Thursday, June 13, 2024

ಸತ್ಯ | ನ್ಯಾಯ |ಧರ್ಮ

ಯುಪಿ ‘ಮತಾಂತರ ನಿಷೇಧ’ ಕಾಯ್ದೆ | ಬೈಬಲ್ ಹಂಚುವುದು ಮತಾಂತರ ಆಮಿಷವಲ್ಲ: ಅಲಹಾಬಾದ್ ಹೈಕೋರ್ಟ್

ಬೈಬಲ್ ಹಂಚುವುದು, ಬೋಧನೆ ಮಾಡುವುದು, ಮತ್ತು ಭಂಡಾರವನ್ನು ಪ್ರದರ್ಶಿಸುವುದು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆ 2021 (Uttar Pradesh Prohibition of Unlawful Conversion of Religion Act 2021) ರ ಅಡಿಯಲ್ಲಿ ಧಾರ್ಮಿಕ ಮತಾಂತರಕ್ಕೆ ಒಡ್ಡುವ ‘ಆಮಿಷ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ಪೀಠವು ಯುಪಿ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆ
2021 ರ ಸೆಕ್ಷನ್ 4 ರ ವ್ಯಾಪ್ತಿಯನ್ನು [ಎಫ್‌ಐಆರ್ ದಾಖಲಿಸಲು ಸಮರ್ಥ ವ್ಯಕ್ತಿ], ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಅಪರಾಧದ ಆಯೋಗದ ಬಗ್ಗೆ ಯಾರು ಎಫ್‌ಐಆರ್ ದಾಖಲಿಸಬಹುದು ಎಂಬುದನ್ನು ವಿವರಿಸಿದೆ.

ಈ ಆದೇಶದ ಪ್ರಕಾರ, ಮತಾಂತರಗೊಂಡ ವ್ಯಕ್ತಿ, ಅವನ/ಅವಳ ತಂದೆತಾಯಿ, ಸಹೋದರ, ಸಹೋದರಿ ಅಥವಾ
ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಅವನಿಗೆ / ಅವಳಿಗೆ ಸಂಬಂಧಿಸಿರುವ ಯಾವುದೇ ವ್ಯಕ್ತಿ FIR
ಸಲ್ಲಿಸಬಹುದು ಎಂದು ನ್ಯಾಯಾಲಯ ವಿವರಿಸಿದೆ.

ಆಮಿಷಗಳನ್ನು ಒಡ್ಡಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಪರಿಶಿಷ್ಟ ಜಾತಿ/ಪಂಗಡ ಮತ್ತು ಸಮುದಾಯದವರನ್ನು ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿಲಾದ ಜೋಸ್ ಪಾಪಚೆನ್ ಮತ್ತು ಶೀಜಾ ಎಂಬ ಇಬ್ಬರು ವ್ಯಕ್ತಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಯುಪಿ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆಯ ಸೆಕ್ಷನ್ 3 ಮತ್ತು 5 (1) ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್ 3(1) (ಧಾ) [Section 3(1) (dha) of the SC/ST Act] ಅಡಿಯಲ್ಲಿ ಅವರ ಮೇಲೆ ಕೇಸು ದಾಖಲಿಸಲಾಗಿತ್ತು. 2023ರ ಆರಂಭದಲ್ಲಿ ಅಂಬೇಡ್ಕರ್ ನಗರ ಜಿಲ್ಲೆಯ ಬಿಜೆಪಿ ಪದಾಧಿಕಾರಿಯೊರ್ವರು ದಾಖಲಿಸಿದ ಈ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿತ್ತು..

ಮಾರ್ಚ್‌ ನಲ್ಲಿ ಇವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಅಂಬೇಡ್ಕರ್ ನಗರದ ಎಸ್.ಸಿ./ಎಸ್.ಟಿ. ಕಾಯಿದೆಯ ವಿಶೇಷ ನ್ಯಾಯಾಧೀಶರು ತಿರಸ್ಕರಿಸಿದರು. ಆನಂತರ ಹೈಕೋರ್ಟ್‌ಗೆ ತೆರಳಿದ್ದರು.

ಎರಡೂ ಕಡೆಗಳ ವಾದಗಳನ್ನು ಗಮನಿಸಿದ ಹೈಕೋರ್ಟ್ ಸಾಮೂಹಿಕ ಮತಾಂತರಕ್ಕೆ ಯಾವುದೇ ಆಮಿಷಗಳನ್ನು ಒಡ್ಡಿದ್ದಕ್ಕೆ ಸಾಕ್ಷಿಗಳು ಇಲ್ಲದೇ ಇದ್ದರಿಂದ ಮತ್ತು ಗ್ರಾಮಸ್ಥರಿಗೆ ಸಹೋದರತ್ವ ಹಾಗೂ ಇತರ ಉತ್ತಮ ಬೋಧನೆಗಳನ್ನು ನೀಡಿದ್ದಾರೆಂದು ಜಾಮೀನು ನೀಡಿತು.

ಕೇಸಿನ ಹೆಸರು: Jose Papachen And Another vs. State Of U.P. Thru. Prin. Secy. Home, Lko. And Another [CRIMINAL APPEAL No. – 877 of 2023]

ತೀರ್ಪನ್ನು ಇಲ್ಲಿ ಓದಬಹುದು https://drive.google.com/file/d/1C9Mvz7r1xQMMAd1nCx2SXEtrjZCKfC3U/view?usp=sharing

Related Articles

ಇತ್ತೀಚಿನ ಸುದ್ದಿಗಳು