ಸಾಲ ತೀರಿಸುವ ಸಲುವಾಗಿ ಅಸಹಾಯಕ ತಂದೆಯೊಬ್ಬ ತನ್ನ ಮಗನನ್ನೇ ಮಾರಾಟಕ್ಕಿಟ್ಟ ಘಟನೆಗೆ ಉತ್ತರಪ್ರದೇಶ ಇಂದು ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ವಸ್ತುವಾಗಿ ಮಾರ್ಪಟ್ಟಿದೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಇಂದು ವ್ಯಕ್ತಿಯೊಬ್ಬರು ಕುಟುಂಬ ಸಮೇತ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಅವರ ಕುತ್ತಿಗೆಯಲ್ಲಿ ʼನನ್ನ ಮಗ ಮಾರಾಟಕ್ಕಿದ್ದಾನೆ, ಆತನ ಬೆಲೆ 6ರಿಂದ 8 ಲಕ್ಷ ಬೆಲೆ, ಸಾಲ ತೀರಿಸುವ ಸಲುವಾಗಿ ಅವನನ್ನು ಮಾರುತ್ತಿದ್ದೇನೆʼ ಎಂದು ಬರೆದುಕೊಂಡಿದ್ದರು.
https://x.com/ManojYaSp/status/1717798357803131169?s=20
ಇದನ್ನು ನೋಡಿ ಕೆಲವರು ಬೆಚ್ಚಿಬಿದ್ದರೆ, ಇನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕೊನೆಗೆ ಈ ವಿಷಯ ಅಲಿಗಢ ಪೊಲೀಸರಿಗೆ ತಲುಪಿದೆ. ಕೊನೆಗೆ… ಪೋಲೀಸರೂ ಪ್ರವೇಶಿಸಿದರು. ಪೋಲೀಸರು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಕುಳಿತಿದ್ದವರ ಬಳಿ ಬಂದು ಏನಾಯಿತೆಂದು ವಿಚಾರಿಸಿದರು. ಸಮಸ್ಯೆ ಏನು? ನಿಮ್ಮ ಮಗನನ್ನು ಏಕೆ ಮಾರಾಟ ಮಾಡುತ್ತೀರಿ ಎಂದು ಪೊಲೀಸರು ಕೇಳಿದರು.
ಹತ್ತಿರದ ಸಂಬಂಧಿ ಬಳಿ ಸಾಲ ಮಾಡಿದ್ದು, ಸಕಾಲಕ್ಕೆ ಪಾವತಿಸದ ಕಾರಣ ಇಬ್ಬರ ನಡುವೆ ಜಗಳ ನಡೆದಿದೆ. ಬೇಗ ಸಾಲ ತೀರಿಸಬೇಕೆಂಬ ಒತ್ತಡದಲ್ಲಿ ಮಗನನ್ನು ಮಾರಾಟಕ್ಕೆ ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾನವೀಯ ದೃಷ್ಟಿಕೋನದಿಂದ ಸಮಸ್ಯೆ ಬಗೆಹರಿಸಿದ್ದಾರೆ. ಮಗನನ್ನು ಮಾರಾಟ ಮಾಡದಂತೆ ತಂದೆಯನ್ನು ತಡೆದರು. ಜೊತೆಗೆ ಸಾಲ ನೀಡಿದ ವ್ಯಕ್ತಿಯ ಬಳಿ ಒತ್ತಡ ಹೇರದಂತೆ ಮನವರಿಕೆ ಮಾಡಿಸಿದ್ದಾರೆ.
ಘಟನೆಗೆ ಸ್ಪಂದಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಲೇಶ್ ಯಾದವ್ ಯೋಗಿಯವರ ಆಡಳಿತದಲ್ಲಿ ಹೀಗೆಲ್ಲ ಆಗಿ ದೇಶ ಹಾಗೂ ರಾಜ್ಯದ ಮರ್ಯಾದೆ ಹೋಗುತ್ತಿದೆ. ಈ ಕುರಿತು ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.