Thursday, June 20, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಮುಳುಗುತ್ತಿರೋ ಹಡಗು ಅಲ್ಲ, ಅದು ಮುಳುಗಿರುವ ಹಡಗು : ಸಚಿವ ಎಂ.ಬಿ.ಪಾಟೀಲ್

‘ಬಿಜೆಪಿ ಪಕ್ಷವನ್ನು ಈಗಾಗಲೇ ಹಲವಷ್ಟು ಜನ ಮುಳುಗುತ್ತಿರೋ ಹಡಗು ಎಂದು ಹೇಳುತ್ತಿದ್ದಾರೆ. ಸ್ವತಃ ಬಿಜೆಪಿ ಪಕ್ಷದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ಗಮನಿಸಿ. ಬಿಜೆಪಿಯಲ್ಲಿ ನಾಯಕರು ಯಾರೂ ಇಲ್ಲ. ವಿರೋಧ ಪಕ್ಷದ ನಾಯಕನಾಗಲಿ, ಪಕ್ಷದ ಅಧ್ಯಕ್ಷ ಯಾರೂ ಇಲ್ಲ. ಹೀಗಾಗಿ ಬಿಜೆಪಿಯಲ್ಲಿ ಏನೂ ಉಳಿದಿಲ್ಲ. ಅದು ಸಂಪೂರ್ಣ ನಿರ್ನಾಮ ಆಗಲಿದೆ’ ಎಂದು ಬಿಜೆಪಿ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.

ಬುಧವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಹಣ ಕಾಂಗ್ರೆಸ್ ನವರದ್ದು ಎಂಬ ಬಿಜೆಪಿ ಪಕ್ಷದ ಆರೋಪದ ಬಗ್ಗೆ ಮಾತನಾಡಿ, ಐಟಿ ದಾಳಿಯಾಗಿದೆ, ಐಟಿ ಅವರೇ ತನಿಖೆ ಮಾಡುತ್ತಾರೆ. ಇದು 40% ಕಮೀಷನ್ ಹಣ. ಹಾಗಾಗಿ ಬಿಜೆಪಿಯವರ ಹಣನೇ ಅದು, ನಮ್ಮ ಕಾಲದಲ್ಲಿ ಆಗಿರೋದು ಅಲ್ಲ. ನಮ್ಮ ಕಾಲದಲ್ಲಿ ಇನ್ನೂ ಟೆಂಡರೇ ಆಗಿಲ್ಲ ಎಂದು ಸಚಿವ ಎಂ ಬಿ ಪಾಟೀಲ್‌ ತಿಳಿಸಿದರು.

ನಂತರ ಮಾತನಾಡಿ, ಆಪರೇಷನ್ ಕಮಲ ಮಾಡಿ ಬಿಜೆಪಿಗೆ ಈ ಗತಿ ಬಂದಿದೆ. 102 ಶಾಸಕರಿದ್ದ ಬಿಜೆಪಿ ಈಗ 65 ಸ್ಥಾನಕ್ಕೆ ಕುಸಿದಿದೆ. ರಾಜ್ಯದ ಜನತೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದವರು ಈಗ ಸರಿಯಾಗಿ ಶಾಸಕರನ್ನೂ ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಆಪರೇಷನ್ ಕಮಲ ಮಾಡಬೇಕಾದರೆ 65 ಶಾಸಕರು ಬೇಕು. ಅಷ್ಟು ಶಾಸಕರು ಬಿಜೆಪಿಯವರಿಗೆ ಸಿಕ್ತಾರಾ? ಎಂದು ಪ್ರಶ್ನಿಸಿದ ಅವರು, ಐದು ಜನ ಶಾಸಕರು ಸಿಗಲ್ಲ, ಆಪರೇಷನ್ ನಂತರ ಇವರ ಕಥೆ ಏನಾಗಿದೆ ಗೊತ್ತಿದೆಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ರಮೇಶ್ ಜಾರಕಿಹೊಳಿ ಅವರು ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ ಬಗ್ಗೆ ಸ್ವತಃ ಜಗದೀಶ್ ಶೆಟ್ಟರ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್, ‘ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಕುರಿತು ಪಕ್ಷದ ಅಧ್ಯಕ್ಷರು, ಸಿಎಂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಂತದಲ್ಲಿ ನಿರ್ಧಾರ ಆಗುತ್ತದೆ. ಯಾಕೆ ಭೇಟಿಯಾಗಿದ್ದಾರೆ ಅಂತ ಗೊತ್ತಿಲ್ಲ.ಅದು ವಯಕ್ತಿಕ ಭೇಟಿನಾ, ರಾಜಕೀಯ ಭೇಟಿನಾ ಅಂತ ನಮಗೆ ಗೊತ್ತಿಲ್ಲ. ಮಾಜಿ ಸಚಿವರಾದ ರಮೇಶ್ ಅವರಿಗೆ ಕಾಂಗ್ರೆಸ್ ಬರುವ ಒಲವು ಇರಬಹುದು’ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು