<p class="has-background" style="background-color:#00a6d117"><strong>ಹಮಾಸ್ ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೊರಬರುತ್ತಿರುವ ಮುಕ್ಕಾಲು ಪಾಲು ಸುದ್ದಿಗಳು ಫೇಕ್ ನ್ಯೂಸ್ ಗಳೇ. ಇದರಲ್ಲಿ ಭಾರತದ ದ್ವೇಷ ಭಕ್ತ ಬಲಪಂಥೀಯರ ಕೊಡುಗೆಯೇ ಅತ್ಯಧಿಕ. ಯಾವುದೋ ದೇಶದ ಯಾವುದೋ ಕಾಲದಲ್ಲಿ ನಡೆದ ನರಮೇಧ, ವಿಧ‍್ವಂಸಕ ಕೃತ್ಯಗಳನ್ನೆಲ್ಲ ತಂದು ಹಮಾಸ್ ಗೆ ಜೋಡಿಸಲಾಗುತ್ತಿದೆ. ಹಿಂಸೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಡುವಿಲ್ಲದೆ ಮಾಡಲಾಗುತ್ತಿದೆ – </strong><mark style="background-color:rgba(0, 0, 0, 0)" class="has-inline-color has-vivid-red-color"><strong>ಶ್ರೀನಿವಾಸ ಕಾರ್ಕಳ</strong> </mark></p>



<p>ಎರಡು ದಿನಗಳ ಹಿಂದೆಯಷ್ಟೇ ನಾಡಿನ ಜನ ಒಂದು ಸುದ್ದಿ ಓದಿ ಬೆಚ್ಚಿಬಿದ್ದರು. ಖ್ಯಾತ ಸಂಗೀತ ಕಲಾವಿದ ಮತ್ತು ವಿದ್ವಾಂಸ ಪಂಡಿತ್ ತಾರಾನಾಥರಿಂದ ಮೈಸೂರು ದಸರಾ ಆಯೋಜಕರು ಮೂರು ಲಕ್ಷ ಲಂಚ ಕೇಳಿದರಂತೆ ಎಂಬುದು ಆ ಸುದ್ದಿ. ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲಿಯೇ ಇದು ಪ್ರಕಟವಾದ ನೆಲೆಯಲ್ಲಿ ಅದನ್ನು ನಂಬದಿರುವುದು ಸಾಧ‍್ಯವೇ ಇರಲಿಲ್ಲ. ಜನ ನಂಬಿದರು. ಆದರೆ, ಮಧ್ಯಾಹ್ನಕ್ಕಾಗುವಾಗ ಅದು ಸುಳ್ಳು ಸುದ್ದಿ ಎಂದು ಹೇಳಲಾಯಿತು. ಯಾವುದನ್ನು ನಂಬುವುದು ಯಾವುದನ್ನು ಬಿಡುವುದು?!</p>



<p>ಲುಲು ಮಾಲ್ ನಲ್ಲಿ ಭಾರತದ ಧ‍್ವಜಕ್ಕಿಂತ ಮೇಲ್ಗಡೆ ಪಾಕಿಸ್ತಾನ ಧ‍್ವಜ ಹಾಕಿದ್ದಾರೆ ಎಂದು ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಸುಳ್ಳು ಸುದ್ದಿ ಹರಡಿ ಕೋಮು ಭಾವನೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಸುಮೋಟೋ ಕೇಸು ದಾಖಲಾಗಿದೆ. ನೀವು ಯಾವ ಕೋನದಲ್ಲಿ ನಿಂತು ಫೋಟೋ ತೆಗೆದಿದ್ದೀರಿ ಎನ್ನುವುದರ ಮೇಲೆ ಒಂದು ಬಾವುಟ ಮೇಲಿದ್ದಂತೆ ಅಥವಾ ಕೆಳಗಿದ್ದಂತೆ ಕಾಣಬಹುದು, ಕಾಣಿಸಬಹುದು ಎಂಬ ಪ್ರಾಥಮಿಕ ಜ್ಞಾನ ಇರುವವರಿಗೆ ಇದು ಮೇಲ್ನೋಟಕ್ಕೇ ಸುಳ್ಳು ಸುದ್ದಿ ಎಂಬುದು ತಿಳಿಯುತ್ತದೆ. ಆದರೂ ಅದನ್ನು ಈ ಹೆಣ್ಣುಮಗಳು ಹಿಂದೆ ಮುಂದೆ ನೋಡದೆ ಹಂಚಿದಳು. ಇದರ ಹಿಂದೆ ಕೆಲಸ ಮಾಡಿದ್ದು ರಾಜಕೀಯ ಮತ್ತು ಕೋಮು ದುರುದ್ದೇಶ.</p>



<p>ಈಗ ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಸಂದರ್ಭದಲ್ಲಿಯಂತೂ ಫೇಕ್ ನ್ಯೂಸ್ ಗಳದೇ ಕಾರುಬಾರು. ಈ ಫೇಕ್ ನ್ಯೂಸ್ ಗಳಿಗೆ ಜಗತ್ತಿನ ದೊಡ್ಡ ದೊಡ್ಡ ಮಾಧ್ಯಮಗಳೇ ಮೋಸ ಹೋಗುತ್ತಿವೆ.</p>



<figure class="wp-block-image size-full"><img loading="lazy" decoding="async" width="800" height="533" src="https://peepalmedia.com/wp-content/uploads/2023/10/IMG_20231014_161506.jpg" alt="" class="wp-image-29922" srcset="https://peepalmedia.com/wp-content/uploads/2023/10/IMG_20231014_161506.jpg 800w, https://peepalmedia.com/wp-content/uploads/2023/10/IMG_20231014_161506-300x200.jpg 300w, https://peepalmedia.com/wp-content/uploads/2023/10/IMG_20231014_161506-768x512.jpg 768w, https://peepalmedia.com/wp-content/uploads/2023/10/IMG_20231014_161506-150x100.jpg 150w, https://peepalmedia.com/wp-content/uploads/2023/10/IMG_20231014_161506-696x464.jpg 696w" sizes="auto, (max-width: 800px) 100vw, 800px" /><figcaption class="wp-element-caption"><strong>ಲುಲು ಮಾಲ್</strong></figcaption></figure>



<p><strong>40 ಶಿಶುಗಳ ಶಿರಚ್ಛೇದದ ಕತೆ</strong></p>



<p>ಉದಾಹರಣೆಗೆ, ಹಮಾಸ್ ಉಗ್ರರು ಇಸ್ರೇಲ್ ನ 40 ಶಿಶುಗಳ ತಲೆ ಕತ್ತರಿಸಿದ್ದಾರೆ ಎಂಬ, ಜಗತ್ತೇ ಬೆಚ್ಚಿಬೀಳುವ ಒಂದು ಸುದ್ದಿ ಹೊರಬಂತು. ಸುದ್ದಿಯ ಮೂಲ ಯಾವುದು ಎಂಬ ಗೋಜಿಗೆ ಹೋಗದೆ ಜಗತ್ತಿನ ಬಹುತೇಕ ದೊಡ್ಡ ದೊಡ್ಡ ಮಾಧ್ಯಮಗಳು ಪೈಪೋಟಿಯ ಮೇಲೆ ಅದಕ್ಕೆ ಒಂದಿಷ್ಟು ಮಸಾಲೆ ಬೆರೆಸಿ ಪ್ರಕಟಿಸಿದವು. ಅಮೆರಿಕಾ ಅಧ್ಯಕ್ಷರೇ ಇದು ಸತ್ಯ ಸುದ್ದಿಯೇನೋ ಎಂಬಂತೆ ಹೇಳಿಕೆ ನೀಡಿದ ಮೇಲೆ ಅದನ್ನು ನಂಬದಿರಲು ಸಾ‍ಧ್ಯವೇ ಇರಲಿಲ್ಲ. ‘ನೋಡಿದ್ರಾ.. ಅಮೆರಿಕ ಅಧ್ಯಕ್ಷ ಬೈಡನ್ ಅವರೇ ಹೇಳಿದ್ದಾರೆ..’ ಎಂದು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳ ತೊಡಗಿದರು ಅನೇಕರು. ಸ್ವಲ್ಪವೇ ಹೊತ್ತಿನಲ್ಲಿ ‘ಬೈಡನ್ ಹೇಳಿದ್ದು ಪ್ರಬಲ ಪುರಾವೆ ಇದ್ದು ಅಲ್ಲ, ಕೇವಲ ವರದಿಗಳನ್ನು ನಂಬಿ’ ಎಂದು ಶ್ವೇತ ಭವನ ಹೇಳಿತು. ಸುದ್ದಿಯನ್ನು ಸಮರ್ಥಿಸಲು ಇಸ್ರೇಲ್ ಸೇನೆಯೂ ನಿರಾಕರಿಸಿತು! 40 ಮಕ್ಕಳ ತಲೆ ಕತ್ತರಿಸಿದ್ದಕ್ಕೆ ಪುರಾವೆಯೇ ಇರಲಿಲ್ಲ.</p>



<p>ಬೃಹತ್ ನಗರವೊಂದರ ಬಹುಮಹಡಿ ಕಟ್ಟಡಗಳು ಬೆಂಕಿ ಪೊಟ್ಟಣಗಳ ಹಾಗೆ ಉರುಳುವ ವೀಡಿಯೋ ಒಂದನ್ನು ಹಾಕಿ ಇದು ಇಸ್ರೇಲ್ ದಾಳಿಗೆ ಉರುಳುತ್ತಿರುವ ಕಟ್ಟಡಗಳು ಎನ್ನಲಾಯಿತು. ಅಸಲಿಗೆ ಅದು ಚೀನಾದಲ್ಲಿ ನಿಯಂತ್ರಿತ ರೀತಿಯಲ್ಲಿ ಉರುಳಿಸಲಾದ ಕಟ್ಟಡಗಳು. ಅದು ಉಕ್ರೇನ್ ಯುದ್ಧ ಇರಬಹುದು, ಹಮಾಸ್ ಇಸ್ರೇಲ್ ಸಂಘರ್ಷ ಇರಬಹುದು ವರದಿಗಳ ಜತೆಯಲ್ಲಿ ಕೆಲವೊಮ್ಮೆ ಯುದ್ಧದ ವೀಡಿಯೋ ಗೇಮ್ ಗಳ ತುಣುಕುಗಳೂ ಇರುವುದಿದೆ. ಭಾರತದ ಗೋದಿ ಮೀಡಿಯಾಗಳೇ ಈ ಕೆಲಸ ಮಾಡಿದುದೂ ಇದೆ.</p>



<p><strong>ಫ್ಯಾಕ್ಟ್ <strong>ಚೆಕ್ಕರ್</strong> ಗಳಿಗೆ ಕೈತುಂಬ ಕೆಲಸ</strong></p>



<figure class="wp-block-image size-large"><img loading="lazy" decoding="async" width="895" height="1024" src="https://peepalmedia.com/wp-content/uploads/2023/10/IMG_20231014_180907-895x1024.jpg" alt="" class="wp-image-29921" srcset="https://peepalmedia.com/wp-content/uploads/2023/10/IMG_20231014_180907-895x1024.jpg 895w, https://peepalmedia.com/wp-content/uploads/2023/10/IMG_20231014_180907-262x300.jpg 262w, https://peepalmedia.com/wp-content/uploads/2023/10/IMG_20231014_180907-768x878.jpg 768w, https://peepalmedia.com/wp-content/uploads/2023/10/IMG_20231014_180907-150x172.jpg 150w, https://peepalmedia.com/wp-content/uploads/2023/10/IMG_20231014_180907-300x343.jpg 300w, https://peepalmedia.com/wp-content/uploads/2023/10/IMG_20231014_180907-696x796.jpg 696w, https://peepalmedia.com/wp-content/uploads/2023/10/IMG_20231014_180907-1068x1221.jpg 1068w, https://peepalmedia.com/wp-content/uploads/2023/10/IMG_20231014_180907.jpg 1080w" sizes="auto, (max-width: 895px) 100vw, 895px" /></figure>



<p>ಫ್ಯಾಕ್ಟ್ ಚೆಕ್ಕರ್<strong> </strong> ಮಹಮದ್ ಜುಬೇರ್ ಅಂಥವರಿಗೆ ಕಳೆದ ಒಂದು ವಾರದಿಂದ ಬಿಡುವಿಲ್ಲದ ಕೆಲಸ- ಸುಳ್ಳು ಸುದ್ದಿಗಳ ಮಿಥ್ಯೆಯನ್ನು ಒಡೆಯುವುದು. ಅವರು ಬಹಿರಂಗಪಡಿಸಿದ ಸುಳ್ಳು ಸುದ್ದಿಗಳ ಸಂಖ್ಯೆ ನೋಡಿದರೆ ಗಾಬರಿಯಾದೀತು. ಹಮಾಸ್ ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೊರಬರುತ್ತಿರುವ ಮುಕ್ಕಾಲು ಪಾಲು ಸುದ್ದಿಗಳು ಫೇಕ್ ನ್ಯೂಸ್ ಗಳೇ. ಇದರಲ್ಲಿ ಭಾರತದ ದ್ವೇಷ ಭಕ್ತ ಬಲಪಂಥೀಯರ ಕೊಡುಗೆಯೇ ಅತ್ಯಧಿಕ. ಯಾವುದೋ ದೇಶದ ಯಾವುದೋ ಕಾಲದಲ್ಲಿ ನಡೆದ ನರಮೇಧ, ವಿಧ‍್ವಂಸಕ ಕೃತ್ಯಗಳನ್ನೆಲ್ಲ ತಂದು ಹಮಾಸ್ ಗೆ ಜೋಡಿಸಲಾಗುತ್ತಿದೆ. ಹಿಂಸೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಡುವಿಲ್ಲದೆ ಮಾಡಲಾಗುತ್ತಿದೆ.</p>



<p>ಪ್ರಾಯಶಃ ತಮ್ಮ ಇತ್ತೀಚಿನ ಬದುಕಿನಲ್ಲಿ ಫೇಕ್ ನ್ಯೂಸ್ ಗೆ ಬಲಿಯಾಗದ ಒಬ್ಬನೇ ಒಬ್ಬ ವ್ಯಕ್ತಿ ಸಿಗಲಾರನೇನೋ. ನೀವು ವಾಟ್ಸಪ್ ಅಥವಾ ಫೇಸ್ ಬುಕ್ ನಲ್ಲಿ ಇರುವವರಾದರೆ ಸುದ್ದಿ ನಿಜ ಎಂದು ತಪ್ಪು ತಿಳಿದು ನೀವು ಒಮ್ಮೆಯಾದರೂ ಫೇಕ್ ನ್ಯೂಸ್ ಹಂಚಿಕೊಂಡಿದ್ದೀರೋ ಇಲ್ಲವೋ.. ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ತಪ್ಪು ಪೂರ್ತಿ ನಿಮ್ಮದಲ್ಲ. ಆ ಸುದ್ದಿಯನ್ನು ನಂಬುವಂತೆಯೇ ಸೃಷ್ಟಿಸಿರಲಾಗಿರುತ್ತದೆ. ಮತ್ತು ಸ್ವಲ್ಪ ಮಟ್ಟಿಗೆ ಅದನ್ನು ಹರಡುವಲ್ಲಿ ನಿಮ್ಮ ಆತುರದ ಮನಸಿನ ಕೊಡುಗೆಯೂ ಇರುತ್ತದೆ.</p>



<p><strong>ಬಟಾಟೆಯಿಂದ ಚಿನ್ನ ತೆಗೆದ ಕತೆ</strong></p>



<p>ಇತ್ತೀಚಿನ ಭಾರತದ ಅತಿ ದೊಡ್ಡ ಫೇಕ್ ನ್ಯೂಸ್ ಅಂದರೆ ರಾಹುಲ್ ಗಾಂಧಿ ‘ಬಟಾಟೆಯಿಂದ ಚಿನ್ನ ತಯಾರಿಸುತ್ತೇನೆ’ ಎಂದು ಹೇಳಿದ್ದು. ಇದನ್ನು ಮಹಾ ಮಹಾ ಬುದ್ಧಿವಂತರೂ ನಂಬಿ ಬೇಸ್ತು ಬಿದ್ದುದೆ. ಅದರ ನಿಜ ಕತೆ ಏನು ಗೊತ್ತೇ? ಗುಜರಾತ್ ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿಯವರು ಮೋದಿಯವರನ್ನು ಗೇಲಿ ಮಾಡುತ್ತಾ, ‘ಮೋದಿಯವರು ನಿಮ್ಮನ್ನು ಹೇಗೆ ಮೋಸ ಮಾಡುತ್ತಾರೆ ಎಂದರೆ, ನಾನು ಒಂದು ಮಶೀನ್ ಹಾಕುತ್ತೇನೆ ಅದರ ಈ ಬದಿಯಲ್ಲಿ ನೀವು ಆಲೂ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ ಎನ್ನುತ್ತಾರೆ. ನೀವು ಮೋಸ ಹೋಗುತ್ತೀರಿ’ ಎಂದುದು. ಬಿಜೆಪಿ ಐಟಿ ಸೆಲ್ ನವರು ಈ ವೀಡಿಯೋವನ್ನು ತಮಗೆ ಬೇಕಾದಂತೆ ಕತ್ತರಿಸಿ ಅದು ರಾಹುಲ್ ಗಾಂಧಿ ಹೇಳಿದ್ದು ಎಂದು ಬಿಂಬಿಸಿದರು. ದಿನಬೆಳಗಾಗುವುದರೊಳಗೆ ಅದು ವೈರಲ್ ಆಯಿತು. ಜನ ಅದನ್ನು ನಂಬಿದರು. ಈಗಲೂ ನಂಬುತ್ತಲೇ ಇದ್ದಾರೆ! ಇದು ಸತ್ಯೋತ್ತರ ಯುಗದಲ್ಲಿ ಸುಳ್ಳಿನ ಶಕ್ತಿ.</p>



<p>ಸುಳ್ಳು ಸುದ್ದಿ ಸೃಷ್ಟಿಸುವುದು ಹೊಸ ಸಂಗತಿಯಲ್ಲ. ಹಿಂದೆಯೂ ಅದು ನಡೆಯುತ್ತಲೇ ಇತ್ತು (ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಮೊದಲಾದವರ ಬಗ್ಗೆ ಅನೇಕ ಸುಳ್ಳು ಸುದ್ದಿಗಳನ್ನು ಸೃಷ್ಟಿಸಲಾಗಿತ್ತು). ಆದರೆ ಈಗ ನಾವಿರುವುದು ಮೊಬೈಲ್ ಇಂಟರ್ನೆಟ್ ಯುಗ. ನಮ್ಮ ಬಳಿ ಫೇಸ್ ಬುಕ್, ವಾಟ್ಸಪ್, ಟ್ವಿಟರ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮಗಳಿವೆ. ಅವುಗಳ ಮೂಲಕ ಜಾಗತಿಕವಾಗಿ ಯಾರನ್ನು ಬೇಕಾದರೂ ನೀವು ಕ್ಷಣಗಳಲ್ಲಿ ತಲಪಬಹುದು. ತಲಪಬಹುದು ಅಂದ ಮೇಲೆ ಸುಳ್ಳು ಸುದ್ದಿಗಳನ್ನೂ ತಲಪಿಸಬಹುದು, ಅಲ್ಲವೇ? ಈಗ ಆಗುತ್ತಿರುವುದೂ ಅದೇ.</p>



<p><strong>ಫೇಕ್ ನ್ಯೂಸ್ ಉಂಟು ಮಾಡಿರುವ ಅನಾಹುತಗಳು</strong></p>



<p>ಪ್ರತಿಯೊಂದಕ್ಕೂ ಎರಡು ಮುಖವಿದೆ. ಇಂಟರ್ ನೆಟ್, ಸೋಶಿಯಲ್ ಮೀಡಿಯಾ ಇವೆಲ್ಲ ಎರಡು ಅಲಗಿನ ಕತ್ತಿಗಳು. ಕತ್ತಿಯನ್ನು ಕೃಷಿ ಕೆಲಸಗಳಿಗೂ ಬಳಸಬಹುದು, ಯಾರದಾದರೂ ತಲೆ ಕತ್ತರಿಸಲೂ ಬಳಸ ಬಹುದು. ಕತ್ತಿ ಯಾರ ಕೈಯಲ್ಲಿ ಇದೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ.</p>



<p>ಫೇಕ್ ನ್ಯೂಸ್ ಗಳು ಭಾರತದಂತಹ ದೇಶಗಳಲ್ಲಿ ಮಾಡಿರುವ ಅನಾಹುತಗಳು ಅಸಂಖ್ಯ. ಮಕ್ಕಳ ಕಳ್ಳರು ಎಂಬ ಸುಳ್ಳು ಸುದ್ದಿ ನಂಬಿ ಅಪರಿಚಿತರನ್ನು ಬಡಿದು ಸಾಯಿಸಿದ ಉದಾಹರಣೆ ಇದೆ. ಗೋಮಾಂಸದ ಸುಳ್ಳು ಸುದ್ದಿಯ ಮೇಲೆ ಕೊಲೆಗಳು ನಡೆದಿವೆ. ಧರ್ಮವನ್ನು ದೇವರನ್ನು ಕುರಿತ ಸುಳ್ಳು ಸುದ್ದಿಗಳನ್ನ ನಂಬಿ ಕೋಮು ಗಲಭೆ ನಡೆದ ಉದಾಹರಣೆಯಿದೆ. ಬದುಕಿರುವವರನ್ನೂ, ಸೋಶಿಯಲ್ ಮೀಡಿಯಾ ಮೂಲಕ ಸುದ್ದಿ ಹರಡಿ, ಸಾಯಿಸಿ ‘ಓಂ ಶಾಂತಿ, ರಿಪ್’ ಎಂದ ಉದಾಹರಣೆಯಿದೆ. ದುಷ್ಟರ ಮತ್ತು ಅವಿವೇಕಿಗಳ ಕೈಯಲ್ಲಿ ಈಗ ಸ್ಮಾರ್ಟ್ ಫೋನ್ ಇದೆ.&nbsp; ಸೋಶಿಯಲ್ ಮೀಡಿಯಾದ ಕಾರಣಕ್ಕಾಗಿಯೇ ಈಗ ಭಾರತ ಜ್ವಾಲಾಮುಖಿಯ ಮೇಲೆ ಕುಳಿತಿದೆ. ಅದು ಯಾವ ಕ್ಷಣದಲ್ಲಿಯೂ ಸಿಡಿಯಬಹುದು.</p>



<p>ಈವತ್ತು ನಾವು ಎಂತಹ ಸುಳ್ಳು ಸುದ್ದಿಗಳ ಸಾಗರದ ಮಧ್ಯದಲ್ಲಿದ್ದೇವೆ ಎಂದರೆ ನಿಜ ಸುದ್ದಿಯನ್ನೂ ನಂಬುವುದೋ ಬಿಡುವುದೋ ಎಂಬ ಗೊಂದಲಕ್ಕೊಳಗಾಗುವಂತಾಗಿದೆ. ಹಾಗಾಗಿ ಯಾವುದೇ ಸುದ್ದಿಯನ್ನು ನಂಬುವ ಮತ್ತು ಅದಕ್ಕೂ ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚುವ ಮುನ್ನ ಒಂದುಬಾರಿ ಎರಡು ಬಾರಿಯಲ್ಲ ನೂರು ಬಾರಿ ಯೋಚಿಸುವಂತಾಗಿದೆ. ಈ ಸುಳ್ಳು ಸುದ್ದಿಗಳು ದೊಡ್ಡ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತಿರುವ ನೆಲೆಯಲ್ಲಿ ಅವಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಕಡಿವಾಣ ಹಾಕುವುದು ಹೇಗೆ, ಯಾರು ಮತ್ತು ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p>ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</p>



<p><strong>ಇದನ್ನೂ ಓದಿ</strong>&#8211; <a href="https://peepalmedia.com/social-media-is-stripping-away-all-the-masks/" data-type="post" data-id="27548">ಮುಖವಾಡಗಳನ್ನೆಲ್ಲ ಕಳಚಿ ಹಾಕುತ್ತಿರುವ ಸಾಮಾಜಿಕ ಮಾಧ್ಯಮ</a></p>
]]></content:encoded>
					
		
		
			</item>
		<item>
		<title>ನೆನಪು &#124; ಶಿವರಾಮ ಕಾರಂತ ಎಂಬ ಬಹುಮುಖೀ ಬೆರಗು</title>
		<link>https://peepalmedia.com/memory-shivaram-karanta/</link>
		
		<dc:creator><![CDATA[Shrinivas Karkala]]></dc:creator>
		<pubDate>Tue, 10 Oct 2023 08:02:56 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=29519</guid>

					<description><![CDATA[ಸಾಹಿತ್ಯ ದಿಗ್ಗಜ ಶಿವರಾಮ ಕಾರಂತ ಅವರ ಜನ್ಮ ದಿನ ಇಂದು (ಅ. 10). ಅವರನ್ನು ಹತ್ತಿರದಿಂದ ಕಂಡು ಅವರ ನೆನಪಿನಲ್ಲಿ  ಶ್ರೀನಿವಾಸ ಕಾರ್ಕಳ ಹೀಗೆ ಬರೆಯುತ್ತಾರೆ-  ಇಂದು ಬೇರೆಯವರು ನಡೆದು ಸವೆದ ದಾರಿಯಲ್ಲಿ ಕಾರಂತರು ನಡೆಯಲಿಲ್ಲ. ತಮ್ಮದೇ ಹೊಸ ದಾರಿ ಹುಡುಕಿಕೊಂಡರು. ಇಡೀ ಬದುಕನ್ನು ಕೊನೆಯ ಉಸಿರಿನವರೆಗೂ ಕ್ರಿಯಾಶೀಲತೆಯ ಮೂಲಕ ಜೀವಂತವಾಗಿ ಬದುಕಿದರು. ಈ ಎಲ್ಲ ಕಾರಣಕ್ಕೇ  ಶಿವರಾಮ ಕಾರಂತರು ಇಪ್ಪತ್ತನೇ ಶತಮಾನದ ಒಂದು ಅಚ್ಚರಿ; ನಾವೆಲ್ಲರೂ ಹೆಮ್ಮೆ ಪಡಬೇಕಾದ ಒಂದು ಬಹುಮುಖೀ ಬೆರಗು. ನನಗಾಗ ಸುಮಾರು [&#8230;]]]></description>
										<content:encoded><![CDATA[
<p class="has-black-color has-text-color has-background" style="background-color:#c2d6d178"><strong>ಸಾಹಿತ್ಯ ದಿಗ್ಗಜ ಶಿವರಾಮ ಕಾರಂತ ಅವರ ಜನ್ಮ ದಿನ  <strong>ಇಂದು </strong>(ಅ. 10). ಅವರನ್ನು ಹತ್ತಿರದಿಂದ ಕಂಡು ಅವರ ನೆನಪಿನಲ್ಲಿ  ಶ್ರೀನಿವಾಸ ಕಾರ್ಕಳ ಹೀಗೆ ಬರೆಯುತ್ತಾರೆ-  ಇಂದು ಬೇರೆಯವರು ನಡೆದು ಸವೆದ ದಾರಿಯಲ್ಲಿ ಕಾರಂತರು ನಡೆಯಲಿಲ್ಲ. ತಮ್ಮದೇ ಹೊಸ ದಾರಿ ಹುಡುಕಿಕೊಂಡರು. ಇಡೀ ಬದುಕನ್ನು ಕೊನೆಯ ಉಸಿರಿನವರೆಗೂ ಕ್ರಿಯಾಶೀಲತೆಯ ಮೂಲಕ ಜೀವಂತವಾಗಿ ಬದುಕಿದರು. ಈ ಎಲ್ಲ ಕಾರಣಕ್ಕೇ  ಶಿವರಾಮ ಕಾರಂತರು ಇಪ್ಪತ್ತನೇ ಶತಮಾನದ ಒಂದು ಅಚ್ಚರಿ; ನಾವೆಲ್ಲರೂ ಹೆಮ್ಮೆ ಪಡಬೇಕಾದ ಒಂದು ಬಹುಮುಖೀ ಬೆರಗು.</strong></p>



<p class="dropcapp3">ನನಗಾಗ ಸುಮಾರು ಹದಿನಾಲ್ಕರ ಹರೆಯವಿರಬಹುದು. ಮನೆಯಲ್ಲಿ ಒಂದು ದಿನಪತ್ರಿಕೆ ಹೊರತು ಪಡಿಸಿದರೆ ಓದಲು ಪುಸ್ತಕ ಸಿಗುತ್ತಿದ್ದುದು ಕಡಿಮೆ. ಆದರೆ ಸಿಕ್ಕ ಸಿಕ್ಕದ್ದನ್ನೆಲ್ಲ ಕುತೂಹಲದಿಂದ ಓದುವ ಹುಚ್ಚು ಆಗಲೇ ನನಗೆ ಹತ್ತಿತ್ತು.</p>



<p>ಇಂತಹ ಒಂದು ದಿನ ನನ್ನ ಕೈಗೆ ‘ಬೆಟ್ಟದ ಜೀವ’ ಎಂಬ ಪುಸ್ತಕ ಸಿಕ್ಕಿತು. ದೊಡ್ಡ ಅಣ್ಣ ಪದವಿ ಓದಲು ಆರಂಭಿಸಿದಾಗ ಅವರಿಗೆ ನಾನ್ ಡಿಟೇಲ್ಡ್ ಆಗಿ ಈ ಪುಸ್ತಕ ನಿಗದಿಯಾಗಿರಬೇಕು. ಸುಮ್ಮನೆ ಓದುತ್ತ ಹೋದೆ. ಕುತೂಹಲ ಕೆರಳುತ್ತ ಹೋಯಿತು.</p>



<p>ನಾವಿದ್ದುದೂ ಕುಂದಾಪುರ ತಾಲೂಕಿನ ಶಂಕರನಾರಾಯಣದ ಗದ್ದೆ, ಬೆಟ್ಟ ಆವೃತ ಹಳ್ಳಿ ಪರಿಸರವಾಗಿದ್ದುದರಿಂದ, ಕಾದಂಬರಿಯೊಳಗಿನ ಘಟನೆಗಳೆಲ್ಲ ನಮ್ಮ ಸುತ್ತಮುತ್ತಲೇ ನಡೆದಂತೆ ಅನಿಸಿ ಕಥಾನಕ ಆಪ್ತವಾಗುತ್ತಾ ಹೋಯಿತು. ಶಿವರಾಮ ಕಾರಂತರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ಆದರೆ ನಾನು ಅವರ ಹೆಸರು ಮೊದಲಬಾರಿ ನೋಡಿದುದು ಆ ಕಾದಂಬರಿಯ ಮುಖಪುಟದಲ್ಲಿ.</p>



<p>ಆನಂತರ ಕೆಲ ವರ್ಷಗಳಲ್ಲಿ ಶಿವರಾಮ ಕಾರಂತರು ‘ಮಲೆಯ ಮಕ್ಕಳು’ ಎಂಬ ಸಿನಿಮಾ ಮಾಡ್ತಾರಂತೆ ಎಂದು ಪತ್ರಿಕೆಯಲ್ಲಿ ಓದಿದ್ದೆ. ಆ ಸಿನಿಮಾದಲ್ಲಿ ನಮ್ಮೂರಿನ ಒಬ್ಬರು ಪಾತ್ರ ವಹಿಸಿದ್ದ ಬಗ್ಗೆಯೂ ತಿಳಿದು ಬಂದು ಒಂದಷ್ಟು ಹೆಚ್ಚು ಕುತೂಹಲ ಕೆರಳಿತ್ತು.</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="539" height="683" data-id="29520" src="https://peepalmedia.com/wp-content/uploads/2023/10/Karanth1.png" alt="" class="wp-image-29520" srcset="https://peepalmedia.com/wp-content/uploads/2023/10/Karanth1.png 539w, https://peepalmedia.com/wp-content/uploads/2023/10/Karanth1-237x300.png 237w, https://peepalmedia.com/wp-content/uploads/2023/10/Karanth1-150x190.png 150w, https://peepalmedia.com/wp-content/uploads/2023/10/Karanth1-300x380.png 300w" sizes="auto, (max-width: 539px) 100vw, 539px" /><figcaption class="wp-element-caption">ಫೋಟೋ: ಶ್ರೀನಿವಾಸ ಕಾರ್ಕಳ</figcaption></figure>
</figure>



<p><strong>ಜ್ಞಾನಪೀಠ</strong></p>



<p>ಹನ್ನೊಂದು ವರ್ಷಗಳನ್ನು ಶಂಕರನಾರಾಯಣದಲ್ಲಿ ಕಳೆದು ಮುಂದಿನ ಓದಿಗೆ ಕಾರ್ಕಳಕ್ಕೆ ಬಂದೆ. ಅಲ್ಲಿನ ಭುವನೇಂದ್ರ ಕಾಲೇಜಿನಲ್ಲಿಯಾದರೋ ಸಾಹಿತ್ಯ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹವಿತ್ತು. 1977 ರಲ್ಲಿ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಕಾರಂತರಿಗೆ ಸನ್ಮಾನ ಏರ್ಪಾಡಾಗಿತ್ತು. ಆ ದಿನ ಕಾರಂತರನ್ನು ಮೊದಲ ಬಾರಿಗೆ ಕಣ್ಣಾರೆ ಕಂಡೆ.</p>



<p>ಮುಂದೆ ನಾನು ಅಲ್ಲಿನ ಸಾಹಿತ್ಯ ಸಂಘದ ಕಾರ್ಯದರ್ಶಿಯಾದೆ. ಅದೇ ಸಂದರ್ಭದಲ್ಲಿ ಕಾರಂತರನ್ನು ಕರೆಸಿ ಒಂದು ಕಾರ್ಯಕ್ರಮ ಮಾಡಿದ್ದರು. ಹಾಗಾಗಿ ಕಾರಂತರೊಂದಿಗೇ ವೇದಿಕೆಯಲ್ಲಿ ಆಸೀನನಾಗುವ ಅವಕಾಶವೂ ನನಗೆ ದೊರೆಯಿತು.</p>



<p>ಹೀಗೆ ನಿಧಾನವಾಗಿ ಕಾರಂತರ ಬಗ್ಗೆ ಆಸಕ್ತಿ ಹೆಚ್ಚಲಾರಂಭಿಸಿತು. ಕಾರ್ಕಳದ ಗ್ರಂಥಾಲಯಕ್ಕೆ ಹೋಗಿ ಅವರ ಕಾದಂಬರಿಗಳನ್ನು ಓದಲಾರಂಭಿಸಿದೆ. ‘ಮೂಕಜ್ಜಿಯ ಕನಸುಗಳು’ ಓದಲು ಯತ್ನಿಸಿದೆನಾದರೂ ಅದರ ಕಥಾ ವಸ್ತು ಕೊಂಚ ಕ್ಲಿಷ್ಟ ಇದ್ದುದರಿಂದ ಅದು ನನ್ನ ಕುತೂಹಲವನ್ನು ಕೆರಳಿಸಲು ಶಕ್ತವಾಗಲಿಲ್ಲ.</p>



<p>ಆನಂತರ ನಾನು ಮಂಗಳೂರಿನ ನಿವಾಸಿಯಾದೆ. ಕಾರಂತರ ಸಾಹಿತ್ಯ ಕೃತಿಗಳಿಗಿಂತಲೂ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಅವರ ಯಕ್ಷಗಾನದ ಪ್ರಯೋಗಗಳು, ಪರಿಸರ ಹೋರಾಟದ ಚಟುವಟಿಕೆಗಳು. ಹಾಗಾಗಿ ಸುತ್ತ ಎಲ್ಲೇ ಅವರ ಕಾರ್ಯಕ್ರಮ ಇದ್ದರೂ ಅಲ್ಲಿ ಹೋಗಲಾರಂಭಿಸಿದೆ. ಕೈಗೆ ಕ್ಯಾಮರಾ ಬಂದ ಮೇಲಂತೂ ಅವರ ನಾನಾ ಭಂಗಿಗಳನ್ನು ಸೆರೆ ಹಿಡಿಯುವ ಹುಚ್ಚು ಹೆಚ್ಚುತ್ತಾ ಹೋಯಿತು.</p>



<p><strong>ಪರಿಸರ ಹೋರಾಟ</strong></p>



<p>ಆಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಬಳಿಸಲು ದೊಡ್ಡ ಸಂಖ್ಯೆಯಲ್ಲಿ ಮಾಲಿನ್ಯಕಾರಕ ಕಾರ್ಖಾನೆಗಳು ಕ್ಯೂನಲ್ಲಿ ನಿಂತಿದ್ದವು. ಅವುಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಹೋರಾಟಗಳೂ ನಡೆಯುತ್ತಿದ್ದವು.&nbsp;</p>



<p>ಆಗ ಈ ಹೋರಾಟಗಳ ಮುಂದೆ ಕಾರಂತರು ಇದ್ದುದರಿಂದ ಎಲ್ಲರಲ್ಲೂ ವಿಶೇಷ ಹುಮ್ಮಸ್ಸು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರಂತರಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಸುಮಾ ಸೊರಬ ಈ ಹೋರಾಟದ ನೈತಿಕ ಶಕ್ತಿಯಾಗಿದ್ದರು. ಮಂಗಳೂರಿನಲ್ಲಿ 1993 ರಲ್ಲಿ ನಡೆದ ಅಂತಹ ಒಂದು ಪ್ರತಿಭಟನಾ ಸಭೆಯಲ್ಲಿ ಕಾರಂತ, ಅನಂತಮೂರ್ತಿ ಹೀಗೆ ಘಟಾನುಘಟಿಗಳು ಸೇರಿದ್ದರು. ಉಷ್ಣವಿದ್ಯುತ್ ಸ್ಥಾವರದ ಬೂದಿಯಿಂದ ಇಟ್ಟಿಗೆ ಮಾಡಲಾಗುವುದು ಎಂಬ ಸಮರ್ಥನೆಯನ್ನು ಕಟುವಾಗಿ ಟೀಕಿಸಿದ ಅವರು “ಬೂದಿಯಿಂದ ಇಟ್ಟಿಗೆ ಮಾಡಲು ಅಪಾರ ನೀರು ಬೇಕು, ಎಲ್ಲಿಂದ ತರುತ್ತೀರಿ ಅದನ್ನು, ಕೊನೆಗೆ ಅದನ್ನು ಹಣೆಗೆ ಹಚ್ಚಿಕೊಳ್ಳಬೇಕಷ್ಟೇ” ಎಂದುದು ಇದೇ ಸಭೆಯಲ್ಲಿ.</p>



<p>ಶಿವರಾಮ ಕಾರಂತರನ್ನು ಹತ್ತಿರದಿಂದ ಕಂಡು ಮಾತಾಡಿಸಿದ ಎರಡು ಘಟನೆ ಈಗಲೂ ನೆನಪಾಗುತ್ತಿದೆ. ಆಗ ಕೊಜಂಟ್ರಿಕ್ಸ್ ವಿದ್ಯುತ್ ಸ್ಥಾವರದ (ನಂದಿಕೂರು ಉಷ್ಣವಿದ್ಯುತ್ ಸ್ಥಾವರ) ವಿರುದ್ಧ ಪಡುಬಿದ್ರೆಯಲ್ಲಿ ದೊಡ್ಡದೊಂದು ಸಭೆ ಏರ್ಪಾಟಾಗಿತ್ತು (1994). ಕಾರಂತರು, ಕುಸುಮಾ ಸೊರಬ, ಮೇಧಾ ಪಾಟ್ಕರ್ ಎಲ್ಲರೂ ಬರುವವರಿದ್ದರು.</p>



<p>ಕಾರಂತರ ಒಂದು ವಿಶಿಷ್ಟ ಗುಣವೆಂದರೆ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ಮೊದಲೇ ತಲಪಿ ಬಿಡುವುದು. ಅಂದು ಕೂಡಾ ಹಾಗೆಯೇ ಬಂದು ಅಂಬಾಸಿಡರ್ ಕಾರಿನಲ್ಲಿ ಕುಳಿತಿದ್ದರು. ನನಗೋ ಅವರನ್ನು ಮಾತನಾಡಿಸುವ ತುಡಿತ. ಆದರೆ ಅವರು ಮಹಾ ಕೋಪಿಷ್ಠ ಎಂಬುದು ನನಗೆ ಗೊತ್ತಿತ್ತು. ಆದರೂ ಧೈರ್ಯ ಮಾಡಿ, “ಸಾರ್, ನೀವು ಕುದುರೆಮುಖ ಶಿಖರದ ಎತ್ತರದ ಬಗ್ಗೆ ಒಂದೆಡೆ ಮಾಹಿತಿ ದಾಖಲಿಸಿದ್ದೀರಿ, ಆದರೆ ಅದು ಸರಿಯಲ್ಲವಂತೆ, ನೀವೇನಂತೀರಿ?” ಎಂದು ಕೇಳಿದೆ. ಅವರ ಮುಖ ಕೆಂಪಾಯಿತು. ನನಗೆ ಒಂದಿಷ್ಟು ಬೈಯ್ದರು. ಮರುಕ್ಷಣವೇ ತಣ್ಣಗಾದರು. ಅದು ಹಾಗಲ್ಲ, ಆಗ ಮಾಪಕ ಯಂತ್ರಗಳಿರಲಿಲ್ಲ. ಹಾಗಾಗಿ ಹಾಗೆ ಬರೆದುದು. ಆದರೆ ಈಗ ಬ್ಯಾರೋಮೀಟರ್ ಬಳಸಿ ನಿಖರವಾಗಿ ಅಳೆಯಬಹುದು ಅಂದರು. ಇನ್ನೂ ಏನೋ ವಿವರಣೆ ನೀಡುತ್ತಿರುವಾಗಲೇ ದೂರದಿಂದ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬರುವುದು ಅವರಿಗೆ ಕಂಡಿತು. ಕಾರಂತರಿಗೆ ಆಗ ಅಂದಾಜು 90 ರ ಹರೆಯ. ಮೇಧಾ ಅವರಿಗೆ ಅರವತ್ತೂ ಆಗಿರಲಿಕ್ಕಿಲ್ಲ. ಆದರೂ ಗುಣವನ್ನು, ಪ್ರತಿಭೆಯನ್ನು ಗೌರವಿಸುವ ಒಂದು ದೊಡ್ಡ ಗುಣ ಕಾರಂತರಲ್ಲಿತ್ತು (ಪರಿಸರ ವಿಷಯದಲ್ಲಿ ಎಲ್ಲಪ್ಪ ರೆಡ್ಡಿಯವರ ಬಗ್ಗೆ, ಶಿಕ್ಷಣ ವಿಷಯದಲ್ಲಿ ಸುಕುಮಾರ ಗೌಡರ ಬಗ್ಗೆ ಅವರಲ್ಲಿ ವಿಶೇಷ ಗೌರವ ಇತ್ತು). ಅವರು ಲಗುಬಗನೆ ಕಾರಿನಿಂದ ಇಳಿದು ಮೇಧಾರಿಗೆ ತಾವೇ ಮೊದಲು ನಮಸ್ಕರಿಸಿದರು.</p>



<p><strong>“ಏನದು ಕೆಂಪು ದೀಪ?”</strong></p>



<p>ಸುಮಾರಾಗಿ 1995 ರ ಒಂದು ದಿನ ಇರಬೇಕು. ಸಾಕ್ಷ್ಯ ಚಿತ್ರ ನಿರ್ಮಾಪಕ ನಟೇಶ್ ಉಳ್ಳಾಲ್ ಫೋನ್ ಮಾಡಿ, “ನಾಳೆ ಕಾರಂತರನ್ನು ಸಂದರ್ಶನ ಮಾಡುವುದಿದೆ, ಬರುತ್ತಿರಾ?” ಎಂದು ಕೇಳಿದ. ಕಾರಂತರನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ಳುವುದುಂಟೇ? “ಸರಿ” ಎಂದೆ. ಮಾರನೇ ದಿನ ನಮ್ಮ ಜೀಪು ಸಾಲಿಗ್ರಾಮದೆಡೆಗೆ ಸಾಗಿತು. ಅವರ ಮನೆಗೆ ಹೋದೆವು. ನಮ್ಮ ಪರಿಚಯ ಹೇಳಿಕೊಂಡೆವು. “ನನಗೀಗ ದೇವಸ್ಥಾನಕ್ಕೆ ಹೋಗುವುದಿದೆ. ಒಂದೆರಡು ಗಂಟೆ ಬಿಟ್ಟು ಬನ್ನಿ” ಎಂದರು. ಏನಿದು ಕಾರಂತರು.. ದೇವರು.. ದೇವಸ್ಥಾನ.. ಎಂದು ತಪ್ಪು ತಿಳಿಯುತ್ತೇವೆ ಎಂದು ಅರಿತೋ ಏನೋ “ದೇವಸ್ಥಾನಕ್ಕೆ ಎಂದರೆ ನನಗಾಗಿ ಹೋಗುವುದಲ್ಲ, ನಾನು ಅಲ್ಲಿರಬೇಕು ಎಂದು ಅವರು ಹೇಳಿದ್ದಾರೆ, ಹಾಗಾಗಿ ಹೋಗುತ್ತಿದ್ದೇನೆ”, ಎಂದೂ ಸೇರಿಸಿದರು. ನಾವು ನಕ್ಕು ಕುಂದಾಪುರದೆಡೆಗೆ ಸರಿದೆವು. ಅಲ್ಲಿ ಅರಣ್ಯಾಧಿಕಾರಿ ಮೂರ್ತಿ ಎಂಬವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕೋಟಕ್ಕೆ ಮರಳಿದೆವು. ಕಾರಂತರು ಮನೆಯಲ್ಲಿದ್ದರು.</p>



<p>ನಮ್ಮ ಬಳಿ ವೀಡಿಯೋ ಕ್ಯಾಮರಾ ಇತ್ತು (ಆಗಿನ ಕಾಲದಲ್ಲಿ ಮದುವೆ ಸಮಾರಂಭಗಳಲ್ಲಿ ಬಳಸುವಂಥದ್ದು, ಉನ್ನತ ಗುಣಮಟ್ಟದ್ದೇನೂ ಅಲ್ಲ). ಕ್ಯಾಮರಾ ಚಲಾಯಿಸುವುದು ನಟೇಶನ ತಮ್ಮ ಉದಯ. ಸರಿ, ನಿಧಾನಕ್ಕೆ ಮಾಲಿನ್ಯ ಕಾರಕ ಕೈಗಾರಿಕೆಗಳು, ನದಿ ನೀರಿನ ಮಾಲಿನ್ಯ… ಹೀಗೆ ಕಾರಂತರನ್ನು ಮಾತಿಗೆಳೆದೆವು.</p>



<p>ನಾವು ಅವರ ವೀಡಿಯೋ ಸಂದರ್ಶನ ಮಾಡಲು ಬಂದಿದ್ದು ಅದನ್ನು ಅವರ ಬಳಿ ಹೇಳಲು ಧೈರ್ಯವಿರಲಿಲ್ಲ. ಆದರೆ ಅವರ ಅನುಮತಿ ಪಡೆಯದೆ ಉದಯ ಕ್ಯಾಮರಾವನ್ನು ಚಾಲೂ ಮಾಡಿಬಿಟ್ಟಿದ್ದ.</p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="510" height="642" data-id="29523" src="https://peepalmedia.com/wp-content/uploads/2023/10/Karanth3.png" alt="" class="wp-image-29523" srcset="https://peepalmedia.com/wp-content/uploads/2023/10/Karanth3.png 510w, https://peepalmedia.com/wp-content/uploads/2023/10/Karanth3-238x300.png 238w, https://peepalmedia.com/wp-content/uploads/2023/10/Karanth3-150x189.png 150w, https://peepalmedia.com/wp-content/uploads/2023/10/Karanth3-300x378.png 300w" sizes="auto, (max-width: 510px) 100vw, 510px" /></figure>
</figure>



<p><strong>ವಿಜ್ಞಾನದ ಮೇಲೆ ಅಪಾರ ನಂಬಿಕೆ</strong></p>



<p>ಕಾರಂತರಿಗೆ ವಿಜ್ಞಾನದ ಮೇಲೆ ಅಪಾರ ನಂಬಿಕೆ. ನಮ್ಮ ಯಾವುದೇ ವಾದ ಬಲವಾದ ಪುರಾವೆಗಳನ್ನು ಆಧರಿಸಿರಬೇಕು ಎಂಬುದು ಅವರ ವಾದ. ಮಾಲಿನ್ಯದ ಬಗ್ಗೆ ಮಾತನಾಡುವಾಗ ನಮ್ಮ ಮಾತು ತುಂಡರಿಸಿ, “ನೀವು ನದಿ ನೀರು ಮಲಿನಗೊಂಡಿದೆ ಎಂದರೆ ಯಾರು ಅದನ್ನು ನಂಬುತ್ತಾರೆ? ಆ ನೀರನ್ನು ಮೊದಲು ಲ್ಯಾಬ್ ಗೆ ಒಯ್ದು ಅದರಲ್ಲಿ ಏನೇನು ಎಷ್ಟೆಷ್ಟಿದೆ ಎಂದು ಪತ್ತೆ ಹಚ್ಚಿ, ಆ ಅಂಕಿ ಅಂಶಗಳ ಮೇಲೆ ನಿಮ್ಮ ವಾದ ಮಂಡಿಸಬೇಕು” ಎಂದರು.</p>



<p>ನಮ್ಮ ಚರ್ಚೆಯನ್ನು ಅನುಮತಿಯಿಲ್ಲದೆ ಉದಯ ಚಿತ್ರೀಕರಿಸುತ್ತಿರುವುದು ಕಾರಂತರಿಗೆ ಗೊತ್ತಿಲ್ಲ ಎಂದು ನಾವು ಅಂದುಕೊಂಡಿದ್ದೆವು. ಕಾರಂತರಿಗೆ ಆಗ 90 ರ ಹರೆಯವಾಗಿದ್ದರೂ ಅವರ ದೃಷ್ಟಿ ತುಂಬಾ ಸೂಕ್ಷ್ಮ. “ಏನದು ಕೆಂಪು ದೀಪ?” ಎಂದರು. ಅದು ಕ್ಯಾಮರಾ ಚಾಲೂ ಇರುವ ಸಂಕೇತದ ದೀಪ. ನಮ್ಮ ಮೈಯೆಲ್ಲ ಒಂದು ಕ್ಷಣ ಬೆವತು ಹೋಯಿತು. ಆದರೆ ನಮ್ಮ ಊಹೆಯನ್ನು ಕಾರಂತರು ಸುಳ್ಳಾಗಿಸಿದರು. ಸಿಟ್ಟಿನ ಜಮದಗ್ನಿಯಾಗಲಿಲ್ಲ. ಗದರಲಿಲ್ಲ. ಆದರೆ ಗುಟ್ಟು ರಟ್ಟಾಯಿತಲ್ಲ ಎಂದು ಹೆದರಿ ಉದಯ ಕ್ಯಾಮರಾ ಆಫ್ ಮಾಡಿಬಿಟ್ಟ (ರೂಮಿನ ಬೆಳಕಿನಲ್ಲಿ ತೆಗೆದುದರಿಂದ ವೀಡಿಯೋ ಅಷ್ಟೊಂದು ಚೆನ್ನಾಗಿ ಬಂದಿರಲಿಲ್ಲ. ಆದರೂ ಸಾಕ್ಷ್ಯಚಿತ್ರಕ್ಕೆ ಉಪಯೋಗವಾಗುವಂತೆ ಒಂದಷ್ಟು ಭಾಗಗಳು ಸಿಕ್ಕವು). ಕಾರಂತರೊಂದಿಗಿನ ಮಾತು ಮುಗಿಸಿ ಅಲ್ಲಿಂದ ಹೊರಟೆವು.</p>



<p><strong>“ಆಗಲೂ ಹುಬ್ಬಳ್ಳಿ ಧಾರವಾಡದ ಹತ್ತಿರವೇ ಇತ್ತು”</strong></p>



<figure class="wp-block-gallery has-nested-images columns-default is-cropped wp-block-gallery-3 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="531" height="798" data-id="29521" src="https://peepalmedia.com/wp-content/uploads/2023/10/Karanth2.png" alt="" class="wp-image-29521" srcset="https://peepalmedia.com/wp-content/uploads/2023/10/Karanth2.png 531w, https://peepalmedia.com/wp-content/uploads/2023/10/Karanth2-200x300.png 200w, https://peepalmedia.com/wp-content/uploads/2023/10/Karanth2-150x225.png 150w, https://peepalmedia.com/wp-content/uploads/2023/10/Karanth2-300x451.png 300w" sizes="auto, (max-width: 531px) 100vw, 531px" /></figure>
</figure>



<p>1997 ರ ಸುಮಾರಿಗೆ ಇರಬೇಕು. ಹಿರಿಯ ಗೆಳೆಯರಾದ ಸದಾಶಿವ ಮಾಸ್ತರರು ಆಗ ಹಳೆಯಂಗಡಿ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. “ನಾಳೆ ಕಾರಂತರು ಬರುತ್ತಾರೆ ನೀವು ಬರುತ್ತೀರಾ?” ಎಂದರು. ನಿಗದಿತ ಸಮಯಕ್ಕಿಂತ ಮೊದಲೇ ನಾನು ಅಲ್ಲಿ ತಲಪಿದೆ. ಆದರೆ ನನಗಿಂತಲೂ ಮೊದಲೇ ಕಾರಂತರು ಅಲ್ಲಿ ತಲಪಿಯಾಗಿತ್ತು! ಪ್ರಿನ್ಸಿಪಾಲರ ಕಚೇರಿಯಲ್ಲೇ ಅವರು ಕುಳಿತಿದ್ದುದರಿಂದ ಅವರನ್ನು ಹೆಚ್ಚು ಹತ್ತಿರದಿಂದ ನೋಡುವ ಮತ್ತು ಮಾತನಾಡಿಸುವ ಅವಕಾಶ ದೊರೆಯಿತು. ಆ ದಿನ ಅವರ ಎಷ್ಟು ಫೋಟೋ ತೆಗೆದೆ ಎಂಬುದು ನನಗೇ ಲೆಕ್ಕ ಇಲ್ಲ. ಕಾರಂತರು ತುಂಬಾ ಉಲ್ಲಾಸದಿಂದಿದ್ದರು. ಮಾತು ಮಾತಿಗೂ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ನಮ್ಮ ಮನೆ ಹುಬ್ಬಳ್ಳಿಯಲ್ಲಿ, ಧಾರವಾಡದ ಹತ್ತಿರ ಎಂದು ಶಿಕ್ಷಕಿಯೊಬ್ಬರು ಹೇಳಿದಾಗ, “ನಾನು ಅನೇಕ ಬಾರಿ ಹುಬ್ಬಳ್ಳಿಗೆ ಹೋಗಿದ್ದೆ. ಆಗಲೂ ಅದು ಧಾರವಾಡದ ಹತ್ತಿರವೇ ಇತ್ತು” ಎಂದು ತಾವೂ ನಕ್ಕು ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸಿದರು.</p>



<p>ಆನಂತರ ಶಾಲಾ ಮಕ್ಕಳ ಸಭೆಯಲ್ಲಿ ಭಾಗವಹಿಸಿ ಅವರ ಪ್ರಶ್ನೆಗಳನ್ನು ಉತ್ತರಿಸಿದರು. ಆಗ ಬೆಂಗಳೂರಿನಲ್ಲಿ ವಿಶ‍್ವ ಸುಂದರಿ ಸ್ಪರ್ಧೆ ಏರ್ಪಾಡಾಗಿದ್ದು ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಒಬ್ಬ ವಿದ್ಯಾರ್ಥಿ ಇದರ ಬಗ್ಗೆಯೇ ಪ್ರಶ್ನೆ ಕೇಳಿದ. “ಇವೆಲ್ಲ ದೊಡ್ಡವರ ವಿಷಯ, ನೀವು ನಿಮ್ಮದೇ ಅದ ಪ್ರಶ್ನೆ ಕೇಳಿ ಎಂದರು” ಕಾರಂತರು. ಹೀಗೆ ಬಹಳ ಸೊಗಸಾಗಿ ಕಾರ್ಯಕ್ರಮ ಮುಗಿಯಿತು. ಇದು ಅವರ ಬದುಕಿನಲ್ಲಿ ನಡೆದ ಕೊನೆಯ ಕಾರ್ಯಕ್ರಮಗಳಲ್ಲಿ ಒಂದು. ನಾನೂ ಅವರನ್ನು ನೋಡಿದ ಕೊನೆಯ ಕಾರ್ಯಕ್ರಮ.</p>



<p><strong>ಕಾರಂತ ಯುಗಾಂತ</strong></p>



<figure class="wp-block-gallery has-nested-images columns-default is-cropped wp-block-gallery-4 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="960" height="210" data-id="29522" src="https://peepalmedia.com/wp-content/uploads/2023/10/Karanth4.png" alt="" class="wp-image-29522" srcset="https://peepalmedia.com/wp-content/uploads/2023/10/Karanth4.png 960w, https://peepalmedia.com/wp-content/uploads/2023/10/Karanth4-300x66.png 300w, https://peepalmedia.com/wp-content/uploads/2023/10/Karanth4-768x168.png 768w, https://peepalmedia.com/wp-content/uploads/2023/10/Karanth4-150x33.png 150w, https://peepalmedia.com/wp-content/uploads/2023/10/Karanth4-696x152.png 696w" sizes="auto, (max-width: 960px) 100vw, 960px" /><figcaption class="wp-element-caption"><sub><strong>ಫೋಟೋ: ಶ್ರೀನಿವಾಸ ಕಾರ್ಕಳ</strong></sub></figcaption></figure>
</figure>



<p>1997 ಡಿಸೆಂಬರ್ 2. ಕಾರಂತರಿಗೆ ಹುಷಾರಿಲ್ವಂತೆ, ಮಣಿಪಾಲ ಆಸ್ಪತ್ರೆಯಲ್ಲಿದ್ದಾರಂತೆ ಎಂಬ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹರಡಲಾರಂಭಿಸಿತು. ಅದಾದ ನಂತರ ಕೆಲವೇ ದಿನ. ಡಿಸೆಂಬರ್ 7 ರಂದು ಕಾರಂತರು ತೀರಿಕೊಂಡರಂತೆ ಎಂಬ ಸುದ್ದಿಯೂ ಅಪ್ಪಳಿಸಿತು. ಸುದ್ದಿಮಾಧ‍್ಯಮಗಳು, ಸಾರ್ವಜನಿಕ ಮಾತುಕತೆಗಳು ಎಲ್ಲೆಲ್ಲೂ ಕಾರಂತರದೇ ಸುದ್ದಿ.</p>



<p>ಡಿಸೆಂಬರ್ 8 ರ ಬೆಳಗಿನ ಹೊತ್ತು ಕ್ಯಾಮರಾ ಹಿಡಿದು ಸಾಲಿಗ್ರಾಮದತ್ತ ಧಾವಿಸಿದೆ. ಕಾರಂತರ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿತ್ತು. ಸಾವಿರ ಸಾವಿರ ಜನ ನಾಡಿನ ಮೂಲೆ ಮೂಲೆಯಿಂದ ಬಂದಿದ್ದರು. ಯು ಆರ್ ಅನಂತ ಮೂರ್ತಿ, ಕುಸುಮಾ ಸೊರಬ ಸಹಿತ ಸಾಹಿತ್ಯ ಮತ್ತು ಸಂಸ್ಕೃತಿ ವಲಯದ ಅನೇಕ ದಿಗ್ಗಜರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕಾರಂತರ ವಿಚಾರಗಳಿಗೆ ಅಪಚಾರವಾಗದ ರೀತಿಯಲ್ಲಿಯೇ ಎಲ್ಲವೂ ನಡೆದವು. ಸಾಹಿತಿ ಬೊಳುವಾರು ಮಹಮದ್ ಕುಂಞಿ ಚಿತೆಗೆ ಕಟ್ಟಿಗೆ ಇರಿಸಿದರು. ಶವಕ್ಕೆ ಹೆಗಲು ಕೊಟ್ಟರು ಕೂಡಾ. ಮಧ‍್ಯಾಹ್ನದ ಹೊತ್ತಿಗೆ ಕಾರಂತರ ದೇಹ ಪಂಚಭೂತಗಳಲ್ಲಿ ಲೀನವಾಯಿತು.</p>



<p><strong>ಕಾರಂತರು ನಿಜವಾಗಿ ಏನು?</strong></p>



<p>ಕಾರಂತರು ಬದುಕಿದ್ದ ಕಾಲದಲ್ಲಿ ನಾವು ಬದುಕಿದ್ದೆವು ಎನ್ನುವುದೇ ಒಂದು ನಂಬಲಾಗದಂತಹ ಹೆಮ್ಮೆ. ಕಾರಂತರು ಏನು? ಕಾದಂಬರಿಕಾರನೇ? ಪರಿಸರವಾದಿಯೇ? ವಿಜ್ಞಾನಿಯೇ? ಅವರು ಏನಲ್ಲ? ಅವರು ಕೆಲಸ ಮಾಡದ ಕ್ಷೇತ್ರ ಯಾವುದು? ಕಾದಂಬರಿ ಬರೆದರು, ವೈಚಾರಿಕ ಲೇಖನ ಬರೆದರು, ಸಿನಿಮಾ ಮಾಡಿದರು, ಗೀತನಾಟಕ ಬರೆದು ನಿರ್ದೇಶಿದರು, ನಟಿಸಿದರು, ಪರಿಸರದ ಪರ ಹೋರಾಡಿದರು, ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗ ಮಾಡಿದರು, ಯಕ್ಷಗಾನ ತಂಡ ಕಟ್ಟಿಕೊಂಡು ಜಗತ್ತು ಸುತ್ತಿದರು. ವಿಶ‍್ವವಿದ್ಯಾಲಯದಂತಹ ಒಂದು ಸಂಸ್ಥೆ ಮಾಡಬಹುದಾದುದನ್ನು ಏಕಾಂಗಿಯಾಗಿ ಮಾಡಿದರು.</p>



<p>ನೋಡಲು ಉಗ್ರ ಸ್ವರೂಪಿಯಾಗಿದ್ದ ಅವರೊಳಗೊಂದು ಮುಗ್ಧ ಮಗುವಿತ್ತು. ಕಾರಂತರು ಎಳೆಯರಿಗೆ ಕಾರಂತಜ್ಜ ಆಗಿದ್ದರು. ಅವರಿಗಾಗಿ ಬಾಲವನ ಕಟ್ಟಿದರು. ಅನೇಕ ಪುಸ್ತಕ ಬರೆದರು. ಅವರ ಪ್ರಶ್ನೆಗಳಿಗೆ ನಿಯತಕಾಲಿಕಗಳ ಮೂಲಕ ಮಾತ್ರವಲ್ಲ ವೈಯಕ್ತಿಕವಾಗಿಯೂ ಉತ್ತರಿಸಿದರು. ಮಕ್ಕಳಿಗೆ ಕನ್ನಡದಲ್ಲಿ ವಿಜ್ಞಾನ ಪುಸ್ತಕ ದೊರೆಯದ ಕಾಲದಲ್ಲಿ ತಾವೇ ಆ ಕೆಲಸ ಮಾಡಿದರು. ಪ್ರಾಣಿ ಪಕ್ಷಿಗಳ ಬಗ್ಗೆ ಸಚಿತ್ರ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಹಿರಿಯರಿಗೆ ಗೆಳೆಯನಾಗಿ, ಗುರುವಾಗಿ, ಆಪತ್ಬಾಂಧವನಾಗಿ ಬದುಕಿದರು. ಅಸಹಾಯಕರಿಗೆ ಮನಿಯಾರ್ಡರ್ ಮೂಲಕ ಹಣ ಕಳುಹಿಸಿ ನೆರವಾದರು. ಪರಿಸರ ರಕ್ಷಣೆಯ ಪರ ಗಟ್ಟಿಯಾಗಿ ನಿಂತು ಸರಕಾರಿ ಅಕ್ರಮಗಳಿಗೆ ಅಡ್ಡಿಯಾದರು.</p>



<p>ಕಾರಂತರನ್ನು ಉಲ್ಲೇಖಿಸುವಾಗಲೆಲ್ಲ ಮುಖ್ಯವಾಗಿ ನೆನಪಾಗುವುದು ಅವರ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ. ಅವರ ವೈಚಾರಿಕ ಆಲೋಚನೆಗಳು ಅವರ ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ ಘನೀಭೂತವಾಗಿವೆ. ಚೋಮನಿಗೆ ಒಂದು ತುಂಡು ಜಮೀನಿನ ಹಕ್ಕು ದೊರೆಯದೆ ಈ ದೇಶದ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ ಎಂದು ಅರಿವಾಗಿ 1930 ರ ಕಾಲದಲ್ಲಿಯೇ ಅವರು ‘ಚೋಮನ ದುಡಿ’ ಬರೆದರು.</p>



<p>ಬೇರೆಯವರು ನಡೆದು ಸವೆದ ದಾರಿಯಲ್ಲಿ ಅವರು ನಡೆಯಲಿಲ್ಲ. ತಮ್ಮದೇ ಹೊಸ ದಾರಿ ಹುಡುಕಿಕೊಂಡರು. ಇಡೀ ಬದುಕನ್ನು ಕೊನೆಯ ಉಸಿರಿನವರೆಗೂ ಕ್ರಿಯಾಶೀಲತೆಯ ಮೂಲಕ ಜೀವಂತವಾಗಿ ಬದುಕಿದರು. ಈ ಎಲ್ಲ ಕಾರಣಕ್ಕೇ&nbsp; ಶಿವರಾಮ ಕಾರಂತರು ಇಪ್ಪತ್ತನೇ ಶತಮಾನದ ಒಂದು ಅಚ್ಚರಿ; ನಾವೆಲ್ಲರೂ ಹೆಮ್ಮೆ ಪಡಬೇಕಾದ ಒಂದು ಬಹುಮುಖೀ ಬೆರಗು.</p>



<p><strong>ಶ್ರೀನಿವಾಸ ಕಾರ್ಕಳ</strong></p>



<p>ಮಂಗಳೂರು</p>



<p><strong>ಇದನ್ನೂ ಓದಿ-</strong> <a href="https://peepalmedia.com/gandhi-and-sanatan-dharma/" data-type="post" data-id="28802">ಗಾಂಧಿ ಮತ್ತು ಸನಾತನ ಧರ್ಮ:</a></p>
]]></content:encoded>
					
		
		
			</item>
		<item>
		<title>ನ್ಯೂಸ್ ಕ್ಲಿಕ್ ಮೇಲಣ ದಾಳಿ &#124; ಸ್ವತಂತ್ರ ಮಾಧ್ಯಮಗಳಿಗೆ ಮೋದಿ ಸರಕಾರ ಕಳುಹಿಸಿದ ಸಂದೇಶ</title>
		<link>https://peepalmedia.com/attack-on-news-click/</link>
		
		<dc:creator><![CDATA[Shrinivas Karkala]]></dc:creator>
		<pubDate>Thu, 05 Oct 2023 08:49:14 +0000</pubDate>
				<category><![CDATA[Uncategorized]]></category>
		<category><![CDATA[ಮೀಡಿಯಾ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=29120</guid>

					<description><![CDATA[ನಿನ್ನೆ &#8216;ನ್ಯೂಸ್ ಕ್ಲಿಕ್&#8217; ಮೇಲೆ ನಡೆದ ದಾಳಿಗೆ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆಯ ಹೇಳಿಕೆ ಬಿಡುಗಡೆ ಮಾಡಿವೆ. ದಾಳಿಯ ನೆಪದಲ್ಲಿ ಪತ್ರಕರ್ತರ ಮೊಬೈಲ್, ಲ್ಯಾಪ್ ಟಾಪ್ ಜಪ್ತಿ ಮಾಡುತ್ತಿರುವುದನ್ನು ಆಕ್ಷೇಪಿಸಿ ಅನೇಕ ಮಾಧ್ಯಮ ಸಂಘಟನೆಗಳು ಭಾರತದ ಸುಪ್ರೀಂ ಕೋರ್ಟ್ ನ ಸಿಜೆಐ ಅವರಿಗೇ ಪತ್ರ ಬರೆದಿವೆ 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ ಒಂದು ವಿಷಯದಲ್ಲಿ ಬಹಳ ಬೇಸರವಿದೆ. [&#8230;]]]></description>
										<content:encoded><![CDATA[
<p class="has-background" style="background-color:#abb7c270"><strong>ನಿನ್ನೆ &#8216;ನ್ಯೂಸ್ ಕ್ಲಿಕ್&#8217; ಮೇಲೆ ನಡೆದ ದಾಳಿಗೆ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆಯ ಹೇಳಿಕೆ ಬಿಡುಗಡೆ ಮಾಡಿವೆ. ದಾಳಿಯ ನೆಪದಲ್ಲಿ ಪತ್ರಕರ್ತರ ಮೊಬೈಲ್, ಲ್ಯಾಪ್ ಟಾಪ್ ಜಪ್ತಿ ಮಾಡುತ್ತಿರುವುದನ್ನು ಆಕ್ಷೇಪಿಸಿ ಅನೇಕ ಮಾಧ್ಯಮ ಸಂಘಟನೆಗಳು ಭಾರತದ ಸುಪ್ರೀಂ ಕೋರ್ಟ್ ನ ಸಿಜೆಐ ಅವರಿಗೇ ಪತ್ರ ಬರೆದಿವೆ</strong></p>



<p>2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ ಒಂದು ವಿಷಯದಲ್ಲಿ ಬಹಳ ಬೇಸರವಿದೆ. ಗಲಭೆ ನಡೆದುದಕ್ಕಲ್ಲ, ಗಲಭೆ ನಿಯಂತ್ರಿಸಲು ಸಾಧ್ಯವಾಗದ ಬಗ್ಗೆಯೂ ಅಲ್ಲ. ಆ ಗಲಭೆಯ ಮಾಹಿತಿಯು ಮಾಧ್ಯಮಗಳ ಮೂಲಕ ಜಗತ್ತನ್ನು ತಲಪುವುದನ್ನು ನಿಯಂತ್ರಿಸಲು ಸಾಧ್ಯವಾಗದ ಬಗ್ಗೆ; ಸತ್ಯವು ಜಗತ್ತಿಗೆ ತಿಳಿಯುವುದನ್ನು ತಡೆಯಲು ಸಾಧ್ಯವಾಗದ ಬಗ್ಗೆ.</p>



<p>ಇದನ್ನು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ವತಃ ಹೇಳಿದ್ದಾರೆ. ಸರಕಾರದ ಕೆಂಗಣ್ಣಿಗೆ ಗುರಿಯಾಗಿ ನಿಷೇಧದ ಶಿಕ್ಷೆಗೊಳಗಾದ ಆ ಬಿಬಿಸಿ ಸಂದರ್ಶನದಲ್ಲಿ ಸಂದರ್ಶಕಿಯು ಮೋದಿಯವರಿಗೆ ‘ಆ ಗಲಭೆಗೆ ಸಂಬಂಧಿಸಿದಂತೆ ನಿಮ್ಮ ಕೆಲಸದಲ್ಲಿ ಏನಾದರೂ ಲೋಪವಾಯಿತು ಎಂದು ನಿಮಗೆ ಅನಿಸಿದ್ದಿದೆಯೇ?’ ಎಂದು ಕೇಳುತ್ತಾಳೆ. ಅದಕ್ಕೆ ಮೋದಿಯವರು ‘ಹೌದು. ಒಂದು ವಿಷಯದಲ್ಲಿ ನಾನು ವಿಫಲನಾದೆ. ನಾನು ಮೀಡಿಯಾವನ್ನು ಇನ್ನೂ ಚೆನ್ನಾಗಿ ಮ್ಯಾನೇಜ್ ಮಾಡಬೇಕಿತ್ತು’ ಎನ್ನುತ್ತಾರೆ!</p>



<p>2014 ರಲ್ಲಿ ಪ್ರಧಾನಿಯಾದ ಮೇಲೆ ಮೋದಿಯವರು ಮೊದಲು ಮಾಡಿದ್ದು ಮೀಡಿಯಾವನ್ನು ‘ಮ್ಯಾನೇಜ್’ ಮಾಡುವ ಕೆಲಸ. ಅದಕ್ಕೆ ಅವರು ಎರಡು ತಂತ್ರಗಳನ್ನು ಬಳಸಿದರು.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2023/10/F7mGsZbWEAA45k4.jpg" alt="" class="wp-image-29151" style="width:688px;height:516px" width="688" height="516" srcset="https://peepalmedia.com/wp-content/uploads/2023/10/F7mGsZbWEAA45k4.jpg 1024w, https://peepalmedia.com/wp-content/uploads/2023/10/F7mGsZbWEAA45k4-300x225.jpg 300w, https://peepalmedia.com/wp-content/uploads/2023/10/F7mGsZbWEAA45k4-768x576.jpg 768w, https://peepalmedia.com/wp-content/uploads/2023/10/F7mGsZbWEAA45k4-150x113.jpg 150w, https://peepalmedia.com/wp-content/uploads/2023/10/F7mGsZbWEAA45k4-696x522.jpg 696w" sizes="auto, (max-width: 688px) 100vw, 688px" /></figure>



<p class="has-text-align-center"><strong><sub>ಜಂತರ್ ಮಂತರ್ ನಲ್ಲಿ ಪ್ರತಿಭಟನೆ</sub></strong></p>



<p><strong>ಮೊದಲನೆಯ ತಂತ್ರ</strong> ಆಮಿಷಗಳ ಮೂಲಕ ಮಾಧ್ಯಮಗಳು ಮಂಡಿಯೂರುವಂತೆ ಮಾಡುವುದು. ಉದಾರವಾಗಿ ಜಾಹೀರಾತುಗಳು, ಪತ್ರಕರ್ತರಿಗೆ ಸರಕಾರಿ ಪ್ರಶಸ್ತಿಗಳು, ರಾಜ್ಯಸಭಾ ಸದಸ್ಯತ್ವ.. ಹೀಗೆ. ತೆವಳಲು ಹೇಳುವ ಮುನ್ನವೇ ಮಂಡಿಯೂರಿದ ಇಂತಹ ಮಾಧ್ಯಮಗಳನ್ನು ಖ್ಯಾತ ಪತ್ರಕರ್ತ ರವೀಶ್ ಕುಮಾರ್ ‘ಗೋದಿ ಮೀಡಿಯಾ’ ಎಂದು ಹೆಸರಿಸಿದ್ದಾರೆ.</p>



<p><strong>ಎರಡನೆಯ ತಂತ್ರ</strong>&#8211; ಬೆದರಿಕೆ ಹಾಕುವುದು. ಮಂಡಿಯೂರಲು ಒಪ್ಪದ ಮಾಧ್ಯಮಗಳಿಗೆ ಜಾಹೀರಾತು ಸಿಗದಂತೆ ಮಾಡುವುದು, ಅವುಗಳ ಮೇಲೆ ಸಿಬಿಐ, ಐಟಿ, ಈಡಿ ದಾಳಿ ನಡೆಸುವುದು, ತಮ್ಮ ಗೆಳೆಯ ಉದ್ಯಮಿಗಳ ಮೂಲಕ ಇಡೀ ಮಾಧ್ಯಮವನ್ನು ಖರೀದಿ ಮಾಡುವುದು ಹೀಗೆ.</p>



<p>ಇದರ ಭಾಗವಾಗಿಯೇ, ದಿಟ್ಟವಾಗಿ ಮಾ‍ಧ್ಯಮವೃತ್ತಿ ನಡೆಸುತ್ತಿದ್ದ ಎನ್ ಡಿ ಟಿ ವಿಯ ಮೇಲೆ ದಾಳಿ ನಡೆಯಿತು. ನ್ಯಾಯಾಲಯದಲ್ಲಿ ಸರಕಾರಕ್ಕೆ ಅನುಕೂಲವಾಗದಿದ್ದಾಗ ಇಡೀ ಎನ್ ಡಿ ಟಿವಿಯನ್ನು ಅದಾನಿಯ ಮೂಲಕ ಖರೀದಿಸಲಾಯಿತು. ಅಲ್ಲಿದ್ದ ಖ್ಯಾತ ಪತ್ರಕರ್ತರಾದ ರವೀಶ್ ಕುಮಾರ್, ಶ್ರೀನಿವಾಸನ್ ಜೈನ್, ನಿಧಿ ರಾಜಧಾನ್, ಸಾರಾ ಜೇಕಬ್ ಮೊದಲಾದವರು ಹೊರಹೋಗುವಂತೆ ಮಾಡಲಾಯಿತು. ಎನ್ ಡಿ ಟಿವಿಯ ಬಳಿಕ, ತಮಗೆ ಅನುಕೂಲವಾಗುವಂತೆ ನಡೆದುಕೊಳ್ಳದ ಟ್ವಿಟರ್ ಕಚೇರಿಯ ಮೇಲೆ ಐಟಿ ದಾಳಿ ನಡೆಸಲಾಯಿತು. ಆನಂತರ ಬಿಬಿಸಿ ಕಚೇರಿ, ನ್ಯೂಸ್ ಲಾಂಡ್ರಿ, ದಿ ವೈರ್. ಈಗ ನ್ಯೂಸ್ ಕ್ಲಿಕ್.</p>



<p>&#8216;<strong>ನ್ಯೂಸ್ ಕ್ಲಿಕ್&#8217; ಮೇಲಣ ಧಾಳಿ</strong></p>



<figure class="wp-block-gallery has-nested-images columns-default is-cropped wp-block-gallery-5 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="768" data-id="29149" src="https://peepalmedia.com/wp-content/uploads/2023/10/F7mGsc_W4AAmxKC.jpg" alt="" class="wp-image-29149" srcset="https://peepalmedia.com/wp-content/uploads/2023/10/F7mGsc_W4AAmxKC.jpg 1024w, https://peepalmedia.com/wp-content/uploads/2023/10/F7mGsc_W4AAmxKC-300x225.jpg 300w, https://peepalmedia.com/wp-content/uploads/2023/10/F7mGsc_W4AAmxKC-768x576.jpg 768w, https://peepalmedia.com/wp-content/uploads/2023/10/F7mGsc_W4AAmxKC-150x113.jpg 150w, https://peepalmedia.com/wp-content/uploads/2023/10/F7mGsc_W4AAmxKC-696x522.jpg 696w" sizes="auto, (max-width: 1024px) 100vw, 1024px" /><figcaption class="wp-element-caption"><strong>ಜಂತರ್ ಮಂತರ್ ನಲ್ಲಿ ಪ್ರತಿಭಟನೆ</strong></figcaption></figure>
</figure>



<p>‘ನ್ಯೂಸ್ ಕ್ಲಿಕ್’ ಮೇಲಣ ದಾಳಿಯಂತೂ ಮೋದಿ ಸರಕಾರ ಯಾವ ಮಟ್ಟಕ್ಕೆ ಹೋಗಬಲ್ಲುದು ಎಂಬುದನ್ನು ತೋರಿಸಿಕೊಟ್ಟಿದೆ. ಸುಮಾರು 46 ಪತ್ರಕರ್ತರು, ಉದ್ಯೋಗಿಗಳು, ಆ ಮಾಧ್ಯಮಕ್ಕೆ ಬರೆಯುತ್ತಿದ್ದ ಲೇಖಕರು ಎಲ್ಲರ ಮನೆಗೂ ದಾಳಿ ಮಾಡಿ ಅವರ ಮೊಬೈಲ್ ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಇಬ್ಬರ ಮೇಲೆ ಯುಎಪಿಎ ಕೇಸು ದಾಖಲಿಸಿ ಬಂಧಿಸಲಾಗಿದೆ!</p>



<p>ಯುಎಪಿಎ ಕೇಸು ದಾಖಲಿಸುವುದು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ. ಆದರೆ ಇದೀಗ ಅದನ್ನು ಮಾಧ್ಯಮಗಳ ಮೇಲೂ ದಾಖಲಿಸಲಾರಂಭಿಸಲಾಗಿದೆ. ನ್ಯೂಸ್ ಕ್ಲಿಕ್ ಮೇಲೆ ಹೆಚ್ಚೆಂದರೆ ಎಫ್ ಸಿ ಆರ್ ಐ ಅಡಿಯಲ್ಲಿ ಕೇಸು ದಾಖಲಿಸಬಹುದು. ಆದರೆ, ಭಯೋತ್ಪಾದನೆಗೆ ಸಂಬಂಧಿಸಿದ ಏನು ಅಪರಾಧ ಮಾಡಿದೆ ಅದು? ಈ ಬಗ್ಗೆ ಅಲ್ಲಿ ಪ್ರಕಟವಾದ ಯಾವುದಾದರೂ ಒಂದು ಲೇಖನ ಅಥವಾ ವೀಡಿಯೋ ಸಾಕ್ಷ್ಯ ಕೊಡಬೇಕಲ್ಲವೇ ಸರಕಾರ? ಎರಡು ವರ್ಷ ಹಿಂದೆ ನ್ಯೂಸ್ ಕ್ಲಿಕ್ ಮೇಲೆ ಕೇಸು ದಾಖಲಿಸಿದಾಗ ಇದೇ ನೆಲೆಯಲ್ಲಿ ದೆಹಲಿ ಕೋರ್ಟ್ ‍ನ್ಯೂಸ್ ಕ್ಲಿಕ್ ಸಂಪಾದಕರಿಗೆ ರಕ್ಷಣೆ ಒದಗಿಸಿತ್ತು. ಆದರೆ ಈಗ ನ್ಯೂಯಾರ್ಕ್ ಟೈಮ್ಸ್ ನ ಒಂದು ವರದಿಯ ಪಿಳ್ಳೆ ನೆವ ಹಿಡಿದುಕೊಂಡು ನ್ಯೂಸ್ ಕ್ಲಿಕ್ ಗೆ ಸಂಬಂಧಿಸಿದ ಎಲ್ಲರ ಮೇಲೂ ದಾಳಿ ನಡೆಸಲಾಗಿದೆ.</p>



<p>ದಾಳಿಯೇನೋ ನ್ಯೂಸ್ ಕ್ಲಿಕ್ ಮೇಲೆ. ಆದರೆ ಸಂದೇಶ ಕಳುಹಿಸುತ್ತಿರುವುದು ದಿಟ್ಟ ಪತ್ರಿಕಾವೃತ್ತಿ ನಡೆಸುತ್ತ ಸರಕಾರವನ್ನು ಪ್ರಶ್ನಿಸುತ್ತಿರುವ ಮಾ‍ಧ್ಯಮಗಳ ಪ್ರತಿಯೊಬ್ಬ ಮಂದಿಗೆ. ‘ನೀವು ನಮ್ಮ ಭಜನೆ ಮಾಡದಿದ್ದರೆ ನ್ಯೂಸ್ ಕ್ಲಿಕ್ ಗೆ ಆದ ಗತಿ&nbsp; ನಿಮಗೂ ಆಗಲಿದೆ’ ಎಂಬುದೇ ಆ ಸಂದೇಶ. ಸರಕಾರಗಳು ತಮ್ಮನ್ನು ತಾವು ಎಷ್ಟೇ ಪ್ರಜಾಸತ್ತಾತ್ಮಕ ಎಂದು ಕರೆದುಕೊಳ್ಳಲಿ, ಬಹುವಾಗಿ ಅವು ಟೀಕೆಯನ್ನು ಸಹಿಸುವುದಿಲ್ಲ. ಅದರಲ್ಲೂ ಮೋದಿ ಸರಕಾರ ಈ ಅಸಹನೆಯನ್ನು ದ್ವೇಷವಾಗಿಸಿ ಇನ್ನೊಂದು ಮಟ್ಟಕ್ಕೆ ಒಯ್ದಿದೆ.</p>



<figure class="wp-block-image size-full"><img loading="lazy" decoding="async" width="1024" height="754" src="https://peepalmedia.com/wp-content/uploads/2023/10/F7mGsdAXMAEXHcn.jpg" alt="" class="wp-image-29150" srcset="https://peepalmedia.com/wp-content/uploads/2023/10/F7mGsdAXMAEXHcn.jpg 1024w, https://peepalmedia.com/wp-content/uploads/2023/10/F7mGsdAXMAEXHcn-300x221.jpg 300w, https://peepalmedia.com/wp-content/uploads/2023/10/F7mGsdAXMAEXHcn-768x566.jpg 768w, https://peepalmedia.com/wp-content/uploads/2023/10/F7mGsdAXMAEXHcn-150x110.jpg 150w, https://peepalmedia.com/wp-content/uploads/2023/10/F7mGsdAXMAEXHcn-696x512.jpg 696w" sizes="auto, (max-width: 1024px) 100vw, 1024px" /></figure>



<p class="has-text-align-center"><strong><sub>ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರಿಂದ ಪ್ರತಿಭಟನೆ</sub></strong></p>



<p><strong>ತಿರುಗುಬಾಣವಾಗಲಿದೆ</strong></p>



<p>ಆದರೆ, ಇಂತಹ ಬೆದರಿಕೆಯ ನಡೆಗಳು ತಮಗೆ ತಿರುಗುಬಾಣವಾಗಲಿದೆ ಎನ್ನುವುದು ಈ ಸರಕಾರಗಳಿಗೆ ಯಾಕೆ ಅರ್ಥವಾಗುತ್ತಿಲ್ಲವೋ ತಿಳಿಯುತ್ತಿಲ್ಲ. ನಿನ್ನೆ ನ್ಯೂಸ್ ಕ್ಲಿಕ್ ಮೇಲೆ ನಡೆದ ದಾಳಿಗೆ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆಯ ಹೇಳಿಕೆ ಬಿಡುಗಡೆ ಮಾಡಿವೆ. ದಾಳಿಯ ನೆಪದಲ್ಲಿ ಪತ್ರಕರ್ತರ ಮೊಬೈಲ್, ಲ್ಯಾಪ್ ಟಾಪ್ ಜಪ್ತಿ ಮಾಡುತ್ತಿರುವುದನ್ನು ಆಕ್ಷೇಪಿಸಿ ಅನೇಕ ಮಾಧ್ಯಮ ಸಂಘಟನೆಗಳು ಭಾರತದ ಸುಪ್ರೀಂ ಕೋರ್ಟ್ ನ ಸಿಜೆಐ ಅವರಿಗೇ ಪತ್ರ ಬರೆದಿವೆ.</p>



<p>ಮೋದಿ ಸರಕಾರ ಮಾಧ್ಯಮಗಳ ಮೇಲೆ ನಡೆಸುತ್ತಿರುವ ಪ್ರತೀಕಾರ ದಾಳಿಯನ್ನು ಖಂಡಿಸಿ ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರೀ ಪ್ರತಿಭಟನಾ ಸಭೆ ನಡೆದಿದೆ. ಪ್ರೆಸ್ ಕ್ಲಬ್ ವತಿಯಿಂದಲೂ ನೂರಾರು ಹಿರಿಯ ಮತ್ತು ಕಿರಿಯ ಪತ್ರಕರ್ತರು ಸಭೆ ಸೇರಿ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಕಟುವಾಗಿ ಖಂಡಿಸಿದ್ದಾರೆ. ದೇಶದಾದ್ಯಂತದ ಪ್ರತಿಭಟನಾ ಪ್ರದರ್ಶನದ ಭಾಗವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನಾ ಸಭೆ ನಡೆಯಲಿದೆ.</p>



<p>ಸರ್ವಾಧಿಕಾರಿಗಳು ಪತನಗೊಳ್ಳುವುದು ಬೇರೆಯವರ ಕಾರಣದಿಂದಲ್ಲ. ತಮ್ಮದೇ ತಪ್ಪುಗಳಿಂದ, ಅತಿರೇಕಗಳಿಂದ. ಈಗಣ ಒಕ್ಕೂಟ ಸರಕಾರವನ್ನು ನಡೆಸುತ್ತಿರುವ ಪಕ್ಷಕ್ಕೆ ಚುನಾವಣಾ ಸೋಲಿನ ಸೂಚನೆ ಸಿಕ್ಕಂತೆ ಕಾಣಿಸುತ್ತಿದೆ. ಅದರ ಪರಿಣಾಮವೇ ದೇಶದಾದ್ಯಂತ ವಿರೋಧಿಗಳ ಮೇಲೆ ನಡೆಸಲಾಗುತ್ತಿರುವ ಬಗೆ ಬಗೆಯ ದಾಳಿ. ಈ ದಿಶೆಯಲ್ಲಿ ಸರಕಾರದ ಧಾವಂತ ನೋಡುವಾಗ, ‘ವಿನಾಶ ಕಾಲೇ ವಿಪರೀತ ಬುದ್ಧಿಃ’, ‘ಪಾಪದ ಕೊಡ ತುಂಬುತ್ತಿದೆ’, ‘ಅಂತ್ಯದ ಆರಂಭ’ ಮೊದಲಾದ ನುಡಿಗಟ್ಟುಗಳು ಏಕಕಾಲಕ್ಕೆ ನೆನಪಾಗುತ್ತಿವೆ. (ಚಿತ್ರಗಳು: ಶಬನಂ ಹಶ್ಮಿ)</p>



<p><strong>ಶ್ರೀನಿವಾಸ ಕಾರ್ಕಳ</strong></p>



<p>ಮಂಗಳೂರು</p>



<p><strong>ಇದನ್ನೂ ಓದಿ &#8211;</strong> <a href="https://peepalmedia.com/journalism-can-not-be-treated-as-terrorism-media-groups-write-to-cji-on-newsclick-raids/" data-type="post" data-id="29068">ಪತ್ರಿಕಾರಂಗ ಭಯೋತ್ಪಾದನೆಯಲ್ಲ: ಮಾಧ್ಯಮ ಸಂಸ್ಥೆಗಳಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ</a></p>
]]></content:encoded>
					
		
		
			</item>
	</channel>
</rss>
