ಸಿಜೆಪಿ ಪ್ರತಿಭಟನೆಯ ಜನಪ್ರಿಯ ಹೋರಾಟಗಾರ ಮೊಹಮ್ಮದ್ ಇರ್ಫಾನ್ ಅವರ ಚಾನಲ್ಲನ್ನು ಮರಳಿಸಿದ ಯೂಟ್ಯೂಬ್

ದೆಹಲಿ: ದೆಹಲಿಯ ಕೊಳಚೆ ಪ್ರದೇಶದ ನಿವಾಸಿ ಮೊಹಮ್ಮದ್ ಇರ್ಫಾನ್ ಅವರ ಯೂಟ್ಯೂಬ್ ಚಾನಲ್ ಅನ್ನು ಮತ್ತೆ ಪುನರಾರಂಭಿಸಲಾಗಿದೆ. ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಪ್ರತಿಭಟನೆಯ ವೇಳೆ ಅವರು ವರದಿ ಮಾಡಿದ್ದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.

ಆದರೆ, ಆ ಸಂದರ್ಭದಲ್ಲಿ ಸೇವಾ ನಿಯಮಗಳ ಉಲ್ಲಂಘನೆಯ ನೆಪವೊಡ್ಡಿ ಅವರ ಯೂಟ್ಯೂಬ್ ಚಾನಲ್ ಅನ್ನು ಅಮಾನತುಗೊಳಿಸಲಾಗಿತ್ತು. ಈ ಕ್ರಮದ ವಿರುದ್ಧ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ ಮತ್ತು ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ ಇದೀಗ ಅವರ ಚಾನಲ್ ಅನ್ನು ಮರುಸ್ಥಾಪಿಸಲಾಗಿದೆ. ಪ್ರಸ್ತುತ ತಮ್ಮ ಯೂಟ್ಯೂಬ್ ಚಾನಲ್ ಸಾರ್ವಜನಿಕರಿಗೆ ಲಭ್ಯವಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದು ಇರ್ಫಾನ್ ಖಚಿತಪಡಿಸಿದ್ದಾರೆ.

ದೆಹಲಿಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಇರ್ಫಾನ್ ಅವರನ್ನು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭೇಟಿಯಾಗಿದ್ದರು. ಇರ್ಫಾನ್ ತಮ್ಮ ಚಾನಲ್‌ನಲ್ಲಿ ಪ್ರಸಾರ ಮಾಡಿದ್ದ ಸಂದರ್ಶನಗಳು ಮತ್ತು ವೀಡಿಯೊಗಳಿಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಇರ್ಫಾನ್ ಸಂವಿಧಾನದ ಪೀಠಿಕೆಯನ್ನು ಪುಸ್ತಕ ನೋಡದೆ ಹೇಳಿದ್ದರು.

ಈ ವೀಡಿಯೊ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿತ್ತು. ಸಂಘಟಿತ ವಲಯದ ಕಾರ್ಮಿಕರ ಸಮಸ್ಯೆಗಳು, ಪ್ರಜಾಸತ್ತಾತ್ಮಕ ಹಕ್ಕುಗಳು, ಆರೋಗ್ಯ ಮತ್ತು ಶಿಕ್ಷಣದ ಕುರಿತು ಅವರು ಅನರ್ಗಳವಾಗಿ ಮಾತನಾಡಿದ್ದರು. ಒಂದೇ ದಿನದಲ್ಲಿ ಅವರ ಚಾನಲ್‌ಗೆ ಸಾವಿರಾರು ಹೊಸ ಚಂದಾದಾರರು (ಸಬ್‌ಸ್ಕ್ರೈಬರ್ಸ್) ಸೇರ್ಪಡೆಗೊಳ್ಳುವ ಮೂಲಕ ಅವರು ಜನಪ್ರಿಯತೆ ಗಳಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು