Tuesday, January 27, 2026

ಸತ್ಯ | ನ್ಯಾಯ |ಧರ್ಮ

ದೆಹಲಿ ಮದ್ಯ ನೀತಿ ಪ್ರಕರಣ : BRS ನಾಯಕಿ ಕವಿತಾ ಬಂಧನ

ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೈದರಾಬಾದ್ ನಿವಾಸದಲ್ಲಿ ಶೋಧ ನಡೆಸಿದ ಕೆಲವೇ ಗಂಟೆಗಳ ನಂತರ ಭಾರತ್ ರಾಷ್ಟ್ರ ಸಮಿತಿ (BRS) ಎಂಎಲ್ಸಿ ಕೆ ಕವಿತಾ ಅವರನ್ನ ಶುಕ್ರವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಧ್ಯಾಹ್ನ, ನವದೆಹಲಿಯ ಎರಡೂ ಏಜೆನ್ಸಿಗಳ ಕನಿಷ್ಠ 10 ಅಧಿಕಾರಿಗಳು ಕವಿತಾ ಮತ್ತು ಅವರ ಪತಿ ಡಿ ಅನಿಲ್ ಕುಮಾರ್ ಅವರ ಸಮ್ಮುಖದಲ್ಲಿ ಶೋಧ ನಡೆಸಿದ್ದರು.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿಯೂ ಆಗಿರುವ ಕೆ.ಕವಿತಾ ಅವರನ್ನ ಆರೋಪಿ ಎಂದು ಹೆಸರಿಸಲಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಲು ತಮ್ಮ ಮುಂದೆ ಹಾಜರಾಗುವಂತೆ ಐಟಿ ಮತ್ತು ಇಡಿ ಕವಿತಾಗೆ ಹಲವಾರು ನೋಟಿಸ್ಗಳನ್ನು ನೀಡಿತ್ತು, ಆದರೆ ನೋಟಿಸ್ಗಳ ವಿರುದ್ಧ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು ಮತ್ತು ಏಜೆನ್ಸಿಗಳ ಮುಂದೆ ಹಾಜರಾಗಿರಲಿಲ್ಲ.

ಆದರೆ ಈಗ ಕವಿತಾ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ ನಂತರ ಎಲ್ಲಾ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ಇತ್ತ ಇಡಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಕವಿತಾ, ತೆಲಂಗಾಣಕ್ಕೆ ‘ಪರೋಕ್ಷ’ ಪ್ರವೇಶವನ್ನು ಪಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಫೆಡರಲ್ ಏಜೆನ್ಸಿಗಳನ್ನು ‘ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಪ್ರತಿಪಾದಿಸಿದ BRS MLC ನಿರಂತರವಾಗಿ ತನ್ನ ಮುಗ್ಧತೆಯನ್ನು ಪ್ರತಿಪಾದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page