Monday, July 1, 2024

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್ ಬಾನೋ ಪ್ರಕರಣ : ಶರಣಾಗತಿ ಗಡುವು ವಿಸ್ತರಿಸಲು 3 ಅಪರಾಧಿಗಳು ಸುಪ್ರೀಂ ಗೆ ಮೊರೆ

ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಮೂವರು ಅಪರಾಧಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜೈಲು ಅಧಿಕಾರಿಗಳ ಮುಂದೆ ತಮ್ಮ ಶರಣಾಗತಿಯ ಗಡುವನ್ನು ಆರರಿಂದ ನಾಲ್ಕು ವಾರಗಳವರೆಗೆ ವಿಸ್ತರಿಸುವಂತೆ ಕೋರಿದ್ದಾರೆ.

ಅಪರಾಧಿಗಳಲ್ಲಿ ಒಬ್ಬರಾದ ಗೋವಿಂದಭಾಯಿ ಅವರು ತಮ್ಮ ಮನವಿಯಲ್ಲಿ, ತಮ್ಮ 88 ವರ್ಷದ ತಂದೆ ಮತ್ತು 75 ವರ್ಷದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಉಲ್ಲೇಖಿಸಿ, ಅವರ ಏಕೈಕ ಉಸ್ತುವಾರಿ ಆದ ಕಾರಣ ಅಲ್ಲಿನ ಅವರ ಭವಿಷ್ಯದ ಯೋಗಕ್ಷೇಮಕ್ಕೆ ಅನುವು ಮಾಡಿಕೊಡಬೇಕು ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಅಪರಾಧಿ ರಮೇಶ್ ರೂಪಾಭಾಯ್ ಚಂದನ್ ಅವರು ತಮ್ಮ ಮಗನ ಮದುವೆಯನ್ನು ಏರ್ಪಡಿಸಲು ಸಮಯಾವಕಾಶ ಬೇಕು ಎಂದು ವಿವರಿಸಿ ಆರು ವಾರಗಳ ಕಾಲ ವಿಸ್ತರಣೆಯನ್ನು ಕೋರಿದ್ದಾರೆ.

ಮೂರನೇ ಅಪರಾಧಿ ಮಿತೇಶ್ ಚಿಮನ್‌ಲಾಲ್ ಭಟ್ ಅವರು ಆರು ವಾರಗಳ ವಿಸ್ತರಣೆಯನ್ನು ಕೋರಿದ್ದಾರೆ ಅವರ ಚಳಿಗಾಲದ ಕೃಷಿ ಉತ್ಪನ್ನಗಳು ಕೊಯ್ಲಿಗೆ ಸಿದ್ಧವಾಗಿವೆ ಮತ್ತು ಶರಣಾಗುವ ಮೊದಲು ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ಕಾರಣಗಳಿಂದ ನನಗೆ ಇನ್ನೂ ಆರು ವಾರಗಳ ಗಡುವು ವಿಸ್ತರಿಸಬೇಕು ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಈ ಹಿಂದೆ ಇದ್ದ ಎಲ್ಲಾ 11 ಅಪರಾಧಿಗಳ ಬಿಡುಗಡೆಗೆ ತಡೆಹಿಡಿದ ಹಿನ್ನೆಲೆಯಲ್ಲಿ ಎಲ್ಲರೂ ಮತ್ತೆ ಜೈಲಿಗೆ ಶರಣಾಗಬೇಕು ಎಂದು ತೀರ್ಪು ನೀಡಿತ್ತು. ಆ ಮೂಲಕ ಗುಜರಾತ್ ಸರ್ಕಾರದ ನಿರ್ಧಾರಕ್ಕೆ ವಿರುದ್ಧದ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಹೊರಗಿದ್ದ ಎಲ್ಲಾ ಅಪರಾಧಿಗಳಿಗೆ ಈಗ ಜೈಲೇ ಗತಿ ಆಗಿದೆ.

Related Articles

ಇತ್ತೀಚಿನ ಸುದ್ದಿಗಳು