Friday, June 6, 2025

ಸತ್ಯ | ನ್ಯಾಯ |ಧರ್ಮ

ಇಡೀ ಕರ್ನಾಟಕಕ್ಕೆ ಭಾನು ಮುಷ್ತಾಕ್ ಕೀರ್ತಿ ತಂದಿದ್ದಾರೆ – ಎಲ್.ಎನ್ ಮುಕುಂದರಾಜ್

ಹಾಸನ : ಕ್ರಿಕೆಟ್ ಆಟಗಾರರು, ರಾಜಕಾರಣಿ, ಒಬ್ಬ ಕೊಲೆ ಮಾಡಿ ಜೈಲಿನಿಂದ ವಾಪಸ್ ಬಂದರೇ ಹೂವಿನ ಮಾಲೆ ಹಾಕಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಮಾಡುತ್ತಾರೆ. ಆದರೇ ಇಡೀ ಕರ್ನಾಟಕಕ್ಕೆ ಕೀರ್ತಿ ತಂದ ಭಾನು ಮುಷ್ತಾಕ್ ಮತ್ತು ದೀಪ ಬಾಸ್ತಿಯವರು ಬೆಂಗಳೂರಿನ ಏರ್ಪೋಟಿಗೆ ಬಂದಾಗ ಯಾರು ಕೂಡ ಅವರನ್ನು ನೋಡಲೆ ಇಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್ ಮುಕುಂದರಾಜ್ ಬೇಸರವ್ಯಕ್ತಪಡಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತು ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಸಾಪ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಭಾಗದಿಂದ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಯುವ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿತೆ ಎಂಬುದು ಅನೇಕ ಕ್ಷೇತ್ರದಲ್ಲಿ ಸಹಕಾರಿಯಾಗಿದ್ದು, ಇದರಿಂದ ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಬಹುದು. ಅನೇಕರಿಗೆ ಪೂರ್ವ ಪರಂಪರೆ ಬಗ್ಗೆ ಅರಿವೆ ಇರುವುದಿಲ್ಲ. ಆದರೇ ಅಭಿಮಾನ ಇರುತ್ತದೆ. ಅಭಿಮಾನವು ಪ್ರಜ್ಞೆ ಇದ್ದಾಗ ಮಾತ್ರ ಬರುತ್ತದೆ. ಪ್ರಸ್ತೂತದಲ್ಲಿ ಬೇರೆ ಬೇರೆ ಅಭಿಮಾನಗಳು ಹುಟ್ಟಿಕೊಂಡು ಅದರ ಅಂತ್ಯ ಹೇಗೆ ಆಗುತ್ತಿದೆ ಎಂದರೇ ಕಳೆದ ಒಂದು ದಿನಗಳ ಹಿಂದೆ ನಡೆದ ಘಟನೆ ಬಗ್ಗೆ ಅರ್ಥ ಮಾಡಿಕೊಳ್ಳಬಹುದು.

ಒಂದು ಕ್ರಿಕೆಟ್ ಬಗ್ಗೆ ಅಭಿಮಾನ ಹೆಚ್ಚಾಗಿ ಹುಚ್ಚೆದ್ದು ಪಟಾಕಿ ಸಿಡಿಸಿ ಕುಣಿಯುತ್ತೇವೆ. ಲಕ್ಷಾಂತರ ಜನರು ತುಂಬಾ ಅಪಾಯದ ಪರಿಸ್ಥಿತಿಯಲ್ಲಿ ಇರುತ್ತಾರೆ. ಹಲವಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಏನು ಕಾರಣ? ಒಬ್ಬ ಸಿನಿಮಾ ನಟ ಆರೀತಿ ಹೊರಗೆ ಬಂದಾಗನೋಡುವುದಕ್ಕೆ ಬಹಳ ದೊಡ್ಡ ಅಭಿಮಾನವನ್ನು ಜನರು ಏಕೆ ತೋರಿಸುತ್ತಾರೆ. ಇದು ಜನರ ತಪ್ಪು ಅಲ್ಲ, ಸಿನಿಮಾ, ಆಟಗಾರರ ಹಾಗೂ ಸರಕಾರದ ತಪ್ಪು ಅಲ್ಲ, ಯಾವೊದು ಒಂದು ಅಪ್ರಜ್ಞಾಪೂರಕವಾಗಿ ಎಲ್ಲೊ ಯಾರೋ ಕಡೆ ಕುಳಿತಕೊಂಡು ಜನರ ಮನಸಿನಲ್ಲಿ ಜನರ ಮನದಲ್ಲಿ ಒಂದು ಉನ್ವಾದ ಭಾವನೆ ಸೃಷ್ಠಿ ಮಾಡುತ್ತಿದ್ದಾರೆ. ಆ ಉನ್ವಾದದ ಭಾವನೆಯೇ ಒಂದು ಕೋಮುವಾದದ ಮನಸ್ಥಿತಿಗೆ ಕಾರಣವಾಗಿರುತ್ತದೆ. ಒಂದಕ್ಕೊಂದು ಸಂಬಂಧ ಇರುತ್ತದೆ. ಈ ಸಂಬಂಧಗಳ ಹೊಡೆಯುವ ಸಾಮಾರ್ಥ್ಯ ಇರುವುದು ಕವಿಗಳಿಗೆ ಮಾತ್ರ. ದಿಟ್ಟತನದಿಂದ ಪ್ರಶ್ನಿಸಬಲ್ಲರು ಎಂದು ಕಿವಿಮಾತು ಹೇಳಿದರು. ಭಾನುಮುಷ್ತಾಕ್ ಅವರಿಗೆ ಅವಾರ್ಡ್ ಬಂದರೇ ಜನರು ಏಕೆ ಹುಚ್ಚೆತ್ತು ಏರ್ಪೋಟಿಗೆ ಹೋಗಿ ಕರೆದುಕೊಂಡು ಬರಲಿಲ್ಲ ರಾಜಕಾರಣಿ ಬಂದರೇ ಸ್ವಾಗತ ಮಾಡುತ್ತಾರೆ, ಒಬ್ಬ ಕೊಲೆ ಮಾಡಿ ಜೈಲಿನಿಂದ ವಾಪಸ್ ಬಂದರೇ ಹೂವಿನ ಮಾಲೆ ಹಾಕಿ ಮೆರವಣಿಗೆ ಮಾಡುತ್ತಾರೆ! ಇಡೀ ಕರ್ನಾಟಕಕ್ಕೆ ಕೀರ್ತಿ ತಂದ ಭಾನು ಮುಷ್ತಾಕ್ ಮತ್ತು ದೀಪ ಬಾಸ್ತಿಯವರು ಬೆಂಗಳೂರಿನ ಏರ್ಪೋಟಿಗೆ ಬಂದಾಗ ಯಾರು ಕೂಡ ಅವರನ್ನು ನೋಡಲೆ ಇಲ್ಲ ಎಂದು ಬೇಸರವ್ಯಕ್ತಪಡಿಸಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಒಳ್ಳೆಯ ಅಭಿನಂದನಾ ಸಮಾರಂಭ ಮಾಡಿದ್ದು, ನಾವುಗಳೆಲ್ಲಾ ಹೋಗಿ ಭಾಗವಹಿಸಿದ್ದೇವು. ಎಲ್ಲಾ ಕನ್ನಡಿಗರ ಪರವಾಗಿ ಪ್ರೀತಿವ್ಯಕ್ತಪಡಿಸಿದ್ದೆವು ಎಂದು ಕಾರ್ಯಕ್ರಮದ ಬಗ್ಗೆ ಶ್ಲಾಘನೆವ್ಯಕ್ತಪಡಿಸಿದರು. ಆದರೇ ಒಬ್ಬ ಸಿನಿಮಾ ನಟನಿಗೆ ಸಿಗುವ ಸ್ವಾಗತ, ಕ್ರಿಕೆಟ್ ಆಟಗಾರನಿಗೆ ಸಿಗುವ ಸ್ವಾಗತವು ಕವಿಗಳಿಗೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಒಂದು ಕಾಲದಲ್ಲಿ ಕವಿಗಳಿಗೆ ಸ್ವಾಗ ಸಿಗುತಿತ್ತು. ವೃತ್ತಿ ರಂಗಭೂಮಿ ಕಲಾವಿದರು ಆ ಕಾಲದಲ್ಲಿ ಹೀರೋಗಳಾಗಿದ್ದರು. ಕರ್ನಾಟಕದ ಸಾಂಸೃತಿಕ ಕಲಾವಿದರು ಎಂದರೇ ರಂಗಭೂಮಿ ಕಲಾವಿದರು ಎಂದು ಹಿಂದಿನ ನೆನಪನ್ನು ಇದೆ ವೇಳೆ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕಿ ಹೆಚ್.ಆರ್. ಸುಜಾತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟರ್ ಎನ್. ಕರಿಯಪ್ಪ, ಸದಸ್ಯ ಡಾ. ಚಂದ್ರಕಿರಣ್ ಕುಳವಾಡಿ, ಯುವ ಸಾಹಿತಿ ಫಾತಿಮಾ, ಪ್ರಕಾಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page