Saturday, June 21, 2025

ಸತ್ಯ | ನ್ಯಾಯ |ಧರ್ಮ

ಮುಸ್ಲಿಂ ಸಮುದಾಯದ ಜಾಗೃತಿಗಾಗಿ ಅಲ್ಪಸಂಖ್ಯಾತ ಮುಸ್ಲಿಂ ಧಾರ್ಮಿಕ ಆಸ್ತಿ ಹಿತರಕ್ಷಣಾ ವೇದಿಕೆ ಸ್ಥಾಪನೆ – ಸಮೀರ್ ಹಾಸನ್

ಹಾಸನ : ಮುಸಲ್ಮಾನ್ ಸಮುದಾಯಕ್ಕೆ ಸೇರಿದ ಆಸ್ತಿಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮುಸ್ಲಿಂ ಧಾರ್ಮಿಕ ಆಸ್ತಿ ಹಿತರಕ್ಷಣಾ ವೇದಿಕೆ ಸ್ಥಾಪನೆಯಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಸಮೀರ್ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಹಾಗೂ ಸಮುದಾಯಕ್ಕೆ ಸೇರಿರುವ ಆಸ್ತಿಪಾಸ್ತಿಗಳನ್ನು ಅಕ್ರಮಿಸಿಕೊಂಡಿರುವವರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಈ ವೇದಿಕೆ ರಚನೆಯಾಗಿದೆ.

ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಳಗಳಾದ ಮಸೀದಿ ಮದರಸ, ದರ್ಗಾ, ವಾಣಿಜ್ಯ ಕಟ್ಟಡಗಳು, ಖಾಲಿ ನಿವೇಶನ ಹಾಗೂ ಕೃಷಿ ಜಮೀನುಗಳ ಬಗ್ಗೆ ಮಾಹಿತಿ ಪಡೆದು ಇದಕ್ಕೆ ಸಂಬಂಧಿಸಿದ ಸಮಿತಿಗಳು ಪಾರದರ್ಶಕವಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟು ಅಕ್ರಮ ನಡೆದಿದ್ದರೆ ಅದರ ವಿರುದ್ಧ ಹೋರಾಟ ಮಾಡಲು ಸಮಿತಿ ಮುಂದಾಗಿದೆ ಎಂದರು. ಮುಸ್ಲಿಂ ಸಮುದಾಯದ ಆಸ್ತಿಗಳು ಅತಿಕ್ರಮಣ ವಾಗಿದ್ದರೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಪ್ರತಿಕ್ರಮಣ ತೆರವು ಮಾಡುವ ಸಲುವಾಗಿ ಹೋರಾಟ ನಡೆಸಲು ಸಮಿತಿ ಸಜ್ಜಾಗಿದೆ. ನಮ್ಮ ಪೂರ್ವಜರು ಈ ಹಿಂದೆ ನೀಡಿದ್ದ ಆಸ್ತಿ ಕಟ್ಟಡ ಜಮೀನು ಇನ್ನಿತರ ಆಸ್ತಿಪಾಸ್ತಿಯನ್ನು ಗುತ್ತಿಗೆ ನೀಡಿ ಅವಧಿ ಮೀರಿದ ನಂತರವೂ ಅವರಿಂದ ವಾಪಸ್ ಪಡೆದಿದ್ದ ಜಾಗವನ್ನು ಸಹ ಹೋರಾಟಗಾರರ ಮುಖಾಂತರ ರಕ್ಷಣೆ ಮಾಡಲಾಗುವುದು. ದಾನಿಗಳು ನೀಡಿದ ಆಸ್ತಿಗಳಿಂದ ಬರುವ ಲಾಭದ ಹಣವನ್ನು ಸಮುದಾಯದ ಬಡ ಮಕ್ಕಳಿಗೆ ಅನಾಥ ಮಕ್ಕಳಿಗೆ ವಿರುದ್ಧರಿಗೆ ದೊರೆಯುವಂತೆ ಮಾಡಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಹೊತ್ತು ನೀಡುವ ಸಲುವಾಗಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಈ ಸಮಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದು ಹಾಸನ ಜಿಲ್ಲೆಯಲ್ಲಿ ಕೆಲಸ ಆರಂಭಿಸಿದ ಮುಂದಿನ ದಿನಗಳಲ್ಲಿ ಇದನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸಿ ಮುಸಲ್ಮಾನರಿಗೆ ಅವರ ಆಸ್ತಿ ರಕ್ಷಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮುಸ್ಲಿಂ ಧಾರ್ಮಿಕ ಆಸ್ತಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ. ಅಮಿತ್ ಅನ್ಸಾರಿ,  ಅಹಮದ್ ಅಲಿಖಾನ್ ಹಸೀಮ್ ಖಾನ್,  ಯಾಸಿನ್ ಪಾಶ,  ಇತರರು ಉಪಸ್ಥಿತರಿದ್ದರು.         

Related Articles

ಇತ್ತೀಚಿನ ಸುದ್ದಿಗಳು

You cannot copy content of this page