Tuesday, September 17, 2024

ಸತ್ಯ | ನ್ಯಾಯ |ಧರ್ಮ

ವಿಡಿಯೋ: ಕುಡಿದ ಮತ್ತಿನಲ್ಲಿ ಸುವರ್ಣ ನ್ಯೂಸ್ ಅಜಿತ್‌ ಹನುಮಕ್ಕನರ್‌ ಅವಾಂತರ!

ಬೆಂಗಳೂರು: ಏಷ್ಯಾನೆಟ್-ಸುವರ್ಣ ವಾಹಿನಿಯ ಪ್ರಧಾನ ಸಂಪಾದಕ ಅಜಿತ್‌ ಹನುಮಕ್ಕನವರ್‌ ತಮ್ಮ ಪ್ರಚೋದನಕಾರಿ ಸುದ್ದಿ ನಿರೂಪಣೆಗೆ ಹೆಸರಾದವರು. ತಮ್ಮ ಏಕಮುಖದ ಸುದ್ದಿ ನಿರೂಪಣೆಗಾಗಿ ಸತತ ಟೀಕೆಗಳನ್ನು ಎದುರಿಸಿದವರು.

ಅಜಿತ್‌ ಅವರ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಇದರಲ್ಲಿ ಅಜಿತ್‌ ಹನುಮಕ್ಕನರ್‌ ಕುಡಿದು ನಡೆಯಲಾಗದೆ ಕಷ್ಟ ಪಡುತ್ತಿರುವ, ರಸ್ತೆ ಬದಿ ಬಿದ್ದಿರುವ ದೃಶ್ಯಗಳಿವೆ. ಸದ್ಯ ಅಜಿತ್‌ ಹನುಮಕ್ಕನರ್‌ ಅವರ ಪತ್ರಿಕಾಧರ್ಮದ ಬದ್ಧತೆಯ ಬಗ್ಗೆ ಅವರ ಟೀಕಾಕಾರು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿ ಬೇರೆ ಯಾರಿಗಾದರೂ ಬಂದಿದ್ದರೆ ಇವರ ನ್ಯೂಸ್‌ ಚಾನೆಲ್‌ ಎಡೆಬಿಡದೆ ಸುದ್ದಿ ಮಾಡುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಕುಡಿದು ರಸ್ತೆಯಲ್ಲಿ ಬಿದ್ದರೆ, ಗಾಡಿ ಓಡಿಸಿದರೆ ಅಪಾಯಕ್ಕೆ ಎಡೆಮಾಡಿಕೊಟ್ಟಂತೆ ಎಂದು ಅಜಿತ್ ಅವರ ಕಿವಿ ಹಿಂಡಿದ್ದಾರೆ.

ಈ ಹಿನ್ನಲೆಯಲ್ಲಿ ಪೀಪಲ್‌ ಟಿವಿಯ ಈ ವಿಡಿಯೋ ನೋಡಿ: ಜಿಲ್‌ ಜಿಲ್‌ ಜಿಗಾಜಿಗ , ಅಜಿತ್‌ ಫುಲ್‌ ಚಿತ್ತು ಮಗಾ

Related Articles

ಇತ್ತೀಚಿನ ಸುದ್ದಿಗಳು

You cannot copy content of this page