Saturday, June 21, 2025

ಸತ್ಯ | ನ್ಯಾಯ |ಧರ್ಮ

ಕಾಡಾನೆ ಮಾನವ ಸಂಘರ್ಷಕ್ಕೆ ಸುರಕ್ಷಾ ಸೇತು ನಿರ್ಮಿಸುತ್ತಿರುವ ಇಲಾಖೆ

ಅರೇಹಳ್ಳಿ : ಮಲೆನಾಡು ಭಾಗವಾದ ಬೇಲೂರು ತಾಲೂಕಿನ ಅರೇಹಳ್ಳಿ ಹಾಗು ಸುತ್ತ ಮುತ್ತಲಿನ ಜನವಸತಿ ಹಾಗೂ ಕೃಷಿ ಜಮೀನುಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲಾಖೆಯ ಮುಂದೆ ಸಾಕಷ್ಟು ಮಾನದಂಡಗಳಿರುವುದರಿಂದ!ತಾತ್ಕಾಲಿಕವಾಗಿ ಅರಣ್ಯ ಇಲಾಖೆಯು ಕಾಡಾನೆ – ಮಾನವ ಸಂಘರ್ಷವನ್ನು ನಿಯಂತ್ರಿಸುವ ಸಲುವಾಗಿ ಕಾಡನೆಗಳು ಬೀಡು ಬಿಟ್ಟಿರುವ ಮಾಹಿತಿಯನ್ನು ವಿವಿದ ಸ್ಥಳಗಳಲ್ಲಿ ಡಿಜಿಟಲ್ ಬೋರ್ಡ್ ಮೂಲಕ, ವಾಟ್ಸಾಪ್ ಸಂದೇಶಗಳ ಮೂಲಕ, ಅಲ್ಲದೆ ವಾಹನಗಳಲ್ಲಿ ಮೈಕ್ ಪ್ರಕಟಣೆ ಮೂಲಕ ಸಾಕಷ್ಟು! ಮಾಹಿತಿಗಳನ್ನು ನೀಡುತ್ತಾ ಸಾರ್ವಜನಿಕರನ್ನು, ರೈತಾಪಿ ವರ್ಗದವರನ್ನು ಹಾಗು ವಾಹನ ಸವಾರರನ್ನು ಕಾಡಾನೆಗಳಿಂದ ದೂರ ಇರುವಂತೆ ಎಚ್ಚರಿಸುತ್ತಾ ಸಂಘರ್ಷವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವುದು ಕೆಲವರಿಗೆ ಕರ್ತವ್ಯದಲ್ಲಿ ಇದು ಸಾಮಾನ್ಯ ವಿಷಯ.

ಆದರೆ ಇವೆಲ್ಲವುಗಳ ನಡುವೆ ಕಳೆದ ರಾತ್ರಿ ಮಲಸಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿನಂಚಿನಲ್ಲಿರುವ ಕಾನನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬುವವರ ಮನೆಯಂಗಳಕ್ಕೆ ಕಾಡಾನೆಗಳು ವಿದ್ಯುತ್ ಸಂಪರ್ಕವೂ ಸಹಾ ಇಲ್ಲದ ಸುಮಾರು ರಾತ್ರಿ 12ರ ಕಗ್ಗತ್ತಲಲ್ಲಿ ಲಗ್ಗೆ ಇಟ್ಟಿದ್ದು ಜೀವ ಭಯದಲ್ಲೇ ಮನೆಯ ಸದಸ್ಯರು ಅರಣ್ಯ ಇಲಾಖೆಯ ಇ ಟಿ ಫ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ ಕೆಲ ಕ್ಷಣದಲ್ಲಿ ಕಾಡನೆಗಳಿರುವ ಪ್ರದೇಶಕ್ಕೆ ಜೀವದ ಹಂಗು ತೊರೆದು ಆಗಮಿಸಿದ ಈ ಟಿ ಎಫ್ ಸಿಬ್ಬಂದಿಗಳು ಕಾಡಾನೆ ಗಳನ್ನು ಕಾಡಿಗಟ್ಟಿದ್ದು ಮನೆಯೊಳಗಿದ್ದವರಿಗೆ ಪುನರ್ಜೀವ ಬಂದಂತಾಗಿದೆ ಎಂದು ಮನೆಯ ಸದಸ್ಯರು ಮಾಧ್ಯಮದ ಮೂಲಕ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ

ಅದೇ ರೀತಿ ಅ ದಿನವೇ ಸಂಜೆ ಸುಮಾರು 7ರ ಸಮಯದಲ್ಲಿ ಲಿಂಗಾಪುರ ಗ್ರಾಮದ ಸಮೀಪ ಉದೇವಾರ ರಸ್ತೆಯಲ್ಲಿ ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ವಾಹನ ಸವಾರರಿಗೆ ರಸ್ತೆಯುದ್ದಕ್ಕೂ ಸುಮಾರು 20ಕ್ಕೂ ಹೆಚ್ಚಿನ ಕಾಡಾನೆಗಳ ಗುಂಪಿನಿಂದ ಅಂತರ ಕಾಪಾಡುವಂತೆ ತಿಳಿಸುತ್ತಾ ಒಂದು ಸ್ಥಳದಿಂದ ಮುಂದಿನ ಸುರಕ್ಷತೆಯ ಸ್ಥಳದವರೆಗೂ ರಕ್ಷಣೆಯೊಂದಿಗೆ ಸುಗಮವಾಗಿ ಹೋಗಲು ಅವಕಾಶ ಕಲ್ಪಿಸಿ ಬಿಟ್ಟಿರುವುದಕ್ಕಾಗಿ ವಾಹನ ಸವಾರರು ಅಭಿನಂದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page