ಆಗಸ್ಟ್ 14 ರಂದು ಕಿಶ್ಚಾರ್ ಮೇಘಸ್ಫೋಟದ ನಂತರ ಜಮ್ಮು ಮತ್ತು ಕಾಶ್ಮೀರದ ಯಾತ್ರಾ ಋತುವಿನ ಎರಡನೇ ಮಾನ್ಸೂನ್ ದುರಂತದಲ್ಲಿ ಸಾವುನೋವುಗಳ ಸಂಖ್ಯೆ ಬುಧವಾರ ಹೆಚ್ಚಾಗಿದೆ. ವೈಷ್ಣೋದೇವಿ ದೇಗುಲಕ್ಕೆ ಹೋಗುವ ಹಾದಿಯಲ್ಲಿ ಭೂಕುಸಿತದ ಸ್ಥಳದಲ್ಲಿ ಶೋಧ ತಂಡಗಳು ಇನ್ನೂ 28 ಶವಗಳನ್ನು ಪತ್ತೆ ಮಾಡಿದೆ. ಮಂಗಳವಾರ ರಿಯಾಸಿ ಮತ್ತು ದೋಡಾದಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ ಒಟ್ಟು ಸಾವಿನ ಸಂಖ್ಯೆ 38 ಕ್ಕೆ ತಲುಪಿದೆ.
ಆರಂಭದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದ್ದ ರಿಯಾಸಿಯ ಅರ್ಧಕುವರಿಯಲ್ಲಿ ಹೆಚ್ಚಿನ ಸಾವುನೋವುಗಳು ಯುಪಿ, ರಾಜಸ್ಥಾನ, ದೆಹಲಿ ಮತ್ತು ಪಂಜಾಬ್ನ ಯಾತ್ರಾರ್ಥಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಭೂಕುಸಿತದಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ದೋಡಾ ನಾಲ್ಕು ಸಾವುಗಳನ್ನು ವರದಿ ಮಾಡಿದೆ.
ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಲಾ 9 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ರಿಯಾಸಿ ಭೂಕುಸಿತದಲ್ಲಿ ಸಾವನ್ನಪ್ಪಿದ ತಮ್ಮ ರಾಜ್ಯದ 11 ಜನರ ಕುಟುಂಬಗಳಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪ್ರತಿಕೂಲ ಹವಾಮಾನದಲ್ಲಿ ವೈಷ್ಟೋ ದೇವಿ ಮಾರ್ಗದಲ್ಲಿ ಯಾತ್ರಿಕರು ಸಾಗುವುದನ್ನು ಜಿಲ್ಲಾ ಅಧಿಕಾರಿಗಳು ಏಕೆ ತಡೆಯಲಿಲ್ಲ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ. “ಮಾತಾ ವೈಷ್ಟೋ ದೇವಿ ಟ್ರ್ಯಾಕ್ನಲ್ಲಿ ಯಾತ್ರಿಕರ ಸಾವಿನ ಬಗ್ಗೆ ಕೇಳಿ ತುಂಬಾ ವಿಷಾದವಾಯಿತು…. ಅವರನ್ನು ಸುರಕ್ಷಿತ ಸ್ಥಳಕ್ಕೆ ಏಕೆ ಸ್ಥಳಾಂತರಿಸಲಿಲ್ಲ? ಇದನ್ನು ನಂತರ ಚರ್ಚಿಸಬೇಕು” ಎಂದು ಅವರು ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರವಾಹ ಪರಿಸ್ಥಿತಿ ಮತ್ತು ಕೇಂದ್ರಾಡಳಿತ ಪ್ರದೇಶದ ಸ್ಥಳಾಂತರಿಸುವಿಕೆ ಮತ್ತು ಪರಿಹಾರ ಕಾರ್ಯಾಚರಣೆಗಳ ಸಿದ್ಧತೆಯ ಬಗ್ಗೆ ವಿವರಿಸಿದರು.
ಕಳೆದ 24 ಗಂಟೆಗಳಲ್ಲಿ ಜಮ್ಮುವಿನಲ್ಲಿ 380 ಮಿಮೀ ಮಳೆಯಾಗಿದ್ದು, 1910 ರಲ್ಲಿ ಹವಾಮಾನ ವೀಕ್ಷಣಾಲಯವನ್ನು ಸ್ಥಾಪಿಸಿದ ನಂತರದ ಆ ಅವಧಿಯಲ್ಲಿ ಇದು ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಹಿಂದಿನ ದಾಖಲೆ ಸೆಪ್ಟೆಂಬರ್ 25, 1988 ರಂದು 270 ಮಿಮೀ ಆಗಿತ್ತು.
ಜಮ್ಮು ಮತ್ತು ಕಾಶ್ಮೀರದಾದ್ಯಂತ ದೂರಸಂಪರ್ಕ ಸೇವೆಗಳು ಅಸ್ತವ್ಯಸ್ತಗೊಂಡಿದ್ದು, ಬಿಎಸ್ಎನ್ಎಲ್ ಮತ್ತು ಖಾಸಗಿ ಸೇವಾ ಪೂರೈಕೆದಾರರು ತಮ್ಮ ಇಂಟರ್ನೆಟ್ ಮತ್ತು ಮೊಬೈಲ್ ಫೋನ್ ನೆಟ್ವರ್ಕ್ಗಳನ್ನು ಆದಷ್ಟು ಬೇಗ ಪುನಃಸ್ಥಾಪಿಸುವಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಿರ್ದೇಶನ ನೀಡಿದ್ದಾರೆ.