Saturday, June 21, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರ ಸಂಸತ್ತಿನಲ್ಲಿ ಚರ್ಚೆ ನಡೆಯುವುದನ್ನು ಬಯಸುವುದಿಲ್ಲ: ಜೈರಾಮ್ ರಮೇಶ್

ಹೊಸದೆಹಲಿ: ಸಂಸತ್ತಿನ ಅಧಿವೇಶನ ಆರಂಭವಾಗಿ ಐದು ದಿನ ಕಳೆದರೂ ಯಾವುದೇ ಚರ್ಚೆ ನಡೆಸದೆ ಉಭಯ ಸದನಗಳನ್ನು ಮುಂದೂಡುತ್ತಿರುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾವುದೇ ಚರ್ಚೆ ನಡೆಸದೆ ಉಭಯ ಸದನಗಳು ಮುಂದೂಡಲ್ಪಟ್ಟಿರುವುದಕ್ಕೆ ಯಾರು ಹೊಣೆ? ಇದಕ್ಕೆ ಸರಕಾರವೇ ಹೊಣೆಯಾಗಬೇಕು. ಅದಾನಿ ಪ್ರಕರಣ, ಮಣಿಪುರ, ಸಂಭಾಲ್, ನಿರುದ್ಯೋಗ ಇತ್ಯಾದಿ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳು ಬಯಸುತ್ತವೆ. ಆದರೆ ಈ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಬಯಸುತ್ತಿಲ್ಲ’ ಎಂದು ಟೀಕಿಸಿದರು.

ಉಭಯ ಸದನಗಳಿಗೆ ನೀಡಿದ ನೋಟಿಸ್‌ಗಳ ಬಗ್ಗೆಯೂ ಸರ್ಕಾರ ಪ್ರಸ್ತಾಪಿಸಲಿಲ್ಲ ಮತ್ತು ಅವರ ನಾಯಕರಿಗೆ ಮಾತನಾಡಲು ಅವಕಾಶವನ್ನೂ ನೀಡಲಿಲ್ಲ ಎಂದು ಜೈರಾಮ್ ರಮೇಶ್ ಹೇಳಿದರು. ಜೈರಾಮ್ ರಮೇಶ್ ಮಾತನಾಡಿ, ಸಂವಿಧಾನ ರಚನೆಯಾಗಿ 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಂವಿಧಾನದ ಕುರಿತು ವಿಶೇಷ ಚರ್ಚೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ, ಸರ್ಕಾರ ಅದಕ್ಕೆ ಒಪ್ಪಿದೆ, ಆದರೆ ಚರ್ಚೆ ನಡೆಯಲಿರುವ ಸಮಯವನ್ನು ತಿಳಿಸಿಲ್ಲ. ತಮ್ಮ 20 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಬಾರದಿರುವುದನ್ನು ಕಂಡಿದ್ದೇನೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page