ತಮಿಳುನಾಡು: ತಮಿಳುನಾಡಿನಲ್ಲಿ ಅಪ್ಪಳಿಸಿರುವ ಮಾಂಡೌಸ್ ಚಂಡಮಾರುತದಿಂದಾಗಿ ಅಲ್ಲಿನ ಹಲವು ಭಾಗಗಳಲ್ಲಿ ಬಾರೀ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ. ಅಲ್ಲದೇ ಸುಮಾರು 60 ಕ್ಕೂ ಹೆಚ್ಚು ಮರಗಳು ಬುಡಸಮೇತ ಕಿತ್ತು ಬರುತ್ತಿದ್ದು, ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ಸಂಜೆ ಮಾಮಲ್ಲಪುರದಿಂದ ಅಪ್ಪಳಿಸಿದ ಮಾಂಡೌಸ್ ಚಂಡಮಾರುತದಿಂದ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಚಂಡಮಾರುತದ ಪ್ರಭಾವಕ್ಕೆ, ವಿಪರೀತ ಮಳೆಯಾಗಿದ್ದು, ರಾತ್ರಿ 10.30ರ ಹೊತ್ತಿಗೆ ಭೂಕುಸಿತ ಉಂಟಾಗಿದ್ದು, ತಮಿಳುನಾಡಿನ ಮಹಾಬಳಿಪುರಂ ಕರಾವಳಿ ಹಾಗೂ ಪುದಚೇರಿ ಶ್ರೀ ಹರಿಕೋಟ ಪ್ರದೇಶಗಳಲ್ಲಿ ಗಾಳಿ ವೇಗ ಹೆಚ್ಚಾಗಿದೆ.
ಮಾಂಡೌಸ್ ಚಂಡಮಾರುತವು ವಾಯುವ್ಯ ದಿಕ್ಕಿನಿಂದ ಚಲಿಸುತ್ತಿದ್ದು, ಕರಾವಳಿಯನ್ನು ದಾಟಿದ್ದು, ಆಳವಾದ ವಾಯುಭಾರ ಕುಸಿತದಲ್ಲಿದೆ. ವಾಯುವ್ಯ ಭಾಗದ ಪ್ರದೇಶಗಳಲ್ಲಿ ಗಂಟೆಗೆ 55-65 ಕಿಮೀ ನಷ್ಟು ಅಲ್ಲಿನ ಗಾಳಿಯ ವೇಗ ಇದ್ದು, ಸಂಜೆಯ ವೇಳೆಹೆ 30ರಿಂದ 40ಕಿಮೀಗೆ ಇಳಿಯುತ್ತದೆ ಎಂದು ಚೆನ್ನೈನ ಡಿಡಿಜಿಯಂ ಎಸ್ ಬಾಲಚಂದ್ರನ್ ತಿಳಿಸಿದ್ದಾರೆ.
ಈ ಚಂಡಮಾರುತ ಕಡಿಮೆ ಆಗುವವರೆಗೆ ಜನರು ಹೊರಗೆ ಹೋಗುವುದನ್ನು ತಪ್ಪಿಸುವಂತೆ ಗ್ರೇಟರ್ ಚೆನ್ನೈ ಕಾರ್ಪೊರೇಶನ್(JCC) ವಿನಂತಿಸಿದ್ದಾರೆ. ಮೂರು ಗಂಟೆಗಳಲ್ಲಿ ಸುಮಾರು 65ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ ಎಂದು ಹೇಳಲಾಗುತ್ತಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ನೀರು ನಿಲ್ಲುವುದನ್ನು ತೆಗೆಯಲು ಮೋಟಾರ್ ಪಂಪ್ಗಳನ್ನು ಬಳಸಲಾಗುತ್ತಿದೆ.
ʼಮಾಂಡೌಸ್ ಚಂಡಮಾರುತದ ಬಗ್ಗೆ ಸರ್ಕಾರವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರೆ. ಆದ್ದರಿಂದ ಸರ್ಕಾರದ ಆದೇಶಗಳನ್ನುಅದರೊಂದಿಗೆ ಕಾರ್ಪೊರೇಟ್ ಆದೇಶಗಳನ್ನು ಅನುಸರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.
ಭಾರಿ ಮಳೆಯಿಂದ ಆಗುತ್ತಿರುವ ಅವಾಂತರಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಅಲ್ಲಿನ ಹಲವು ಭಾಗಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ. ಅಲ್ಲದೇ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.