Saturday, June 21, 2025

ಸತ್ಯ | ನ್ಯಾಯ |ಧರ್ಮ

ಇಂದಿನಿಂದ 2 ದಿನಗಳು ʼಬೆಂಗಳೂರು ಸಾಹಿತ್ಯ ಉತ್ಸವʼ

ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್‌ ಅಶೋಕ್‌ ಹೋಟೆಲ್‌ ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರು ಸಾಹಿತ್ಯ ಉತ್ಸವ ನಡೆಯಲಿದೆ.

ಡಿಸೆಂಬರ್ 3 ಮತ್ತು 4ರಂದು ನಡೆಯುವ ಉತ್ಸವದಲ್ಲಿ ಸಾಹಿತ್ಯ, ಸಂಗೀತ, ಇತಿಹಾಸ, ಸಂಸ್ಕೃತಿ, ಕಲೆ, ಸಿನಿಮಾ, ಕ್ರೀಡೆ ಮತ್ತು ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿನ ಸಂಕಷ್ಟಗಳ ಬಗ್ಗೆ ಐದು ಪ್ರತ್ಯೇಕ ವೇದಿಕೆಗಳಲ್ಲಿ ಗೋಷ್ಠಿಗಳು ಆಯೋಜನೆಗೊಂಡಿವೆ.

2012 ರಲ್ಲಿ ಸ್ಥಾಪನೆಯಾದ ʼಬೆಂಗಳೂರು ಸಾಹಿತ್ಯ ಉತ್ಸವʼವು ಗಾರ್ಡನ್ ಸಿಟಿಯ ಸಾಹಿತ್ಯ ವೈವಿಧ್ಯತೆ ಮತ್ತು ಸೃಜನಶೀಲ ಮನೋಭಾವವನ್ನು ಸ್ಮರಿಸಲು ಪ್ರಯತ್ನಿಸುವ ಸ್ವತಂತ್ರ, ಸಮುದಾಯ-ನಿಧಿಯ ಕಾರ್ಯಕ್ರಮವಾಗಿದೆ.

ಈ ಎರಡು ದಿನಗಳ ಬಹು ಭಾಷಾ ಜನರು ತುಂಬಿಕೊಳ್ಳುವ ಈ ಉತ್ಸವಕ್ಕೆ 250 ಕ್ಕೂ ಹೆಚ್ಚು ಅಂತರಾಷ್ಟ್ರೀಯ , ಭಾರತೀಯ ಮತ್ತು ನಗರದ ಚಿಂತಕರು, ಸಾಹಿತಿಗಳು, ಲೇಖಕರು ಮತ್ತು ಭಾಷಣಕಾರರು ಆಗಮಿಸಲಿದ್ದು, ವಿವಿಧ ಭಾಷೆಯ ಪುಸ್ತಕಗಳ  ಪ್ರದರ್ಶನ ಮತ್ತು ಮಾರಟವು ನಡೆಯಲಿದೆ.

ಈ ಉತ್ಸವದಲ್ಲಿ ರಸ ಪ್ರಶ್ನೆ ಕಾರ್ಯಕ್ರಮ , ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಎಲ್ಲಾ ವಯಸ್ಕರರೂ ಕುಷಿಯಿಂದ ಭಾಗವಹಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page