Friday, June 20, 2025

ಸತ್ಯ | ನ್ಯಾಯ |ಧರ್ಮ

ಭಾರತ ಜಿಂಬಾವ್ವೆ ಕಡೆಯ ಏಕದಿನ ಪಂದ್ಯ ಔಪಚಾರಿಕ ಪಂದ್ಯದಲ್ಲಿ ಬೋಲರ್ ಗಳಿಗೆ ಅವಕಾಶ

ಭಾರತ ಮತ್ತು ಜಿಂಬಾವ್ವೆ ನಡುವಿನ ಮೂರು ದಿನಗಳ ಏಕದಿನ ಸರಣಿ ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ 2-0 ಪಂದ್ಯಗಳ ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿರುವ ಭಾರತ ಮೂರನೇ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡು ಸಾಧಾರಣ ಆರಂಭ ಕಂಡಿದೆ.

ಮೊದಲರೆಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾವ್ವೆ ಉತ್ತಮ ಮೊತ್ತವನ್ನು ದಾಖಲಿಸಲಿಲ್ಲ. ಹಾಗಾಗಿ ಭಾರತದ ಬ್ಯಾಟ್ಸ್ ಮನ್ ಗಳಿಗೆ ಸರಿಯಾದ ಬ್ಯಾಟಿಂಗ್ ಪ್ರಾಕ್ಟೀಸ್ ಆಗಿರಲಿಲ್ಲ. ದೇ ಕಾರಣಕ್ಕೋ ಏನೋ ಭಾರತ ತಂದ ನಾಯಕ ರಾಹುಲ್ ಕಡೆಯ ಏಕದಿನ ಪಂದ್ಯದಲ್ಲಿ ಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡರು. ಆದರೆ ಹೇಳಿಕೊಳಅಳುವಂಥ ಆರಂಭವನ್ನೇನೂ ಭಾರತ ಪಡೆಯಲಿಲ್ಲ. ನಾಯಕ ರಾಹುಲ್ ಮತ್ತು ಶಿಖರ್ ಧವನ್ ನಿದಾನಗತಿಯಲ್ಲಿ ಶುರು ಮಾಡಿ ಕ್ರಮವಾಗಿ 30 ಮತ್ತು 40 ರನ್ ಗಳಿಸಿದರೂ ದೊಡ್ಡ ಮೊತ್ತ ತಲುಪುವಲ್ಲಿ ವಿಫಲವಾಗಿ ವಿಕೆಟ್ ಒಪ್ಪಿಸಿದರು. ಇದರ ಪರಿಣಾಮವಾಗಿ 27 ಓವರ್ ಗಳ ಆಟದ ನಂತರ ಭಾರತ ತಂಡ ಎರಡು ವಿಕೆಟ್ ಗೆ 116 ರನ್ ಗಳಿಸಿದೆ. 33 ರನ್ ಗಳಿಸಿರುವ ಶುಭ್ ಮನ್ ಗಿಲ್ ಮತ್ತು 7 ರನ್ ಗಳಿಸಿರುವ ಇಶಾನ್ ಕಿಶನ್ ಆಟ ಮುಂದುವರಿಸಿದ್ದಾರೆ.

ಈ ಪಂದ್ಯದಲ್ಲಿ ಬೋಲರ್ ಗಳಾದ ಕುಲದೀಪ್ ಯಾದವ್, ಆವೇಶ್ ಖಾನ್ ಮತ್ತು ದೀಪಕ್ ಚಾಹರ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page