Sunday, June 23, 2024

ಸತ್ಯ | ನ್ಯಾಯ |ಧರ್ಮ

ಭಾರತ ಐಕ್ಯತಾ ಯಾತ್ರೆಯಲ್ಲಿ ನಡೆದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ

ಅನಾರೋಗ್ಯದ ಹಿನ್ನೆಲೆಯಿಂದ ಸುದೀರ್ಘ ಅವಧಿಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಇದ್ದ ಸೋನಿಯಾ ಗಾಂಧಿಯವರು ಇಂದು ‘ಭಾರತ ಐಕ್ಯತಾ ಯಾತ್ರೆ’ಯಲ್ಲಿ ಹೆಜ್ಜೆ ಹಾಕಿದ್ದಾರೆ. ಇಂದು ಬೆಳಿಗ್ಗೆ ಮಂಡ್ಯದಿಂದ ಶುರುವಾದ ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ಸೋನಿಯಾಗಾಂಧಿಯವರು ಕೆಲವಷ್ಟು ದೂರ ಹೆಜ್ಜೆ ಹಾಕಿದರು.

ಆಯುಧ ಪೂಜೆ ಮತ್ತು ವಿಜಯದಶಮಿ ಕಾರಣದಿಂದ ಎರಡು ದಿನಗಳ ಕಾಲ ವಿರಾಮ ತಗೆದುಕೊಂಡಿದ್ದ ಭಾರತ ಐಕ್ಯತಾ ಯಾತ್ರೆ ಇಂದು ಬೆಳಿಗ್ಗೆಯಿಂದ ಮತ್ತೆ ಚಾಲನೆ ಪಡೆದುಕೊಂಡಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕಳೆದ ಸೋಮವಾರವೇ ಕರ್ನಾಟಕಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಎರಡು ದಿನಗಳ ದಸರಾ ವಿರಾಮದ ನಂತರ ತಮ್ಮ ಪುತ್ರ ರಾಹುಲ್ ಜೊತೆಗೆ ಇಂದು ನಡಿಗೆಯಲ್ಲಿ ಜೊತೆಯಾದರು.

ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ ಇದು ರಾಜ್ಯದ ಸಾರ್ವತ್ರಿಕ ಚುನಾವಣಾ ವರ್ಷವೂ ಆಗಿರುವುದರಿಂದ ಕಾಂಗ್ರೆಸ್ ನ ಈ ಭಾರತ್ ಐಕ್ಯತಾ ಯಾತ್ರೆ ಹಲವಷ್ಟು ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕೂಡಾ ನಾನಾ ರೀತಿಯ ತಂತ್ರಗಾರಿಕೆಯಲ್ಲಿ ತೊಡಗಿದೆ.

ಸಧ್ಯ ‘ಸೋನಿಯಾಗಾಂಧಿಯವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಪಕ್ಷಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಯುವ ಜನತೆ ಯಾತ್ರೆಯಲ್ಲಿ ಜೊತೆಯಾಗಲು ಇದು ಮತ್ತಷ್ಟು ಹುರುಪು ನೀಡಿದೆ. ವಿಜಯದಶಮಿ ನಂತರ ರಾಜ್ಯದಲ್ಲಿ ಕಾಂಗ್ರೆಸ್ ವಿಜಯೋತ್ಸವ ಆಚರಿಸಲಿದೆ‌. ಪಾದಯಾತ್ರೆ ಮೂಲಕ ಪ್ರತಿಯೊಬ್ಬ ಮುಖಂಡರೂ ತಳಮಟ್ಟದ ಸಾಮಾನ್ಯ ಮತದಾರರನ್ನೂ ತಲುಪುವ ಉದ್ದೇಶ ಕೂಡಾ ಈಡೇರುತ್ತಿದೆ. ಸೋನಿಯಾ ಗಾಂಧಿ ಅವರು ಕರ್ನಾಟಕದ ಬೀದಿಗಳಲ್ಲಿ ನಡೆಯಲು ಬಂದಿರುವುದು ನಮಗೆ ಹೆಮ್ಮೆ, ನಾವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಮತ್ತು ಬಿಜೆಪಿ ತನ್ನ ಅಂಗಡಿಯನ್ನು ಮುಚ್ಚುವ ಹಾದಿಯಲ್ಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು