Home ದೇಶ ರಣಹದ್ದುಗಳ ಬಗ್ಗೆ ಎಚ್ಚರದಿಂದಿರಿ: ಶಶಿ ತರೂರ್ ‘ಹಕ್ಕಿ’ ಪೋಸ್ಟ್ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ

ರಣಹದ್ದುಗಳ ಬಗ್ಗೆ ಎಚ್ಚರದಿಂದಿರಿ: ಶಶಿ ತರೂರ್ ‘ಹಕ್ಕಿ’ ಪೋಸ್ಟ್ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ

0

ದೆಹಲಿ: ಕಾಂಗ್ರೆಸ್ ಮತ್ತು ಪಕ್ಷದ ತಿರುವನಂತಪುರಂ ಸಂಸದ ಶಶಿ ತರೂರ್ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿದೆ.

ಪಕ್ಷದಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳನ್ನು ಉಲ್ಲೇಖಿಸಿ, ತರೂರ್ ಬುಧವಾರ ‘ಹಕ್ಕಿಯನ್ನು ಮುಕ್ತವಾಗಿ ಹಾರಲು ಬಿಡಬೇಕು’ ಎಂದು ಹೇಳುವ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದರು. ಮತ್ತೊಬ್ಬ ಹಿರಿಯ ಸಂಸದರು ಇದಕ್ಕೆ ಪ್ರತಿಕ್ರಿಯಿಸಿ ಪರೋಕ್ಷವಾಗಿ ‘ರಣಹದ್ದುಗಳ ಬಗ್ಗೆ ಎಚ್ಚರದಿಂದಿರಿ’ ಎಂದು ಎಚ್ಚರಿಸಿದ್ದಾರೆ.

ಶಶಿ ತರೂರ್ ಇತ್ತೀಚೆಗೆ ಇಂಗ್ಲಿಷ್ ನಿಯತಕಾಲಿಕೆಯೊಂದರಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳುವ ಲೇಖನ ಬರೆದಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಪ್ರತಿಕ್ರಿಯಿಸಿ ಕೆಲವರು ದೇಶಕ್ಕಿಂತ ಹೆಚ್ಚು ಮೋದಿಗೆ ಆದ್ಯತೆ ನೀಡುತ್ತಾರೆ ಎಂದು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ತರೂರ್ ಬುಧವಾರ ಸಂಜೆ ಹಕ್ಕಿಯ ಫೋಟೋವನ್ನು ಹಂಚಿಕೊಂಡು ‘ಹಾರಲು ಯಾರ ಅನುಮತಿಯನ್ನೂ ಕೇಳಬೇಡಿ. ರೆಕ್ಕೆಗಳು ನಿಮ್ಮವು. ಆಕಾಶ ಯಾರಿಗೂ ಸೇರಿದ್ದಲ್ಲ’ ಎಂದು ಬರೆದಿದ್ದರು.

ಖರ್ಗೆಯವರ ಹೇಳಿಕೆ ಮತ್ತು ಪಕ್ಷದಲ್ಲಿ ಅವರಿಗೆ ಎದುರಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಪೋಸ್ಟ್ ಮಾಡಲಾಗಿದೆ ಎಂಬ ಪ್ರಚಾರ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ, ಹಿರಿಯ ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ಟ್ವಿಟರ್‌ ಖಾತೆಯಲ್ಲಿ ಇದಕ್ಕೆ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿದ್ದಾರೆ.

‘ಹಾರಲು ಅನುಮತಿ ಕೇಳಬೇಡಿ. ಹಕ್ಕಿಗಳು ತಮ್ಮ ರೆಕ್ಕೆಯನ್ನು ಹರಡಲು ಯಾರ ಅನುಮೋದನೆಯೂ ಅಗತ್ಯವಿಲ್ಲ. ಆದರೆ ಮುಕ್ತವಾಗಿ ಹಾರುವ ಹಕ್ಕಿ ಕೂಡ ಆಕಾಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಗಿಡುಗಗಳು ಮತ್ತು ರಣಹದ್ದುಗಳು ಯಾವಾಗಲೂ ಬೇಟೆಯಾಡುತ್ತಲೇ ಇರುತ್ತವೆ. ಸ್ವಾತಂತ್ರ್ಯ ಎಂದಿಗೂ ಉಚಿತವಾಗಿ ಬರುವುದಿಲ್ಲ’ ಎಂದು ಅವರು ಬರೆದಿದ್ದಾರೆ.

ತರೂರ್ ಅವರೊಂದಿಗಿನ ಬಿಜೆಪಿ ನಾಯಕರ ನಿಕಟತೆಯನ್ನು ಅವರು ತಮ್ಮ ಪೋಸ್ಟಿನಲ್ಲಿ ಉಲ್ಲೇಖಿಸಿ ಈ ರೀತಿ ಬರೆದಿದ್ದಾರೆ ಎನ್ನಲಾಗುತ್ತಿದೆ.

You cannot copy content of this page

Exit mobile version