Tuesday, September 16, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಪ್ರಕರಣ: ಬಂಗಲೆಗುಡ್ಡೆ ಪ್ರದೇಶದಲ್ಲಿ ಶೋಧಕ್ಕೆ SIT ಸಿದ್ಧತೆ

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹೂತು ಹಾಕುವಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ನೇತ್ರಾವತಿ ನದಿ ಸ್ನಾನಘಟ್ಟದ ಬಳಿಯ ಬಂಗಲೆಗುಡ್ಡೆ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.

ದೂರುದಾರ-ಸಾಕ್ಷಿಯು ಪೊಲೀಸರಿಗೆ ಹಸ್ತಾಂತರಿಸಿದ ತಲೆಬುರುಡೆಯನ್ನು ಬಂಗಲೆಗುಡ್ಡೆ ಅರಣ್ಯದಿಂದ ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. ತಲೆಬುರುಡೆ ಸಿಕ್ಕಿದ ಸ್ಥಳವನ್ನು ತೋರಿಸಿದ ವಿಠಲ್ ಗೌಡನನ್ನು ಎಸ್‌ಐಟಿ ಅಧಿಕಾರಿಗಳು ಇತ್ತೀಚೆಗೆ ಆ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಈ ಪ್ರದೇಶವು ಬೆಳ್ತಂಗಡಿ ಅರಣ್ಯ ವಿಭಾಗದ ವ್ಯಾಪ್ತಿಗೆ ಬರುತ್ತದೆ. ವಿಠಲ್, 2012ರಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ಸೌಜನ್ಯಾಳ ಮಾವ.

ತಪಾಸಣೆ ನಂತರ, ಹಲವಾರು ದೇಹಗಳ ಅವಶೇಷಗಳನ್ನು ಕಂಡಿರುವುದಾಗಿ ವಿಠಲ್ ಹೇಳಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ನಂತರ, ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಅರಣ್ಯ ವಿಭಾಗದ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿ ಸಮಾಲೋಚನೆ ನಡೆಸಿದರು.

ಎಸ್‌ಐಟಿ ಮೂಲಗಳು ತಿಳಿಸಿರುವಂತೆ, “ದೂರುದಾರ-ಸಾಕ್ಷಿ ಹಸ್ತಾಂತರಿಸಿದ ತಲೆಬುರುಡೆ ದೊರೆತ ಅದೇ ಅರಣ್ಯದಲ್ಲಿ ಅಸ್ಥಿಪಂಜರಗಳ ಅವಶೇಷಗಳು ಕಂಡುಬಂದಿರುವುದರಿಂದ, ನಾವು ಅಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕಿದೆ”.

Related Articles

ಇತ್ತೀಚಿನ ಸುದ್ದಿಗಳು

You cannot copy content of this page