Wednesday, June 18, 2025

ಸತ್ಯ | ನ್ಯಾಯ |ಧರ್ಮ

ಚೆನ್ನೈ ಎಕ್ಸ್‌ಪ್ರೆಸ್ ವೇ ಸ್ಪೀಡಿಗೆ ಬಿತ್ತು ಬ್ರೇಕ್

ಕೋಲಾರ, ಜೂ16: ಇತ್ತೀಚೆಗೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇ ನಲ್ಲಿ ನಡೆದ ಸರಣಿ ಅಪಘಾತಗಳಿಂದ ಜನ ಕಂಗಾಲಾಗಿದ್ದರು. ಇನ್ನೂ ಸಹಾ ಉದ್ಘಾಟನೆಯಾಗದ ಈ ರಸ್ತೆಯಲ್ಲಿ ದಿನನಿತ್ಯ ವಾಹನಗಳ ಒಡಾಟ ಹೆಚ್ಚಾಗಿದ್ದು ಜೊತೆಗೆ ಕಳ್ಳಕಾಕರ ಕಾಟವೂ ಹೆಚ್ಚಾಗಿತ್ತು. ಈ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿತ್ತು.

ಇಲ್ಲಿ ಅಪಘಾತ ಆಗಿ ಉಳಿದವರು ಬೆರಳಣಿಕೆಯಷ್ಟು ಮಾತ್ರವೆ. ಕಳೆದ ಬಾರಿ ಅಪಘಾತವಾಗಿ ಮಚ್ಚು ಹಿಡಿದು ಇಬ್ಬರು ಯುವಕರು ಕಾರೋಂದರ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಈ ಕುರಿತು ಸಧ್ಯ ಮಾಲೂರು ಪೋಲಿಸ್‌ ಠಾಣೆಲ್ಲಿ ದೂರು ಸಹಾ ದಾಖಲಾಗಿತ್ತು.

ಇದಾದ ನಂತರ ಎಚ್ಚೆತ್ತುಕೊಂಡ ಮಾಲೂರು ಸರ್ಕಲ್‌ ಇನ್ಸ್ಪೆಕ್ಟರ್‌ ವಸಂತ್‌ ಕುಮಾರ್‌ ಅವರು ಜಾವಾಬ್ದರಿಯುತವಾಗಿ ಮತ್ತು ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ Speed Radar Gun with Camera ಮೂಲಕ ಅತಿವೇಗವಾಗಿ‌ ಚಾಲನೆ ಮಾಡುವ ವಾಹನಗಳನ್ನು ಹಾಗೂ ನಿಗದಿತ ಪ್ರಮಾಣಕ್ಕಿಂತ ವೇಗವಾಗಿ ಚಲಿಸುವ ವಾಹನ ಚಾಲಕರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಜೊತೆಗೆ ಇಲ್ಲಿ ರಸ್ತೆಯಲ್ಲಿನ ಪುಂಡರ ಬಗ್ಗೆಯೂ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕಿದ್ದು, ಸರ್ಕಾರ ಈ ಬಗ್ಗೆ ಮಾಲೂರು ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page