Home ರಾಜಕೀಯ ಹತಾಶ ಬಿಜೆಪಿ ವೈಯಕ್ತಿಕ ಟೀಕೆಯ ಮಟ್ಟಕ್ಕೆ ಇಳಿದಿದೆ: ಕೇಜ್ರಿವಾಲ್

ಹತಾಶ ಬಿಜೆಪಿ ವೈಯಕ್ತಿಕ ಟೀಕೆಯ ಮಟ್ಟಕ್ಕೆ ಇಳಿದಿದೆ: ಕೇಜ್ರಿವಾಲ್

0

ದೆಹಲಿ: ರಾಜಕೀಯ ನಿಂದನೆ ಮತ್ತು ವೈಯಕ್ತಿಕ ಟೀಕೆಗಾಗಿ ಬಿಜೆಪಿಯನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಟೀಕಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಶುಕ್ರವಾರದ ಭಾಷಣದಲ್ಲಿ ಎಎಪಿ ಸರ್ಕಾರವನ್ನು ಟೀಕಿಸಿದ್ದರು.

ಪ್ರಧಾನಿ ಭಾಷಣದ ಕುರಿತು ಕೇಜ್ರಿವಾಲ್ ಮಾಧ್ಯಮಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೆಹಲಿ ಜನತೆಗಾಗಿ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದರೆ ಅವರು ತಮ್ಮ 43 ನಿಮಿಷಗಳ ಭಾಷಣದ 39 ನಿಮಿಷಗಳ ಕಾಲ, ದೆಹಲಿಯ ಜನರು ತಾವು ಭಾರಿ ಬಹುಮತದಿಂದ ಆಯ್ಕೆ ಮಾಡಿದ ಸರ್ಕಾರವನ್ನು ಶಪಿಸಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು.

ಇಂದು ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ದೆಹಲಿಯ ಜನರನ್ನು ಮತ್ತು ಅವರು ಆಯ್ಕೆ ಮಾಡಿದ ಸರ್ಕಾರವನ್ನು 39 ನಿಮಿಷಗಳ ಕಾಲ ಅವಮಾನಿಸುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಲು ಎರಡ್ಮೂರು ಗಂಟೆಯೂ ಸಾಕಾಗುವುದಿಲ್ಲ ಎಂದು ಅವರು ಹೇಳಿದರು. ರಾಜಕೀಯ ದುರುಪಯೋಗದಿಂದ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ ಯತ್ನಿಸುತ್ತಿದ್ದಾರೆ ಎಂದರು.

You cannot copy content of this page

Exit mobile version