́ಗೋ ಬ್ಯಾಕ್‌ ಶೋಭಾʼ ಪೋಸ್ಟರ್‌ ಹಚ್ಚಿದ ನಾಲ್ವರು ಯುವಕರ ವಿರುದ್ಧ FIR

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಗರಿಗೆದರಿದಂತೆ ರಾಜಕೀಯ ಚಟುವಟಿಕೆಗಳೂ ಚುರುಕುಗೊಂಡಿವೆ. ಚಿಕ್ಕಮಗಳೂರು – ಉಡುಪಿ ಕ್ಷೇತ್ರದ ಅಭ್ಯರ್ಥಿ ವಿವಾದ ಈಗ ಇನ್ನೊಂದು ಹಂತ ತಲುಪಿದ್ದು, ಅಲ್ಲಿನ ಸಂಸದೆ ಶೋಭಾ ಕರಂದ್ಲಾಜೆಯವರ ವಿರುದ್ಧ ಪೋಸ್ಟರ್‌ ಅಂಟಿಸಿದ ಆರೋಪದಡಿ ನಾಲ್ವರು ಯುವಕರ ವಿರುದ್ಧ FIR ದಾಖಲಿಸಲಾಗಿದೆ. ಆಪಾದಿತರು ʼಶೋಭಕ್ಕ ಎಲ್ಲಿದ್ದೀರ?ʼ, ʼಶೋಭಕ್ಕ ಕಾಣೆʼ ಎನ್ನುವ ಪೋಸ್ಟರುಗಳನ್ನು ತರೀಕೆರೆಯಿಂದ ಚಿಕ್ಕಮಗಳೂರು ತನಕವೂ ರಾತ್ರೋರಾತ್ರಿ ಅಂಟಿಸಿದ್ದರು. ಪೋಸ್ಟರ್‌ ಅಂಟಿಸಿದ ನಾಲ್ವರು ಯುವಕರನ್ನು ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಎಫ್ಐಆರ್ … Continue reading ́ಗೋ ಬ್ಯಾಕ್‌ ಶೋಭಾʼ ಪೋಸ್ಟರ್‌ ಹಚ್ಚಿದ ನಾಲ್ವರು ಯುವಕರ ವಿರುದ್ಧ FIR