Monday, June 9, 2025

ಸತ್ಯ | ನ್ಯಾಯ |ಧರ್ಮ

ದಾವಣಗೆರೆ: ಸಿಲಿಂಡರ್ ಸ್ಫೋಟ, 5 ಮಂದಿಗೆ ಗಾಯ, 4 ಮಂದಿಗೆ ಶೇ.70 ರಷ್ಟು ಸುಟ್ಟ ಗಾಯ

ದಾವಣಗೆರೆ: ನಗರದ ರಾಮನಗರದ ಎಸ್‌ಒಜಿ ಕಾಲೋನಿಯಲ್ಲಿ ಮಂಗಳವಾರ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರಿಗೆ ಸುಟ್ಟ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ಮಲ್ಲೇಶಪ್ಪ (60), ಲಲಿತಮ್ಮ (50), ಸೌಭಾಗ್ಯ (36), ಪಾರ್ವತಮ್ಮ (45) ಮತ್ತು ಪ್ರವೀಣ್ (35) ಗಾಯಗೊಂಡವರು. ಮಲ್ಲೇಶಪ್ಪ, ಲಲಿತಮ್ಮ, ಸೌಭಾಗ್ಯ ಮತ್ತು ಪಾರ್ವತಮ್ಮ ಅವರಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಲೇಶಪ್ಪ ಮತ್ತು ಲಲಿತಮ್ಮ ದಂಪತಿ ಸಂಜೆ ಚಹಾ ಮಾಡುವಾಗ ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸಿದ್ದಾರೆ. ಅವರು ಅದನ್ನು ಪರಿಶೀಲಿಸಲೆಂದು ತಮ್ಮ ನೆರೆಮನೆಯವರಿಗೆ ಕರೆ ಮಾಡಿದರು. ಪ್ರವೀಣ್ ಹಾಗೂ ಇತರರು ಅಡುಗೆ ಮನೆಯೊಳಗೆ ಬಂದು ಲೈಟ್ ಆನ್ ಮಾಡಿದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಪಾತ್ರೆಗಳಿಗೆ ಹಾನಿಯಾಗಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಎಸ್‌ಎಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page