Saturday, June 21, 2025

ಸತ್ಯ | ನ್ಯಾಯ |ಧರ್ಮ

ಕಾಸಿಗಾಗಿ ಟಿಕೆಟ್‌ ಹಗರಣ: ಚೈತ್ರಾ ಗ್ಯಾಂಗಿನ ಚನ್ನಾ ನಾಯಕ್‌ ಬಂಧನ

ಬೆಂಗಳೂರು: ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚನ್ನಾ ನಾಯಕ್‌ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಐದು ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಚನ್ನಾ ನಾಯಕ್‌ ಈ ಸಂಚಿನಲ್ಲಿ ಹೆಚ್ಚು ಖ್ಯಾತ ಪಾತ್ರವಾಗಿದ್ದ RSS ಪ್ರಚಾರಕ್‌ ವಿಶ್ವನಾಥ್‌ ಜೀ ಪಾತ್ರವನ್ನು ವಹಿಸಿದ್ದ ಎನ್ನಲಾಗಿದೆ.

ಈ ಮೊದಲೇ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ್ದ ಚನ್ನಾ ನಾಯಕ್‌ ತಾನು ಪೊಲೀಸರಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದ. ಈತ ಚೈತ್ರಾಳೇ ಈ ಸಂಚಿನ ಮುಖ್ಯ ಆರೋಪಿಯಾಗಿದ್ದು ತಮಗೆಲ್ಲ ಆಕೆ ಧಮಕಿ ಹಾಕಿದ್ದಳು ಎಂದೂ ಹೇಳಿದ್ದ.

ಈ ಟಿಕೆಟ್‌ ವಂಚನೆ ಪ್ರಕರಣವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿದ್ದು ಇನ್ನೊಬ್ಬ ಆರೋಪಿಯಾದ ಹಾಲ ಸ್ವಾಮಿ ತಲೆಮರೆಸಿಕೊಂಡಿದ್ದು ಆತನು ವಿವಿಧೆಡೆ ಆಸ್ತಿ ಮಾಡಿರುವ ಬಗ್ಗೆಯೂ ಸುದ್ದಿಯಾಗಿದೆ.

ಚನ್ನಾ ನಾಯಕ್‌ ಚೈತ್ರಾ ವಿಷಯದಲ್ಲಿ ನಡೆದಿರುವುದೆಲ್ಲವೂ ನಿಜವೆಂದು ಹೇಳಿದ್ದಾನೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page