Friday, June 20, 2025

ಸತ್ಯ | ನ್ಯಾಯ |ಧರ್ಮ

ಮಹಿಷ ದಸರಾ: ಶರತ್ತು ಬದ್ಧ ಅನುಮತಿ ನೀಡಿದ ಸರ್ಕಾರ, ತೀವ್ರ ಮುಖಭಂಗ ಅನುಭವಿಸಿದ ಪ್ರತಾಪ ಸಿಂಹ

ಮೈಸೂರು: ಮಹಿಷ ದಸರಾ ಸಮಿತಿ ಮತ್ತು ಸರ್ಕಾರದ ನಡುವಿನ ತಿಕ್ಕಾಟ ಒಂದು ತೀರ್ಮಾನದ ಹಂತಕ್ಕೆ ಬಂದಿದ್ದು ಸರಕಾರವು ಸಂಘಟಕರಿಗೆ ಕೆಲವು ಶರತ್ತುಗಳನ್ನು ವಿಧಿಸಿ ದಸರಾ ನಡೆಸಲು ಅನುಮತಿ ನೀಡಿದೆ.

ನಾಳೆ ನಡೆಯಲಿರುವ ಮಹಿಷ ದಸರಾ. ವಿರೋಧದ ನಡುವೆಯೂ ಮಹಿಷ ದಸರಾಕ್ಕೆ ಅನುಮತಿ. ನಗರ ಪೊಲೀಸ್ ಆಯುಕ್ತ ರಮೇಶ್‌ ಬಾನೋತ್‌ ಅವರು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಶರತ್ತು ಬದ್ಧ ಅನುಮತಿ ನೀಡಿ ಆದೇಶ. ಮೆರವಣಿಗೆ ರ್ಯಾಲಿ, ಪ್ರತಿಭಟನೆ ಮಾಡಬಾರದು. ನೇರವಾಗಿ ಸಭಾ ಕಾರ್ಯಕ್ರಮ ಪ್ರಾರಂಭಿಸಬೇಕು ಎನ್ನುವ ಶರತ್ತುಗಳನ್ನು ಹೇರಲಾಗಿದೆ.

ಇದರೊಂದಿಗೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ. ಅವರು ಪಕ್ಷದ ವೇದಿಕೆಯಲ್ಲಿ ಹಾಗೂ ಮಹಿಷ ದಸರಾ ಪರ ಇರುವವರಿಂದಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅವರು ತಾನು ಯಾವುದೇ ಕಾರಣಕ್ಕೂ ಮಹಿಷ ದಸರಾ ನಡೆಸಲು ಬಿಡುವುದಿಲ್ಲ. ಹಾಗೊಂದು ವೇಳೆ ನಡೆಸಿದಲ್ಲಿ ಪಕ್ಷದ ವತಿಯಿಂದ ಚಾಮುಂಡಿ ಚಲೋ ಮೆರವಣಿಗೆ ನಡೆಸುವುದಾಗಿ ಹೇಳಿದ್ದರು.

ಆದರೆ ಬಿಜೆಪಿ ಸ್ಥಳೀಯ ಮುಖಂಡರೇ ಇದಕ್ಕೆ ಬೆಂಬಲಿಸದೆ ಪತ್ರಿಕಾಗೋಷ್ಟಿ ನಡೆಸಿ ಪ್ರತಾಪ ಸಿಂಹ ಅವರ ನಡೆಯನ್ನು ಕಟುವಾದ ಮಾತುಗಳಿಂದ ಟೀಕಿಸಿದ್ದರು. ಈಗ ಮಹಿಷ ದಸರಾಕ್ಕೆ ಅನುಮತಿ ಸಿಗುವುದರೊಂದಿಗೆ ಅವರಿಗೆ ತೀವ್ರ ಹಿನ್ನೆಡೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page