Wednesday, June 18, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಯವರು ದೇಶಭಕ್ತರೂ ಅಲ್ಲ, ಧರ್ಮ ರಕ್ಷಕರೂ ಅಲ್ಲ, 40% ಕಮಿಷನ್ ಕಳ್ಳರು: ರಾಹುಲ್‌ ಗಾಂಧಿ

ಮೈಸೂರು: ಬಿಜೆಪಿಯವರು ದೇಶಭಕ್ತರೂ ಅಲ್ಲ, ಧರ್ಮ ರಕ್ಷಕರೂ ಅಲ್ಲ, 40% ಕಮಿಷನ್‌ ಕಳ್ಳರು ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಭಾರತ ಐಕ್ಯತಾ ಯಾತ್ರೆಯ ಎರಡನೇ ದಿನ(ಶನಿವಾರ) ಬೇಗೂರಿನಿಂದ ನಂಜನಗೂಡು ಮೂಲಕ ತಾಂಡವಪುರ ಗ್ರಾಮಕ್ಕೆ ಆಗಮಿಸಿದ ಅವರು ವರುಣಾ ಕ್ಷೇತ್ರದ ಚಿಕ್ಕಯ್ಯನ ಚತ್ರ ಗ್ರಾಮದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಮತ್ತು ಧರ್ಮದ ರಕ್ಷಣೆ ಹೆಸರಲ್ಲಿ ಮೂರನೇ ವ್ಯಕ್ತಿಗಳು ಬರುತ್ತಾರೆ. ನಿಮ್ಮ ಕುಟುಂಬವನ್ನು ಹೊಡೆಯುವ ಕೆಲಸ ಮಾಡುತ್ತಾರೆ ಮತ್ತೆ ನಿಮ್ಮ ಮನೆಗೆ ಬಂದು 40% ಹಣವನ್ನು ತೆಗೆದುಕೊಂಡು ಹೋಗುತ್ತಾರೆ. ಆ ವ್ಯಕ್ತಿಗಳನ್ನು ನೀವು ದೇಶ ಭಕ್ತರು ಎಂದು ಕರಿಯುತ್ತೀರೋ, ಧರ್ಮ ರಕ್ಷಕರು ಎಂದು ಕರಿಯುತ್ತಿರೋ ಅಥವಾ ಕಳ್ಳರೆಂದು ಕರಿಯುತ್ತಿರೋ ಎಂದು ಬಿಜೆಪಿ ಪಕ್ಷದ ಕುರಿತು ರಾಹುಲ್‌ ಗಾಂಧಿ ಟೀಕಿಸಿದರು.

ಮುಂದುವರೆದು ಮಾತನಾಡಿದ ಅವರು, ಇಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೋ ಅವರೆಲ್ಲ ದೇಶ ಭಕ್ತರಲ್ಲ ಹಾಗೆ ಧರ್ಮ ರಕ್ಷಕರೂ ಅಲ್ಲಾ 40% ಕಳ್ಳರು ಎಂದು ರಾಹುಲ್‌ ಗಾಂಧಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page