Thursday, January 29, 2026

ಸತ್ಯ | ನ್ಯಾಯ |ಧರ್ಮ

ರೈತರಿಗೆ ಮೋಸವಾಗದಂತೆ ತ್ತನೆ ಆಲೂಗೆಡ್ಡೆ ವಿತರಣೆ ಮಾಡಿ – ಕಣಗಾಲ್ ಮೂರ್ತಿ

ಹಾಸನ: ಬಿತ್ತನೆ ಆಲೂಗೆಡ್ಡೆಯನ್ನು ಇಲಾಖೆವತಿಯಿಂದ ರೈತರಿಗೆ ಮೋಸವಾಗದಂತೆ ದೃಡೀಕರಣ ಮಾಡಿ ವಿತರಣೆ ಮಾಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಇವರು ಆಲೂಗೆಡ್ಡೆ ಬಿತ್ತನೆ ಬೀಜದ ಮೇಳ ಮಾಡಲಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರ ಹೇಳುತ್ತಾರೆ ಕೇಳೋನಾ ಎಂದು ರೈತರುಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು, ನಾವು ಬೀಜ ಎಂದು ಕೊಡ ಬರುವುದಿಲ್ಲ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಬೀಜದ ಮೇಳೆ ಎಂದು ಏಕೆ ಹೇಳಬೇಕು, ರೈತರ ದಿಕ್ಕು ಏಕೆ ತಪ್ಪಿಸಬೇಕು ಎಂದು ಪ್ರಶ್ನಿಸಿದರು. ಇದನ್ನು ಚರ್ಚೆ ಮಾಡಲೆಂದು ನಾವು ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಬಂದು ದಡದಡನೆ ವಾಪಸ್ ಹೋದರೆ ನಮಗೆ ಏನು ಅರ್ಥವೇ ಆಗಲಿಲ್ಲ . ಆಲೂಗೆಡ್ಡೆ ಮೇಳದಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಆಲೂಗೆಡ್ಡೆ ಬೆಳೆಗೆ ಉತ್ತೇಜನ ನೀಡುವಂತಹ ಯಾವುದೇ ತಾಂತ್ರಿಕ ಸಲಹೆ, ಸೂಚನೆಗಳು ಮೇಳದಲ್ಲಿ ದೊರಕಿಲ್ಲ. ಉಸ್ತುವಾರಿ ಸಚಿವರು ಕೆಲ ಹೊತ್ತು ಮಾತನಾಡುವುದಕ್ಕೂ ಸಮಯ ನೀಡದೇ ನೇರವಾಗಿ ಮಾತನಾಡಿ ಹೊರಟು ಹೋದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಹಾಗೂ ರೈತ ಮುಖಂಡರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶವೇ ಸಿಗಲಿಲ್ಲ. ಇಂತಹ ಮೇಳಗಳಿಂದ ರೈತರಿಗೆ ಲಾಭವೇನು ಎಂದು ಪ್ರಶ್ನಿಸಿದರು. ಹಿಂದೆ ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಆಲೂಗೆಡ್ಡೆ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಅಂಗಮಾರಿ ರೋಗ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಇಂದು ಆಲೂಗೆಡ್ಡೆ ಬೆಳೆಯುವ ಪ್ರದೇಶಗಳು ಬಹಳಷ್ಟು ಕುಂಠಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಭರವಸೆ ನೀಡುವ ಬದಲು ಕೇವಲ ಮೇಳ ಆಯೋಜನೆ ಮಾಡಿ ಕೈತೊಳೆದುಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆದರೆ, ಮೊನ್ನೆ ನಡೆದ ಆಲೂಗೆಡ್ಡೆ ಮೇಳದ ನಂತರ ಕೆಲ ರೈತರಲ್ಲಿ ಮತ್ತೆ ಆಲೂಗೆಡ್ಡೆ ಬೆಳೆಯುವ ಆಸಕ್ತಿ ಮೂಡಿದೆ. ಈ ಉತ್ಸಾಹವನ್ನು ಉಳಿಸಬೇಕಾದರೆ ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆ ಮೂಲಕವೇ ದೃಢೀಕೃತ, ಗುಣಮಟ್ಟದ ಬಿತ್ತನೆ ಆಲೂಗೆಡ್ಡೆಗಳನ್ನು ರೈತರಿಗೆ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ವಸ್ತು ವಿತರಣೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page