ಕೋಲ್ಕತ್ತಾ: ಜಾದವ್ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಆಘಾತಕಾರಿ ತಿರುವ ಸಿಕ್ಕಿದೆ. 18 ವರ್ಷದ ವಿದ್ಯಾರ್ಥಿಯನ್ನು ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ನಲ್ಲಿ ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಸ್ವಪ್ನದೀಪ್ ಕುಂದು ಗೆ ಒಳಪಡಿಸಿರುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿ ಸ್ವಪ್ನದೀಪ್ ಕುಂದು ಆಗಸ್ಟ್ 9 ರಂದು ವಿಶ್ವವಿದ್ಯಾನಿಲಯದ ಮುಖ್ಯ ಹಾಸ್ಟೆಲ್ನ ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಹಾಸ್ಟೆಲ್ನಲ್ಲಿ ಬಾಲಕನಿಗೆ ರ್ಯಾಗಿಂಗ್ ಮಾಡಿ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಅವನ ಕುಟುಂಬ ಆರೋಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 13 ಮಂದಿಯನ್ನು ಬಂಧಿಸಿದ್ದಾರೆ.
ರ್ಯಾಗಿಂಗ್ ಗೆ ನಡೆಸುವ ವೇಳೆ ಬಾಲಕನನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿಸಲಾಯಿತು, ಒಂದು ಗಂಟೆಗೂ ಹೆಚ್ಚು ಕಾಲ ಅವನನ್ನು ಬೆದರಿಸಿ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಓಡುವಂತೆ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿಯನ್ನು ಗೇ (ಸಮ ಲಿಂಗದ ಕಡೆಗೆ ಆಕರ್ಷಿತವಾಗುವುದು) ಎಂದು ಹೀಯಾಳಿಸಲಾಗಿದೆ.

ಇದುವರೆಗೆ ಬಂಧಿಸಲಾಗಿರುವ 13 ಆರೋಪಿಗಳ ಪೈಕಿ ಕನಿಷ್ಠ 12 ಆರೋಪಿಗಳ ವಿರುದ್ಧ ಪೊಲೀಸರ ಬಳಿ ಸಾಕ್ಷ್ಯಗಳಿದ್ದು, Protection of Children from Sexual Offences Act ಅಡಿಯಲ್ಲಿ ಕೇಸು ದಾಖಲಾಗಿದೆ.
ಈ ಬಗ್ಗೆ ಆಡಳಿತರೂಢ ತೃಣಮೂಲ ಕಾಂಗ್ರೆಸನ್ನು ಟೀಕಿಸಿರುವ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಆದರೆ ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯಪಾಲ ಸಿವಿ ಆನಂದ ಬೋಸ್ ಈ ಪ್ರಕರಣದಲ್ಲಿ ಟೀಕಿಸಿದ್ದು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಿಗೆ ನೂರಕ್ಕೆ ನೂರು ರಾಜ್ಯಪಾಲರೇ ಜವಾಬ್ದಾರರು ಎಂದು ಪ್ರತಿಕ್ರಿಯಿಸಿದೆ.
ರಾಜ್ಯಪಾಲರು ವಿಶ್ವವಿದ್ಯಾನಿಲಯಗಳ ಕುಲಪತಿಗಳೂ ಆಗಿರುವುದರಿಂದ ಅಲ್ಲಿನ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡುವ ಅಧಿಕಾರವನ್ನು ಅವರಿಗಿದೆ.
25 ವರ್ಷಗಳ ಹಿಂದೆ ನವದೀಪ್ ಸಂಜೀಬ್ ಅಧಿಕಾರಿ ಎಂಬ ವಿದ್ಯಾರ್ಥಿ 1998ರಲ್ಲಿ ಬೆಹರಂಪೋರ್ ಟೆಕ್ಸ್ಟೈಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದೇ ರೀತಿಯ ರ್ಯಾಗಿಂಗ್ ಗೆ ದಾರುಣವಾಗಿ ಸಾವನ್ನಪ್ಪಿದ್ದ. ಈತನನ್ನು ಗೇ ಎಂದು ಹೀಯಾಳಿಸಿ ರ್ಯಾಗಿಂಗ್ ಮಾಡಲಾಗಿತ್ತು. ನಂತರ ಹಾಸ್ಟೆಲ್ ನ ಮೂರನೇ ಮಹಡಿಯಿಂದ ಬಿದ್ದು ಈತ ಸಾವನ್ನಪ್ಪಿದ್ದ.
ಸ್ವಪ್ನದೀಪ್ ಕುಂದು ಸಾವಿನ ಹಿನ್ನಲೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದಿನ ಈ ಪ್ರಕರಣ ಮತ್ತೆ ಚರ್ಚೆಯಲ್ಲಿದೆ.