Saturday, June 21, 2025

ಸತ್ಯ | ನ್ಯಾಯ |ಧರ್ಮ

ದಕ್ಷಿಣ ಕನ್ನಡದಲ್ಲಿ SDPI ಕೈ ಹಿಡಿದ BJP: ರಾಜ್ಯಾದ್ಯಂತ ತೀವ್ರ ಮುಖಭಂಗ ಎದುರಿಸುತ್ತಿರುವ ಬಿಜೆಪಿ

ಮಂಗಳೂರು: ತಲಪಾಡಿ ಗ್ರಾಪಂ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಬದ್ಧ ರಾಜಕೀಯ ವೈರಿ ಎಸ್ ಡಿಪಿಐ ಅಭ್ಯರ್ಥಿಗೆ ಬೆಂಬಲ ನೀಡಿರುವ ಬಿಜೆಪಿ ಸದಸ್ಯರು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲುವಂತೆ ಮಾಡಿದ್ದಾರೆ. ಈ ಸಮಬಲದ ಪೈಪೋಟಿಯಲ್ಲಿ ಟಾಸ್‌ ಗೆಲ್ಲುವ ಮೂಲಕ ತಲಪಾಡಿ ಗ್ರಾಪಂನ ಅಧ್ಯಕ್ಷ ಸ್ಥಾನವು SDPI ಗೆ ಒಲಿದಿದೆ.

ರಾಜಕೀಯ ರಂಗದಲ್ಲಿ ಪಂಚಾಯತ್‌ ಮಟ್ಟದ ರಾಜಕಾರಣದಷ್ಟು ಕುತೂಹಲ ಹುಟ್ಟಿಸುವ ರಾಜಕಾರಣ ಇನ್ಯಾವುದೂ ಇಲ್ಲ. ಈಗ ಅಂತಹದ್ದೇ ಒಂದು ಘಟನೆ ದಕ್ಷಿಣಕನ್ನಡದಲ್ಲಿ ನಡೆದಿದ್ದು, ಇದರಿಂದಾಗಿ ಬಿಜೆಪಿ ರಾಜ್ಯಾದ್ಯಂತ ಮುಜುಗರ ಎದುರಿಸುತ್ತಿದೆ.

ಈ ಗ್ರಾಪಂನಲ್ಲಿ ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದು, 1 ಕಾಂಗ್ರೆಸ್ ಹಾಗೂ 10 ಎಸ್ ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ. ಆದರೆ ಇಂದು ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ವೈಭವ್ ಶೆಟ್ಟಿ ಮತ್ತು SDPI ಬೆಂಬಲಿತ ಹಬೀಬಾ ಡಿ.ಬಿ ಹಾಜರಾಗಿದ್ದರು. SDPI ಅಭ್ಯರ್ಥಿ ಟಿ.ಇಸ್ಮಾಯಿಲ್ ಮತ್ತು ಬಿಜೆಪಿಯ ಸತ್ಯರಾಜ್ ನಡುವೆ ಅಧ್ಯಕ್ಷ ಸ್ನಾನಕ, ಪೈಪೋಟಿಯಿತ್ತು. ಆದರೆ ಇಬ್ಬರು ಬಿಜೆಪಿ ಸದಸ್ಯರು SDPI ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ಪರಿಣಾಮSDPI ಹಾಗೂ ಬಿಜೆಪಿ ಸಮಬಲದ ಮತಪಡೆದುಕೊಂಡಿದೆ. ಬಳಿಕ ಚುನಾವಣಾಧಿಕಾರಿಗಳು ಅಧ್ಯಕ್ಷ ಗಾದಿಗೆ ಬೀಟಿ ಎತ್ತುವ ಪ್ರಕ್ರಿಯೆ ನಡೆಸಿದ್ದು ಇದರಲ್ಲಿ ಟಿ.ಇಸ್ಮಾಯಿಲ್ ಗೆಲುವು ಸಾಧಿಸಿದ್ದಾರೆ.

ತನ್ನ ಪಕ್ಷದ ಅಭ್ಯರ್ಥಿ ಗೆಲ್ಲುವ ಭರವಸೆಯಲ್ಲಿ ಹೂವಿನ ಹಾರ, ಸಿಹಿಯೊಂದಿಗೆ ಬಂದಿದ್ದ ಪಕ್ಷದ ಕಾರ್ಯಕರ್ತರು ತೀವ್ರ ಮುಖಭಂಗ ಹಾಗೂ ಮುಜುಗರದೊಂದಿಗೆ ಮರಳಿದ್ದಾರೆ. ಬಹುಮತವಿದ್ದೂ ಗೆಲ್ಲಲಾಗದ ಕುರಿತು ಬಿಜೆಪಿ ಬೆಂಬಲಿಗರು ತೀವ್ರ ಹತಾಶೆ ವ್ಯಕ್ತಪಡಿಸುತ್ತಾ ಮನೆಗೆ ಮರಳಿದ್ದಾರೆ.

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಬಿಜೆಪಿ ಟ್ರೋಲ್‌ಗೆ ಒಳಗಾಗುತ್ತಿದ್ದು ಉತ್ತರಿಸಲಾಗದೆ ಒದ್ದಾಡುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page