Wednesday, June 26, 2024

ಸತ್ಯ | ನ್ಯಾಯ |ಧರ್ಮ

ಭಾರತದಲ್ಲಿ ಪ್ರಜಾಪ್ರಭುತ್ವವಿದೆಯೇ? – ಅಮೇರಿಕಾದ ಜರ್ನಲ್‌ ನಲ್ಲಿ ಐವರು ವಿದ್ವಾಂಸರ ಅಭಿಪ್ರಾಯ

ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಮೇಲೆ ಮೋದಿ ಸರ್ಕಾರ ಬೀರಿರುವ ಪ್ರಭಾವವನ್ನು ವಿಶ್ಲೇಷಿಸಿ ಅಮೇರಿಕಾ ಮೂಲದ ಜರ್ನಲ್ ಆಫ್ ಡೆಮಾಕ್ರಸಿ ಅನೇಕ ಚಿಂತಕರ ಪ್ರತಿಕ್ರಿಯೆಗಳನ್ನು ಪ್ರಕಟಿಸಿದ್ದು ಇವುಗಳಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

1990 ರಲ್ಲಿ ಆರಭವಾಗಿರುವ ಡೆಮಕ್ರಸಿಯ ಸಿದ್ಧಾಂತಗಳನ್ನು ಪ್ರಕಟಿಸುವ ಈ ಜರ್ನಲ್‌ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಯನ್ನು ಎತ್ತಿದೆ. “ಭಾರತ ಇನ್ನೂ ಪ್ರಜಾಪ್ರಭುತ್ವವಾದಿಯಾಗಿದೆಯೇ?” ಎಂಬ ಪ್ರಶ್ನೆಯನ್ನು ಆಧರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಅಡಳಿತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಗತಿಗಳನ್ನು ಐವರು ವಿದ್ವಾಂಸರು ವಿಶ್ಲೇಷಿಸಿದ್ದಾರೆ.

ಈ ಲೇಖನಗಳಲ್ಲಿ ಕೆಲವು ವಿದ್ವಾಂಸರು 2014 ರ ನಂತರ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದಕ್ಕಾಗಿ ಬಿಜೆಪಿಯನ್ನು ದೂರುವುದು ಸರಿಯಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ ಸಧ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದ್ದಾರೆ.
ಅಮೇರಿಕನ್‌ ಪತ್ರಕರ್ತ ವಿಲಿಯಂ ಜೆ. ಡಾಬ್ಸನ್ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಡೆಮಾಕ್ರಸಿ ಹಾಗೂ ಆಡಳಿತ ಅಧ್ಯಯನದ ಪ್ರಧ್ಯಾಪಕ ತಾರೆಕ್‌ ಮಸೌದ್‌ ಈ ಸರಣಿ ಲೇಖನಗಳಿರುವ ಜುಲೈ ಸಂಚಿಕೆಯನ್ನು ಸಂಪಾಧಿಸಿದ್ದಾರೆ.
https://www.journalofdemocracy.org/2023/06/19/is-india-still-a-democracy/

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಸಾರ್ವಜನಿಕ ನೀತಿಯ ಪ್ರಾಧ್ಯಾಪಕರಾದ ಮಾಯಾ ಟ್ಯೂಡರ್, ಇತಿಹಾಸಕಾರ ತ್ರಿಪುರದಮನ್ ಸಿಂಗ್, ಅಶೋಕ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದದ ಪ್ರಾಧ್ಯಾಪಕ ರಾಹುಲ್ ವರ್ಮಾ, ಯೇಲ್ ಪ್ರೊಫೆಸರ್ ವಿನೀತಾ ಯಾದವ್ ಮತ್ತು ಇಂಡಿಯಾನ ಯುನಿವರ್ಸಿಟಿಯ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಸುಮಿತ್ ಗಂಗೂಲಿ ಈ ಸಂಚಿಕೆಯಲ್ಲಿ ಲೇಖನಗಳನ್ನು ಬರೆದಿದ್ದಾರೆ.

ಈ ಸರಣಿ ಲೇಖನದ ಆರಂಭದಲ್ಲಿ ಡಾಬ್ಸನ್ ಮತ್ತು ಮಸೌದ್ 1975 ರ ತುರ್ತು ಪರಿಸ್ಥಿತಿಯನ್ನು ಬಿಟ್ಟಂತೆ “ಕಡಿಮೆ ಮಟ್ಟದ ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಮತ್ತು ಅದರ ಉನ್ನತ ಮಟ್ಟದ ಜನಾಂಗೀಯ ವೈವಿಧ್ಯತೆಯೊಂದಿಗೆ” ಭಾರತದ ಪ್ರಜಾಪ್ರಭುತ್ವ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಆದರೂ, 2014 ರಲ್ಲಿ “ಜನಾಂಗೀಯವಾದಿ” ಬಿಜೆಪಿ ಮತ್ತು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವವಾದಿ ಸಂಸ್ಥೆಗಳನ್ನು ಕೆಡವಲಾಗಿದೆ ಎಂದು ಹೇಳುತ್ತಾರೆ. 2021 ರ ಫ್ರೀಡಂ ಹೌಸ್ ಇಂಡೆಕ್ಸ್ ವರದಿಯನ್ನು ಉಲ್ಲೇಖಿಸಿ ಭಾರತದಲ್ಲಿರುವ ಸ್ವಾತಂತ್ರ್ಯವನ್ನು ವಿಶ್ಲೇಷಿಸಿದ್ದಾರೆ

ಸರಣಿಯಲ್ಲಿನ ಐದು ಪ್ರಬಂಧಗಳು ಭಾರತದ ಪ್ರಜಾಪ್ರಭುತ್ವವನ್ನು ಓರೆಗೆ ಹಚ್ಚಿ ಸಮೀಪಿಸುತ್ತವೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಜೊತೆಗೆ ಭಾರತದ ಇತಿಹಾಸವನ್ನು ಅರ್ಥೈಸಲು ಪ್ರಯತ್ನಿಸಿವೆ.

ಮಾಯಾ ಟ್ಯೂಡರ್ ಅವರ ಲೇಖನ ‘ವೈ ಇಂಡಿಯಾಸ್ ಡೆಮಾಕ್ರಸಿ ಈಸ್ ಡೈಯಿಂಗ್ – ಭಾರತದ ಪ್ರಜಾಪ್ರಭುತ್ವ ಯಾಕೆ ಸಾಯುತ್ತಿದೆ’, ಪ್ರಜಾಪ್ರಭುತ್ವದ ಸಮಗ್ರ ವ್ಯಾಖ್ಯಾನದ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತದೆ. ಚುನಾವಣೆಗಳ ಹೊರತಾಗಿ ಪ್ರಜಾಪ್ರಭುತ್ವವನ್ನು ನೋಡುವ ಹಾಗೂ ನಾಗರಿಕ ಸ್ವಾತಂತ್ರ್ಯಗಳು, ಸರ್ಕಾರದ ಸ್ವಾಯತ್ತತೆಯ ಅಗತ್ಯತೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ

ರಾಹುಲ್ ವರ್ಮಾ ಮತ್ತು ತ್ರಿಪುರದಮನ್ ಸಿಂಗ್ ಅವರ ಬರಹಗಳು ಭಾರತದ ಪ್ರಜಾಪ್ರಭುತ್ವದ ಹಿನ್ನಡೆಯನ್ನು ನೋಡುವಾಗ ದೇಶದ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆ ಎಂದು ವಾದಿಸುತ್ತವೆ.

ಜಿನೀವಾ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ನ ಆಲ್ಬರ್ಟ್ ಹಿರ್ಷ್‌ಮನ್ ಸೆಂಟರ್ ಆನ್ ಡೆಮಾಕ್ರಸಿ (Geneva Graduate Institute’s Albert Hirschman Centre on Democracy )ಯಲ್ಲಿ ಅಂಬಿಜಿಯೋನ್ ಫೆಲೋ ಆಗಿರುವ ತ್ರಿಪುರದಮನ್ ಸಿಂಗ್, ಭಾರತವು “ಪ್ರಜಾಪ್ರಭುತ್ವವನ್ನು ಹೊಕ್ಕಿರುವ ನಿರಂಕುಶಪ್ರಭುತ್ವವನ್ನು” ಎನ್ನುತ್ತಾರೆ. ಭಾರತೀಯ ಪ್ರಜಾಪ್ರಭುತ್ವವನ್ನು ಪಾಶ್ಚಿಮಾತ್ಯ ದೇಶಗಳೊಂದಿಗೆ ಹೋಲಿಸಬಾರದು ಎಂದು ವಾದಿಸುತ್ತಾರೆ.

ಜರ್ನಲ್ ಆಫ್ ಡೆಮಾಕ್ರಸಿಯು ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ (NED – NED – National Endowment for Democracy) ನಲ್ಲಿ ಪ್ರಜಾಪ್ರಭುತ್ವದ ಅಧ್ಯಯನಕ್ಕಾಗಿ ಇರುವ ಅಂತರಾಷ್ಟ್ರೀಯ ವೇದಿಕೆ. NED ವೆಬ್‌ಸೈಟ್‌ನಲ್ಲಿ, “100 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಜಾಪ್ರಭುತ್ವಕ್ಕಾಗಿ ಕೆಲಸ ಮಾಡುವ ಸರ್ಕಾರೇತರ ಗುಂಪುಗಳ ಯೋಜನೆಗಳನ್ನು ಬೆಂಬಲಿಸಲು” 2,000 ಕ್ಕಿಂತ ಹೆಚ್ಚು ಅನುದಾನವನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇದರ ಹೆಚ್ಚಿನ ಫಂಡಿಗ್ ಅಮೇರಿಕಾದ ಕಾಂಗ್ರೆಸ್ನಿಂದ ಬರುತ್ತದೆ.

Related Articles

ಇತ್ತೀಚಿನ ಸುದ್ದಿಗಳು