Sunday, December 8, 2024

ಸತ್ಯ | ನ್ಯಾಯ |ಧರ್ಮ

ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶ: ಜಂಠಿ ಪತ್ರಿಕಾಗೋಷ್ಠಿಯಲ್ಲಿ ಹೆಚ್.ಕೆ. ಕುಮಾರಸ್ವಾಮಿ ಆಕ್ರೋಶ

ಹಾಸನ: ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದ ಸಮಾವೇಶವು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ಜೆಡಿಎಸ್ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರಿಗೆ ಸ್ವಲ್ಪವಾದರು ಮಾನ ಮರ್ಯಾದೆ ಬೇಡವೆ? ಎಂದು ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸಿದರು.

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಜೆಡಿಎಸ್ ತಿರುಗೇಟು ನೀಡಿದರು.. ಕೇವಲ ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರು ಜಿಲ್ಲೆಗೆ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೆಂದು ಹೇಳಬೇಕಿತ್ತು. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆ ಇದ್ದರೂ ಆ ಬಗ್ಗೆ ಒಂದೆ ಒಂದು ಮಾತನಾಡಿಲ್ಲ. ಅವರಿಗೆ ಸ್ವಲ್ಪವಾದರು ಮಾನ ಮರ್ಯಾದೆ ಬೇಡವೆ? ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯ ಆಗಿದೆ ಅಂತಾರೆ. ಬಾಣಂತಿಯರ ಸಾವು ಆಗಿರುವುದು ಇದು ಯಾರಿಗೆ ಅನ್ಯಾಯ? ಮಹಿಳೆಯರು ಮಕ್ಕಳಿಗೆ ಮಾಡಿದ ಅನ್ಯಾಯ ಅಲ್ಲವೇ. ಎಲ್ಲಾ ಇಲಾಖೆ ಆಡಳಿತ ಇಲ್ಲಾ ಸರ್ಕಾರ ಸತ್ತು ಹೋಗಿದೆ. ಈ ಸಮಾವೇಶ ಅಕ್ಷ್ಯಮ್ಯ ಎಂದು ವಾಗ್ದಾಳಿ ನಡೆಸಿದರು. ಉಪ ಚುನಾವಣೆ ಫಲಿತಾಂಶ ಆಡಳಿತ ಪಕ್ಷದ ಪರ ಬರೋದು ಸಾಮಾನ್ಯ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವ ಬಗ್ಗೆ ಸಿಎಂ ಅವರೇ ಹಗರಣ ಒಪ್ಪಿಕೊಂಡಿದ್ದಾರೆ. ಓರ್ವ ಅದಿಕಾರಿ ಆತ್ಮಹತ್ಯೆ ಮಾಡಿಕೊಂಡಿದಾರೆ. ಇದೆಲ್ಲದರ ಬಗ್ಗೆ ನಿಮ್ಮ ಕ್ರಮ ಆಗಿಲ್ಲ. ಜನ ಕುರುಡರಿಲ್ಲ, ೨೫ ವರ್ಷದಿಂದ ಇರೋ ಪಕ್ಷವನ್ನು ಕಿತ್ತೊಗೆಯೊದಾಗಿ ಹೇಳ್ತಾರೆ. ಅವರು ಆರು ಜಿಲ್ಲೆಯಿಂದ ಅಷ್ಟು ಜನ ಸೇರಿಸಿದಾರೆ. ನಾವು ಒಂದೇ ಜಿಲ್ಲೆಯಿಂದ ಅಷ್ಟು ಜನ ಸೇರಿಸ್ತೀವಿ. ಲೋಕಸಭಾ ಅದಿವೇಶನ ಮುಗಿಯಲಿ. ನಮ್ಮ ಕುಮಾರಸ್ವಾಮಿ ಬರ್ತಾರೆ ನಾವೂ ರಾಜಕೀಯ ಸಮಾವೇಶ ಮಾಡ್ತೇವೆ ಎಂದು ತಿರುಗೇಟು ನೀಡಿದರು. ಇದೆಲ್ಲ ಬಿಡಿ ಇನ್ನು ಮುಂದಾದರು ಕೆಲಸ ಮಾಡಿ ಎಂದು ಸಲಹೆ ನೀಡಿದರು. ಸುಳ್ಳು ಆಪಾದನೆ ಬಿಡಲಿ, ನಮ್ಮ ನಾಯಕರನ್ನ ನಿಂದಿಸಿರುವುದರ ವಿರುಧ್ಧ ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು.

     ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಿಎಂ ಮತ್ತು ಡಿಸಿಎಂ ಮಾತುಗಳನ್ನ ನೋಡಿದ್ರೆ ಇದು ಕೇವಲ ನಿಂದನೆಗೆ ಮಾಡಿದ ಸಮಾವೇಶವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಿದೆ. ತಾವು ಮಾಡಿದ ಅಭಿವೃದ್ಧಿ ಏನೆಂದು ಹೇಳಬೇಕಿತ್ತು. ಅಭಿವೃದ್ಧಿ ಇಲ್ಲದೆ ಆಡಳಿತ ಪಕ್ಷದ ನಾಯಕರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಸಮಾಧಾನ ಹೊರ ಹಾಕಿದವರ ಬಾಯಿ ಮುಚ್ಚಿಸೊ ಕೆಲಸ ಆಗ್ತಿದೆ. ಹಿಂದುಳಿದ ವರ್ಗಗಳಿಗೆ ನಾಮಕಾಸ್ತೆ ನಿಗಮ ಮಾಡಿದ್ದಾರೆ. ಯಾವುದೇ ನಿಮಗಳಿಂದ ಆ ಸಮುದಾಯಕ್ಕೆ ಉಪಯೋಗ ಆಗ್ತಿಲ್ಲ ಎಂದು ದೂರಿದರು.

ಸಮಾವೇಶದಲ್ಲಿ ದೇವೇಗೌಡರ ಬಗ್ಗೆ ಮಾತನಾಡೊ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ಈ ದೇಶಕ್ಕೆ ದೇವೇಗೌಡರಿಂದ ಅವರದೆ ಆದ ಕೊಡುಗೆ ಇದೆ. ಅವರು ಯಾವುದೆ ಸಮುದಾಯವನ್ನು ಕಡೆಗಣಿಸಿಲ್ಲ. ಎಲ್ಲಾ ಸಮುದಾಯದ ಜನರನ್ನು ಬೆಳೆಸಿದವರು ದೇವೇಗೌಡರು. ಸಾಲಾ ಮನ್ನ ಮಾಡೊ ತೀರ್ಮಾನ ಮಾಡೊ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿ ಅವರು ಕೊಟ್ಟ ಯೋಜನೆಯಿಂದ ನಾವು ಮತ್ತೆ ಶಾಸಕರಾಗಿರೊದೆ ಸಾಕ್ಷಿ ಎಂದರು. ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು, ದೇಶದ ದೊಡ್ಡ ಬಸ್ ನಿಲ್ದಾಣ, ಹೈಕೋರ್ಟ್ ಮಾದರಿಯ ಕೋರ್ಟ್ ಸಮಚ್ಚಯ. ದೇವೇಗೌಡರ ಕುಮಾರಸ್ವಾಮಿ ಅವರ ಕೆಲಸದ ಸಾಕ್ಷಿ ಗುಡ್ಡೆ ಎಲ್ಲಿದೆ ಎಂದಿದ್ದ ಡಿಸಿಎಂ ಗೆ ಜೆಡಿಎಸ್ ನಾಯಕರ ತಿರುಗೇಟು ಕೊಟ್ಟರು. ಹಾಸನ ಜಿಲ್ಲೆಯಲ್ಲಿ ನಡೆದಿರೊ ಅಭಿವೃದ್ಧಿ ಬಗ್ಗೆ ವಿವರಿಸಿ ಕಿಡಿಕಾಡಿದರು. ನಮ್ಮ ಅವದಿಯಲ್ಲಿ ಆಗಿರೊ ಕಟ್ಟಡಕ್ಕೆ ಇವರು ಸುಣ್ಣ ಬಣ್ಣ ಬಳಿಯಲು ಆಗಿಲ್ಲ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ದೇವೇಗೌಡರ ೫೫ ವರ್ಷಗಳ ರಾಜಕೀಯದಲ್ಲಿ ಹಳ್ಳಿ ಹಳ್ಳಿಯಲ್ಲಿ ಸಾಕ್ಷಿ ಗುಡ್ಡೆ ಇದೆ. ಬೇಕಿದ್ದರೆ ಬರಲಿ ತೋರಿಸೋಣ. ಆದರೆ ಅಭಿವೃದ್ಧಿ ಮಾಡಲಿ. ನಾವು ಎನ್ ಡಿ ಎ ಆಗಿ ಕೆಲಸ ಮಾಡುತ್ತಿದ್ದೇವೆ. ಉಪ ಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಲ್ಲ. ನಾವು ಬಿಜೆಪಿ ಅಣ್ಣ ತಮ್ಮರಂತೆ ಹೋಗ್ತಾ ಇದೀವಿ. ಮುಂದೆ ರಾಜ್ಯದಲ್ಲಿ ಜನರು ಎನ್.ಡಿ.ಎ. ಪರ ಇರ್ತಾರೆ. ಮುಂದಿನ ಬಜೆಟ್ ನಲ್ಲಿಯಾದರು ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಾರೊ ಗೊತ್ತಿಲ್ಲ. ಗುತ್ತಿಗೆ ದಾರರು ನೇಣುಹಾಕಿಕೊಳ್ಳೊ ಹಾಗಾಗಿದೆ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ನಮಗೆ ಯಾವುದೇ ಆತಂಕ ಇಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ವಕ್ತಾರರಾದ ರಘು ಹೊಂಗೆರೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page