Sunday, June 30, 2024

ಸತ್ಯ | ನ್ಯಾಯ |ಧರ್ಮ

ದೇಶವನ್ನು ನಾವು ಜೋಡಿಸುತ್ತಿದ್ದೇವೆ ನೀವು ಕಾಂಗ್ರೆಸ್‌ ಜೋಡಿಸಿ: ಬಿಜೆಪಿ ಟೀಕೆ

ಬೆಂಗಳೂರು: ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಅಜಾದ್‌ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದೆ.

ಗುಲಾಂ ನಬಿ ಅಜಾದ್‌ ಅವರು  ರಾಜೀನಾಮೆ ಪತ್ರದಲ್ಲಿ ʼಭಾರತ್ ಜೋಡೋʼ ಯಾತ್ರೆಯನ್ನು ಪ್ರಾರಂಭಿಸುವ ಮೊದಲು ನಾಯಕತ್ವವು ದೇಶಾದ್ಯಂತ ʼಕಾಂಗ್ರೆಸ್ ಜೋಡೋʼ ಎಕ್ಸರ್ಸೈಜ್ ಅನ್ನು ಕೈಗೊಳ್ಳಬೇಕಿತ್ತು, ಆದರೆ ಎಐಸಿಸಿ ನಾಯಕತ್ವವು ಆತ್ಮಶಕ್ತಿಯನ್ನು ಮತ್ತು ಪಕ್ಷವನ್ನು ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಇದನ್ನೆ ಉದಾಹರಣೆಯಾಗಿಟ್ಟುಕೊಂಡು ರಾಜ್ಯ ಬಿಜೆಪಿ ಘಟಕ, ಕಾಂಗ್ರೆಸ್ಸಿಗರೇ ದೇಶವನ್ನು ನಾವು ಜೋಡಿಸುತ್ತಿದ್ದೇವೆ ನೀವು ಕಾಂಗ್ರೆಸ್‌ ಜೋಡಿಸಿ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು