Friday, June 14, 2024

ಸತ್ಯ | ನ್ಯಾಯ |ಧರ್ಮ

ಸಂವಿಧಾನ ನಿಯಮ ಉಲ್ಲಂಘನೆ : ನೂತನ WFI ಸಮಿತಿಯನ್ನು ಅಮಾನತಿನಲ್ಲಿಟ್ಟ ಕೇಂದ್ರ ಸರ್ಕಾರ

ಭಾರತೀಯ ಕುಸ್ತಿ ಫೆಡರೇಶನ್ (WFI) ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯನ್ನು (EC) ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ ಮತ್ತು ಫೆಡರೇಶನ್ ಕಾರ್ಯಾಚರಣೆಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ಗೆ ನಿರ್ದೇಶನ ನೀಡಿದೆ.

ಕುಸ್ತಿಯಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತದ ಏಕೈಕ ಮಹಿಳೆ ಸಾಕ್ಷಿ ಮಲಿಕ್ ಅವರು WFI ಚುನಾವಣಾ ಫಲಿತಾಂಶಗಳಿಂದ ನೊಂದು ಕ್ರೀಡೆಯಿಂದ ನಿವೃತ್ತಿ ಘೋಷಿಸಿದರು ಮತ್ತು ಬಜರಂಗ್ ಪುನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕೆಲವೇ ದಿನಗಳಲ್ಲಿ ಸಚಿವಾಲಯದ ಕಡೆಯಿಂದ ಈ ನಿರ್ಧಾರವು ಹೊರಬಿದ್ದಿದೆ.

ಆಶ್ಚರ್ಯಕರ ವಿಚಾರವೆಂದರೆ, ನೂತನವಾಗಿ ಡಬ್ಲ್ಯುಎಫ್‌ಐ ಅಧ್ಯಕ್ಷರಾದ ಸಂಜಯ್ ಸಿಂಗ್ ಅವರು ತಮ್ಮ ಸಮೀಪದ ಸ್ಪರ್ಧಿ ಅನಿತಾ ಶೆರಾನ್ ಅವರನ್ನು ಸೋಲಿಸಿದ ನಂತರ ಡಬ್ಲ್ಯುಎಫ್‌ಐ ಅಧ್ಯಕ್ಷರಾದ ದಿನವಾದ ಡಿಸೆಂಬರ್ 21 ರ ಸಂಜೆಯೇ ಉತ್ತರ ಪ್ರದೇಶದ ಗೊಂಡಾ ಬಳಿ ಬ್ರಿಜ್ ಭೂಷಣ್ ಅವರ ಕ್ಷೇತ್ರವಾದ ಕೈಸರ್‌ಗಂಜ್‌ನಿಂದ ಕೇವಲ 50 ಕಿಮೀಗಿಂತ ಕಡಿಮೆ ದೂರದಲ್ಲಿ 15 ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಆಟಗಾರರನ್ನು ಘೋಷಿಸಿದ್ದಾರೆ.

ಇದನ್ನು “ತರಾತುರಿಯ ನಿರ್ಧಾರ” ಎಂದು ಕರೆದ ಕ್ರೀಡಾ ಸಚಿವಾಲಯವು ಈ ಆಯ್ಕೆ ನಮ್ಮ ಗಮನಕ್ಕೆ ತಾರದೇ ತಂದದ್ದಾಗಿದೆ ಮತ್ತು ಈ ಪ್ರಕಟಣೆಯು WFI ನ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಚುನಾಯಿತರಾದ ದಿನದಂದೇ ನಡೆದ ಈ ಘೋಷಣೆ ತರಾತುರಿಯಲ್ಲಿದೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಅಗತ್ಯ ಸೂಚನೆ ನೀಡದೆ ಮತ್ತು ಡಬ್ಲ್ಯುಎಫ್‌ಐ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೆ,” ಈ ನಿರ್ಧಾರ ತಗೆದುಕೊಂಡಿದೆ ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು