ಬೆಂಗಳೂರು: ನವೆಂಬರ್ 06 ರಂದು ಚಿತ್ರಕಲಾ ಪರಿಷತ್ ಆವರಣದಲ್ಲಿ ಲೇಖಕರಾದ ದಯಾ ಗಂಗನಘಟ್ಟ ಅವರ ʼಉಪ್ಪುಚ್ಚಿ ಮುಳ್ಳುʼ ಕಥಾ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಪುಸ್ತಕವನ್ನು ಹಾಸನದ ಹಾಡ್ಲಹಳ್ಳಿ ಪ್ರಕಾಶನ ಪ್ರಕಟಿಸಿದ್ದು, ಹಿರಿಯ ಲೇಖಕರಾದ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಹಿರಿಯ ವಿಮರ್ಶಕಿ ಡಾ.ಎಂ.ಎಸ್ ಆಶಾದೇವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕೃತಿಯ ಕುರಿತು ಕಥೆಗಾರರಾದ ಕೇಶವ ಮಳಗಿ ಮತ್ತು ನಾಟಕಕಾರರಾದ ಡಾ. ಬೇಲೂರು ರಘುನಂದನ್ ಅವರು ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಥೆಗಾರ್ತಿಯಾದ ದಾಕ್ಷಾಯಿಣಿ ಗಂಗನಘಟ್ಟ, ಪತ್ರಕರ್ತರು ಮತ್ತು ಪ್ರಕಾಶಕರಾದ ಚಲಂ ಹಾಡ್ಲಹಳ್ಳಿ, ಕಾಜಾಣ, ರಂಗಚಂದಿರ, ಶಾರದಾ ಪ್ರತಿಷ್ಠಾನ, ಬೀ ಕಲ್ಚರ್, ರಂಗ ಹೃದಯ, ಜೇನು ಗಿರಿ, ಅಕ್ಷರ ಚಪ್ಪರ ಮತ್ತಿತರರು ಹಾಜರಿರುತ್ತಾರೆ.
ಆರಾಧ್ಯ ಫೌಂಡೇಶನ್ ವಿಜಯನಗರ ವತಿಯಿಂದ ಕಥಾಭಿನಯ ಹಾಗು ಗಂಗನಘಟ್ಟದ ಹಾಡುಗಾರ್ತಿಯರಿಂದ ಸೋಬಾನೆ ಪದ ಕಾರ್ಯಕ್ರಮ ಸಹ ಇರಲಿದೆ.